ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಅಧ್ಯಾಪಿಕೆ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮುಸಾಫರ್ ನಗರ್ ಮೆಹ್ಲಾಕಿಯ ಲೋಕೇಶ್ ಕುಮಾರ್ ಎಂಬವರ ಪುತ್ರಿ ಸುರಭಿಪಾಲ್ (29) ಮೃತ ಅಧ್ಯಾಪಿಕೆ. ನಿನ್ನೆ ರಾತ್ರಿ 9 ಗಂಟೆಗೆ ಕುಂಞಿಮಂಗಲಂ ಎಡಾಟ್‌ನ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. 2023 ಡಿ. 13ರಂದು ಸುರಭಿಪಾಲ್ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ನೇಮಕಗೊಂಡಿದ್ದರು. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತದೇಹವನ್ನು …

ಕುಂಬಳೆ ಬಳಿ ಕಾರು-ಬಸ್ ಢಿಕ್ಕಿ: ಹಲವರಿಗೆ : ಗಾಯ; ನಾಲ್ಕು ಮಂದಿಗೆ ಗಂಭೀರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ  ಇಂದು ಬೆಳಿಗ್ಗೆ ವಾಹನ ಅಪಘಾತ ಸಂಭವಿದ್ದು ಹಲವರು ಗಾಯಗೊಂಡಿದ್ದಾರೆ.  ಕಾರು ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ  ಕಾರು ಪ್ರಯಾಣಿಕರಾದ  ನಾಲ್ಕು ಮಂದಿ  ಗಂಭೀರ ಗಾಯಗೊಂಡಿದ್ದಾರೆ.  ಅಲ್ಲದೆ ಮಹಿಳೆ ಯರ ಸಹಿತ ಬಸ್ ಪ್ರಯಾಣಿಕರಾದ ಹಲವರಿಗೆ ಗಾಯಗಳಾಗಿವೆ. ಇಂದು ಬೆಳಿಗ್ಗೆ 8.30ರ ವೇಳೆ ಶಾಂತಿಪಳ್ಳ ಅಬಕಾರಿ ಕಚೇರಿ ಸಮೀಪ ಅಪಘಾತವುಂಟಾಗಿದೆ. ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು  ಹಾಗೂ ಕುಂಬಳೆಗೆ ಬರುತ್ತಿದ್ದ  ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂ ಟಾಗಿದೆ. …

ಕೆಂಪುಕಲ್ಲು ಕ್ವಾರೆಯ ಧೂಳಿನಿಂದ ಸ್ಥಳೀಯರಿಗೆ ಸಂಕಷ್ಟ: ಕುಂಬಳೆ ಬದ್ರಿಯ ನಗರದಲ್ಲಿ ಹಲವಾರು ಮಂದಿಗೆ ಗಂಭೀರ ರೋಗ

ಕುಂಬಳೆ: ಪಂಚಾಯತ್‌ನ ಬದ್ರಿಯನಗರದಲ್ಲಿ ಕಾನೂನು ವಿರುದ್ಧವಾಗಿ ಕಾರ್ಯಾಚರಿಸುವ ಕೆಂಪುಕಲ್ಲು ಕ್ವಾರೆಯ ಧಳಿನಿಂದಾಗಿ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಕೆಮ್ಮು, ತುರಿಕೆಯಿಂದ ಬಳಲು ತ್ತಿರುವುದಾಗಿ ದೂರಿದ್ದಾರೆ. ಈ ಬಗ್ಗೆ ಯಾರಲ್ಲಿ ಪ್ರಶ್ನಿಸಬೇಕೆಂದರಿಯದೆ ಸ್ಥಳೀಯರು ತಮ್ಮ ವಿಧಿ ಎಂದು ಸಮಾಧಾನಹೊಂದಿರುವುದಾಗಿ ಹೇಳಲಾಗುತ್ತಿದೆ. ಅಂಗನವಾಡಿ ರಸ್ತೆ ಪರಿಸರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕ್ವಾರೆಯಿಂದಿರುವ ಕೆಂಪುಕಲ್ಲಿನ ಧೂಳಿನಿಂದಾಗಿ ೨೦ರಷ್ಟು ಕುಟುಂಬಗಳು ರೋಗಕ್ಕೆ ತುತ್ತಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ವರ್ಷಗಳಿಂದ ಜನವಾಸ ಕೇಂದ್ರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕೆಂಪುಕಲ್ಲು ಕ್ವಾರೆಗಳು ಸ್ಥಳೀಯರಿಗೆ ಬೆದರಿಕೆ ಸೃಷ್ಟಿಸಿದೆ ಎಂದು ದೂರಲಾಗಿದೆ. ಧೂಳು ಮಕ್ಕಳು ಹಾಗೂ …

ಮಂಜೇಶ್ವರದಲ್ಲಿ ವೈಭವಪೂರ್ಣ ಹಿಂದೂ ಸಂಗಮ

ಮಂಜೇಶ್ವರ: ಆರ್‌ಎಸ್‌ಎಸ್ ಶತಾಬ್ದಿ ಹಿನ್ನೆಲೆಯಲ್ಲಿ ಮಂಜೇಶ್ವರ ಹಿಂದೂ ಸಂಗಮ ಆಯೋಜನಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಮಂಜೇಶ್ವರ ಹಿಂದೂ ಸಂಗಮದ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖ ರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಗೈದು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಹನಾ ಕುಂದರ್ ಸೂಡ ದಿಕ್ಸೂಚಿ ಭಾಷಣ ಮಾಡಿದರು.ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ನೌಕಾದಳ ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ …

ಬಿಜೆಪಿ ಹಲ್ಲೆ ಆರೋಪಿಸಿ ಎಂಎಸ್‌ಎಫ್ ಪ್ರತಿಭಟನೆ

ಕಾಸರಗೋಡು: ಬದಿಯಡ್ಕ ಪೇಟೆಯಲ್ಲಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಪ್ರಧಾನ ಕಾರ್ಯದರ್ಶಿ ಸಿರಾಜ್ ಬದಿಯಡ್ಕ ಸಹಿತವಿರುವ ನಾಲ್ಕು ಎಂಎಸ್‌ಎಫ್ ಕಾರ್ಯಕರ್ತರನ್ನು ಬಿಜೆಪಿ ತಂಡ ವಿನಾಕಾರಣ ಹಲ್ಲೆಗೈದಿದೆ ಎಂದು ಆರೋಪಿಸಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯ ಉಪಾಧ್ಯಕ್ಷ ಅನಸ್ ಎದುರ್ತೋಡು, ಸಲಾಂ ಬೆಳಿಂಜ, ಅಲ್ತಾಫ್ ಪೊವ್ವಲ್, ಶಾನಿಫ್ ನೆಲ್ಲಿಕಟ್ಟೆ, ಯೂಸುಫ್ ದಾರಿಮಿ, ಹಾಶಿರ್ ಮೊಯ್ದೀನ್, ಹಮೀದ್ ಕೆಡೆಂಜಿ, ಅರ್ಫಾತ್ ಕಂಬಾರ್, ಜಸಿಲ್ ತುರುತ್ತಿ, ಮುನ್ವರ್ ಫೈರೂಸ್, ರಾದಿನ್ ಅನ್ವಫ್ ನೇತೃತ್ವ ನೀಡಿದರು.

ಚುನಾವಣೆ ಪೂರ್ವಭಾವಿ ಸಿದ್ಧತೆ: ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಕಾರ್ಯಾಗಾರ

ಕಾಸರಗೋಡು: ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಕಾಸರ ಗೋಡು ಮಂಡಲ ಸಮಿತಿ ಕಾರ್ಯಾ ಗಾರ ನಡೆಯಿತು. ಮಂಡಲದ ಚುನಾವಣೆ ಚಟುವಟಿಕೆಗಳ ಹೊಣೆ ವಹಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಯಪ್ರಕಾಶ್, ಸುಕುಮಾರ ಕುದ್ರೆಪ್ಪಾಡಿ, ಚಂದ್ರಶೇಖರ, ಶ್ರೀಧರ ಕೂಡ್ಲು ಮಾತನಾಡಿದರು.

ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪುನಲ್ಲಿ ಸ್ವಾಗತ

ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ಜನ್ಮಶತಾಬ್ದಿ ಆಚರಣೆಯಂಗವಾಗಿ ದೇಶವ್ಯಾಪಕವಾಗಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪು ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ಸ್ವಾಗತ ನೀಡಲಾಯಿತು. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಶೋಭಾಯಾತ್ರೆಗೆ ಉಜ್ವಲ ಸ್ವಾಗತವನ್ನು ನೀಡಲಾಗಿದ್ದು, ಬಳಿಕ ಪಾದುಕ ದರ್ಶನ, ಸತ್ಸಂಗ, ಧಾರ್ಮಿಕ ಸಭೆ ನಡೆಯಿತು. ಶ್ರೀ ಸತ್ಯಸಾಯಿ ಸೇವಾ ಕರ್ನಾಟಕ ರಾಜ್ಯ ಕೋ-ಆರ್ಡಿ ನೇಟರ್ ಜಗನ್ನಾಥ್ ನಾಡಿಗೇರ ಪ್ರಧಾನ ಭಾಷಣ ಮಾಡಿದರು. ಸತ್ಯಸಾಯಿ ಜಿಲ್ಲಾಧ್ಯಕ್ಷ ಎಚ್. ಮಹಾಲಿಂಗ ಭಟ್, ತಾಳಿಪಡ್ಪು …

ಲಿಟ್ಲ್ ಲಿಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂಬಳೆ: ಕೇರಳ ಸಯನ್ಸ್ ಅಕಾಡೆಮಿ ಆಶ್ರಯದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಭೂ ವಿಜ್ಞಾನ ಬಗ್ಗೆ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ  ತರಗತಿ ನಡೆಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಚೆಯರ್ ಪರ್ಸನ್ ಸರಸ್ವತಿ ಎ. ಉದ್ಘಾಟಿಸಿದರು. ಸೆಂಟ್ರಲ್ ಯೂನಿ ವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಾಸ್ಮಿನ್ ಎಂ. ಶಾ ಅಧ್ಯಕ್ಷತೆ ವಹಿಸಿದರು. ಶಾಲೆಯ ಪ್ರಾಂಶುಪಾಲ ಚಂದ್ರ ಬೋಸ್ ಎಂ.ಜಿ. ಸ್ವಾಗತಿಸಿದರು. ಪ್ರೊಫೆಸರ್ ಸಿಜಿನ್ ಕುಮಾರ್ ಎ.ವಿ, ಡಾ. ಆದಿತ್ಯ ವಿ. …

ಕನ್ಯಪ್ಪಾಡಿಯಲ್ಲಿ ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ

ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ    ಭಾರೀ ಗಾತ್ರದ ಕಾಡುಕೋಣ ಪತ್ತೆಯಾಗಿದೆ.  ನೀರ್ಚಾಲು ಬಳಿಯ ಕನ್ಯಪ್ಪಾಡಿಯಲ್ಲಿ ನಿನ್ನೆ ರಾತ್ರಿ 12 ಗಂಟೆ ವೇಳೆ  ಕಾಡುಕೋಣ ಕಂಡುಬಂದಿದೆ. ಇಲ್ಲಿನ ಬಸ್ ಪ್ರಯಾಣಿಕರ ತಂಗುದಾಣದ ಮುಂದೆ ದೀರ್ಘ ಹೊತ್ತು ನಿಂತಿದ್ದ ಕಾಡು ಕೋಣದ ಚಿತ್ರವನ್ನು ಈ ರಸ್ತೆಯಲ್ಲಿ ಸಂಚರಿಸಿದವರು ತೆಗೆದಿದ್ದರು.  ಈ ಪ್ರದೇಶದಲ್ಲಿದ್ದ ಬೀದಿ ನಾಯಿಗಳು ಕಾಡುಕೋಣವನ್ನು ಸುತ್ತುವರಿದು ದಾಳಿಗೆ ಮುಂದಾಗಿ ದ್ದವು. ಇದರಿಂದ ಕಾಡುಕೋಣ ಅಲ್ಲಿಂದ ಪರಾರಿಯಾಗಿದೆ. ಕೆಲವು ದಿನಗಳ ಹಿಂದೆಯೂ ಕನ್ಯಪ್ಪಾಡಿಯಲ್ಲಿ ಕಾಡುಕೋಣವನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಅಂದು …

ಕೋಳಿ ಅಂಕ:5 ಮಂದಿ ಸೆರೆ; 7 ಕೋಳಿ ವಶ

ಬದಿಯಡ್ಕ: ಪುತ್ತಿಗೆ ಮುಗು ಚೇವ ಎಂಬಲ್ಲಿನ ಕೋಳಿ ಅಂಕ ಕೇಂದ್ರಕ್ಕೆ ನಿನ್ನೆ ರಾತ್ರಿ ಬದಿಯಡ್ಕ ಪೊಲೀಸರು ದಾಳಿ ನಡೆಸಿ ಕೋಳಿಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ. ಮಾತ್ರವಲ್ಲ 7 ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಂಬಾರ್ ನಿವಾಸಿ ಯತೀಶ್ ಬಿ. (36), ಮುಗು ನಿವಾಸಿಗಳಾದ ಬಾಬು ರೈ (70), ಸುಧಾಕರ ರೈ (48), ನಾರಾಯಣ ಕೆ. (42) ಮತ್ತು ಗಿರೀಶ್ ರೈ (40) ಎಂಬವರನ್ನು ಈ ಸಂಬಂಧ ಬಂಧಿಸಲಾಗಿದೆ.