ಪೆರಡಾಲ ಶ್ರೀ ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
ಬದಿಯಡ್ಕ: ಜೀರ್ಣೋದ್ಧಾರಗೊಂಡ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಇಂದು ದೇವಸ್ಥಾನ ಹೇಗಿರಬೇಕೋ ಹಾಗೇ ಬದಲಾಗಿದೆ. ಬಹಳಷ್ಟು ಮಂದಿ ಊರು ಬಿಟ್ಟು ಹೊರಹೋಗಿದ್ದರೂ, ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ. ಉದನೇಶ್ವರನ ಬಿಟ್ಟು ದೂರಹೋಗಿಲ್ಲ. ಜೀವನಕ್ಕೋಸ್ಕರ ಹೊರರಾಜ್ಯದಲ್ಲಿದ್ದರೂ ಅವರೆಲ್ಲರೂ ಉದನೇಶ್ವರನ ಭಕ್ತರಾಗಿಯೇ ಇದ್ದಾರೆ. ತುಂಬ ಚಂದದ ದೇವಸ್ಥಾನವಾಗಿ ಪೆರಡಾಲ ಬದಲಾಗಿದೆ. ಪೆರಡಾಲದ ಬ್ರಹ್ಮಕಲಶೋತ್ಸವದ ಬಗ್ಗೆ ಎಲ್ಲರ ಬಾಯಲ್ಲೂ ಅದ್ಭುತ ಅದ್ಭುತ ಎಂಬ ಮಾತು ಕೇಳಿಬರುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.ಪೆರಡಾಲ ಶ್ರೀ ಉದನೇಶ್ವರ …
Read more “ಪೆರಡಾಲ ಶ್ರೀ ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ”