ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

ಬಂದ್ಯೋಡು : ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ನವೆಂಬರ್ 21ರ ತನಕ ವಿಶೇಷ ಕಾರ್ತಿಕ ದೀಪೋತ್ಸವ ಜರಗಲಿದ್ದು, ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಸಭೆ ಜರಗಿತು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಕ್ಷೇತ್ರದ ಪುರೋಹಿತ ವೇದಮೂರ್ತಿ ಗಣೇಶ ನಾವಡರು ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಾರಾಯಣ …

ಮಂಜೇಶ್ವರ ಸರಕಾರಿ ಆಸ್ಪತ್ರೆಗೆ ಎಂಟೂವರೆ ಕೋಟಿ ರೂ.ಗಳ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಕುಟುಂಬಾರೋಗ್ಯ ಕೇಂದ್ರಕ್ಕೆ ಎಂಟೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಟ್ಟಡ ಸಮುಚ್ಛಯಕ್ಕೆ  ಶಿಲಾನ್ಯಾಸ  ನಡೆಸಲಾಯಿತು. ಕೇಂದ್ರ ಸರಕಾರದ ದೇಶೀಯ ಹೆಲ್ತ್ ಮಿಶನ್‌ನಿಂದ 4.74 ಕೋಟಿ ರೂ., ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 3.84 ಕೋಟಿ ರೂ. ಉಪಯೋಗಿಸಿ  ಎರಡು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಆದ್ರಂ ಗುಣಮಟ್ಟದಲ್ಲಿರುವ ಹೊಸ ಕಟ್ಟಡ ಸಮುಚ್ಛಯದಲ್ಲಿ 6 ಒಪಿ ಕೊಠಡಿಗಳು, ನೋಂದಾವಣೆ ಕೌಂಟರ್, ರೋಗಿಗಳಿಗಿರುವ ಕಾಯುವಿಕೆ ಕೇಂದ್ರ, ಪ್ರಿಚೆಕ್ಕಿಂಗ್ ರೂಂ, ನರ್ಸಿಂಗ್ ಸ್ಟೇಶನ್, ಮೈನರ್ ಒ.ಟಿ, ಫೀಡಿಂಗ್ ರೂಂ, ಕಚೇರಿ, …

ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಡಯಿಲಕ್ಕಾಡ್ ಎಕೆಜಿ ಜಂಕ್ಷನ್ ಬಳಿಯ ನಿವಾಸಿ ಒ. ಪವಿತ್ರ (54) ಮೃತಪಟ್ಟವರು. ನಿನ್ನೆ ಸಂಜೆ ಆಯಿತ್ತಿ ವಯೋಜನ ಮಂದಿರದ ಬಳಿ ಉಪ್ಪಟ್ಟಿಕಂಡ ಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಇವರು ಹೊರ ಹೋಗಿದ್ದರು. ರಾತ್ರಿಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಹುಡುಕಾಡಿ ಬಳಿಕ ಪೊಲೀಸರಿಗೆ ಪುತ್ರ ದೂರು ನೀಡಿದ್ದರು. ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಸವಿತಾ, ಮಕ್ಕಳಾದ ಅಖಿತ,ಅವಿನಾಶ್, ಸಹೋದರರಾದ …

ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ಪೊಲೀಸ್ ಗೋಲಿಬಾರ್: ಕಾಸರಗೋಡು ನಿವಾಸಿ ಗಂಭೀರ

ಪುತ್ತೂರು: ವಾಹನದಲ್ಲಿ ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಅದರಲ್ಲಿ ಕಾಸರಗೋಡಿನ ಓರ್ವ ಗಂಭೀರ ಗಾಯಗೊಂಡ ಘಟನೆ ಪುತ್ತೂರಿಗೆ ಸಮೀಪದ ಈಶ್ವರಮಂಗಲದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದನ್ನು ಕಂಡ ಪೊಲೀಸರು ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಜಾನುವಾರು ಸಾಗಾಟದವರು ಲಾರಿ ನಿಲ್ಲಿಸದೆ ಮುಂದಕ್ಕೆ ಸಾಗಿದರು. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ವಾಹನದಲ್ಲಿ ಆ ಲಾರಿಯನ್ನು ಬೆಳ್ಳಿಚಡವ್ ತನಕ ಹಿಂಬಾಲಿಸಿಕೊಂಡು ಹೋಗಿ ಕೊನೆಗೂ ಅದನ್ನು ತಡೆಹಿಡಿಯುವಲ್ಲಿ ಸಫಲರಾಗಿದ್ದಾರೆ. …

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಉಸಿರಾಟ ಕಂಡುಬಂದ ವ್ಯಕ್ತಿ ಕೊನೆಗೂ ನಿಧನ

ಕುಂಬಳೆ:   ಚಿತೆ ಸಿದ್ದಪಡಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ  ದೇಹ ಕಂಪಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಂಚಿಕಟ್ಟೆ ರಾಮನಗರದ ರಾಮನಾಥ ಗಟ್ಟಿ (70) ಎಂಬವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕುಂಟಂಗೇರಡ್ಕ ಸಾರ್ವಜನಿಕ ಸ್ಮಶಾನದಲ್ಲಿ  ಅಂತ್ಯಸಂಸ್ಕಾರ ನಡೆಯಲಿದೆ.  ಮಧುಮೇಹ, ರಕ್ತದೊತ್ತಡ ಮೊದಲಾದ ಅಸೌಖ್ಯ ನಿವಾರಣೆಗೆ ಔಷಧಿ ಸೇವಿಸುತ್ತಿದ್ದ ರಾಮನಾಥ ಗಟ್ಟಿಯವರು ಒಂದು ವಾರ ಹಿಂದೆ  ಕುಸಿದು ಬಿದ್ದಿದ್ದರು.  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರನ್ನು ಪೂರ್ವಸ್ಥಿತಿಗೆ ಮರಳಿಸಲು ಸಾಧ್ಯವಿಲ್ಲ ವೆಂದು …

ಕಾರಿನಲ್ಲಿ  ತ್ಯಾಜ್ಯ  ಕೊಂಡೊಯ್ದು ಹೆದ್ದಾರಿ ಬದಿ ಎಸೆದ ವ್ಯಕ್ತಿಗೆ 25 ಸಾವಿರ ರೂ. ದಂಡ ವಿಧಿಸಿದ ಪಂಚಾಯತ್

ಕುಂಬಳೆ:  ಕಾರಿನಲ್ಲಿ ತ್ಯಾಜ್ಯ ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿ ಬದಿ ಉಪೇಕ್ಷಿಸಿದ ವ್ಯಕ್ತಿಗೆ  ಪಂಚಾಯತ್ ಕಾರ್ಯದರ್ಶಿ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.  ಮುಟ್ಟಂ ನಿವಾಸಿ ಮೋಣು ಎಂಬಾತನಿಗೆ ದಂಡ ವಿಧಿಸಿರುವುದಾಗಿ ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದ್ದಾರೆ. ಮೊನ್ನೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರಿನಲ್ಲಿ ಸಂಚರಿಸಿದ ಮೋಣು ಶಿರಿಯ ಬಳಿಗೆ ತಲುಪಿದಾಗ ತ್ಯಾಜ್ಯವನ್ನು ಕಾರಿನಿಂದ ಹೊರಕ್ಕೆ ಎಸೆದಿ ದ್ದನೆನ್ನಲಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದ ಇತರರು ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು …

ಭದ್ರತಾ ವೈಫಲ್ಯ: ಹೆಲಿಪ್ಯಾಡ್‌ನ ಕಾಂಕ್ರೀಟ್‌ನಲ್ಲಿ ಹೂತು ಹೋದ ರಾಷ್ಟ್ರಪತಿ ಸಂಚರಿಸಿದ ಹೆಲಿಕಾಪ್ಟರ್

ಪತ್ತನಂತಿಟ್ಟ: ಶಬರಿಮಲೆ ದೇಗುಲದ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಿಗ್ಗೆ ಬಂದ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ರಾಷ್ಟ್ರಪತಿ ಪ್ರಯಾಣಿಸುವ ಹೆಲಿಕಾಪ್ಟರ್‌ನ್ನು ನಿಲೈಕಲ್‌ನ ಹೆಲಿಪ್ಯಾಡ್‌ನಲ್ಲಿ ಇಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಬಳಿಕ ಅದನ್ನು ಪತ್ತನಂತಿಟ್ಟ ಪ್ರಮಾಡಂ ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಹೆಲಿಪ್ಯಾಡ್‌ನಲ್ಲಿ ಇಂದು ಬೆಳಿಗ್ಗೆ ಇಳಿದ ರಾಷ್ಟ್ರಪತಿಯವರು ನಂತರ ಕಾರಿನಲ್ಲಿ ಬಿಗಿ ಭದ್ರತೆಯೊಂದಿಗೆ ಪಂಪಾಕ್ಕೆ ಪ್ರಯಾಣ ಮುಂದುವರಿಸಿದರು. ಅದಾದ ಬಳಿಕ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್‌ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ಇದರಿಂದ  ಹೆಲಿಕಾಪ್ಟರನ್ನು ಮುಂದಕ್ಕೆ …

ಸರಕಾರಿ ಕಾಲೇಜು ಮಾಜಿ ಪ್ರಾಂಶುಪಾಲ ಪ್ರೊ. ವಿ. ಗೋಪಿನಾಥನ್ ನಿಧನ

ಕಾಸರಗೋಡು: ಕಾಸರಗೋಡಿನಲ್ಲಿ ಸರ್ವ ವಲಯಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರೊಫೆಸರ್ ವಿ. ಗೋಪಿನಾಥನ್ (71) ನಿಧನ ಹೊಂದಿದರು. ಅಧ್ಯಯನ ಪ್ರವಾಸ ತಂಡದೊಂದಿಗೆ ಮಲಪ್ಪುರಂಗೆ ತೆರಳಿದ್ದ ಇವರಿಗೆ ನಿನ್ನೆ ರಾತ್ರಿ 12 ಗಂಟೆ ವೇಳೆ ಉಸಿರಾಟ ತೊಂದರೆ ಕಂಡುಬಂದಿತ್ತು. ಜೊತೆಗಿದ್ದವರು ಕೂಡಲೇ ವಂಡೂರು ನಿಮ್ಸ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಸರಗೋಡು ಟ್ರಾವಲ್ ಕ್ಲಬ್‌ನ ಮಲಪ್ಪುರಂ ಜಿಲ್ಲಾ ಅಧ್ಯಯನ ಪ್ರವಾಸಕ್ಕಾಗಿ ನಿನ್ನೆ ಬೆಳಿಗ್ಗೆ ಇವರು ತಂಡದೊಂದಿಗೆ  ಮಲಪ್ಪುರಂಗೆ ತೆರಳಿದ್ದರು. ಪತ್ನಿ ಪ್ರೊಫೆಸರ್ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ …

ಮಹಿಳಾ ಫಾರೆಸ್ಟ್ ವಾಚರ್‌ಗೆ ಕಿರುಕುಳ:  ಅರಣ್ಯ ಇಲಾಖೆ ಅಧಿಕಾರಿ ಬಂಧನ

ತೃಶೂರು: ಆದಿರಪಳ್ಳಿಯಲ್ಲಿ ಬಿಎಫ್‌ಒಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಯನ್ನು ಬಂಧಿಸಲಾಗಿದೆ. ಬುಡಕಟ್ಟು ಜನಾಂಗ ಮಹಿಳಾ ಫಾರೆಸ್ಟ್ ವಾಚರ್‌ಗೆ ಕಿರುಕುಳ ನೀಡಿದ ಆರೋಪದಂತೆ ಪಿ.ಪಿ. ಜೋನ್ಸನ್ ಎಂಬಾತನನ್ನು ಸೆರೆಹಿಡಿಯಲಾಗಿದೆ. ಮುಕ್ಕಂಪುಳ ಎಂಬಲ್ಲಿಂದ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೋನ್ಸನ್ ವರ್ಗಾವಣೆಗೊಂಡು ಬಂದ ಮೊದಲ ದಿನವೇ ಮಹಿಳಾ ವಾಚರ್‌ಗೆ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಘಟನೆ ಬಳಿಕ ಜೋನ್ಸನ್ ತಲೆಮರೆಸಿ ಕೊಂಡಿದ್ದನು. ಚಾಲಕ್ಕುಡಿ ಡಿವೈಎಸ್‌ಪಿ ನೇತೃತ್ವದ ತಂಡ ಈತನನ್ನು ಬಂಧಿಸಿದೆ. ಅಕ್ಟೋಬರ್ ೬ರಂದು ಪ್ರಕರ ಣಕ್ಕೆ ಕಾರಣವಾದ …

ಸ್ಥಳ ಸೌಕರ್ಯದ ಕೊರತೆ: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಸಮಸ್ಯೆಗಳಿಂದ ಬಂಧಿ

ಹೊಸಂಗಡಿ: ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಅನಧಿಕೃತ ಸಾಗಾಟವಾಗುತ್ತಿರುವ ಮಾದಕ ಪದಾರ್ಥ, ಕಾಳಧನಗಳನ್ನು ಸೆರೆ ಹಿಡಿಯುವ ಅಬಕಾರಿ ಚೆಕ್‌ಪೋಸ್ಟ್ ಅಸೌಕರ್ಯಗಳ ಕೊರತೆಯಿಂದ ತೊಳಲಾಡುತ್ತಿದೆ. ಕರ್ನಾಟಕದಿಂದ ಬರುವ ವಾಹನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾದಕಪದಾರ್ಥ, ಕಾಳಧನ ಸಾಗಾಟ ನಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿದ ಘಟನೆ ನಡೆದಿತ್ತು. ಆದರೆ ಸ್ಥಳಾವಕಾಶದ ಕೊರತೆ ಸಮಸ್ಯೆಯಾಗುತ್ತಿದೆ. ಈ ಮೊದಲು ಅಬಕಾರಿ ಚೆಕ್‌ಪೋಸ್ಟ್ ಕಚೇರಿ ವಾಮಂಜೂರು ಹೆದ್ದಾರಿ ಬದಿ ಕಾರ್ಯಾಚರಿಸುತ್ತಿತ್ತು. ಹೆದ್ದಾರಿ ನವೀಕರಣೆ ಕಾಮಗಾರಿ ಆರಂಭಗೊಳ್ಳುವ ಮೊದಲೇ ಈ ಕಚೇರಿಯನ್ನು ಈ ಪರಿಸರದಲ್ಲಿದ್ದ ಮಾರಾಟ ತೆರಿಗೆ …