ಚಿನ್ನದ ಬೆಲೆಯಲ್ಲಿ ಇಳಿಕೆ

ಕಾಸರಗೋಡು: ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಲೇ ಸಾಗಿದ ಚಿನ್ನದ ಬೆಲೆಯಲ್ಲಿ ಇಂದು  ಅಲ್ಪ ಇಳಿಕೆ ಉಂಟಾಗಿದೆ. ಇಂದು ಪವನ್‌ಗೆ 6,640 ರೂ. ಕಡಿಮೆಯಾಗಿ 1,11,120 ರೂ.ಗೆ  ತಲುಪಿದೆ.  ಅದೇ ರೀತಿ ಗ್ರಾಂಗೆ 830 ರೂ. ಕಡಿಮೆಯಾಗಿ  13,890 ರೂ.ಗೆ ತಲುಪಿದೆ. ಜನವರಿ ೨೯ರಂದು   ಕೇರಳದಲ್ಲಿ ಚಿನ್ನಕ್ಕೆ  ಸಾರ್ವಕಾಲಿಕ ಬೆಲೆಯೇರಿಕೆಯುಂ ಟಾಗಿತ್ತು. ಅಂದು  1,31,160 ರೂಪಾಯಿಯಂತೆ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ನಡೆದಿದೆ. ಅನಂತರದ ದಿನಗಳಲ್ಲಿ ಚಿನ್ನಕ್ಕೆ ಬೆಲೆ ಇಳಿಮುಖದತ್ತ ಸಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 8ರಿಂದ

ತಿರುವನಂತಪುರ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ, ಟಿಎಚ್‌ಎಸ್ ಎಲ್‌ಸಿ, ಎಎಚ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 5ರಿಂದ ಆರಂಭಗೊಂಡು 30ರಂದು ಕೊನೆಗೊಳಲಿದೆ. ಎಸ್‌ಎಸ್‌ಎಲ್‌ಸಿ ಐಟಿ ಪರೀಕ್ಷೆಗಳು ಇಂದು ಆರಂಭಗೊಂಡಿದ್ದು 13ರಂದು ಕೊನೆಗೊಳ್ಳಲಿದೆ. ಮೋಡೆಲ್ ಪರೀಕ್ಷೆ 16ರಿಂದ 20ರ ವರೆಗೆ ನಡೆಯಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಪ್ರಿಲ್ 7ರಿಂದ 25ರ ವರೆಗೆ ನಡೆಯಲಿದೆ. ಫಲಿತಾಂಶ ಮೇ 8ರಂದು ಘೋಷಿಸುವುದಾಗಿ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.

ಕೇರಳ ಭಾರತದ ಭೂಪಟದಲ್ಲಿಲ್ಲವೇ? ಬಜೆಟ್ ಬಗ್ಗೆ ಎಂ.ವಿ. ಗೋವಿಂದನ್ ಪ್ರಶ್ನೆ

ಕಾಸರಗೋಡು: ಕೇಂದ್ರ ಹಣಕಾಸು ಸಚಿವೆ ಲೋಕಸಭೆಯಲ್ಲಿ ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ ಯೆಂದೂ ಕೇರಳ ಭಾರತದ ಭೂಪಟದಲ್ಲಿಲ್ಲವೇ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪ್ರಶ್ನಿಸಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.  ಕೇಂದ್ರ ಬಜೆಟ್ ತಯಾರಿಸುವ ಮೊದಲು ರಾಜ್ಯಸರಕಾರ ಕೇಂದ್ರದೊಡನೆ 29 ಬೇಡಿಕೆಗಳನ್ನು ಮುಂದಿರಿಸಿತ್ತು. ಅದರಲ್ಲಿ ಯಾವುದನ್ನೂ ಬಜೆಟ್‌ನಲ್ಲಿ ಅಂಗೀಕರಿಸಲಾಗಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಇದು ಪ್ರತಿಭಟನಾರ್ಹವೆಂದು ಅವರು ಹೇಳಿದ್ದಾರೆ.

ಶಬರಿಮಲೆ ಚಿನ್ನ ಕಳವು: ನ್ಯಾಯಾಂಗಬಂಧನದಲ್ಲಿರುವ ತಂತ್ರಿಗೆ ಎದೆನೋವು; ಆಸ್ಪತ್ರೆಗೆ ದಾಖಲು

ತಿರವನಂತಪುರ: ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತಂತ್ರಿ ಕಂಠರರ್ ರಾಜೀವರ್‌ರನ್ನು ಎದೆನೋವಿನ ಹಿನ್ನೆಲೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯ ಜೈಲು ಸೆಲ್‌ನಲ್ಲಿ ಇವರನ್ನು ದಾಖಲಿಸಲಾಗಿದ್ದು, ಆಂಜಿಯೋ ಗ್ರಾಮ್ ತಪಾಸಣೆ ನಡೆಸಲಾಗಿದೆ. ಕೇಸಿನಲ್ಲಿ 13ನೇ ಆರೋಪಿಯಾಗಿರುವ ತಂತ್ರಿಯ ಪತ್ನಿ ನೀಡಿದ ಜಾಮೀನು ಅರ್ಜಿಯನ್ನು ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯ ಪರಿಗಣಿಸಲಿದೆ. ಚಿನ್ನ ಕಳ್ಳತನದಲ್ಲಿ ತಂತ್ರಿಯವರಿಗೂ ಪಾಲಿದೆ ಎಂದು ಪ್ರತ್ಯೇಕ ತನಿಖಾ ತಂಡ ಆರೋಪಿಸುತ್ತಿದೆ.

ಬಸ್ ವೈಟಿಂಗ್ ಶೆಡ್‌ಗೆ ಕಿಚ್ಚಿಟ್ಟು ಗಲಭೆಗೆ ಯತ್ನ: ಎರಡು ಕೇಸು ದಾಖಲು

ಕಾಸರಗೋಡು:  ಕಾಞಂಗಾಡ್ ಕುಶಾಲನಗರದಲ್ಲಿ ಬಸ್ ವೈಟಿಂಗ್ ಶೆಡ್‌ಗೆ  ಕಿಚ್ಚಿರಿಸಿ ಗಲಭೆಗೆ ಯತ್ನಿಸಲಾಯಿತೆಂಬ ಆರೋಪದಂತೆ ಹೊಸದುರ್ಗ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಸಿಪಿಎಂ ವಾರ್ಡ್ ಕೌನ್ಸಿಲರ್ ಕುಶಾಲ್‌ನಗರದ ಸಂತೋಷ್‌ರ ದೂರಿನಂತೆ ಆವಿಯ ನಿವಾಸಿ ಶಂಸುದ್ದೀನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ 20 ಮಂದಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮುಂಜಾನೆ ಘಟನೆ ನಡೆದಿದೆ.  ಶಂಸುದ್ದೀನ್ ನೇತೃತ್ವದಲ್ಲಿ ಸ್ಥಳದಲ್ಲಿ ಬಸ್ ವೈಟಿಂಗ್ ಶೆಡ್ ಸ್ಥಾಪಿಸಿದ ಬಳಿಕ ಅವರೇ ಗಲಭೆಗೆ ಯತ್ನಿಸಿರುವುದಾಗಿ ಸಂತೋಷ್ ಕುಮಾರ್ ನೀಡಿದ ದೂರಿನಲ್ಲಿ …

ಕೇಂದ್ರ ಬಜೆಟ್: ಕೇರಳವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ- ಕೆ. ಸುರೇಂದ್ರನ್

ಕಾಸರಗೋಡು: ಕೇಂದ್ರ ಮುಂಗಡಪತ್ರದಲ್ಲಿ ಒಳಪಡಿಸಿರುವ ಧಾತು ಕಾರಿಡಾರ್, ತೆಂಗಿನಕಾಯಿ ಉತ್ಪಾದನೆ ಹೆಚ್ಚಳಕ್ಕಿರುವ ಯೋಜನೆ ಎಂಬಿವು ಕೇರಳವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ ಎಂದು ಬಿಜೆಪಿ ಮುಖಂಡ ಕೆ. ಸುರೇಂದ್ರನ್ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ಕೇಂದ್ರ ಬಜೆಟ್ ಸಂಬಂಧ ಜನಪ್ರತಿನಿಧಿಗಳ  ಹಾಗೂ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕೆ. ಶ್ರೀಕಾಂತ್, ವಿ. ರವೀಂದ್ರನ್, ಸವಿತ, ಸತೀಶ್ಚಂದ್ರ ಭಂಡಾರಿ, ಪಿ.ಆರ್. ಸುನಿಲ್, ಎನ್. ಬಾಬುರಾಜ್, ಡಿ. ಶಂಕರ, ಸುಜ್ಞಾನಿ …

ಎಲ್‌ಡಿಎಫ್‌ನ  ಅಭಿವೃದ್ಧಿ ಮುನ್ನಡೆ ಜಾಥಾಕ್ಕೆ ಅದ್ದೂರಿಯ ಚಾಲನೆ

ಕುಂಬಳೆ: ಕೇಂದ್ರ ಮುಂಗಡಪತ್ರದಲ್ಲಿ ಕೇರಳದ ಯಾವುದೇ ಬೇಡಿಕೆಗಳನ್ನು ಪರಿಗಣಿಸಿಲ್ಲ.  ಕೇರಳವನ್ನು ನಿರ್ಲಕ್ಷಿಸಲು ಈ ರಾಜ್ಯ ಯಾವುದರಲ್ಲಿ ಅನರ್ಹತೆಹೊಂ ದಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ನಿನ್ನೆ ಕುಂಬಳೆ ಯಿಂದ ಆರಂಭಗೊಂಡ ಎಲ್‌ಡಿಎಫ್‌ನ  ಉತ್ತರ ಕೇರಳ ಅಭಿವೃದ್ಧಿ ಮುನ್ನಡೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.   ಕೇರಳದಲ್ಲಿ ಕಡಲಾಮೆಗಳು ಮಾತ್ರವಲ್ಲ ಇರುವುದೆಂದು ತಿಳಿಸಿದ ಮುಖ್ಯಮಂತ್ರಿ, ಕೇರಳದೊಂದಿಗೆ ಕೇಂದ್ರ ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲವೆಂದೂ   ತಿಳಿಸಿದರು. ಇದರ ಜೊತೆಗೆ ಕೇರಳದಲ್ಲಿ 2016ರಿಂದ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಮುಖ್ಯಮಂತ್ರಿ ವಿವರಿಸಿದರು. ಶಿಕ್ಷಣ …

ನಿವೃತ್ತ ಪೋಸ್ಟ್ ಮಾಸ್ಟರ್ ನಿಧನ

ಬೆಳ್ಳೂರು: ಕರ್ಕಟಗೋಳಿ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಕೃಷ್ಣ ನಾಯ್ಕ (70) ನಿಧನ ಹೊಂದಿದರು. ಇವರು ಮುಳ್ಳೇರಿಯ, ನೆಟ್ಟಣಿಗೆ, ಕುಂಬಳೆ, ಪೈವಳಿಕೆ, ಉಪ್ಪಳ ಮೊದಲಾದ ಕಡೆಗಳಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶಾರದ, ಮಕ್ಕಳಾದ ಮಹೇಶ್, ಮನೋಜ್, ಪ್ರದೀಪ್, ಸೊಸೆಯಂದಿರಾದ ಶಾರದ, ಸುಪ್ರೀತ, ಜಯಂತಿ, ಸಹೋದರರಾದ ದಿವಾಕರ, ಅಣ್ಣು ನಾಯ್ಕ್, ಗಂಗಾಧರ, ನಾರಾಯಣ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೇಕಲದಲ್ಲಿ ಗಡಿನಾಡ ಜಾನಪದ ಉತ್ಸವ, ಪುಸ್ತಕ ಬಿಡುಗಡೆ, ವಿಚಾರಸಂಕಿರಣ

ಕಾಸರಗೋಡು: ದೇಶದ ಉದ್ದಗಲ ಸಂಚರಿಸಿದಾಗ ಪ್ರತಿಯೊಂದೆಡೆಯೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜನಜೀವನ ಗಮನ ಸೆಳೆಯುತ್ತದೆ. ಇಂತಹ ವಿವಿಧತೆಯ ಮಧ್ಯೆ ಒಂದನ್ನೊAದು ಕೂಡಿ ಕಲೆತಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ …

ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಕುಂಬಳೆ: ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಭಾರೀ ನಾಶನಷ್ಟ ಸಂಭವಿಸಿರು ವುದಾಗಿ ವರದಿಯಾಗಿದೆ. ಎಸ್ಟೇಟ್ ನಲ್ಲಿರುವ ಮಾರ್ಕ್ ವುಡ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಮುಂಜಾನೆ 4 ಗಂಟೆ ವೇಳೆ ಬೆಂಕಿ ಅನಾಹುತವುಂಟಾಗಿದೆ. ಕಾಸರ ಗೋಡು, ಉಪ್ಪಳ, ಕಾಞಂಗಾಡ್ ಹಾಗೂ ಕುತ್ತಿಕೋಲ್ ಅಗ್ನಿಶಾಮಕದ ಎಂಟು ಯೂನಿಟ್‌ಗಳು ಗಂಟೆಗಳ ಕಾಲ ನಡೆಸಿದ ಕಾರ್ಯಾ ಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುರಹಿಮಾನ್ ರ ಮಾಲಕತ್ವದಲ್ಲಿ ರುವ ಫ್ಯಾಕ್ಟರಿ ಇದಾಗಿದೆಯೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 12 ಗಂಟೆ …