ತಳಂಗರೆಯಲ್ಲಿ ಯುವತಿ, ಪುತ್ರ ನಾಪತ್ತೆ:   ರಾಜಪುರಂನಲ್ಲೂ ಯುವತಿ, ಪುತ್ರ ನಾಪತ್ತೆಯಾಗಿರುವುದಾಗಿ ದೂರು

ಕಾಸರಗೋಡು: ಯುವತಿ ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಳಂಗರೆ ಸಿರಾಮಿಕ್ಸ್ ರಸ್ತೆ  ಸಮೀಪದ ನಿಸಾಮುದ್ದೀನ್‌ರ ಪತ್ನಿ ಸಬಾನತ್(23) ಹಾಗೂ ಮೂರು ವರ್ಷ ಪ್ರಾಯದ ಪುತ್ರ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಬಳಿಕ ಈ ಇಬ್ಬರು ನಾಪತ್ತೆಯಾಗಿರುವುದಾಗಿ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ಇನ್ನೊಂದು ಪ್ರಕರಣದಲ್ಲಿ ರಾಜಪುರಂನಲ್ಲಿ ಅಂಗನವಾಡಿಗೆ ಹೋದ ಯುವತಿ ಹಾಗೂ ಮೂರು …

ಪೆರ್ಮುದೆ ಪೇಟೆಯಲ್ಲಿ ಬೀದಿನಾಯಿಗಳ ಹಿಂಡು: ಸ್ಥಳೀಯರಲ್ಲಿ ಭೀತಿ

ಬಂದ್ಯೋಡು: ಪೆರ್ಮುದೆ ಪೇಟೆಯಲ್ಲಿ ಬೀದಿ ನಾಯಿಗಳ ಹಿಂಡು ರಸ್ತೆಯಲ್ಲಿ ಅಲೆದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ಪೇಟೆಯಲ್ಲಿ ಸುಮಾರು 10ರಷ್ಟು ಬೀದಿ ನಾಯಿಗಳು ರಸ್ತೆಯಲ್ಲಿ, ಅಂಗಡಿ ಪರಿಸರಲ್ಲಿ ಕಚ್ಚಾಡಿಕೊಂಡು ಅಲೆದಾಡುತ್ತಿರುವುದು ಪಾದಚಾರಿಗಳಲ್ಲಿ ಆತಂಕ ಉಂಟುಮಾಡಿದೆ. ದಿನನಿತ್ಯ ಮಕ್ಕಳ ಸಹಿತ ಊರವರ ಸಂಚಾರಕ್ಕೆ ಹಾಗೂ ವಾಹನ ಸವಾರರಿಗೆ ಭೀತಿ ಉಂಟಾಗಿದೆ. ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸಂಬAಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು …

ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯವರಿಗೆ ಉಚಿತ ಸಂಚಾರ ನೀಡಲು ಬಿಜೆಪಿ ಮನವಿ

ಹೊಸಂಗಡಿ: ತಲಪಾಡಿ ಟೋಲ್ ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಸಂಚಾರ ಮಂಜೂರು ಮಾಡಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಕರ್ನಾಟಕ ಹೆದ್ದಾರಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್ ಗೇಟ್‌ನಲ್ಲಿ ತಲಪಾಡಿ ಗ್ರಾಮದವರಿಗೆ ಉಚಿತ ಸಂಚಾರವಿದ್ದು, ಅದೇ ರೀತಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯವರಿಗೂ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ. ಮನವಿ ನೀಡಿದ ತಂಡದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., …

ಕರ್ನಾಟಕದ ವಿದ್ಯುತ್ ಮೊಟಕು: ಕಾಸರಗೋಡಿನಲ್ಲಿ ಪವರ್ ಕಟ್

ಕಾಸರಗೋಡು: ಕರ್ನಾಟಕ ದಿಂದಿರುವ ವಿದ್ಯುತ್ ವಿತರಣೆ ಯಲ್ಲಿ ಮೊಟಕು ಉಂಟಾದ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಸತತವಾಗಿ ವಿದ್ಯುತ್ ಮೊಟಕಾಗುತ್ತಿದೆ. ಗುರುವಾರ ಸಂಜೆ 5 ಗಂಟೆಗೆ ಕರ್ನಾಟಕದಿಂದಿರುವ 110 ಕೆವಿ ಲೈನ್‌ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದನ್ನು ಪರಿಹರಿಸಲು ಹೆಚ್ಚು ಸಮಯ ಬೇಕಾಗಬ ಹುದೆಂದು ಕರ್ನಾಟಕದ ವಿದ್ಯುತ್ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಕೇರಳದ ವಿದ್ಯುತ್ ನ್ನು ಕಾಸರಗೋಡು ಮಂಜೇಶ್ವರ ತಾಲೂಕುಗಳಲ್ಲಿ ವಿತರಿಸಬೇಕಾಗಿ ಬಂತು. ಸ್ಥಳೀಯ ಫೀಡರ್‌ಗಳಲ್ಲಿ 15 ನಿಮಿಷದ ಅಂತರದಲ್ಲಿ ಪವರ್ ಕಟ್ ಏರ್ಪಡಿಸಿ ವಿದ್ಯುತ್ ವಿತರಿಸಲಾಗಿದೆ. ನಿನ್ನೆ …

ಮವ್ವಾರಿನಲ್ಲಿ ಕಣ್ಮುಚ್ಚಿ ಕುಳಿತ ಬೀದಿ ದೀಪ: ಸ್ಥಳೀಯರಿಗೆ ಸಮಸ್ಯೆ

ಮವ್ವಾರು: ರಾತ್ರಿ ಕಾಲಗಳಲ್ಲಿ ಜನರ ಸಂಚಾರಕ್ಕೆ ಬೆಳಕು ಲಭಿಸಲೆಂಬ ಉದ್ದೇಶದಿಂದ ರಸ್ತೆ ಬದಿಗಳಲ್ಲಿ ಸ್ಥಾಪಿಸುವ ಬೀದಿ ದೀಪಗಳು ಕಣ್ಮುಚ್ಚಿ ಕುಳಿತು ಉದ್ದೇಶವನ್ನೇ ಬುಡಮೇಲು ಗೊಳಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಕುಂಬಳೆ-ಮುಳ್ಳೇರಿಯ ರಸ್ತೆ ಕೆಎಸ್‌ಟಿಪಿ ವತಿಯಿಂದ ದುರಸ್ತಿ ಗೊಳಿಸಿ ಉತ್ತಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದೇ ವೇಳೆ ರಸ್ತೆ ಬದಿಯಲ್ಲಿ ವಿದ್ಯುತ್ ದೀಪ ಗಳನ್ನು ಕೂಡಾ ಅಳವಡಿಸಲಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಈ ವಿದ್ಯುತ್ ದೀಪಗಳು ರಾತ್ರಿ ವೇಳೆ ಉರಿಯದೆ ಜನರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಮವ್ವಾರು ವಿಶ್ವಕರ್ಮ ಭಜನಾ …

ಸೇನೆಗೆ ಆಯ್ಕೆಯಾದ ಯುವಕನಿಗೆ ಅಭಿನಂದನೆ

ಬದಿಯಡ್ಕ: ಗ್ರಾಮೀಣ ಭಾಗದ ಯುವಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಇವರನ್ನು ಬದಿಯಡ್ಕ ಪಂಚಾಯತ್ ವತಿಯಿಂದ ಅಭಿನಂದಿಸ ಲಾಯಿತು.  ನೀರ್ಚಾಲು ಸಮೀಪದ ದೇವರಮೆಟ್ಟು ನಿವಾಸಿ ನಾರಾಯಣ- ಶಾರದಾ ದಂಪತಿ ಪುತ್ರ ಮಧುರಾಜ್ ದೇಶಸೇವೆಗೆ ಅವಕಾಶ ಲಭಿಸಿದ್ದು, ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಯಾಗಿದ್ದಾರೆ. ಇವರು ಇಂದು ಮಣಿಪುರ ದಲ್ಲಿ ನಡೆಯುವ ತರಬೇತಿಗಾಗಿ ತೆರಳಿದರು. ಕುಂಟಿಕಾನ ಹಿರಿಯ ಬುನಾದಿ ಶಾಲೆ, ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿಯಾಗಿದ್ದು, ಇವರನ್ನು ಬದಿಯಡ್ಕ ಪಂಚಾಯತ್  ಅಧ್ಯಕ್ಷ …

ಕುಂಬ್ಡಾಜೆಯಲ್ಲಿ ಹೆಣ್ಮಕ್ಕಳಿಗೆ ಎಚ್‌ಪಿವಿ ಚುಚ್ಚುಮದ್ದು ನೀಡಲು ಸಿದ್ಧತೆ ಪೂರ್ತಿ

ಕುಂಬ್ಡಾಜೆ: ಗರ್ಭಾಶಯ ಕ್ಯಾನ್ಸರ್ ಪ್ರತಿರೋಧಕ್ಕಾಗಿ 14 ವರ್ಷ ಪೂರ್ತಿಗೊಳಿಸಿದ ಹೆಣ್ಮಕ್ಕಳಿಗೆ ಉಚಿತವಾಗಿ ಹ್ಯೂಮನ್ ಹ್ಯಾಪಿ ಲೋಮ ವೈರಸ್ (ಎಚ್‌ಪಿವಿ) ವ್ಯಾಕ್ಸಿನ್ ನೀಡುವ ಯೋಜನೆಗೆ ಕುಂಬ್ಡಾಜೆ ಪಂಚಾಯತ್‌ನಲ್ಲಿ ಚಾಲನೆ ನೀಡಲಾಯಿತು. ಪಂಚಾಯತ್ ವ್ಯಾಪ್ತಿಯ 14 ವರ್ಷ ಪೂರ್ತಿಗೊ ಳಿಸಿದ ಎಲ್ಲಾ ಹೆಣ್ಮಕ್ಕಳಿಗೂ ಎರಡು ತಿಂಗಳೊಳಗೆ ವ್ಯಾಕ್ಸಿನ್ ನೀಡಿ 100 ಶೇಕಡಾ ಸಾಧನೆ ಹೊಂದಲು ಪಂಚಾಯತ್ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಅಧ್ಯಕ್ಷತೆ ವಹಿಸಿದ್ದು, ಅಧ್ಯಕ್ಷೆ ಯಶೋಧ ಉದ್ಘಾಟಿಸಿದರು. ಉಪಾಧ್ಯಕ್ಷ ರವೀಂದ್ರ ರೈ …

ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ರಾಜ್ಯ ಸಮ್ಮೇಳನ ಆರಂಭ

ಕಾಸರಗೋಡು: ಪಿಂಚಣಿದಾರರ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಏಕ ಕಂತಿನಲ್ಲಿ ನೀಡಬೇಕು ಎಂದು ಬಿಎಂಎಸ್ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವ್ ಆಗ್ರಹಿಸಿದರು. ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್‌ನ 28ನೇ ರಾಜ್ಯ ಸಮ್ಮೇಳನಕ್ಕೆ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ರಾಜ್ಯ ಅಧ್ಯಕ್ಷ ಬಿ. ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪಿ. ಜಯಭಾನು, ರಾಜ್ಯ ಕಾರ್ಯದರ್ಶಿ ಎ. ಪ್ರಕಾಶ್, ಮುಖಂಡರಾದ ಜಿ. ಗೋಪಕುಮಾರ್, …

ಮೊಬೈಲ್ ಫೋನ್ ದುರಸ್ತಿಪಡಿಸಿ ನೀಡದ ವ್ಯಥೆ :ಪಿಯುಸಿ ವಿದ್ಯಾರ್ಥಿನಿ ವಿಷ ಸೇವಿಸಿ ಸಾವಿಗೆ ಶರಣು

ಕುಂಬಳೆ: ಮೊಬೈಲ್ ಫೋನ್‌ನ ಡಿಸ್ಲೇ ರಿಪೇರಿ ಮಾಡಿ ಕೊಡದಿರುವು ದರಿಂದ ಮನನೊಂದು  17ರ ಹರೆಯದ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿದೂರು ಕಳತ್ತೂರು ಶರವಂಕರ ಲಕ್ಷ್ಮೀ ನಿಲಯದ ದಾಮೋದರ ಎಂಬವರ ಪುತ್ರಿ ಎಂ.ಡಿ. ಪೂಜಾ (17) ಮೃತಪಟ್ಟ ವಿದ್ಯಾರ್ಥಿನಿಯಾಗಿ ದ್ದಾಳೆ. ಈಕೆ ಮಂಗಳೂರಿನಲ್ಲಿ  ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಈ ಮಧ್ಯೆ ಹಳದಿ ಕಾಮಾಲೆ ಬಾಧಿಸಿ ದೀರ್ಘಕಾಲ ಚಿಕಿತ್ಸೆಯಲ್ಲಿದ್ದುದರಿಂದ ಶಿಕ್ಷಣ ಮೊಟಕುಗೊಂಡಿತ್ತು. ಮುಂದಿನ ವರ್ಷ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದಳೆನ್ನಲಾಗಿದೆ. …

ಮುಳ್ಳೇರಿಯ: ತಂಡದಿಂದ ಹಲ್ಲೆ; ಇಬ್ಬರು ಆಸ್ಪತ್ರೆಯಲ್ಲಿ ದಾಖಲು

ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಇವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದೂರು ಸಿಎ ನಗರ ನಿವಾಸಿ ಹಾಶಿಫ್ (28), ಮುಳ್ಳೇರಿಯ ಪೂತಪ್ಪಲದ ರಹೀಸ್ (18) ಎಂಬಿವರು ಗಾಯಗೊಂಡಿದ್ದು, ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ೭ ಗಂಟೆ ವೇಳೆ ಮುಳ್ಳೇರಿಯದ ಮಸೀದಿಯಿಂದ ಮರಳುತ್ತಿದ್ದ ವೇಳೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಪೂರ್ವದ್ವೇಷದಿಂದ ತಂಡ ತಡೆದು ನಿಲ್ಲಿಸಿ ವಿನಾಕಾರಣ ಹಲ್ಲೆಗೈದಿದೆ ಎಂದೂ ದೂರಲಾಗಿದೆ.