ಬೇಕಲದಲ್ಲಿ ನಾಳೆ ಸಮನ್ವಯ ಗಡಿನಾಡ ಜನಪದ ಉತ್ಸವ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಬೇಕಲ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಜಂಟಿ ಆಶ್ರಯದಲ್ಲಿ ಸಮನ್ವಯ ಗಡಿನಾಡ ಜಾನಪದ ಉತ್ಸವ ನಾಳೆ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಅರವತ್ ಎನ್‌ಕೆಪಿಎಸ್‌ಕೆ ಟ್ರಸ್ಟ್ ಆಂಪಿಥಿಯೇಟರ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ ೯ರಿಂದ ಮುದಿಯಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ರಿಂದ ಚೆಂಡೆಮೇಳ, 10ರಿಂದ …

ರಾಜ್ಯಸರಕಾರದ ಕೊನೆಯ ಮುಂಗಡಪತ್ರವೂ ನಿರಾಶಾಜನಕ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸೂಕ್ತವಾದ ಯೋಜನೆಗಳು ಹಾಗೂ ಮೊತ್ತ ಮೀಸಲಿಡದ ಪಿಣರಾಯಿ ವಿಜಯನ್‌ರ ದ್ವಿತೀಯ ಹಂತದ ಸರಕಾರದ ಕೊನೆಯ ಮುಂಗಡಪತ್ರ ನಿರಾಸೆ ಮೂಡಿಸಿರುವುದಾಗಿಯೂ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣಿಸಿರುವುದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಗಿರುವ ರಾಜ್ಯ ಸರಕಾರದ ಬಜೆಟ್ ಪಾಲು ಜಿಲ್ಲೆಯ ಆರೋಗ್ಯವಲಯ ಹಾಗೂ ಶಿಕ್ಷಣವಲಯದಲ್ಲಿರುವ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸಾಕಾಗುವಂತದ್ದಲ್ಲ. ಕಾಸರಗೋಡು ಮೆಡಿಕಲ್ ಕಾಲೇಜಿನ ಜೊತೆಗೆ ರಾಜ್ಯದ ಇತರ ಮೂರು ಮೆಡಿಕಲ್ ಕಾಲೇಜುಗಳಿಗೂ ಸೇರಿ ಒಟ್ಟು 53 ಕೋಟಿ ರೂ. ಮೀಸಲಿಡಲಾಗಿದೆ. 40 …

ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಸ್ಮೃತಿ ಆಚರಣೆ

ಪೈವಳಿಕೆ: ಮಹಾತ್ಮಾ ಗಾಂಧಿ ಯವರ ನೆನಪು ಹಾಗೂ ಅವರ ತತ್ವ ಆದರ್ಶಗಳು ವರ್ತಮಾನ ಕಾಲದಲ್ಲಿ ಅತ್ಯಂತಾಪೇಕ್ಷಿತವಾಗಿದ್ದು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ನಡೆಯಬೇಕು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ನುಡಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಪದಾಧಿಕಾರಿಗಳಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಮಂಡಲ ಕಾಂಗ್ರೆಸ್ ನೇತಾರರಾದ ಶಾಜಿ, ಪೌಲ್ ರೋಡ್ರಿಗಸ್, ಅಸೀಸ್ ಕಟ್ಟೆ, …

ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸೊಸೈಟಿಯಿಂದ 4.76 ಕೋಟಿ ರೂ.ಗಳ ವಂಚನೆ: ಮತ್ತೆ ನಾಲ್ಕು ಮಂದಿ ಸೆರೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಸಹಕಾರಿ ಸಂಘದಲ್ಲಿ 4.76 ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪಳ್ಳಿಕರೆಯ ಅಬೂಬಕ್ಕರ್ (61), ಪೈವಳಿಕೆ ಬಾಯಾರಿನ ಅಬ್ದುಲ್ ಅಸೀಸ್ (55), ಏತಡ್ಕದ ಆರಿಫ್ (43), ನೆಕ್ರಾಜೆ ಮವ್ವಾರಿನ ಶಂಸುದ್ದೀನ್ (41) ಎಂಬಿವರನ್ನು ಕಣ್ಣೂರು ಕ್ರೈಂ ಬ್ರಾಂಚ್ ಬಂಧಿಸಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಸಂಘದಲ್ಲಿ ಈ ವಂಚನೆ ನಡೆದಿದೆ. ವಂಚನಾ ತಂಡಕ್ಕೆ ವಿವಿಧ ಸ್ಥಳಗಳಲ್ಲಿ ವಂಚನೆ ನಡೆಸಲು ಸೂಕ್ತ ಸಂಸ್ಥೆಗಳನ್ನು ತೋರಿಸಿಕೊಟ್ಟು ಹೇಗೆ ವಂಚನೆ …

ಹೊಸಂಗಡಿಯಲ್ಲಿ ಯುವಕ- ಗೆಳತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿದ ಪ್ರಕರಣ: ಇನ್ನೋರ್ವ ಸೆರೆ

ಹೊಸಂಗಡಿ: ವಸತಿಗೃಹಕ್ಕೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಗೆಳತಿಯ ಅರೆನಗ್ನ ವೀಡಿಯೋ ಹಾಗೂ ಫೊಟೋ ಚಿತ್ರೀಕರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆ ಹಿಡಿಯಲಾಗಿದೆ. ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮೊಹಮ್ಮದ್ ಫೈಸಲ್ (42)ನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 2 ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಮಂಜೇಶ್ವರ ಪಿರಾರಮೂಲೆ ನಿವಾಸಿ ಹಾಗೂ ಕಡಂಬಾರ್‌ನಲ್ಲಿ ವಾಸವಾಗಿರುವ ಕೆ.ಎ. ಹಾರಿಸ್ (40)ನನ್ನು …

ಹೊಯ್ಗೆ ಬೇಟೆಗಿಳಿದ ಪೊಲೀಸರಿಗೆ ಲಭಿಸಿದ್ದು ಎಂಡಿಎಂಎ: ಓರ್ವ ಸೆರೆ

ಉಪ್ಪಳ: ಹೊಯ್ಗೆ ಬೇಟೆಗಿಳಿದ ಪೊಲೀಸರು ಮಾದಕವಸ್ತು ಸಹಿತ ಓರ್ವನನ್ನು ಬಂಧಿಸಿದ್ದಾರೆ. ಮೂಸೋಡಿ ನಿವಾಸಿ ಮುನೀರ್ ಎಂ (36)  ಎಂಬಾತನ ಕೈಯಿಂದ 1.01 ಗ್ರಾಂ ಎಂಡಿಎಂಎ ವಶಪಡಿಸ ಲಾಗಿದೆ. ಇಂದು ಮುಂಜಾನೆ 3.15 ರ ವೇಳೆ ಉಪ್ಪಳ ಬಳಿಯ ಮೈದಾನದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಮುನೀರ್‌ನನ್ನು ಎಸ್‌ಐ ವೈಷ್ಣವ್ ನೇತೃತ್ವದ ತಂಡ ತಪಾಸಣೆ ನಡೆಸಿ ದಾಗ  ಎಂಡಿಎಂಎ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಉಪ್ಪಳ, ಮಣಿ ಮುಂಡ ಭಾಗಗಳ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ …

ಶಬರಿಮಲೆ ಚಿನ್ನ ಕಳವು: ನಟ ಜಯರಾಮ್‌ರಿಂದ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ

ಚೆನ್ನೈ: ಶಬರಿಮಲೆ ದೇಗುಲದಿಂದ ಚಿನ್ನ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳ ಸಿನಿಮಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಮಗ್ರ ವಿಚಾರಣೆ ಗೊಳಪಡಿಸಿ  ಹೇಳಿಕೆ ದಾಖಲಿಸಿಕೊಂಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯೊಂದಿಗೆ ಜಯರಾಮ್ ನಿಕಟ ಸಂಬಂಧ ಹೊಂದಿದ್ದು ಆ ಬಗ್ಗೆ  ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಚೆನ್ನೈಯಲ್ಲಿರುವ  ಜಯರಾಮ್‌ರ ನಿವಾಸಕ್ಕೆ ತೆರಳಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ.  ಹಲವು ಪೂಜೆಗಳಿಗಾಗಿ ಉಣ್ಣಿಕೃಷ್ಣನ್ ಪೋತ್ತಿ ತನ್ನ ಮನೆಗೆ ಬಂದಿದ್ದನು. ಅಲ್ಲದೆ ಪೋತ್ತಿ ಹೊಂದಿರುವ ಆರ್ಥಿಕ …

ಹಲವು ವರ್ಷಗಳಿಂದ ಧಾರಾಳ ಮಾವಿನಹಣ್ಣು ಲಭಿಸುತ್ತಿದ್ದ ಮರದಲ್ಲಿ ಈ ಬಾರಿ ಹೂವುಗಳೇ ಬಿಟ್ಟಿಲ್ಲ…!

ಕಾಸರಗೋಡು: ನಾಡಿನಾದ್ಯಂತ ಮಾವಿನ ಮರಗಳು ಹೂವು ಬಿಟ್ಟು ಜನರ ಕಣ್ಮನ ಸೆಳೆಯುತ್ತಿರುವಾಗ ಇಲ್ಲೊಂದೆಡೆ ಹೂವು ಬಿಡದೆ ಮರ ಆಶ್ಚರ್ಯ ಮೂಡಿಸುತ್ತಿದೆ. ಪ್ರತೀ ವರ್ಷ ಈ ಕಾಲಾವಧಿಯಲ್ಲಿ ಹೂವು ಅರಳಿ ಮಾವಿನ ಮಿಡಿಗಳು ತುಂಬಿ ತುಳುಕುತ್ತಿದ್ದ ಈ ಮರದಲ್ಲಿ ಈಗ ಎಲೆಗಳು ಮಾತ್ರವೇ ಕಂಡುಬರುತ್ತಿದೆ.  ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣರ ಕೂಡ್ಲುನಲ್ಲಿರುವ ಮನೆ ಮುಂದೆ ಇರುವ ಮಾವಿನ ಮರದಲ್ಲಿ ಈ ಬಾರಿ ಮಾವಿನ ಕಾಯಿ ಇಲ್ಲ. ಮಧೂರು-ಕಾಸರಗೋಡು ರಸ್ತೆ ಬದಿಯಲ್ಲೇ ಇರುವ ಈ ಮಾವಿನ ಮರದಲ್ಲಿ …

ಎಡರಂಗದ ಅಭಿವೃದ್ಧಿ ಮುನ್ನಡೆ ಯಾತ್ರೆ ಮುಖ್ಯಮಂತ್ರಿ ಫೆ.1ರಂದು ಕುಂಬಳೆಗೆ

ಕಾಸರಗೋಡು: ಎಡರಂಗ ರಾಜ್ಯ ಸಮಿತಿ ನೇತೃತ್ವದಲ್ಲಿ ಉತ್ತರವಲಯ ಅಭಿವೃದ್ಧಿ ಮುನ್ನಡೆ ಜಾಥಾ ಫೆ.1ರಂದು ಸಂಜೆ 3 ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ಜಾಥಾ ನಾಯಕರಾಗಿರುವ ಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು ಎಂದು ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ, ಸಂಸದ ಪಿ. ಸಂತೋಷ್ ಕುಮಾರ್ ಜಾಥಾ ಮೆನೇಜರ್ ಆಗಿರುವರು. ಮೊದಲ ದಿನದ ಪ್ರಚಾರ ನುಳ್ಳಿಪ್ಪಾಡಿಯಲ್ಲಿ …

ಯುಡಿಎಫ್‌ನಿಂದ ಕುಂಬಳೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಪೊಲೀಸರು ಗೂಂಡಾ ನೀತಿಯನ್ನು ಕೊನೆಗೊಳಿಸಬೇಕು- ಸುಬ್ಬಯ್ಯ ರೈ

ಕುಂಬಳೆ: ಜನಸಾಮಾನ್ಯರೊಂದಿಗೆ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇಂತಹ ನೀತಿಯನ್ನು ಪೊಲೀಸರು ಕೊನೆಗೊಳಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಬಿ. ಸುಬ್ಬಯ್ಯ ರೈ ತಿಳಿಸಿದ್ದಾರೆ. ಪೊಲೀಸರು ಅಕ್ರಮಣ ನೀತಿಯನ್ನು ವಿರೋಧಿಸಿ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಟೋಲ್ ಗೇಟ್‌ನಲ್ಲಿ ಮೊನ್ನೆ ಕಾರುಚಾಲಕನನ್ನು ಪೊಲೀಸರು ಬಲಪ್ರಯೋಗಿಸಿ ಕಾರಿನಿಂದಿಳಿಸಿ, ಪುಟ್ಟಮಕ್ಕಳು ದೀರ್ಘ ಹೊತ್ತು ರಸ್ತೆಯಲ್ಲೇ ಉಳಿಯಬೇಕಾದ ಸ್ಥಿತಿಯನ್ನು ಪ್ರತಿಭಟಿಸಿ ಯುಡಿಎಫ್  ನಿನ್ನೆ ಧರಣಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ …