ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ನಾಳೆ ಬೆಳಗ್ಗೆ 10 ಗಂಟೆಗೆ ಬೀರಂತ ಬೈಲಿನಲ್ಲಿರುವ ‘ಕನ್ನಡ ಅಧ್ಯಾಪಕ ಭವನ’ದಲ್ಲಿ ನಡೆಯುವುದು. ಜಿಲ್ಲಾ ವಿದ್ಯಾಧಿಕಾರಿ ಸವಿತ ಪಿ. ಉದ್ಘಾಟಿಸುವರು. ಕಾಸರಗೋಡು ಉಪ ಜಿಲ್ಲಾ ಅಧ್ಯಕ್ಷೆ ಯಶೋದ ಕೆ.ಎ. ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್, ಬೇಕಲ ಜಿಎಫ್ ಶಾಲೆಯ ಪ್ರಾಂಶುಪಾಲ ಅರವಿಂದ.ಕೆ, ಕಾಸರಗೋಡು ಉಪ ಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬರ್ನಾಡ್, ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ …

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಿಂದ ರಕ್ತದಾನ ಅಭಿಯಾನ 24ರಂದು

ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಭಾರತಾಂಬಾ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ಬ್ಲಡ್‌ಬ್ಯಾಂಕ್‌ನ ಸಹಯೋಗದೊಂದಿಗೆ ರಾಜಯೋಗಿನಿ ದಾದಿ ಪ್ರಕಾಶಮಣಿಜಿ ಅವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನದಂಗವಾಗಿ ಬೃಹತ್ ರಕ್ತದಾನ ಅಭಿಯಾನ ಈ ತಿಂಗಳ 24ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಅಣಂಗೂರು ಭಾರತಾಂಬಾ ಸೇವಾ ಪ್ರತಿಷ್ಠಾನ ಕಾರ್ಯಾಲಯದಲ್ಲಿ ಜರಗುವ ರಕ್ತದಾನ ಅಭಿಯಾನದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಸಹಕರಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

ಹೊಸದುರ್ಗ ರಾಜಧಾನಿ ಜ್ಯುವೆಲ್ಲರಿ, ಚೆರ್ವತ್ತೂರು ವಿಜಯಾ ಬ್ಯಾಂಕ್ ಕಳವು ಆರೋಪಿದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ಕಳ್ಳತನ ಯತ್ನ: ಪ್ರಮುಖ ಆರೋಪಿ ಸೆರೆ

ತಲಪಾಡಿ: ಹೊಸದುರ್ಗದಲ್ಲಿನ ರಾಜಧಾನಿ ಜ್ಯುವೆಲ್ಲರಿ ಅಂಗಡಿ ಕಳವುಗೈದ ಆರೋಪಿ ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರ ಸೆರೆಯಾಗಿದ್ದಾನೆ. ಕಳೆದ ಮಾರ್ಚ್ 29ರಂದು ರಾತ್ರಿ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಳ್ಳತನ ನಡೆಸಲು ಪ್ರಯತ್ನ ನಡೆಸಲಾಗಿತ್ತು. ಕಚೇರಿಯ ಮುಂಭಾಗದ ಬಾಗಿಲಿನ ಸೈರನ್ ಕೇಬಲ್ ತುಂಡುಮಾಡಿ ಕಳವು ಯತ್ನ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಕೋಣಾಜೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ತಲೆಮರೆಸಿಕೊಂಡಿದ್ದ ಆರೋಪಿ ವೆಳ್ಳರಿಕುಂಡ್ ನಿವಾಸಿ …

ಬೇಟೆಗಾಗಿ ಬಂದ ತಂಡವನ್ನು ಅಪಹರಿಸಿ ಬಂದೂಕು, ಹಣ ದರೋಡೆಗೈದ ಪ್ರಕರಣ: ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಆರೋಪಿ ಸೆರೆ

ಮಂಜೇಶ್ವರ: ಬೇಟೆಗಾಗಿ ವರ್ಕಾಡಿಗೆ ತಲುಪಿದ ಕುತ್ತಿಕೋಲ್ ನಿವಾಸಿಗಳನ್ನು ಅಪಹರಿಸಿ ಹಲ್ಲೆಗೈದು ಬಂದೂಕು, ಮದ್ದುಗುಂಡುಗಳು ಹಾಗೂ ಹಣ ದರೋಡೆ ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆಹಿಡಿಯಲಾಗಿದೆ. ವರ್ಕಾಡಿ ಪುರುಷಂಗೋಡಿಯ ಮುಹಮ್ಮದ್ ರಾಸಿಕ್ (25) ಎಂಬಾ ತನನ್ನು ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಕರ್ನಾಟ ಕದ ದ.ಕ. ಜಿಲ್ಲೆಯ ಮಂಚಿ ಎಂಬಲ್ಲಿಂದ ಸೆರೆಹಿಡಿದಿದೆ.ಕುತ್ತಿಕ್ಕೋಲ್ ನಿವಾಸಿ ನಿತಿನ್‌ರಾಜ್ ಹಾಗೂ ಸ್ನೇಹಿತರು ಬೇಟೆಗಾಗಿ ವರ್ಕಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಅಂಗಡಿಪದವಿನ ಸೈಫುದ್ದೀನ್ ಯಾನೆ ಪೂಚ …

ವಾಟ್ಸಪ್ ಗ್ರೂಪ್‌ನಲ್ಲಿ  ಅನುಚಿತ ವರ್ತನೆ ಆರೋಪ: ಶಾಸಕ ರಾಹುಲ್ ಮಾಕೂಟ್ಟತ್ತಿಲ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಸಾಧ್ಯತೆ

ತಿರುವನಂತಪುರ: ವಾಟ್ಸಪ್ ಗ್ರೂಪ್‌ನಲ್ಲಿ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆಂಬ ಆರೋಪ ಪಾಲ ಕ್ಕಾಡ್ ಶಾಸಕ ರಾಹುಲ್ ಮಾಕೂಟ ತ್ತಿಲ್‌ರ ಮೇಲೆ ಉಂಟಾಗಿದ್ದು, ಆ ಹಿನ್ನೆಲೆ ಯಲ್ಲಿ ಅವರು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳ್ಳುವ ಸಾಧ್ಯತೆ ಉಂಟಾಗಿದೆ. ರಾಹುಲ್ ಮಾಕೂಟತ್ತಿಲ್ ವಿರುದ್ಧ ಕಾಂಗ್ರೆಸ್‌ನ ಕೆಲವು ಮಹಿಳಾ ನೇತಾರರೂ, ಕಾಂಗ್ರೆಸ್‌ನ ಕೇರಳ ಘಟಕದ ಹೊಣೆಗಾರಿಕೆ ಹೊಂದಿರುವ ಎಐಸಿಸಿ  ಪ್ರಧಾನ ಕಾರ್ಯದರ್ಶಿ  ದೀಪಾದಾಸ್ ಮುನ್ಶಿಗೆ ದೂರು ನೀಡಿದ್ದು ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಕಾಂಗ್ರೆಸ್‌ನ ರಾಜ್ಯ ನೇತೃತ್ವಕ್ಕೆ …

ಪಿಕಪ್ ಚಾಲಕ ನೇಣು ಬಿಗಿದು ಸಾವು

ಅಡೂರು: ಪಿಕಪ್ ಚಾಲಕ ನೋರ್ವ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡೂರು ಬಳಿಯ ಮಣಿಯೂರು ಮೂಲಡ್ಕ ನಿವಾಸಿ ಗೋಪಾಲ ಎಂಬವರ ಪುತ್ರ ಯೋಗೀಶ್ (28) ಮೃತ ಯುವಕನಾಗಿದ್ದಾರೆ. ಇವರು ಇಂದು ಬೆಳಿಗ್ಗೆ ಮನೆ ಬಳಿಯ ಮರದಲ್ಲಿ ನೇಣು ಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ತಂದೆ, ತಾಯಿ ಯಶೋದ, ಪತ್ನಿ ಪ್ರಜ್ವಲ, ಸಹೋದರ ಶರತ್,ಸಹೋದರಿ ಶರಣ್ಯ ಹಾಗೂ …

ಪೋಕ್ಸೋ ಪ್ರಕರಣ: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಜೇಶ್ವರ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಚಿತ್ರದುರ್ಗ ನಿವಾಸಿ ತಿಮ್ಮಯ್ಯ (38) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2020ರಲ್ಲಿ ಈತ ಮಂಜೇಶ್ವರ ಪೊಲೀಸ್ ಠಾಣೆ   ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ನಿವಾಸಿಯಾದ ಬಾಲಕಿಗೆ ಕಿರುಕುಳ ನೀಡಿದ  ಬಗ್ಗೆ ದೂರಲಾಗಿತ್ತು. ಇದರಂತೆ ಪೊಲೀಸರು ತಿಮ್ಮಯ್ಯನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ವೇಳೆ ರಿಮಾಂಡ್ ಗೊಳಗಾದ ಆರೋಪಿ  ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಬಳಿಕ ಹಾಜರಾಗದೆ ತಲೆಮರೆಸಿಕೊಂ …

1.500 ಕಿಲೋ ಗಾಂಜಾ ಸಹಿತ ಆರೋಪಿ ಸೆರೆ

ಹೊಸದುರ್ಗ:  ವಿವಿಧ ಸ್ಥಳಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ತಲುಪಿಸುವ ತಂಡದ ಪ್ರಧಾನ ಸೂತ್ರಧಾರನನ್ನು ಸೆರೆ ಹಿಡಿಯಲಾಗಿದೆ. ಮಾಡಾಯಿಪಾರ ಎಂಬ ಸ್ಥಳದಲ್ಲಿ ಚೆರುತಾಯಂ ಪಿರಕ್ಕಂತಡ ನಿವಾಸಿ ಅಫೀದ್ ಕೆ.ಪಿ. (21) ಎಂಬಾತನನ್ನು ಪಾಪಿನಿಶ್ಶೇರಿ ಅಬಕಾರಿ ಇನ್ಸ್‌ಪೆಕ್ಟರ್ ಜೆಸೀರಲಿ ಹಾಗೂ ತಂಡ ಸೆರೆ ಹಿಡಿದಿದೆ. ಅಬಕಾರಿ ಕಮಿಶನರ್ ತಂಡಕ್ಕೆ ನೀಡಿದ ರಹಸ್ಯ ಮಾಹಿತಿಯ ಆಧಾರದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. 1.500 ಕಿಲೋ ಗ್ರಾಂ ಒಣಗಿದ ಗಾಂಜಾವನ್ನು ಈತನಿಂದ ವಶಪಡಿಸಲಾಗಿದ್ದು, ಹೋಂಡಾ ಆಕ್ಟೀವ ಸ್ಕೂಟರ್ ಕಸ್ಟಡಿಗೆ ತೆಗೆಯ ಲಾಗಿದೆ. …

ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯಾಗಿ ನಂತರ ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪ್ರಕರಣದ ವ್ಯಕ್ತಿಯನ್ನು ಭಾರತ-ನೇಪಾಳ ಗಡಿಯಿಂದ ಮೇಲ್ಪರಂಬ ಪೊಲೀಸರು  ಬಂಧಿಸಿದ್ದಾರೆ. ಚೆಮ್ನಾಡು ಪಂಚಾಯತ್‌ನ ಪೆರುಂಬಳ ಕುದಿರಿಲ್ ಹೌಸ್‌ನ ಪಿ. ಅಬ್ದುಲ್ ಹ್ಯಾರೀಸ್ (41) ಬಂಧಿತ ಆರೋಪಿ,ಕಳೆದ ಜೂನ್ ೨೯ರಂದು ಹನ್ನೊಂದು ವರ್ಷದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆರೋಪಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿ ಮುಂಬೈಗೆ ಪರಾರಿಯಾಗಿದ್ದನು. ಅಲ್ಲಿಂದ ಆತ ವಿದೇಶಕ್ಕೆ ಪರಾರಿಯಾಗಲು …

ತಿಮರೋಡಿ ಕಸ್ಟಡಿಗೆ ತೆಗೆಯಲು ಬೆಳ್ತಂಗಡಿಗೆ ಬಂದ ಉಡುಪಿ ಪೊಲೀಸ್ ಬೃಹತ್ ತಂಡ

ಪುತ್ತೂರು: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಕಸ್ಟಡಿಗೆ ತೆಗೆಯಲು ಉಡುಪಿ ಜಿಲ್ಲಾ ಪೊಲೀಸರ ತಂಡ ಇಂದು ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಾಂತರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಒಳಗೊಂಡ ತಂಡ ಆರು ಜೀಪುಗಳಲ್ಲಾಗಿ ಬೆಳ್ತಂಗಡಿಗೆ ತಲುಪಿದೆ. ಏಕಾಏಕಿ ನಡೆದ ಈ ಪೊಲೀಸ್ ಕಾರ್ಯಾಚರಣೆಯಿಂದ ಸ್ಥಳೀಯರಲ್ಲಿ ಕುತೂಹಲ ಸೃಷ್ಟಿಯಾಗಿದೆ. ಉಡುಪಿ ಜಿಲ್ಲಾ ಅಡಿಶನಲ್ ಎಸ್‌ಪಿ ಸುಧಾಕರ್ …