ಜಿಲ್ಲಾ ಪಂಚಾಯತ್ ಚುನಾವಣೆ: ಚೆಂಗಳ ಮಂಡಲದಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಐಕ್ಯರಂಗ

ಕಾಸರಗೋಡು: ಜಿಲ್ಲಾ ಪಂಚಾಯತ್ ಚೆಂಗಳ ಡಿವಿಶನ್‌ನಲ್ಲಿ ಕಳೆದ ಬಾರಿ ಎಡರಂಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾನವಾಸ್ ಪಾದೂರು 16,564 ಮತ ಪಡೆದು ಜಯ ಗಳಿಸಿದ್ದಾರೆ. ಲೀಗ್‌ನ ಟಿ.ಡಿ. ಕಬೀರ್ 14,425 ಮತಗಳನ್ನು ಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ ಧನಂಜಯ ಮಧೂರು ೫೭೬೦ ಮತವಷ್ಟೇ ಪಡೆದಿದ್ದರು. ಈ ಬಾರಿಯೂ ಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಎಡರಂಗ ಪ್ರಯತ್ನಿಸುತ್ತಿರುವ ಮಧ್ಯೆ ಯುಡಿಎಫ್‌ನಿಂದ ಕಸಿದುಕೊಂಡ ಈ ಮಂಡಲವನ್ನು ತನ್ನ ತೆಕ್ಕೆಗೆ ಪಡೆಯಲು ಐಕ್ಯರಂಗ ಕೂಡಾ ಶತಪ್ರಯತ್ನದಲ್ಲಿದೆ.  ಈ ಬಾರಿ ಈ ಮಂಡಲ ಮಹಿಳಾ ಮೀಸಲಾತಿಯಾಗಿ ಬದಲಾದರೂ …

ಕುಂಬಳೆ ಪಂ.ನಲ್ಲಿ ಬೆಂಕಿ ಚೆಂಡು ಸ್ಪರ್ಧೆ ಒಡ್ಡುವ ಎನ್. ಕೇಶವ ನಾಯಕ್

ಕುಂಬಳೆ: ಪಂಚಾಯತ್‌ನ 24ನೇ ವಾರ್ಡ್ ಶೇಡಿಕಾವುನಿಂದ ಉರಿಯುವ ಪಂಜು ಚಿಹ್ನೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎನ್. ಕೇಶವ ನಾಯಕ್ ಪಂಚಾಯತ್‌ನಲ್ಲಿ ಬೆಂಕಿಯ ಚೆಂಡುನಂತೆ ಸ್ಪರ್ಧೆ ಒಡ್ಡುತ್ತಿರುವುದಾಗಿ ಅಭಿಪ್ರಾಯಪಡ ಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ನಾಗಿ ಹಾಗೂ ಭ್ರಷ್ಟಾಚಾರ, ಪ್ರಕೃತಿ ಶೋಷಣೆ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ಪಂಚಾಯ ತ್‌ನಲ್ಲಿ ಹೆಚ್ಚಿನವರಿಗೆ ಪರಿಚಿತರಾದ ವ್ಯಕ್ತಿಯಾಗಿ ದ್ದಾರೆ. ಪಂಚಾಯತ್‌ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿ ಇವರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಪಂಚಾ ಯತ್‌ನ್ನು ಸ್ವಚ್ಛಗೊಳಿಸಲು ತೀರ್ಮಾ ನಿಸಿದ್ದೇನೆ ಎಂದು …

ನಗರಸಭೆಯ 35ನೇ ವಾರ್ಡ್‌ನಲ್ಲಿ  ಬಿಜೆಪಿ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ

ಕಾಸರಗೋಡು: ಕಾಸರಗೋಡು ನಗರಸಭೆಯ ೩೫ನೇ ವಾರ್ಡ್‌ನಲ್ಲಿ   ಅಭ್ಯರ್ಥಿಗಳ ಪ್ರಚಾರ ಕಾರ್ಯ ತೀವ್ರ ಗೊಂಡಿದೆ. ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿಯ ವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಮತದಾರರ ಪೂರ್ಣ ಬೆಂಬಲವಿದ್ದು ಇವರು ಗೆಲುವು ಸಾಧಿಸುವುದು ಖಚಿತ ವೆಂದು ಬಿಜೆಪಿ ನೇತಾರರು, ಕಾರ್ಯ ಕರ್ತರು  ತಿಳಿಸುತ್ತಿದ್ದಾರೆ. ಈ ವಾರ್ಡ್ ನಲ್ಲಿ  ಯುಡಿಎಫ್‌ನಿಂದ ಮುಸ್ಲಿಂ ಲೀಗ್‌ನ ಮೆಹರುನ್ನೀಸ ಹಮೀದ್, ಎಲ್‌ಡಿ ಎಫ್ ನಿಂದ ಐಎನ್‌ಎಲ್‌ನ ನಜೀಬ ನಾಸರ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ ನಡೆಯು ತ್ತಿದ್ದರೂ ಬಿಜೆಪಿ ಅಭ್ಯರ್ಥಿಗೆ …

ಕುಂಬಳೆ ಪಂ. 17ನೇ ವಾರ್ಡ್‌ನಲ್ಲಿ ವಿಕ್ರಂ ಪೈಯವರ ಗೆಲುವು ಖಚಿತ-ಬಿಜೆಪಿ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ 17ನೇ ವಾರ್ಡ್ ಕೊಯಿಪ್ಪಾಡಿ ಕಡಪ್ಪುರದಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ವಿಕ್ರಂ ಪೈಯವರು  ಗೆಲುವು ಸಾಧಿಸುವುದು ಖಚಿತವೆಂದು ಪಕ್ಷದ ನೇತಾರರು ಹಾ ಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಕುಂಬಳೆಯ ಪ್ರಮುಖ ಉದ್ಯಮಿ ಯಾಗಿರುವ ವಿಕ್ರಂ ಪೈಯವರು ಪ್ರಾಮಾಣಿಕತೆಯುಳ್ಳ ಸಾಮಾಜಿಕ ಕಾರ್ಯಕರ್ತನಾಗಿದ್ದಾರೆ. ಈಗಾಗಲೇ ವಾರ್ಡ್‌ನ ಮತದಾರರನ್ನು ಭೇಟಿ ಯಾಗಿ ಮತಯಾಚಿಸಿರುವ ವಿಕ್ರಂ ಪೈಯವರು ತಾನು ಈ ವಾರ್ಡ್‌ನಲ್ಲಿ ಗೆಲುವು ಸಾಧಿಸಿದರೆ ಈ ನಾಡನ್ನು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಪಂಚಾಯತ್‌ನಲ್ಲಿ ಆಡಳಿತ ನಡೆಸಿದ ಐಕ್ಯರಂಗ ಹಾಗೂ ರಾಜ್ಯಸರಕಾರ …

ಮೋದಿ ಸರಕಾರದ ಆಡಳಿತದಲ್ಲಿ ತಾರತಮ್ಯವಿಲ್ಲ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಎಡ-ಬಲ ಒಕ್ಕೂಟಗಳು ಮತ ಬ್ಯಾಂಕ್ ಉದ್ದೇಶ ಇರಿಸಿ ಯೋಜನೆಗಳನ್ನು ಜ್ಯಾರಿ ಗೊಳಿಸುವಾಗ ಯಾವುದೇ ತಾರತಮ್ಯ ವಿಲ್ಲದ ಆಡಳಿತವನ್ನು ನರೇಂದ್ರ ಮೋದಿ ಸರಕಾರ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಜಿಲ್ಲಾ ಪಂಚಾಯತ್ ಸಿವಿಲ್ ಸ್ಟೇಷನ್ ವಾರ್ಡ್‌ಗಳ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿವಿಲ್ ಸ್ಟೇಷನ್ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ ಪ್ರತಿನಿಧಿ ಹಲವು ಕಾಲಗಳಿಂದ ಗೆದ್ದುಬರುತ್ತಿದ್ದು ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಸಮಯದಲ್ಲಿ ಇಲ್ಲಿನ ಜನರು ಒಡ್ಡಿದ ಬೇಡಿಕೆಗಳು ಈಗಲೂ ಕೂಡಾ ಪರಿಹರಿಸಲ್ಪಡದೆ …

ಎಡರಂಗದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದ ಎಡರಂಗದ ಜಿಲ್ಲಾ ಮಟ್ಟದ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಬಿಡುಗಡೆಗೊಳಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ಶಾಸಕ ಸಿ.ಎಚ್. ಕುಂಞಂಬು, ಎಡರಂಗ ಜಿಲ್ಲಾ  ಸಂಚಾಲಕ ಕೆ.ಪಿ. ಸತೀಶ್ಚಂದ್ರನ್, ಎಡರಂಗ ನೇತಾರರಾದ ಸಿ.ಪಿ. ಬಾಬು,  ಬೇಬಿ ಬಾಲಕೃಷ್ಣನ್,ಶಾನವಾಸ್ ಪಾದೂರು, ವಿ.ವಿ. ಕೃಷ್ಣನ್, ಪಿ.ಟಿ.ನಂದಕುಮಾರ್, ಅಸೀಸ್ ಕಡಪ್ಪುರಂ, ಕುರ‍್ಯಾಕೋಸ್ ಪರಂಬಿಲ್, ಕರೀಂ ಚಂದೇರಾ, ಪಿ.ಪಿ. ರಾಜು ಮತ್ತು ಪಿ.ವಿ. ಗೋವಿಂದನ್ …

ರಾಹುಲ್‌ಗೆ ಅಲ್ಪ ನಿರಾಳ: ಬಂಧನಕ್ಕೆ  ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ

ಕೊಚ್ಚಿ: ಯುವತಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಗರ್ಭಪಾತ ನಡೆಸಿದ ಪ್ರಕರಣ ದಲ್ಲಿ ಆರೋಪಿಯಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಬಾಬು ಅವರ ಏಕ ಸದಸ್ಯ ಪೀಠ ಇಂದು ಬೆಳಿಗ್ಗೆ ಪರಿಶೀಲಿಸಿ  ಬಂಧಿಸದಂತೆ   ತಾತ್ಕಾಲಿಕ ತಡೆಯಾಜ್ಞೆ ಹೊರಡಿಸಿದೆ.  ಇದರಿಂದ ರಾಹುಲ್‌ಗೆ  ಅಲ್ಪ ನೆಮ್ಮದಿ ಮೂಡುವಂತಾಗಿದೆ.   ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ಮೇಲಿನ ಮುಂದಿನ ಪರಿಶೀಲನೆಯನ್ನು ಹೈಕೋರ್ಟ್ ಡಿ. 15ಕ್ಕೆ ಮುಂದೂಡಿದೆ.     ನಿರೀಕ್ಷಣಾ ಜಾಮೀನು …

ಉಪ್ಪಳದಲ್ಲಿ ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಬೆದರಿಕೆ: ಎಸ್‌ಐಆರ್ ಮಾಹಿತಿಗಳನ್ನು ವಾಟ್ಸಪ್‌ನಲ್ಲಿ ಹಂಚಿದ ಬಿಜೆಪಿ ಕಾರ್ಯಕರ್ತ ಸೆರೆ

ಉಪ್ಪಳ: ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಎಸ್‌ಐಆರ್ ಮಾಹಿತಿ ಗಳನ್ನು ಫೋನಿಗೆ ವರ್ಗಾಯಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಚಾರಪಡಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಬಿಜೆಪಿ ಕಾರ್ಯ ಕರ್ತ ಉಪ್ಪಳ ಮಣಿಮುಂಡ ನಿವಾಸಿ ಇ.ಎಸ್. ಅಮಿತ್ (38)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಅಪರಾಹ್ನ 2.30 ಕ್ಕೆ ಉಪ್ಪಳ ಬಸ್ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ. ಬಿಎಲ್‌ಒ ಆದ ಬೇಕೂರು ಕನ್ನಟಿಪಾರೆ ಮಾತೃನಿಲಯ ನಿವಾಸಿ ಎ. ಸುಭಾಷಿಣಿ (41) ದೂರು ನೀಡಿದ್ದಾರೆ. ಎಸ್‌ಐಆರ್ ಡಾಟಾ ಸಂಗ್ರಹ ನಡೆಸಿ ಹಿಂತಿರುಗು ತ್ತಿದ್ದಾಗ ಘಟನೆ …

ನೀಲೇಶ್ವರದಲ್ಲಿ ಕ್ಷೇತ್ರದಿಂದ ತಿರುವಾಭರಣ, ಹಣ ಕಳವು

ಹೊಸದುರ್ಗ: ನೀಲೇಶ್ವರ ದಲ್ಲಿ  ಕ್ಷೇತ್ರವೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಸಹಿತ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ನೀಲೇಶ್ವರ ಅಯ್ಯಂಗುನ್ನತ್ತ್ ಶ್ರೀ ಭಗವತೀ ಕ್ಷೇತ್ರದಿಂದ  ಕಳವು ನಡೆದಿದೆ. ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವಿ ಯ ವಿಗ್ರಹದಿಂದ ತಿರುವಾಭರಣ ಹಾಗೂ ಕಾಣಿಕೆ ಹಣವನ್ನು ದೋಚಿ ದ್ದಾರೆಂದು ದೂರಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

ಮಣಿಯಂಪಾರೆಯ ಯುವಕ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತ್ಯು

ಪೆರ್ಲ: ಮಣಿಯಂಪಾರೆ ನಿವಾಸಿ ಯುವಕನೋರ್ವ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಣಿಯಂ ಪಾರೆಯ  ಶಾಹುಲ್ ಹಮೀದ್ ಎಂಬವರ ಪುತ್ರ ಆಶಿಕ್ (21) ಮೃತಪಟ್ಟ  ದುರ್ದೈವಿ.  ಒಮಾನ್‌ನ ವಾದಿಶಾಬಿ ಎಂಬಲ್ಲಿರುವ ಸರೋ ವರದಲ್ಲಿ ನಿನ್ನೆ ಮಧ್ಯಾಹ್ನ  ಸ್ನೇಹಿತ ರೊಂದಿಗೆ ಆಶಿಕ್ ಸ್ನಾನಕ್ಕಿಳಿದಿ ದ್ದರೆನ್ನಲಾಗಿದೆ.   ಮೇಲಿನಿಂದ ಸರೋವರಕ್ಕೆ ಹಾರಿದಾಗ ತಲೆ ಕಲ್ಲಿಗೆ ಬಡಿದು ಇವರು ಗಂಭೀರ ಗಾಯ ಗೊಂಡು ತಕ್ಷಣ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.  ಮೃತದೇಹವನ್ನು ಊರಿಗೆ ತರಲು ಕೆಎಂಸಿಸಿ ನೇತೃತ್ವದಲ್ಲಿ ಕ್ರಮ ಆರಂಭಿಸಲಾಗಿದೆ.  ಏಳು ತಿಂಗಳ …