ಸುಖೋಯ್ ಫೈಟರ್ ಜೆಟ್ ಪಥನ: ಇಬ್ಬರು ಪೈಲಟ್‌ಗಳ ದುರ್ಮರಣ  

ನವದೆಹಲಿ: ಅಸ್ಸಾಂನ ಕರ್ಬಿ ಆಂಗ್ಲಾಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆದ ಸುಖೋಯ್  30  ಜೆಟ್ ವಿಮಾನ ಪಥನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಈ ಜೆಟ್ ವಿಮಾನ ಜೋಹರ್ಟ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮ ಯದ  ಬಳಿಕ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ನಂತರ ಆ ಬಗ್ಗೆ ಶೋಧ ನಡೆಸಿದಾಗ ವಿಮಾನ ಸುಮಾರು 60 ಕಿ.ಮೀ. ದೂರದಲ್ಲಿರುವ ಅಂಗ್ಲಾಂಗ್‌ನಲ್ಲಿ ಪಥನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಪೈಲೆಟ್‌ಗಳಾದ ಸ್ಕ್ವಾಡನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ …

ಪತ್ನಿ ನೀಡಿದ ವಿವಾಹ ವಿಚ್ಛೇಧನ ಪ್ರಕರಣ ನಾಳೆ ಪರಿಗಣಿಸಲಿರುವಂತೆ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೈವಳಿಕೆ: ಕಯ್ಯಾರಿನಲ್ಲಿ ಯುವಕನೋರ್ವ ಮನೆ ಸಮೀಪದ ಮರದಲ್ಲಿ ನೇಣುಬಿಗಿದು ಸಾವಿಗೀಡಾ ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಿಲಿಯನ್ನೂರಿನ ಬಾಲಚಂದ್ರ (44) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಸಮೀಪದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿವಾಹ ವಿಚ್ಛೇಧನ ಆಗ್ರಹಿಸಿ ಪತ್ನಿ ದೀಪಿಕಾ ನೀಡಿದ ಪ್ರಕರಣವನ್ನು ನಾಳೆ ಪರಿಗಣಿಸಲಿರುವಂತೆ ಬಾಲಚಂದ್ರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.  ಬಾಲಚಂದ್ರರ ತಾಯಿ ಲಲಿತ ಈ ಹಿಂದೆ ನಿಧನರಾಗಿದ್ದರು. ಪತ್ನಿ ಹಾಗೂ ನಾಲ್ಕು …

ಉಪ್ಪಳದಲ್ಲಿ ವೈದ್ಯರಿಗೆ ಹಲ್ಲೆ: ಮೂರು ಮಂದಿ ವಿರುದ್ಧ ಕೇಸು

ಉಪ್ಪಳ: ಉಪ್ಪಳದ ಖಾಸಗಿ ಆಸ್ಪತ್ರೆಯೊಂದರ ಆವರಣದೊಳಗೆ ನುಗ್ಗಿದ ತಂಡ ವೈದ್ಯರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿರುವ ದೇವಿ ಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್ (42) ಅವರಿಗೆ   ತಂಡ ಹಲ್ಲೆಗೈದಿದೆ. ಬಿಹಾರ್ ನಿವಾಸಿಯಾದ ಡಾ| ಕುಮಾರ್ ಶಾಶ್ವತ್ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಲ್ಲೆಗೆ ಸಂಬಂಧಿಸಿ ವೈದ್ಯ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಬುಧವಾರ ರಾತ್ರಿ ೮.೩೦ರ ವೇಳೆ ಘಟನೆ ನಡೆದಿದೆ. ಆಸ್ಪತ್ರೆ ಆವರಣದೊಳಗೆ …

ಆನ್‌ಲೈನ್ ಆರ್ಥಿಕ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವಿಕೆ: ಆಪರೇಶನ್ ಸೈ ಹಂಟ್ ಪ್ರಕಾರ ವ್ಯಾಪಕ ದಾಳಿ; ಜಿಲ್ಲೆಯಲ್ಲಿ 36 ಪ್ರಕರಣ ದಾಖಲು , 34 ಮಂದಿ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಆರ್ಥಿಕ ವಂಚನೆ ನಡೆಸುತ್ತಿರುವ ವಂಚಕರಿಗಾಗಿ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವವರನ್ನು ಪತ್ತೆಹಚ್ಚಲು ಆಪರೇಶನ್ ಸೈ-ಹಂಟ್ ಎಂಬ ಹೆಸರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ನಿನ್ನೆ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಅತೀ ಹೆಚ್ಚು ಎಂಬಂತೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲುಗೊಂಡಿವೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಮತ್ತು ಸೈಬರ್ ಸೆಲ್‌ನ ಸಹಾಯದೊಂದಿಗೆ ಎಎಸ್‌ಪಿ …

ನಿವೃತ್ತ ಪ್ರಧಾನ ಅಧ್ಯಾಪಿಕೆ ನಿಧನ

ಸ್ವರ್ಗ: ನಿವೃತ್ತ ಪ್ರಧಾನ ಅಧ್ಯಾಪಿಕೆ ಸ್ವರ್ಗ ನಿವಾಸಿ ಶೀಲಾವತಿ (62) ನಿಧನ ಹೊಂದಿದರು. ಪಾಣಾಜೆ ಸರಕಾರಿ ಶಾಲೆಯ ಪ್ರಧಾನ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತಿ ಅಚ್ಯುತ ಸ್ವರ್ಗ (ಕಾಂಗ್ರೆಸ್ ಕಾರ್ಯಕರ್ತ, ಮಕ್ಕಳಾದ ಶ್ರೀದೇವಿ, ಜಯಪದ್ಮ, ಉದಯರಾಜ್, ಪ್ರೇಮಲತ, ಅಳಿಯಂದಿರಾದ ನವೀನ್ ಕುಮಾರ್ ಬಾಡೂರು, ದಿಲೀನ್, ದಿವಾಕರ ಬಾಡೂರು, ಸೊಸೆ ಶ್ರೀದೇವಿ ಅಡ್ಯನಡ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್ ಬಾಡೂರು ಸಂತಾಪ ಸೂಚಿಸಿದೆ.

ಬದಿಯಡ್ಕದಲ್ಲಿ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನ ಆಧುನೀಕರಣ ಸಹಿತ ವಿವಿಧ ಅಭಿವೃದ್ಧಿ ಗುರಿಯಿರಿಸಿದ  ಪಂಚಾಯತ್ ಬಜೆಟ್ ಮಂಡನೆ

ಬದಿಯಡ್ಕ: ಪೇಟೆಯಲ್ಲಿ ಆಧುನಿಕ ಸೌಕರ್ಯವಿರುವ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನವನ್ನು ಆಧುನೀಕರಣಗೊಳಿಸುವುದು, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ಗುರಿಯಿರಿಸಿ ಬದಿಯಡ್ಕ ಪಂಚಾಯತ್ ಬಜೆಟ್ ಮಂಡಿಸಲಾಗಿದೆ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ವಿಕಸಿತ ಬದಿಯಡ್ಕ ಧ್ಯೇಯವಾಕ್ಯದೊಂದಿಗೆ ಮಂಡಿಸಿದ ಬಜೆಟ್‌ನಲ್ಲಿ 50,10,466,48 ರೂ. ಆದಾಯ ಹಾಗೂ 43,15,171,98 ರೂ. ಖರ್ಚು ಅಂದಾಜಿಸಲಾಗಿದೆ. 69529450 ರೂ. ಉಳಿದಾಯ ನಿರೀಕ್ಷಿಸಲಾಗಿದೆ. ವಿವಿಧ ಹೊಳೆಗಳಿಗೆ ಅಣೆಕಟ್ಟು, ಹಿರಿಯರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ಮೊದಲಾದವು ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಪಂಚಾಯತ್ ಅಧ್ಯಕ್ಷ ಶಂಕರ …

ಮಲಯಾಳ ಭಾಷಾ ಮಸೂದೆಗೆ ರಾಜ್ಯಪಾಲರ ಅಂಕಿತ: ಕಳವಳಗೊಂಡಿರುವ ಕಾಸರಗೋಡು ಕನ್ನಡಿಗರಿಂದ ಪ್ರತಿಭಟನೆ ತೀರ್ಮಾನಿಸಲು 10ರಂದು ಸಭೆ

ಕಾಸರಗೋಡು : ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿAದ ಹತ್ತನೇ ತರಗತಿಯ ತನಕ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿರುವುದಕ್ಕೆ ಕಾಸರಗೋಡಿನಲ್ಲಿ ಸೇರಿದ ವಿವಿಧ ಕನ್ನಡ ಪರ ಸಂಸ್ಥೆಗಳ ಪ್ರತಿನಿಧಿಗಳ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯ ವ್ಯಾಪ್ತಿಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಕನ್ನಡ ಮಾಧ್ಯಮ ಮಾತ್ರ ಇರುವ ಕಾಸರಗೋಡಿನ 84 ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಮಲಯಾಳಂ ಹೇರಲು ಮಲಯಾಳ ಅಧ್ಯಾಪಕರನ್ನು ನೇಮಕ ಮಾಡಿರುವ …

ಪ್ರಾಕೃತಿಕ ದುರಂತ: ಮನೆಗಳ ನಾಶನಷ್ಟಕ್ಕೆ ಆರ್ಥಿಕ ನೆರವು ನೀಡಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ

ಕಾಸರಗೋಡು: ಪ್ರಾಕೃತಿಕ ದುರಂತದಿಂದ  ಮನೆಗಳಿಗೆ ಹಾನಿ ಅಥವಾ ನಾಶನಷ್ಟ ಉಂಟಾದಲ್ಲಿ ಅಂತಹವರಿಗೆ ಆರ್ಥಿಕ ಸುರಕ್ಷತೆ ಖಾತರಿಪಡಿಸಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ ಜ್ಯಾರಿಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯ ಯೋಜನಾ ಆಯೋಗದ ಸದಸ್ಯ ರವಿ ರಾಮನ್ ನೇತೃತ್ವದ ಸಮಿತಿ ಈ ಬಗ್ಗೆ ಅಧಯನ ನಡೆಸಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳನ್ನು ಅಂಗೀಕರಿಸಿ ಅದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ ಮಳೆ, ಪ್ರವಾಹ, ಬಿರುಗಾಳಿ ಇತ್ಯಾದಿ ಪ್ರಾಕೃತಿಕ ದುರಂತಗ ಳಿಂದಾಗಿ ಮನೆ ನಷ್ಟಹೊಂದು ವವರಿಗೆಈ ಯೋಜನೆಯಿಂದ …

ಉಪ್ಪಳ ಅಗ್ನಿಶಾಮಕ, ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲು ಪ್ರತಾಪನಗರದಲ್ಲಿ ನಿರ್ಮಿಸಲಾದ ಉಪ್ಪಳ ಅಗ್ನಿಶಾಮಕ ದಳ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಿನ್ನೆ ಸಂಜೆ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಲ್‌ಲೈನ್ ಮೂಲಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಮಹಾ ನಿರ್ದೇಶಕ ನಿತಿನ್ ಅಗರ್‌ವಾಲ್ ಐಪಿಎಸ್ ಆನ್‌ಲೈನ್‌ನಲ್ಲಿ ಸ್ವಾಗತಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ, ಕಟ್ಟಡದ ಶಿಲಾಫಲಕವನ್ನು ಅನಾವರಣಗೊಳಿಸಿ ಮಾತನಾಡಿ ದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್, ಮಂಗಲ್ಪಾಡಿ ಪಂಚಾಯತ್ …

ಮುಖ್ಯಮಂತ್ರಿ ವಿರುದ್ಧ ಫೇಸ್‌ಬುಕ್ ಪೋಸ್ಟ್: ಕೇಸು ದಾಖಲು

ಕಾಸರಗೋಡು: ಫೇಸ್ ಬುಕ್‌ನಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಪೋಸ್ಟ್ ಮಾಡಿದುದಕ್ಕೆ ಸಂಬಂಧಿಸಿ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಪ್ಪ ಪಟ್ಲಂ ಕಮ್ಮಾಡಿ ನಿವಾಸಿ ಸಿ.ಎಚ್. ಸುಬೈರ್ ಎಂಬವರು ಈ ಬಗ್ಗೆ  ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿ ಪರಪ್ಪಕಮ್ಮಾಡತ್ ನಿವಾಸಿ ರಜಾಕ್ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಫೇಸ್ ಬುಕ್ ಮೂಲಕ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಅನುಚಿತ   ವಿಷಯಗಳನ್ನು ಪೋಸ್ಟ್  ಮಾಡಿದ್ದಾನೆಂದೂ ಅದಕ್ಕೆ ಸಂಬಂಧಿಸಿ ಆತನ ವಿರುದ್ಧ ಪ್ರಕರಣ …