ಹಿತ್ತಿಲಿನಲ್ಲಿ ಎಂಡಿಎಂಎ ಬಳಕೆ: ಯುವತಿ ಸಹಿತ ಮೂವರ ಸೆರೆ

ಮಂಜೇಶ್ವರ: ಮಾದಕ ವಸ್ತುವಾದ ಎಂಡಿಎಂಎ ಸೇದುತ್ತಿದ್ದ ಓರ್ವೆ ಯುವತಿ ಹಾಗೂ ಇಬ್ಬರು ಯುವಕರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ಸುರತ್ಕಲ್‌ನ ನಿಕೇತ್ ಸುರೇಶ್ (39), ಕುದ್ರೋಳಿಯ ಹುಸೈನ್ (34), ಕದ್ರಿಯ ಫಾತಿಮತ್ ಫೈರೋಸ್ ಪರ್ವಿನ್ (33) ಎಂಬಿವರು ಬಂಧಿತರಾದವರಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ತೂಮಿನಾಡು ಹಿಲ್‌ಟಾಪ್ ನಗರದ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಎಂಡಿಎಂಎ ಸೇದುತ್ತಿದ್ದರೆನ್ನಲಾಗಿದೆ. ಈ ಭಾಗದಲ್ಲಿ ನಿನ್ನೆ ಎಸ್‌ಐ ಅಜಯ್ ಎಸ್. ಮೆನೋನ್‌ರ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಈ ಮೂರು ಮಂದಿ …

ಹಿರಿಯ ಬಿಜೆಪಿ ಕಾರ್ಯಕರ್ತ ನಿಧನ

ಕೂಡ್ಲು: ಕೋಣಿಬೈಲು ಬಾಳಿಕೆ ಧರ್ಮಚಾವಡಿ ಟ್ರಸ್ಟಿ, ನಗರದಲ್ಲಿ  ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ  ಬಿ. ಗೋಪಾಲಕೃಷ್ಣ ಶೆಟ್ಟಿ (77) ನಿಧನ ಹೊಂದಿದರು. ಕೂಡ್ಲು ನಾಂಗುರಿ ನಿವಾಸಿಯಾದ ಇವರು ಪ್ರಸ್ತುತ ರಾಮದಾಸನಗರದಲ್ಲಿ ವಾಸಿಸುತ್ತಿದ್ದರು. ಬಿಜೆಪಿ, ಸಂಘ ಪರಿವಾರದ ಹಿರಿಯ ಕಾರ್ಯಕರ್ತ ರಾಗಿದ್ದ ಇವರು ಧಾರ್ಮಿಕ ರಂಗಗಳಲ್ಲೂ ಸಕ್ರಿಯರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು.  ಇವರ ಪತ್ನಿ ಕಲ್ಯಾಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಶರತ್, ಭರತ್, ಪ್ರತಾಪ್, ರೇಶ್ಮಾ, ಅಳಿಯ ರಂಜಿತ್, …

ಆಟೋ ರಿಕ್ಷಾ ತಡೆದು ನಿಲ್ಲಿಸಿ ಚಾಲಕನ ತಲೆಗೆ ಕಲ್ಲಿನಿಂದ ಹಲ್ಲೆ

ಕಾಸರಗೋಡು: ಆಟೋ ರಿಕ್ಷಾ ತಡೆದು ನಿಲ್ಲಿಸಿ ಚಾಲಕನ ತಲೆಗೆ ಕಲ್ಲಿ ನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ. ಆಟೋ ಚಾಲಕ ಪರಪ್ಪ ಕೂರಾಂಕುಂಡ್ ನಿವಾಸಿ  ಮಧು (48) ಎಂಬವರ ಮೇಲೆ  ಹಲ್ಲೆ ನಡೆಸಿದ್ದು ಈ ಸಂಬಂಧ ಚೆಂಬಂಚೇರಿ ನಿವಾಸಿ  ಸುನಿಲ್  (39) ಎಂಬಾ ತನನ್ನು ವೆಳ್ಳರಿಕುಂಡ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಬಳಾಲ್ ಚೆಂಬಂ ಚೇರಿ ಎಂಬಲ್ಲಿ ರಸ್ತೆಗೆ ಕಲ್ಲುಗಳನ್ನಿರಿಸಿ ಆಟೋ ರಿಕ್ಷಾ ತಡೆದಿ ರುವುದಾಗಿಯೂ, ಬಳಿಕ ಕಲ್ಲಿನಿಂದ ಮಧುವಿನ ತಲೆಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. …

ವಿವಾಹ ನಡೆಸದ ದ್ವೇಷದಿಂದ ತಾಯಿ, ತಂದೆಯನ್ನು ಇರಿದು ಕೊಲೆಗೈದ ಪುತ್ರ

ಆಲಪ್ಪುಳ: ಆಲಪ್ಪುಳದಲ್ಲಿ ಪುತ್ರ ತಂದೆ ಹಾಗೂ ತಾಯಿಯನ್ನು ಕೊಲೆಗೈದಿರುವುದು ವಿವಾಹ ನಡೆಸದ ದ್ವೇಷದಿಂದವೆಂದು ಹೇಳಿಕೆ ನೀಡಿದ್ದಾನೆ. ಆಲಪ್ಪುಳ ಒಪಿ ಪಾಲಂ ಕೊಮ್ಮಾಡಿ ಸಮೀಪ ವಾಸಿಸುವ ಮನ್ನತ್ ವಾರ್ಡ್ ಪನವೇಲಿಪುರ ಇಡತ್ತಿಲ್ ತಂಗರಾಜು ಹಾಗೂ ಆಗ್ನೇಸ್‌ರನ್ನು ಗುರುವಾರ ರಾತ್ರಿ 9 ಗಂಟೆ ವೇಳೆಗೆ ಪುತ್ರ ಬಾಬು ಇರಿದು ಕೊಲೆಗೈದಿದ್ದನು. ತರಕಾರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಬಾಬುವಿಗೆ ಓರ್ವೆ ಯುವತಿಯೊಂದಿಗೆ ಸಂಪರ್ಕವಿತ್ತೆನ್ನಲಾಗಿದೆ. ಇವರಿಬ್ಬರ ವಿವಾಹ ಮಾಡಿಕೊಡಬೇಕೆಂದು ಆಗ್ರಹಿಸಿದ್ದರೂ ತಾಯಿ ಇದನ್ನು ವಿರೋಧಿಸಿದರು. ಇದರಿಂದಾಗಿ ಅವರಲ್ಲಿ ತೀವ್ರ ದ್ವೇಷ ಉಂಟಾಯಿತೆಂದು …

ನಿವೃತ್ತ ಅಡಿಶನಲ್ ಕಾರ್ಯದರ್ಶಿ ನಿಧನ

ಮಂಜೇಶ್ವರ: ಕೇರಳ ಸರಕಾ ರದ ತಿರುವನಂತಪುರ ಸೆಕ್ರೆಟರಿಯೇ ಟ್‌ನಲ್ಲಿ ಅಡಿಶನಲ್ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಂಜತ್ತೂರು ಬಳಿಯ ತೂಮಿನಾಡು ನಿವಾಸಿ ನಾರಾಯಣ ಪೂಜಾರಿ (78) ನಿಧನ ಹೊಂದಿದರು. ಇವರು ಕಳೆದ ಆರು ತಿಂಗಳಿAದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ಕಳೆದ ಒಂದು ವಾರದ ಹಿಂದೆ ರೋಗ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ನವೀನ್ ಕುಮಾರ್.ವಿ.ಸಿ (ಮಂ ಜೇಶ್ವರ ವಿದ್ಯುತ್ ಕಚೇರಿಯಲ್ಲಿ ಅಸಿ ಸ್ಟೆಂಟ್ ಇಂಜಿನಿಯರ್), …

ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ

ಕಾಸರಗೋಡು: ಹೊಸದುರ್ಗ ಬಲ್ಲಾ  ಬಾರಾ ಗ್ರಾಮದ ಎರೋಲ್ ನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ಶ್ರೀನಿವಾಸನ್ ಪತ್ತಿಲ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಚರಣೆಯಲ್ಲಿ 7.56 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪನಯಾಲ್ ನೆಲ್ಲಿಯಡ್ಕದ ಜಗದೀಶ್ ಜೆ (39) ಎಂಬಾತನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್, ಸಿಕೆವಿ ಸುರೇಶ್, ಇತರ ಸಿಬ್ಬಂದಿಗಳಾದ …

ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತನಿಗೆ ವಿಧಿಸಲಾಗಿದ್ದ ಜೀವಾವಧಿ ಸಜೆಯನ್ನು 10 ವರ್ಷಕ್ಕೆ ಇಳಿಸಿ ಹೈಕೋರ್ಟ್ ತೀರ್ಪು

ಕೊಚ್ಚಿ: ಇಸ್ಲಾಮಿಕ್ ಸ್ಟೇಟ್ (ಐಎಸ್) ಕಾರ್ಯಕರ್ತನಿಗೆ ಎನ್‌ಐಎ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಸಜೆಯನ್ನು ಕೇರಳ ಹೈಕೋರ್ಟ್ ಹತ್ತು ವರ್ಷ ಆಗಿ ಇಳಿಸಿ ತೀರ್ಪು ನೀಡಿದೆ. ತೊಡುಪುಳ ನಿವಾಸಿ ಸುಬಹಾನಿ ಹಾಜ್ (ಅಬು ಜಾಸ್ಮಿನ್) ಎಂಬಾತನಿಗೆ ವಿಧಿಸಲಾಗಿದ್ದ ಜೀವಾ ವಧಿ ಸಜೆಯನ್ನು  ಮೇಲ್ಮನವಿಯಲ್ಲಿ ನ್ಯಾಯಮೂರ್ತಿ ವಿ. ರಾಜ ವಿಜಂi ರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಎಂಬವರ ನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಹತ್ತು ವರ್ಷಕ್ಕಿಳಿಸಿ ತೀರ್ಪು ನೀಡಿದೆ. ಐಎಸ್ ಕಾರ್ಯಚಟುವಟಿಕೆ ಯಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂ ಧಿಸಿ …

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಶ್ವೇತಾ ಮೆನನ್ ಆಯ್ಕೆ

ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯಾದ ಅಮ್ಮ ಇದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಅದರ ಉನ್ನತ ನಾಯಕತ್ವ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ. ಅಮ್ಮದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಟಿ ಶ್ವೇತಾ ಮೆನನ್ ಅಧ್ಯಕ್ಷರಾಗಿ  ಮತ್ತು ಕುಕು ಪರಮೇಶ್ವರನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಇದರ ಹೊರತಾಗಿ   ಅನ್ಸಿಬಾ ಹಸನ್ ಜತೆ ಕಾರ್ಯದರ್ಶಿ ಮತ್ತು ಲಕ್ಷ್ಮೀಪ್ರಿಯಾ ಮತ್ತು ಜಯನ್ ಚೇರ್ತಲ ಆಯ್ಕೆಗೊಂಡಿದ್ದಾರೆ.  ಕೋಶಾಧಿಕಾರಿಯಾಗಿ ಉಣ್ಣಿ ಶಿವಪಾಲನ್ ಆರಿಸಲ್ಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ವಿರುದ್ಧ …

ಕಾಸರಗೋಡಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ದೇಶದ ಸಂವಿಧಾನ ತತ್ವ ಚಿಂತನೆಗಳ ಮೇಲೆ ಉಂಟಾಗುತ್ತಿರುವ ಸವಾಲುಗಳ ಬಗ್ಗೆ ಜಾಗ್ರತೆ ಪಾಲಿಸಬೇಕು-ಸಚಿವ ಕೃಷ್ಣನ್‌ಕುಟ್ಟಿ

ಕಾಸರಗೋಡು: ದೇಶದ ಸಂವಿಧಾನ ತತ್ವ ಚಿಂತನೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಲ್ಲರೂ ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿದ್ಯುತ್ ಖಾತೆ ಸಚಿವ ಕೆ.ಕೃಷ್ಣನ್ ಕುಟ್ಟಿ  ಕರೆ ನೀಡಿದ್ದಾರೆ. ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಅದ್ದೂರಿಯ ಸ್ವಾತಂತ್ರ್ಯೋತ್ಸವದಲ್ಲಿ ತ್ರಿವರ್ಣ ಧ್ವಜ ಹಾರಿಸಿ ವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು. ಸಮಾಜವಾದ, ಧರ್ಮ ನಿರಪೇಕ್ಷತೆ ಮತ್ತು ಫೆಡರಲಿಸಂ ಇದು ಇಂದು ಬೆದರಿಕೆ ಎದುರಿಸುತ್ತಿದೆ. ದೇಶದ ಒಟ್ಟು ಸಂಪತ್ತಿನಲ್ಲಿ ಶೇ. ೪೫ರಷ್ಟು ದೇಶದಲ್ಲಿರುವ ಕೇವಲ1 ಶೇ.ದಷ್ಟು ಮಾತ್ರವೇ ಇರುವ ಶ್ರೀಮಂತ ವರ್ಗದವರ ಕೈಯಲ್ಲಿದೆ. …

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಆಗಸ್ಟ್ 30ರಂದು ಮತದಾರ ಯಾದಿ ಪ್ರಕಟ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವಂತೆಯೇ ಅದರ ಮತದಾರ ಯಾದಿಯನ್ನು ಆಗಸ್ಟ್ 30ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಆ ಬಳಿಕ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಗತ್ಯದ ಎಲ್ಲಾ ಸಜ್ಜೀಕರಣಗಳನ್ನೂ ಆರಂಭಿಸಲಿದೆ. ಮತದಾರಯಾದಿ ಪ್ರಕಟಗೊಂಡ ಬಳಿಕ ಮತಗಟ್ಟೆಗಳ ಕ್ರಮೀಕರಣೆ, ಮೀಸಲಾತಿ ವಾರ್ಡ್‌ಗಳು ಇತ್ಯಾದಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಇತ್ಯಾದಿಗಳು ಸೇರಿದಂತೆ ಒಟ್ಟು ೩೫.೦೮ ಲಕ್ಷ ಅರ್ಜಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಲಭಿಸಿದೆ. ಅದು ಈಗ ಆಯೋಗದ ಪರಿಶೀಲನೆಯಲ್ಲಿದೆ. ಇದರಲ್ಲಿ ಐದು ಲಕ್ಷದಷ್ಟು ಮಂದಿಯನ್ನು …