ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ: ಹಳೆ ವಿದ್ಯಾರ್ಥಿ ಸಂಘದಿಂದ ಸ್ಮರಣಿಕೆ, ಟ್ರೋಫಿ ಹಸ್ತಾಂತರ

ಕಾಸರಗೋಡು: ಕಾಸರಗೋಡು ಜಿಎಚ್‌ಎಸ್‌ಎಸ್‌ನಲ್ಲಿ ನಡೆಯುತ್ತಿರುವ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವದ ವಿಜೇತರಿಗಿರುವ ಸ್ಮರಣಿಕೆ ಹಾಗೂ ಟ್ರೋಫಿಗಳನ್ನು ಶಾಲೆಯ ಪೂರ್ವ ವಿದ್ಯಾರ್ಥಿ ಸಂಘಟನೆ ಹಸ್ತಾಂತರಿಸಿದೆ. ಸ್ಪರ್ಧಾ ವಿಜೇತರಾದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ, ಜನರಲ್ ವಿಭಾಗದಲ್ಲೂ ಅರೆಬಿಕ್, ಸಂಸ್ಕೃತ ಕಲೋತ್ಸವ ಚಾಂಪ್ಯನ್‌ರಿಗಿರುವ ರೋಲಿಂಗ್ ಟ್ರೋಫಿಯನ್ನು ಹಳೆ ವಿದ್ಯಾರ್ಥಿ ಸಂಘಟನೆ ಕೊಡುಗೆಯಾಗಿ ನೀಡಿದೆ. ಜನರಲ್ ವಿಭಾಗದ ರೋಲಿಂಗ್ ಟ್ರೋಫಿಯನ್ನು ಸಂಘಟನೆಯ ಅಧ್ಯಕ್ಷ, ನಗರಸಭಾಧ್ಯಕ್ಷನಾಗಿದ್ದ ಟಿ.ಇ. ಅಬ್ದುಲ್ಲರ ಸ್ಮರಣೆಗಾಗಿ ನೀಡಲಾಗುತ್ತಿದೆ. ಸಂಘಟನೆಯ ಅಧ್ಯಕ್ಷ ಕೆ. ಜಯಪ್ರಕಾಶ್, ಸ್ವಾಗತ ಸಮಿತಿ ಸಂಚಾಲಕ, ಪ್ರಾಂಶುಪಾಲ ಪಿ.ಕೆ. …

ವಾಹನ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಮೃತ್ಯು: ಚಿಕಿತ್ಸೆ ಲೋಪ ಆರೋಪಿಸಿ ಆಸ್ಪತ್ರೆ ಮುಂದೆ ಬಿಜೆಪಿ ಪ್ರತಿಭಟನೆ

ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರುವಾಡ್‌ನಲ್ಲಿ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಬಿಜೆಪಿ, ಆರ್‌ಎಸ್‌ಎಸ್  ಕಾರ್ಯಕರ್ತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆರಿಕ್ಕಾಡಿ ಪಾರೆಸ್ಥಾನದ  ಕೃಷ್ಣ ಬೆಳ್ಚಪ್ಪಾಡರ ಪುತ್ರ ಎನ್.ಹರೀಶ್ ಕುಮಾರ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಾರು ಪ್ರಯಾಣಿಕರಾದ ಮಹಿಳೆ ಹಾಗೂ   ಪುರುಷ ಕೂಡಾ ಗಾಯ ಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತದಿಂದ ಸ್ಕೂಟರ್ ನಜ್ಜುಗು ಜ್ಜಾಗಿದ್ದು, ಕಾರು ಮಗುಚಿಬಿದ್ದಿದೆ. ಸ್ಕೂಟರ್ ಸವಾರನಾದ …

11ರ ಬಾಲಕಿಗೆ ಕಿರುಕುಳ ಯತ್ನ : ಮುಖ್ಯೋಪಾಧ್ಯಾಯ ಪೋಕ್ಸೋ ಪ್ರಕಾರ ಸೆರೆ

ಕುಂಬಳೆ:ಗೃಹ ಪ್ರವೇಶ ಕಾರ್ಯಕ್ರಮಕ್ಕೆ ತಲುಪಿದ ಹನ್ನೊಂದರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಆರೋಪ ದಂತೆ ಮುಖ್ಯೋಪಾಧ್ಯಾಯನನ್ನು ಕುಂಬಳ ಪೊಲೀಸರು ಪೋಕ್ಸೋ  ಪ್ರ ಕಾರ ಕೇಸು ದಾಖಲಿಸಿ ಬಂಧಿಸಿದ್ದಾರೆ. ಕಣ್ಣೂರು ಬ್ಲಾತೂರು ನಿವಾಸಿಯಾದ ಸುಧೀರ್ (48) ಸೆರೆಗೀಡಾದ ಆರೋಪಿ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಸುಧೀರ್ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಐಡೆಡ್ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿದ್ದಾನೆ. ಇತ್ತೀಚೆಗೆ ಸೀತಾಂಗೋಳಿ ಸಮೀಪ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುದಾತೆಯಾದ ಬಾಲಕಿಗೆ ಆರೋಪಕ್ಕೆಡೆಯಾದ ಸುಧೀರ್ ಮೂರನೇ ತರಗತಿ ವರೆಗೆ ಪಾಠ ಹೇಳಿಕೊಟ್ಟಿದ್ದನೆನ್ನಲಾಗಿದೆ. …

ಶಾಲಾ ವಿದ್ಯಾರ್ಥಿ ನಾಪತ್ತೆ

ಉಪ್ಪಳ:  ಪ್ಲಸ್‌ಟು  ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ಭಗವತಿ ರಸ್ತೆ ಅಂಗನವಾಡಿ ಬಳಿಯ ನಿವಾಸಿ ಅಮ್ಜತ್ ಅಲಿ ಎಂಬವರ ಪುತ್ರ ಮುಹಮ್ಮದ್ ಕೈಫ್ (17) ನಾಪತ್ತೆಯಾ ಗಿರುವುದಾಗಿ ದೂರಲಾಗಿದ.  ನಿನ್ನೆ ಮಧ್ಯಾಹ್ನ 12.30ರ ವೇಳೆ ಮನೆಯಿಂದ ಹೊರಗೆ ತೆರಳಿದ್ದು ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. 8 ತಿಂಗಳ ಹಿಂದೆಯೂ ಈತ ನಾಪತ್ತೆಯಾಗಿದ್ದು, ಬಳಿಕ ಪೊಲೀಸರು ಶೋಧ ನಡೆಸುತ್ತಿದ್ದಾಗ ಮುಂಬಯಿಯಿಂದ ಪತ್ತೆಯಾಗಿದ್ದಾನೆನ್ನಲಾಗಿದೆ. ಈತ ಇದೀಗ ನಾಪತ್ತೆಯಾಗಿರುವುದರಿಂದ ಪೊಲೀಸರು ಕೇಸು ದಾಖಲಿಸಿ …

ಶಬರಿಮಲೆ ಚಿನ್ನ ಕಳವು ಲೇಪನಕ್ಕೆ ನೀಡಿದ್ದು ತಾಮ್ರದ ಕವಚ: ಮುಜರಾಯಿ ಮಂಡಳಿಯೂ ಕಾನೂನಿನ ಕುಣಿಕೆಯಲ್ಲಿ

ತಿರುವನಂತಪುರ: ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ  ಹೊಸ ಅತೀ ನಿರ್ಣಾಯಕ ಮಾಹಿತಿಗಳು ಈಗ ಹೊರಬಿದ್ದಿವೆ. ಚಿನ್ನದ ಲೇಪನಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆ ದೇಗುಲದಿಂದ ಸಾಗಿಸಲಾಗಿದ್ದ ದ್ವಾರಪಾಲಕ ಮೂರ್ತಿಗಳ ಕವಚಗಳು ಕೇವಲ ತಾಮ್ರದ್ದಾಗಿತ್ತು ಎಂದು 2024ರಲ್ಲಿ ತಿರುವಿದಾಂ ಕೂರು ಮುಜರಾಯಿ ಮಂಡಳಿ  ಕಾರ್ಯದರ್ಶಿಯವರು  ಹೊರ ತಂದ ದಾಖಲುಪತ್ರಗಳಲ್ಲಿ ಸ್ಪಷ್ಟಪಡಿ ಸಿದ್ದಾರೆ. ಇದರಿಂದಾಗಿ ಶಬರಿಮಲೆ ಕ್ಷೇತ್ರದ 2019ರ ಅವಧಿಯ  ಪದಾಧಿಕಾರಿಗಳು ಈ ಪ್ರಕರಣದಲ್ಲಿ ಸಿಲುಕುವ ಸಾಧ್ಯತೆ ಇದೆ. ದ್ವಾರಪಾಲಕ ಮೂರ್ತಿಗಳ ಕವಚಗಳನ್ನು  ಚಿನ್ನದ ಲೇಪನ ಗೊಳಿಸಲು ಅದನ್ನು ಪ್ರಾಯೋಜಕ ಉಣ್ಣಿಕೃಷ್ಣನ್ …

ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ: ಕನ್ನಡಿಗರಿಗೆ ಸಮಸ್ಯೆ; ಪ್ರತಿಭಟನೆಯತ್ತ ಕನ್ನಡ ಸಂಘಟನೆಗಳು

ಕಾಸರಗೋಡು: ಚುನಾವಣೆಗೆ ಸಂಬಂಧಿಸಿ ಬಿಎಲ್‌ಒಗಳ ಮೂಲಕ ಮತದಾರರಿಗೆ   ನೀಡುವ ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಮುದ್ರಣಗೊಂ ಡಿರುವುದು ಕನ್ನಡಿಗರ ಪ್ರತಿಭಟನೆಗೆ ಕಾರಣವಾಗಿದೆ. ಬಿಎಲ್‌ಒಗಳಿಗೆ ಗ್ರಾಮ ಕಚೇರಿಗಳಿಂದ ಎನ್ಯುಮರೇಶನ್ ಫಾರ್ಮ್ ವಿತರಣೆಯಾಗಿದ್ದು ಅದನ್ನು ಅವರು ಮತದಾರರ  ಮನೆಗಳಿಗೆ ತಲುಪಿಸಬೇಕಾಗಿದೆ. ಆದರೆ ಎನ್ಯುಮರೇಶನ್ ಫಾರ್ಮ್   ಮಲೆಯಾಳದಲ್ಲಿ ಮಾತ್ರವೇ ಇರುವುದು ವಿವಾದಕ್ಕೆಡೆಮಾಡಿಕೊಟ್ಟಿದೆ. ಮಲೆಯಾಳ ತಿಳಿಯದ  ಬಿಎಲ್‌ಒಗಳು ಹಾಗೂ ಕನ್ನಡಿಗ ರಾದ ಮತದಾರರಿಗೆ ಈ ಫಾರ್ಮ್‌ನಿಂದ ತೀವ್ರ ಸಮಸ್ಯೆ ಎದುರಾಗಿದೆ. ಮಲಯಾಳದಲ್ಲಿರುವ ಫಾರ್ಮ್ ಭರ್ತಿಗೊಳಿಸಲು ಕನ್ನಡಿಗರಾದ ಮತದಾರರು ಪರದಾಡಬೇಕಾಗಿಬರಲಿದೆ. ಫಾರ್ಮ್ ಭರ್ತಿಗೊಳಿಸುವುದು ತಪ್ಪಿದಲ್ಲಿ …

ಆರ್‌ಪಿಎಫ್ ಅಧಿಕಾರಿಗೆ ಬಡಿದು, ಕಚ್ಚಿ ಹಲ್ಲೆ: ಉಪ್ಪಳ ರೈಲ್ವೇ ಗೇಟ್ ಕೀಪರ್ ಸೆರೆ

ಕಾಸರಗೋಡು: ರೈಲ್ವೇ ಪೊಲೀಸ್ ಉದ್ಯೋಗಸ್ಥನನ್ನು ಬಡಿದು, ಕಚ್ಚಿ ಗಾಯಗೊಳಿಸಿದ ಉಪ್ಪಳ ರೈಲ್ವೇ ಗೇಟ್ ಕೀಪರ್ ಕಣ್ಣೂರು ಮಂಬರ ನಿವಾಸಿ ಧನೇಶ್ (42) ಸೆರೆಯಾಗಿದ್ದಾನೆ. ಕಣ್ಣೂರು ರೈಲ್ವೇ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11.45ರ ವೇಳೆ ಆರ್‌ಪಿಎಫ್ ಉದ್ಯೋಗಸ್ಥನಾದ ಎಡಪ್ಪಾಲ್ ವಟ್ಟಕ್ಕುಳಂ ನಿವಾಸಿ ಪಿ. ಶಶಿಧರನ್ (53)ನನ್ನು ಆಕ್ರಮಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಣ್ಣೂರು  ರೈಲ್ವೇ ನಿಲ್ದಾಣದ ಪ್ಲಾಟ್ ಫಾಂನಲ್ಲಿ ಶಶಿಧರನ್ ಕರ್ತವ್ಯ ನಿರತರಾಗಿದ್ದರು. ಈ ಮಧ್ಯೆ ಪ್ಲಾಟ್ ಫಾಂನಲ್ಲಿ ಧನೇಶ್ ನಿದ್ದೆ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಆತನನ್ನು …

ರಾಜ್ಯದ ಅತ್ಯಂತ ದೊಡ್ಡ ಹೈಬ್ರೀಡ್ ಗಾಂಜಾ ಬೇಟೆ: ವಯನಾಡ್ ನಿವಾಸಿ ಸೆರೆ

ಕೊಚ್ಚಿ: ನೆಡುಂಬಾಶೇರಿಯಲ್ಲಿ ಕಸ್ಟಮ್ಸ್ ಭಾರೀ ಪ್ರಮಾಣದಲ್ಲಿ ಮಾದಕಪದಾರ್ಥ ವಶಪಡಿಸಿದೆ. ಆರೂವರೆ ಕೋಟಿ ರೂ.ಗಳ ಹೈಬ್ರೀಡ್ ಗಾಂಜಾದೊಂದಿಗೆ ಯುವಕ ಸೆರೆಯಾಗಿದ್ದಾನೆ. ವಯನಾಡ್ ನಿವಾಸಿ ಅಬ್ದುಲ್ ಸಮದ್ ಸೆರೆಯಾದ ವ್ಯಕ್ತಿ. ಇಂದು ಮುಂಜಾನೆ ತಲುಪಿದ ವಿಮಾನದಿಂದ ಕಸ್ಟಮ್ಸ್ ಈತನನ್ನು ಸೆರೆ ಹಿಡಿದಿದೆ. ನೆಡುಂಬಾಶೇರಿ ವಿಮಾನ ನಿಲ್ದಾಣದಿಂದ ಹೊರಗಿಳಿಯುವ ವೇಳೆ ಶಂಕೆ ತೋರಿದ ಕಸ್ಟಮ್ಸ್ ಈತನ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ ಬ್ಯಾಗ್‌ನಲ್ಲಿ ಸಣ್ಣ ಪ್ಯಾಕೆಟ್‌ಗಳಾಗಿ ಆರೂವರೆ ಕಿಲೋ ಗಾಂಜಾ ಪತ್ತೆಯಾಗಿದೆ. ಆರೂವರೆ ಕೋಟಿ ರೂ. ಇದರ ಮೌಲ್ಯವೆಂದು ಲೆಕ್ಕಹಾಕಲಾಗಿದೆ. ವಿಯೆಟ್ನಂನಿಂದ ಬ್ಯಾಂಕಾಕ್‌ಗೆ ತಲುಪಿಸಿದ …

ಕೊಲೆಯತ್ನ ಸಹಿತ 53 ಪ್ರಕರಣಗಳ ಕುಖ್ಯಾತ ಆರೋಪಿ ವೀಯೂರು ಸೆಂಟ್ರಲ್ ಜೈಲು ಪರಿಸರದಿಂದ ಪರಾರಿ

ತೃಶೂರು: ಕೊಲೆಯತ್ನ ಸೇರಿದಂತೆ 53 ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ತೃಶೂರು ವೀಯೂರು ಸೆಂಟ್ರಲ್ ಜೈಲು ಪರಿಸರದಿಂದ ನಿನ್ನೆ ಪರಾರಿಯಾಗಿದ್ದಾನೆ. ಬಾಲಮುರುಗನ್ (45) ಎಂಬಾತ   ಪರಾರಿಯಾದ ಕುಖ್ಯಾತ ಆರೋಪಿ. ಈತ ಕೊಲೆಯತ್ನ, ಕಳವು, ದರೋಡೆ ಸೇರಿದಂತೆ 53 ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಬಾಲಮುರುಗನ್ ವಿರುದ್ಧ ಕೇಸುಗಳಿದ್ದು ಅದಕ್ಕೆ ಸಂಬಂಧಿಸಿ ತಮಿಳುನಾಡು ಪೊಲೀಸರು ಆತನನ್ನು ವೀಯೂರು ಸೆಂಟ್ರಲ್ ಜೈಲಿನಿಂದ ತಮ್ಮ ಕಸ್ಟಡಿಗೆ ಪಡೆದು ತಮಿಳುನಾಡಿನ ವೀರುನಗರ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ನಿನ್ನೆ ರಾತ್ರಿ ಆತನನ್ನು ಮತ್ತೆ ವೀಯೂರು …

ಜಿಲ್ಲೆಯ 19 ಪಂಚಾಯತ್‌ಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಅಧ್ಯಕ್ಷರ ಮೀಸಲಾತಿಯನ್ನು ಘೋಷಿಸಲಾಗಿದೆ. ಇದರಂತೆ ಜಿಲ್ಲೆಯ 38 ಪಂಚಾಯತ್‌ಗಳ ಪೈಕಿ 19 ಅಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ತಲಾ ಒಂದು ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಇದು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ತಲಾ ಒಂದರಂತೆ ಅಧ್ಯಕ್ಷ ಸ್ಥಾನ ಮೀಸಲಿರಿಸಲಾಗಿದೆ. ಇನ್ನು ಆರು ಬ್ಲೋಕ್ ಪಂಚಾಯತ್‌ಗಳ ಪೈಕಿ …