ಬೇಟೆಗಾಗಿ ಬಂದ ತಂಡವನ್ನು ಅಪಹರಿಸಿ ಬಂದೂಕು, ಹಣ ದರೋಡೆಗೈದ ಪ್ರಕರಣ: ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಆರೋಪಿ ಸೆರೆ

ಮಂಜೇಶ್ವರ: ಬೇಟೆಗಾಗಿ ವರ್ಕಾಡಿಗೆ ತಲುಪಿದ ಕುತ್ತಿಕೋಲ್ ನಿವಾಸಿಗಳನ್ನು ಅಪಹರಿಸಿ ಹಲ್ಲೆಗೈದು ಬಂದೂಕು, ಮದ್ದುಗುಂಡುಗಳು ಹಾಗೂ ಹಣ ದರೋಡೆ ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆಹಿಡಿಯಲಾಗಿದೆ. ವರ್ಕಾಡಿ ಪುರುಷಂಗೋಡಿಯ ಮುಹಮ್ಮದ್ ರಾಸಿಕ್ (25) ಎಂಬಾ ತನನ್ನು ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಕರ್ನಾಟ ಕದ ದ.ಕ. ಜಿಲ್ಲೆಯ ಮಂಚಿ ಎಂಬಲ್ಲಿಂದ ಸೆರೆಹಿಡಿದಿದೆ.ಕುತ್ತಿಕ್ಕೋಲ್ ನಿವಾಸಿ ನಿತಿನ್‌ರಾಜ್ ಹಾಗೂ ಸ್ನೇಹಿತರು ಬೇಟೆಗಾಗಿ ವರ್ಕಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಅಂಗಡಿಪದವಿನ ಸೈಫುದ್ದೀನ್ ಯಾನೆ ಪೂಚ …

ವಾಟ್ಸಪ್ ಗ್ರೂಪ್‌ನಲ್ಲಿ  ಅನುಚಿತ ವರ್ತನೆ ಆರೋಪ: ಶಾಸಕ ರಾಹುಲ್ ಮಾಕೂಟ್ಟತ್ತಿಲ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಸಾಧ್ಯತೆ

ತಿರುವನಂತಪುರ: ವಾಟ್ಸಪ್ ಗ್ರೂಪ್‌ನಲ್ಲಿ ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆಂಬ ಆರೋಪ ಪಾಲ ಕ್ಕಾಡ್ ಶಾಸಕ ರಾಹುಲ್ ಮಾಕೂಟ ತ್ತಿಲ್‌ರ ಮೇಲೆ ಉಂಟಾಗಿದ್ದು, ಆ ಹಿನ್ನೆಲೆ ಯಲ್ಲಿ ಅವರು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳ್ಳುವ ಸಾಧ್ಯತೆ ಉಂಟಾಗಿದೆ. ರಾಹುಲ್ ಮಾಕೂಟತ್ತಿಲ್ ವಿರುದ್ಧ ಕಾಂಗ್ರೆಸ್‌ನ ಕೆಲವು ಮಹಿಳಾ ನೇತಾರರೂ, ಕಾಂಗ್ರೆಸ್‌ನ ಕೇರಳ ಘಟಕದ ಹೊಣೆಗಾರಿಕೆ ಹೊಂದಿರುವ ಎಐಸಿಸಿ  ಪ್ರಧಾನ ಕಾರ್ಯದರ್ಶಿ  ದೀಪಾದಾಸ್ ಮುನ್ಶಿಗೆ ದೂರು ನೀಡಿದ್ದು ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಕಾಂಗ್ರೆಸ್‌ನ ರಾಜ್ಯ ನೇತೃತ್ವಕ್ಕೆ …

ಪಿಕಪ್ ಚಾಲಕ ನೇಣು ಬಿಗಿದು ಸಾವು

ಅಡೂರು: ಪಿಕಪ್ ಚಾಲಕ ನೋರ್ವ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡೂರು ಬಳಿಯ ಮಣಿಯೂರು ಮೂಲಡ್ಕ ನಿವಾಸಿ ಗೋಪಾಲ ಎಂಬವರ ಪುತ್ರ ಯೋಗೀಶ್ (28) ಮೃತ ಯುವಕನಾಗಿದ್ದಾರೆ. ಇವರು ಇಂದು ಬೆಳಿಗ್ಗೆ ಮನೆ ಬಳಿಯ ಮರದಲ್ಲಿ ನೇಣು ಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ತಂದೆ, ತಾಯಿ ಯಶೋದ, ಪತ್ನಿ ಪ್ರಜ್ವಲ, ಸಹೋದರ ಶರತ್,ಸಹೋದರಿ ಶರಣ್ಯ ಹಾಗೂ …

ಪೋಕ್ಸೋ ಪ್ರಕರಣ: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಜೇಶ್ವರ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಚಿತ್ರದುರ್ಗ ನಿವಾಸಿ ತಿಮ್ಮಯ್ಯ (38) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2020ರಲ್ಲಿ ಈತ ಮಂಜೇಶ್ವರ ಪೊಲೀಸ್ ಠಾಣೆ   ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ನಿವಾಸಿಯಾದ ಬಾಲಕಿಗೆ ಕಿರುಕುಳ ನೀಡಿದ  ಬಗ್ಗೆ ದೂರಲಾಗಿತ್ತು. ಇದರಂತೆ ಪೊಲೀಸರು ತಿಮ್ಮಯ್ಯನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ವೇಳೆ ರಿಮಾಂಡ್ ಗೊಳಗಾದ ಆರೋಪಿ  ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಬಳಿಕ ಹಾಜರಾಗದೆ ತಲೆಮರೆಸಿಕೊಂ …

1.500 ಕಿಲೋ ಗಾಂಜಾ ಸಹಿತ ಆರೋಪಿ ಸೆರೆ

ಹೊಸದುರ್ಗ:  ವಿವಿಧ ಸ್ಥಳಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ತಲುಪಿಸುವ ತಂಡದ ಪ್ರಧಾನ ಸೂತ್ರಧಾರನನ್ನು ಸೆರೆ ಹಿಡಿಯಲಾಗಿದೆ. ಮಾಡಾಯಿಪಾರ ಎಂಬ ಸ್ಥಳದಲ್ಲಿ ಚೆರುತಾಯಂ ಪಿರಕ್ಕಂತಡ ನಿವಾಸಿ ಅಫೀದ್ ಕೆ.ಪಿ. (21) ಎಂಬಾತನನ್ನು ಪಾಪಿನಿಶ್ಶೇರಿ ಅಬಕಾರಿ ಇನ್ಸ್‌ಪೆಕ್ಟರ್ ಜೆಸೀರಲಿ ಹಾಗೂ ತಂಡ ಸೆರೆ ಹಿಡಿದಿದೆ. ಅಬಕಾರಿ ಕಮಿಶನರ್ ತಂಡಕ್ಕೆ ನೀಡಿದ ರಹಸ್ಯ ಮಾಹಿತಿಯ ಆಧಾರದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. 1.500 ಕಿಲೋ ಗ್ರಾಂ ಒಣಗಿದ ಗಾಂಜಾವನ್ನು ಈತನಿಂದ ವಶಪಡಿಸಲಾಗಿದ್ದು, ಹೋಂಡಾ ಆಕ್ಟೀವ ಸ್ಕೂಟರ್ ಕಸ್ಟಡಿಗೆ ತೆಗೆಯ ಲಾಗಿದೆ. …

ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯಾಗಿ ನಂತರ ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪ್ರಕರಣದ ವ್ಯಕ್ತಿಯನ್ನು ಭಾರತ-ನೇಪಾಳ ಗಡಿಯಿಂದ ಮೇಲ್ಪರಂಬ ಪೊಲೀಸರು  ಬಂಧಿಸಿದ್ದಾರೆ. ಚೆಮ್ನಾಡು ಪಂಚಾಯತ್‌ನ ಪೆರುಂಬಳ ಕುದಿರಿಲ್ ಹೌಸ್‌ನ ಪಿ. ಅಬ್ದುಲ್ ಹ್ಯಾರೀಸ್ (41) ಬಂಧಿತ ಆರೋಪಿ,ಕಳೆದ ಜೂನ್ ೨೯ರಂದು ಹನ್ನೊಂದು ವರ್ಷದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆರೋಪಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿ ಮುಂಬೈಗೆ ಪರಾರಿಯಾಗಿದ್ದನು. ಅಲ್ಲಿಂದ ಆತ ವಿದೇಶಕ್ಕೆ ಪರಾರಿಯಾಗಲು …

ತಿಮರೋಡಿ ಕಸ್ಟಡಿಗೆ ತೆಗೆಯಲು ಬೆಳ್ತಂಗಡಿಗೆ ಬಂದ ಉಡುಪಿ ಪೊಲೀಸ್ ಬೃಹತ್ ತಂಡ

ಪುತ್ತೂರು: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಕಸ್ಟಡಿಗೆ ತೆಗೆಯಲು ಉಡುಪಿ ಜಿಲ್ಲಾ ಪೊಲೀಸರ ತಂಡ ಇಂದು ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಾಂತರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಒಳಗೊಂಡ ತಂಡ ಆರು ಜೀಪುಗಳಲ್ಲಾಗಿ ಬೆಳ್ತಂಗಡಿಗೆ ತಲುಪಿದೆ. ಏಕಾಏಕಿ ನಡೆದ ಈ ಪೊಲೀಸ್ ಕಾರ್ಯಾಚರಣೆಯಿಂದ ಸ್ಥಳೀಯರಲ್ಲಿ ಕುತೂಹಲ ಸೃಷ್ಟಿಯಾಗಿದೆ. ಉಡುಪಿ ಜಿಲ್ಲಾ ಅಡಿಶನಲ್ ಎಸ್‌ಪಿ ಸುಧಾಕರ್ …

ನಾಯ್ಕಾಪು ಬಳಿ ಸ್ಕೂಟರ್ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ನಾಯ್ಕಾಪುನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯ ಗೇಟ್‌ನ ಸಮೀಪ ಸ್ಕೂಟರ್‌ವೊಂದು ಉಪೇಕ್ಷಿತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಕಲ್ಲಿಕೋಟೆ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಲಾದ ಸ್ಕೂಟರ್ ಇದಾಗಿದೆಯೆಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಸ್ಕೂಟರ್ ಇಲ್ಲಿ ನಿಲ್ಲಿಸಲಾಗಿದ್ದು ಇದು ಸಂಶಯಕ್ಕೆಡೆಯಾಗಿದೆ. ಇದೇ ವೇಳೆ ಸ್ಕೂಟರ್ ಇಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೆಂದೂ ಆದರೆ ಈ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿಲ್ಲವೆಂದು ಫ್ಯಾಕ್ಟರಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ವಿಶ್ವಹಿಂದೂ ಪರಿಷತ್ ಮೀಂಜ ಖಂಡ ಸಮಿತಿಯಿಂದ ಬಲಿವಾಡು ಕೂಟ, ಭಜನಾ ಸಂಭ್ರಮ 23ರಂದು

ಮೀಯಪದವು: ವಿಶ್ವ ಹಿಂದೂ  ಪರಿಷತ್ ಮೀಂಜ ಖಂಡ ಸಮಿತಿ ವತಿಯಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸ ಬಲಿವಾಡು ಕೂಟ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಇದೇ ವೇಳೆ ವಿಶೇಷ ಭಜನಾ ಸಂಭ್ರಮ, ಸತ್ಸಂಗ ಹಾಗೂ ಹಿರಿಯ ಭಜನಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಭಜನಾ ಸಂಭ್ರಮ ಆರಂಭಗೊಳ್ಳಲಿದೆ. ಕ್ಷೇತ್ರದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲನೆ ಗೈಯ್ಯುವರು. 11 ಗಂಟೆಗೆ ಸತ್ಸಂಗ ನಡೆಯಲಿದ್ದು, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಜಯದೇವ …

ಉಳಿಯತ್ತಡ್ಕದ ಆಟೋ ಕಾರ್ಮಿಕ ನಿಧನ

ಮಾಯಿಪ್ಪಾಡಿ: ಮುಸ್ಲಿಂ ಲೀಗ್‌ನ ಹಿರಿಯ ಕಾರ್ಯಕರ್ತ, ಉಳಿಯತ್ತಡ್ಕದಲ್ಲಿ ಆಟೋ ಕಾರ್ಮಿಕನಾಗಿದ್ದ ಮಂಜತ್ತಡ್ಕ ನಿವಾಸಿ ಅಬೂಬಕ್ಕರ್ (56) ನಿಧನ ಹೊಂದಿದರು. ಮಧೂರು ಪಂ.ಮುಸ್ಲಿಂ ಲೀಗ್ ಸಮಿತಿ ಸದಸ್ಯ ಎಸ್‌ಟಿಯು ಉಳಿಯತ್ತಡ್ಕ ಪೇಟೆ ಸಮಿತಿ,  ಬದರ್ ಜುಮಾ ಮಸೀದಿ ಸಮಿತಿ, ಮಂಜತ್ತಡ್ಕ ದರ್ಗಾ ಮಸೀದಿ ಸಮಿತಿಯಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ನಿಜಾಮ್, ಪವಾಸ್, ಫಯಾಸ್, ಫಮೀದ, ಫಸೀಲ, ಫಾಸಿಲ, ಅಳಿಯಂದಿರಾದ ಅಶ್ರಫ್ ಮುಗು, ರಂಜಾನ್ ಮಣಿಯಂಪಾರೆ, ಸೊಸೆ ರಹಲಾ, ಸಹೋದರರಾದ ಅಬ್ದುಲ್ ರಹ್ಮಾನ್, ಹಮೀದ್, ಅಲಿ, ಮುಸ್ತಫ …