ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಎಂಟರ ಬಾಲಕ ಮೃತ್ಯು

ಕಾಸರಗೋಡು: ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಗು ಮೃತಪಟ್ಟಿದೆ. ಉಳಿಯತ್ತಡ್ಕ ನಿವಾಸಿ ಪ್ರಭಾಕರನ್-ಅನುಷ ದಂಪತಿಯ ಏಕ ಪುತ್ರ ಪಿ. ಪ್ರನೂಶ್ (8) ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ ಶುಕ್ರವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿತ್ತು. ಬೇಳ ಸೈಂಟ್ ಮೆರೀಸ್ ಹೈಸ್ಕೂಲ್‌ನ ವಿದ್ಯಾರ್ಥಿ ಯಾಗಿದ್ದಾನೆ. ಈ ಶಾಲೆಯಲ್ಲಿ ತಾಯಿ ಅನುಷ ಅಧ್ಯಾಪಿಕೆಯಾಗಿದ್ದಾರೆ. ಶುಕ್ರವಾರ ಸಂಜೆ ಪ್ರಭಾಕರನ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಅನುಷಾ ಹಾಗೂ ಪ್ರನೂಶ್ ಸಹ ಸವಾರರಾಗಿದ್ದರು. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ …

ಸೀತಾಂಗೋಳಿಯಲ್ಲಿ ಬದಿಯಡ್ಕ ನಿವಾಸಿಗೆ ಇರಿದು ಕೊಲೆಗೈಯ್ಯಲೆತ್ನ: ಮುಖ್ಯ ಆರೋಪಿಗಳ ಪೈಕಿ ಓರ್ವ ಸೆರೆ; ಇತರರಿಗಾಗಿ ಶೋಧ

ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ನೀರ್ಚಾಲು ಬೇಳ ಚೌಕಾರು ನಿವಾಸಿ ಅಕ್ಷಯ್ (34) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರು ಸೆರೆ ಹಿಡಿದಿದ್ದಾರೆ. ಇತರ 12 ಮಂದಿ ಆರೋಪಿಗಳಿಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ 11.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ. ಬದಿಯಡ್ಕದಲ್ಲಿ ಮೀನು ಮಾರಾಟಗಾ ರನಾದ ಅನಿಲ್ ಕುಮಾರ್‌ರನ್ನು ಇರಿದು ಕೊಲೆಗೈಯ್ಯಲೆತ್ನಿಸಲಾಗಿದೆ. …

ಕಂಚಿಕಟ್ಟೆ ಸೇತುವೆ ಮೂಲಕ ಸಂಚಾರಕ್ಕೆ ತಡೆಯೊಡ್ಡಿ ಕಟ್ಟಿದ ಗೋಡೆ ನಾಶಗೊಳಿಸಿರುವುದು ನಂಬ್ರವಿಲ್ಲದ ಜೆಸಿಬಿ ಎಂಬ ಶಂಕೆ: ತನಿಖೆ ಆರಂಭ

ಕುಂಬಳೆ: ಅಪಾಯಕಾರಿಯಾದ ಕಂಚಿಕಟ್ಟೆ ಸೇತುವೆ ಮೂಲಕ ಘನ ವಾಹನಗಳು ಸಂಚರಿಸುವುದನ್ನು ತಡೆಯಲು ಸ್ಥಾಪಿಸಿದ ಗೋಡೆಯನ್ನು ಕೆಡವಿ ಹಾಕಿರುವುದು ನಂಬರ್ ಪ್ಲೇಟ್ ಇಲ್ಲದೆ ತಲುಪಿದ ಜೆಸಿಬಿಯಾಗಿದೆ ಎಂಬ ಸೂಚನೆಯಿದೆ. ಸೇತುವೆ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಸೇತುವೆ ಮೂಲಕ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿದ್ದರು. ಇದರಂತೆ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಪಂಚಾಯತ್ ಅಧಿಕಾರಿಗಳು ಕಾಂಕ್ರೀಟ್ ಗೋಡೆ ಸ್ಥಾಪಿಸಿದ್ದರು. ಒಂದೂವರೆ ವರ್ಷಗಳಿಂದ ಈ ಮೂಲಕ ವಾಹನ ಸಂಚಾರ ಮೊಟಕುಗೊಂಡಿತ್ತು.  ಕಳೆದ ಶನಿವಾರ ರಾತ್ರಿ ಈ ಗೋಡೆಯನ್ನು ನಾಶಪಡಿಸಲಾಗಿದೆ. ಘಟನೆಯ …

ಅಳಿಯನೊಂದಿಗಿರುವ ವಿರೋಧ: ಕ್ವಾರ್ಟರ್ಸ್‌ಗೆ ನುಗ್ಗಿ ಅತ್ತೆಗೆ ಆಕ್ರಮಣ; ಇಬ್ಬರು ಸೆರೆ

ಕುಂಬಳೆ: ಅಳಿಯನೊಂದಿಗಿರುವ ದ್ವೇಷದಿಂದ  ಪತ್ನಿಯ ತಾಯಿಗೆ ಕ್ವಾರ್ಟರ್ಸ್‌ಗೆ ನುಗ್ಗಿ ಆಕ್ರಮಣಗೈದು ಮನೆಯ ಉಪಕರ ಣಗಳನ್ನು  ನಾಶಗೊಳಿಸಿರುವುದಾಗಿ ದೂರಲಾಗಿದೆ.  ಕೇಸು ದಾಖಲಿಸಿದ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಕೊಯಿಪ್ಪಾಡಿಯ ಸೈಫುದ್ದೀನ್ (32), ಶಾಂತಿಪಳ್ಳ ಲಕ್ಷಂವೀಡು ನಿವಾಸಿ ಮೊಹಮ್ಮದ್ ಶಫೀಕ್ (23) ಎಂಬಿವರನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ.  ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪೆರ್ವಾಡಿನಲ್ಲಿರುವ ಒಂದು ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದ ಮಹಿಳೆ ಆಕ್ರಮಣಕ್ಕೆ ತುತ್ತಾಗಿದ್ದಾರೆ.

ಮನೆ ಅಂಗಳದಲ್ಲಿದ್ದ ಬೈಕ್ ಉರಿದು ನಾಶ ಕಿಚ್ಚಿರಿಸಿದ ಶಂಕೆ

ಮಂಗಲ್ಪಾಡಿ: ಅಂಗಳದಲ್ಲಿರಿ ಸಿದ ಬೈಕ್ ಉರಿದು ನಾಶಗೊಂ ಡಿದೆ. ಪುಳಿಕುತ್ತಿ ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ನಿವಾಸಿ ಪ್ರವೀಣ್ ಶೆಟ್ಟಿ ಎಂಬವರ ಬೈಕ್ ಉರಿದು ನಾಶಗೊಂಡಿದೆ. ಭಾನುವಾರ ರಾತ್ರಿ 9.30ರ ವೇಳೆ ಮನೆಯ ಅಂಗಳದಲ್ಲಿ ಬೈಕ್‌ನ್ನು ನಿಲ್ಲಿಸಲಾಗಿತ್ತು. ಮಧ್ಯ ರಾತ್ರಿ ಸುಮಾರು 1 ಗಂಟೆ ವೇಳೆ ಎಚ್ಚರಗೊಂಡಾಗ ಕಿಟಿಕಿ ಮೂಲಕ ಅಂಗಳದಿAದ ಬೆಳಕು ಕಂಡು ಬಂದಿದೆ. ಕೂಡಲೇ ಪ್ರವೀಣï ಬಾಗಿಲು ತೆರೆದು ಅಂಗಳಕ್ಕೆ ಹೋ ದಾಗ ಬೈಕ್ ಉರಿಯುತ್ತಿರುವುದು ಕಂಡುಬAದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು …

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ ತನಿಖೆ ಶನಿವಾರ ಆರಂಭ; ತನಿಖೆಯ ಮೇಲ್ವಿಚಾರಣೆ ಎ.ಡಿ.ಜಿ.ಪಿ ಎಚ್. ವೆಂಕಟೇಶ್‌ರಿಗೆ

ತಿರುವನಂತಪುರ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚಗಳ ಚಿನ್ನ ನಾಪತ್ತೆಯಾದ ಪ್ರಕರಣ ತನಿಖೆಗಾಗಿ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಿಂದ ತನಿಖೆ ಆರಂಭಿಸಲಿದೆ.  ಎಡಿಜಿಪಿ ಎಚ್. ವೆಂಕಟೇಶ್‌ರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಿಕೊಡಲಾಗಿದೆ. ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಬಗ್ಗೆ ತನಿಖೆ ನಡೆಸಿದ ತಿರುವಿದಾಂಕೂರ್ ಮುಜುರಾಯಿ ಮಂಡಳಿಯ ವಿಜಿಲೆನ್ಸ್ ಆಂಡ್ ಸೆಕ್ಯುರಿಟಿ ಅಧಿಕಾರಿ ಹೈಕೋರ್ಟ್‌ಗೆ ನಿನ್ನೆ ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎ. ರಾಜಾ ವಿಜಯ್ ರಾಘವನ್ ಮತ್ತು  …

ಕುಂಬಳೆಯಲ್ಲಿ ಶಾಲೆಯೊಳಗೆ ಕಲೋತ್ಸವ, ಹೊರಗೆ ರಾಜಕೀಯ ಪಕ್ಷಗಳ ಘೋಷಣೆ ಸ್ಪರ್ಧೆಗಳು

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದೆಡೆ ಕಲೋತ್ಸವ ನಡೆಯುತ್ತಿದ್ದಂತೆ ಮತ್ತೊಂದೆಡೆ ರಾಜಕೀಯ ಪಕ್ಷದವರು ಘೋಷಣೆ ಮೊಳಗಿಸುತ್ತಾ ಸ್ಪರ್ಧೆಗಿಳಿದಿರುವುದು ನಿನ್ನೆ ಕಂಡು ಬಂದಿದೆ. ಬಿಜೆಪಿ ಏಕಾಂಗಿಯಾಗಿ ಘೋಷಣೆ ಮೊಳಗಿಸುತ್ತಿದ್ದಾಗ ಸಿಪಿಎಂ, ಎಸ್‌ಡಿಪಿಐ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ಒಟ್ಟಾಗಿ ಘೋಷಣೆ ಮೊಳಗಿಸಿವೆ. ಈ ಎಲ್ಲಾ ಘೋಷಣೆಗಳ ವಿಷಯ ಕೋಮುವಾದವೇ ಆಗಿತ್ತು. ಕೋಮುವಾದ ವಿರುದ್ಧ ಹೋರಾಟದಂಗವಾಗಿ ನಡೆದ ಘೋಷಣೆ ಒಂದನ್ನೊಂದು ಮೀರಿಸುವಂತದ್ದಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳು ಕಲೋತ್ಸವ ಸ್ಪರ್ಧೆಗಳನ್ನು ವೀಕ್ಷಿಸುತ್ತಿದ್ದರು. ಇದೇ ಸಂದರ್ಭದಲ್ಲಿ  ಶಾಲಾ ಮೈದಾನದ ಹೊರಗೆ ರಾಜಕೀಯ …

ಕುದ್ರೋಳಿ ದೇಗುಲದಲ್ಲಿ ಪ್ರಜ್ವಲನೆಗೊಂಡ ಧರ್ಮ ಸಂದೇಶ ಯಾತ್ರೆಯ ದೀಪ ಪ್ರಯಾಣ ಇಂದು ಆರಂಭ

ಕಾಸರಗೋಡು: ಮಾರ್ಗದರ್ಶಕ ಮಂಡಳಿ ನೇತೃತ್ವದಲ್ಲಿ ಸನ್ಯಾಸಿವರ್ಯರು ಮುನ್ನಡೆಸುವ ಧರ್ಮ ಸಂದೇಶ ಯಾತ್ರೆಯ ದೀಪವನ್ನು ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮದಲ್ಲಿ  ಪ್ರಜ್ವಲನೆಗೊಳಿಸಲಾಯಿತು. ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷ ಚಿದಾನಂದಮೂರ್ತಿ ಸ್ವಾಮೀಜಿ, ಕಾರ್ಯದರ್ಶಿ  ಸತ್ವಾರೂಪಾನಂದ ಸ್ವಾಮೀಜಿ,  ಮಹಾ ಮಂಡಳೇಶ್ವರ ಆನಂದವನಂ ಭಾರತೀ ಸ್ವಾಮೀಜಿ, ಸ್ವಾಮಿ ಅಯ್ಯಪ್ಪದಾಸ್,   ಚಿನ್ಮಯಾ ಮಿಷನ್‌ನ ಕೇರಳ ಘಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸ್ವಾಮಿ ಪ್ರಜ್ಞಾನಂದ ತೀರ್ಥಪಾದರು, ಸ್ವಾಮಿ …

ನಿವೃತ್ತ ಕಂಪೌಂಡರ್ ನಿಧನ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ನಿವಾಸಿ ನಿವೃತ್ತ ಕಂಪೌAಡರ್ ಶೀನ.ಎ [75] ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಎರಡು ದಿನಗಳ ಹಿಂದೆ ಉಲ್ಬಣಗೊಂಡು ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಹೊಂದಿದರು. ಇವರು ಉಪ್ಪಳ ಕೆ.ಎನ್.ಎಚ್ ಆಸ್ಪತ್ರೆಯಲ್ಲಿ ಸುಮಾರು 40 ವರ್ಷಗಳ ಕಾಲ ಕಂಪೌAಡರ್ ಆಗಿ ನಿವೃತ್ತಿಹೊಂದಿದ್ದಾರೆ. ಮೃತರು ಪತ್ನಿ ಶಾಲಿನಿ, ಮಕ್ಕಳಾದ ಕಿರಣ್ ಕುಮಾರ್, ಚೈತ್ರ, ಅಳಿಯ ಅನಿಲ್ ಪುಳಿಕುತ್ತಿ, ಸಹೋದರಿಯರಾದ ಲಲಿತಾ, ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚೆರುಗೋಳಿ ಹಿಂದೂ ರುದ್ರಭೂಮಿ …

ಚಿನ್ನ ಕಳ್ಳ ಸಾಗಾಟ ಕಮ್ಯೂನಿಸ್ಟ್ ಪಕ್ಷದ ಕುಲಕಸುಬು-ಎಂ.ಎಲ್. ಅಶ್ವಿನಿ ಆರೋಪ

ಮಂಜೇಶ್ವರ: ಚಿನ್ನ ಕಳ್ಳ ಸಾಗಾಟ ಕಮ್ಯೂನಿಸ್ಟ್ ಪಕ್ಷ ಕುಲಕಸುಬಾಗಿ ಮಾಡಿಕೊಂಡಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋ ಪಿಸಿದ್ದಾರೆ. ಆಡಳಿತ ಬಲ ಉಪಯೊ ಗಿಸಿ ಶಬರಿಮಲೆ ಸನ್ನಿಧಿಯಲ್ಲಿಯೇ ಚಿನ್ನ ಕಳ್ಳ ಸಾಗಾಟಕ್ಕೆ ಸಾಥ್ ನೀಡಿರು ವುದು ಪಿಣರಾಯಿ ಸರಕಾರ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಭೆಯನ್ನು ವರ್ಕಾಡಿ ಕಚೇರಿಯಲ್ಲಿ ಉದ್ಘಾಟಿಸಿ  ಅವರು ಮಾತಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ …