ಮುಜುಂಗಾವಿನಲ್ಲಿ 8 ಎಕ್ರೆಯಷ್ಟು ಪಾರೆಯ ಹುಲ್ಲಿಗೆ ಬೆಂಕಿ ತಗಲಿ ಆತಂಕ: ಅಗ್ನಿಶಾಮಕದಳ, ಸ್ಥಳೀಯರಿಂದ ನಿಯಂತ್ರಣ

ಕುಂಬಳೆ: ಮುಜುಂಗಾವುನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಿಯಂತ್ರಿಸಿದರು. ಮುಜುಂಗಾವಿನ ಎಂಟು ಎಕ್ರೆಯಷ್ಟು ಇರುವ ಪಾರೆಯಲ್ಲಿದ್ದ ಹುಲ್ಲಿಗೆ ಬೆಂಕಿ ತಗಲಿದೆ. ಇದೇ ವೇಳೆ ಬೀಸಿದ ಗಾಳಿಯಿಂದಾಗಿ ಬೆಂಕಿ ಆ ಪರಿಸರವನ್ನೆಲ್ಲಾ ಆವರಿಸಿದೆ. ಈ ಪರಿಸರದಲ್ಲಿರುವ ಕಟ್ಟಡದ ಜನರು ಹಾಗೂ ಸ್ಥಳೀಯರು ಭೀತಿಗೊಂಡಿದ್ದು, ನೀರು ಸಿಂಪಡಿಸಿ ಬೆಂಕಿ ಹರಡುವುದನ್ನು ನಿಯಂತ್ರಿಸಿದರು. ಬೆಂಕಿ ಸೃಷ್ಟಿಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಸದಸ್

ಕುಂಬಳೆ: ರವಿ ಶಂಕರ್ ಗುರು ನೇತೃತ್ವ ನೀಡುವ ಆರ್ಟ್ ಲಿವಿಂಗ್‌ನ ಜಿಲ್ಲಾ ನೇತೃತ್ವದ ಆಶ್ರಯದಲ್ಲಿ ಈ ತಿಂಗಳ 12ರಿಂದ 15ರ ತನಕ ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಸದಸ್ ನಡೆಯಲಿದೆ. ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಸಭಾಂಗಣದಲ್ಲಿ ನಡೆಯುವ ತರಬೇತಿಯಲ್ಲಿ ಆರ್ಟ್ ಆಪ್ ಲಿವಿಂಗ್‌ನ ಅಂತಾರಾಷ್ಟ್ರೀಯ ತರಬೇತುದಾರ ಸಜಿ ನಿಸಾನ್, ವಿನೀತ್ ವಯನಾಡ್, ಸಬಿತಾ ಕೊಡಂಗಲ್ಲೂರು ಭಾಗವಹಿಸುವರೆಂದು ಸಂಯೋಜಕರು ತಿಳಿಸಿದ್ದಾರೆ. ‘ಭಗವದ್ಗೀತಾದ ಮೂಲಕ ಜೀವನ ವಿಜಯ’ ತರಬೇತಿಗೆ ಇವರು ನೇತೃತ್ವ ನೀಡುವರು. ಪ್ರತಿ ದಿನ ಸಂಜೆ …

ಈಜುಕೊಳದ ಕೆಲಸದ ಮಧ್ಯೆ ಶಾಕ್ ತಗಲಿ ಪ್ಲಂಬರ್ ಯುವಕ ದಾರುಣ ಮೃತ್ಯು;  ಮಧೂರು ಪಟ್ಲದಲ್ಲಿ ಸಂಭವಿಸಿದ ದುರಂತ ಗಂಟೆಗಳ ಬಳಿಕ ಗಮನಕ್ಕೆ

ಕಾಸರಗೋಡು: ಸ್ವಿಮ್ಮಿಂಗ್ ಪೂಲ್‌ನ ಕೆಲಸದ ಮಧ್ಯೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಯುವಕ ಶಾಕ್ ತಗಲಿ ದಾರುಣವಾಗಿ ಮೃತಪಟ್ಟ ಘಟನೆ ಜರಗಿದೆ. ಬೆಳ್ಳೂರು ಮುಕುಡಂಗೋಳಿ ನಿವಾಸಿ ಚಿಕ್ಕಪ್ಪ ರೈ- ರತ್ನಾವತಿ ದಂಪತಿ ಪುತ್ರ ಪ್ರಭಾಕರ ರೈ (39) ಮೃತಪಟ್ಟ ಯುವಕ. ಮಧೂರು, ಪಟ್ಲ ಸರಕಾರಿ ಶಾಲೆ ಸಮೀಪದ ಅಬ್ದುಲ್ಲ ಎಂಬವರ ಮನೆ ಅಂಗಳದ ಈಜು ಕೊಳದಲ್ಲಿ ದುರಂತ ಸಂಭವಿಸಿದೆ. ನಿನ್ನೆ ಸಂಜೆ 4 ಗಂಟೆಗೆ ಸಂಭವಿಸಿದ ದುರಂತದ ಬಗ್ಗೆ ಗಮನಕ್ಕೆ ಬಂದದ್ದು ರಾತ್ರಿಯಲ್ಲಾಗಿದೆ. ಅಗ್ನಿಶಾಮಕ ದಳ ತಲುಪಿ ಪ್ರಭಾಕರ್ …

ಮುಳ್ಳೇರಿಯ: ಹೋಟೆಲ್ ಮಾಲಕ ನಿಧನ

ಮುಳ್ಳೇರಿಯ: ಪೇಟೆಯಲ್ಲಿ ಹಲವು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದ ಗಾಡಿಗುಡ್ಡೆ ರಸ್ತೆ ನಿವಾಸಿ ಕೆ. ನಾರಾಯಣ ನಾಕ್ (98) ನಿಧನ ಹೊಂದಿದರು. ಮೃತರು ಮಕ್ಕಳಾದ ಶಾರದಾ, ಮಾಲಿನಿ, ಪುಷ್ಪ, ಶಶಿಧರನ್ (ಹೋಟೆಲ್ ದುರ್ಗ ಮುಳ್ಳೇರಿಯ), ಅಳಿಯಂದಿರಾದ ರಾಜು, ಸುಧಾಕರನ್, ಸೊಸೆ ಸೌಜನ್ಯ, ಸಹೋದರಿ ಲೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತ್ನಿ ಲಲಿತ, ಓರ್ವ ಅಳಿಯ ಸುರೇಂದ್ರ, ಸಹೋದರ ರಾದ ಬಾಬು ನಾಕ್, ನಾರಾ ಯಣ, ಸಹೋದರಿ ರಾಜೀವಿ ಈ ಹಿಂದೆ ನಿಧನ ಹೊಂದಿದ್ದಾರೆ.

ಬಾವಿಗೆ ಬಿದ್ದು ಮಹಿಳೆ ಮೃತ್ಯು

ಉಪ್ಪಳ: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಚಕ್ಕಿಗುಡ್ಡೆ ನಿವಾಸಿ ಚಂದ್ರಹಾಸರ ಪತ್ನಿ ಗೀತಾ (53) ಮೃತಪಟ್ಟ ದುರ್ದೈವಿಯಾ ಗಿದ್ದಾರೆ.  ನಿನ್ನೆ  ಮಧ್ಯಾಹ್ನ 12 ಗಂಟೆ ವೇಳೆ ಇವರು ಬಾವಿಯಲ್ಲಿ ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು, ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಗೀತಾರನ್ನು ಬಾವಿಯಿಂದ ಮೇಲಕ್ಕೆತ್ತಿ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ನಿನ್ನೆ ಪತಿ ಹಾಗೂ ಮಕ್ಕಳು ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಗೀತಾ ಮಾತ್ರವೇ ಇದ್ದರು. ಬಾವಿಗೆ ಬೀಳಲು …

ಲಾರಿ ಚಾಲಕ ವಿಷ ಸೇವಿಸಿ ಮೃತ್ಯು

ಕುಂಬಳೆ: ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಂತೆ ಪೊಲೀಸರು ನೋಟೀಸು ನೀಡಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಲಾರಿ ಚಾಲಕ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಪುತ್ತಿಗೆ ಕಟ್ಟತ್ತಡ್ಕ ಎಕ್ಸ್‌ಚೇಂಜ್ ರಸ್ತೆಯ ವಸಂತ ನಾಯ್ಕ್‌ರ ಪುತ್ರ ಪ್ರವೀಣ್ ಕುಮಾರ್ (35 ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಮುಂಜಾನೆ ಮನೆಯಲ್ಲಿ ಇವರು ವಿಷ ಸೇವಿಸಿ  ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.  ಮಂಗಳೂರಿನ ಕೋಳಿ ಫಾರ್ಮ್ ವೊಂದರ ಲಾರಿಯ ಚಾಲಕನಾಗಿ ಇವರು ಕೆಲಸ …

ಎಸ್‌ಎಸ್‌ಎಲ್‌ಸಿ, ಪ್ಲಸ್‌ವನ್ ಪರೀಕ್ಷೆ ನಾಳೆಯಿಂದ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ನಾಳೆಯಿಂದ ಆರಂಭಗೊಳ್ಳಲಿದೆ. ಇದರಂತೆ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ 11497 ಮತ್ತು ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ 9197 ವಿದ್ಯಾರ್ಥಿಗಳು ಪರೀಕ್ಷೆಗೆ           ಬರೆಯಲಿದ್ದಾರೆ.  ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಪರೀಕ್ಷೆ  ಬರೆಯುವವರಲ್ಲಿ 22 ಮಂದಿ  ಖಾಸಗಿಯಾಗಿ ಹೆಸರು ನೋಂದಾಯಿಸಿದವರು, 11475 ರೆಗ್ಯುಲರ್ ತರಗತಿಯ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಇದರಲ್ಲಿ 5988 ಗಂಡು ಮತ್ತು 5487 ಹೆಣ್ಮಕ್ಕಳು ಒಳಗೊಂಡಿದ್ದಾರೆ. 46 ಸರಕಾರಿ, 19 ಅನುದಾನಿತ ಶಾಲೆಗಳಲ್ಲಾಗಿ ಪರೀಕ್ಷೆ ನಡೆಯಲಿದೆ. ಅತೀ ಹೆಚ್ಚು …

ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ ತೆರವುಗೊಳಿಸಿದ ನವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು

ಕುಂಬಳೆ: ಮನೆ ಪರಿಸರ, ರಸ್ತೆ ಸಹಿತ ಸಾರ್ವಜನಿಕ ಸ್ಥಳಗಳು ಶುಚಿಯಾಗಿರಬೇಕೆಂಬ ಉದ್ದೇಶದೊಂದಿಗೆ  ಕುಂಬಳೆ ಭಾಸ್ಕರ ನಗರದ ನವೋದಯ ಫ್ರೆಂಡ್ಸ್ ಕ್ಲಬ್  ಪದಾಧಿಕಾರಿಗಳು, ಸದಸ್ಯರು ಇತ್ತೀಚೆಗಿನಿಂದ ತೀವ್ರ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅದರ ಭಾಗವಾಗಿ ಒಂದು ವಾರ ಹಿಂದೆ ಕ್ಲಬ್‌ನ ಕಾರ್ಯಕರ್ತರು ಶಾಂತಿಪಳ್ಳದಿಂದ ಭಾಸ್ಕರನಗರ ವರೆಗೆ ರಸ್ತೆಯ ಎರಡೂ ಭಾಗವನ್ನು ಶುಚಿಗೊಳಿಸಿದ್ದರು.  ರಸ್ತೆ ಹಾಗೂ ಪರಿಸರವನ್ನು ಪೂರ್ಣವಾಗಿ ಶುಚೀಕರಿಸಿದ ಕಾರ್ಯಕರ್ತರು ರಸ್ತೆ ಹಾಗೂ ಪರಿಸರವನ್ನು ಶುಚಿಯಾಗಿಡುವಂತೆ ನಾಗರಿಕರಲ್ಲಿ, ವಾಹನ ಚಾಲಕರಲ್ಲಿ  ಹಾಗೂ ವ್ಯಾಪಾರಿಗಳೊಂದಿಗೆ ವಿನಂತಿಸಿದ್ದರು. ಆದರೆ ನಿನ್ನೆ ಭಾಸ್ಕರನಗರ ಸಮೀಪ …

ನೇರೋಳು ನಿವಾಸಿ ಲಲಿತ ಎನ್. ಭಟ್ ನಿಧನ

ಪೆರ್ಲ: ಎಣ್ಮಕಜೆ ಪಂ. ವ್ಯಾಪ್ತಿಯ ಅಡ್ಕಸ್ಥಳ ಸಮೀಪದ ನೇರೋಳು ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ, ಯಕ್ಷಗಾನ ಹಿಮ್ಮೇಳ ವಾದಕರಾಗಿದ್ದ ದಿ| ರಾಮ್ ಭಟ್‌ರ ಪತ್ನಿ ಲಲಿತ ಎನ್. ಭಟ್ (74) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಮಕ್ಕಳಾದ ಪದ್ಮಶೇಖರ ಎನ್. (ಬಿಜೆಪಿ ಕುಂಬಳೆ ಮಂಡಲ ಸದಸ್ಯ), ಮಮತ ಪುದುಕೋಳಿ, ಅಳಿಯಂದಿರಾದ ನರಸಿಂಹ ಭಟ್ ಕುರುವೇರಿ, ಶಿವಶಂಕರ ಭಟ್ ಪುದುಕೋಳಿ, ಸಹೋದರಿ ಯರಾದ ಸರಸ್ವತಿ ಭಟ್, ಕಲಾವತಿ ಭಟ್, ಕುಸುಮಾವತಿ ಭಟ್, …

ನಿವೃತ್ತ ತಹಶೀಲ್ದಾರ್ ನಿಧನ

ಕಾಸರಗೋಡು: ನಿವೃತ್ತ ತಹಶೀಲ್ದಾರ್, ಪೊಯಿನಾಚಿ ಎಸ್.ಎನ್. ನಿವಾಸ್‌ನ ಎನ್. ನಾರಾಯಣನ್ (81) ನಿಧನ ಹೊಂದಿದರು. ಪಾಲಕುನ್ನು ಕಳಗಂ ಶ್ರೀ ಭಗವತೀ ಕ್ಷೇತ್ರ ಕೇಂದ್ರ ಸಮಿತಿ ಸದಸ್ಯ ಸಹಿತ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಬೆಳ್ಳೂರು, ನೆಟ್ಟಣಿಗೆ ಸಹಿತ ವಿವಿಧ ಕಡೆಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಕೆ. ಶಾಂತ ಕುಮಾರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಎನ್. ಗೋಪಕುಮಾರ್ (ಜಿಲ್ಲಾ ಟ್ರಷರಿ ಕಾಸರಗೋಡು), ಎನ್. ಪ್ರವೀಣ್ ಕುಮಾರ್, ಎನ್. ಜ್ಯೋತಿಪ್ರಭ, ಸೊಸೆಯಂದಿರಾದ ಪ್ರಸೀತಾ, …