ಅಂತಾರಾಜ್ಯ ಮದ್ಯ ಸಾಗಾಟ ಸೂತ್ರಧಾರ ಬಂಧನ

ಕುಂಬಳೆ: ರಾಜ್ಯಕ್ಕೆ ಹೊರಗಿನಿಂದ ಮದ್ಯ ಸಾಗಾಟ ನಡೆಸುವ ದಂಧೆಯ ಸೂತ್ರಧಾರನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕದ ಹೊನ್ನಾವರ ಬಜಾರ್ ರೋಡ್‌ನ ರಾಧಾಕೃಷ್ಣ ಎಸ್ ಕಮ್ಮತ್(61) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. 2023 ಜುಲೈ 9ರಂದು ಮಿನಿ ಲಾರಿಯಲ್ಲಿ  2484 ಲೀಟರ್ ಗೋವಾ ಮದ್ಯವನ್ನು ಕೇರಳಕ್ಕೆ ಸಾಗಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕರ್ನಾಟಕ ಹಾಗೂ ಗೋವಾದಲ್ಲಿ ಮದ್ಯ ಸಾಗಿಸಿದ ಆರೋಪದಂತೆ ಕೇಸುಗಳಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಜೇಶ್ವರ ಎಕ್ಸೈಸ್ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಗೋವಾ ಮದ್ಯ ವಶಪಡಿಸಿದ …

ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ 5೦ ಸಾವಿರ ರೂ. ದಂಡ

ಕುಂಬಳೆ: ಹೋಟೆಲ್‌ನ ತ್ಯಾಜ್ಯ ನೀರನ್ನು ಸಮೀಪದ ಚರಂಡಿಗೆ ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಿದ  ಪಂಚಾಯತ್ ಅಧಿಕಾರಿಗಳು  ಕುಂಬಳೆಯ ಶ್ರೀಕೃಷ್ಣ ಹೋಟೆಲ್‌ಗೆ  50 ಸಾವಿರ ರೂಪಾಯಿ ದಂಡ ವಿಧಿಸಿ ನೋಟೀಸು ನೀಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮೋಟಾರು ಉಪಯೋಗಿಸಿ ಚರಂಡಿಗೆ ತ್ಯಾಜ್ಯ ನೀರನ್ನು ಹರಿಯಬಿಡುತ್ತಿರುವುದಾಗಿ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹೋಟೆಲ್‌ನಿಂದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ‘ಕಾರವಲ್ ಮೀಡಿಯ’ ನಿನ್ನೆ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಡುವುದರಿಂದ …

ನಿಷೇಧಿತ ಪಿಎಫ್‌ಐಗೆ ಸೇರಿದ 9 ಕೇಂದ್ರಗಳಿಗೆ ಎನ್‌ಐಎ ದಾಳಿ: ಹಲವು ದಾಖಲುಪತ್ರಗಳು ವಶ

ಕೊಚ್ಚಿ: ನಿಷೇಧಿತ ಸಂಘಟ ಯಾದ ಪೋಪ್ಯುಲರ್ ಫ್ರಂಡ್ ಆಫ್ ಇಂಡಿಯಾ (ಪಿಎಫ್‌ಐ)ಕ್ಕೆ ಸೇರಿದ ಕೇರಳದಾದ್ಯಂತವಿರುವ 9 ಕೇಂದ್ರಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿದೆ. ಎರ್ನಾಕುಳಂ, ತೃಶೂರು ಮತ್ತು ಪಾಲಕ್ಕಾಡಿನಲ್ಲಿರುವ ಪಿಎಫ್‌ಐ ಕೇಂದ್ರಗಳಿಗೆ  ಹಾಗೂ ಅವುಗಳೊಂದಿಗೆ ನಂಟು ಹೊಂದಿರುವ ಇತರ  ಕೇಂದ್ರಗಳಿಗೂ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಡಿಜಿಟಲ್ ಉಪಕರಣಗಳು ಹಾಗೂ ಇತರ ಹಲವು ದಾಖಲುಪತ್ರಗಳನ್ನು ಎನ್‌ಐಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಭಾರತವನ್ನು 2047ರೊಳಗಾಗಿ ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪಿಎಫ್‌ಐನ ಜಿಹಾದ್ ಒಳಸಂಚು,  ಪಾಲಕ್ಕಾಡಿನ ಆರ್‌ಎಸ್‌ಎಸ್ …

ಕಣ್ಣೂರಿನಲ್ಲಿ ಹ್ಯಾಶಿಶ್ ಆಯಿಲ್ ವಶ: ಯುವಕ ಸೆರೆ

ಕಣ್ಣೂರು: ಸುಮಾರು ಅರ್ಧ ಕಿಲೋ ಹ್ಯಾಶಿಶ್ ಆಯಿಲ್ ಸಹಿತ  ಯುವಕ ಸೆರೆಯಾಗಿದ್ದಾನೆ. ತೃಶೂರು ನಿವಾಸಿ ಸಿ.ಎಸ್. ನಿಜಿಲ್ (20)ನನ್ನು ಅಬಕಾರಿ ತಂಡ ಸೆರೆ ಹಿಡಿದಿದೆ. ರಹಸ್ಯ ಮಾಹಿತಿ ಆಧಾರದಲ್ಲಿ ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಕಚೇರಿಯ ಸರ್ಕಲ್ ಇನ್ಸ್‌ಪೆಕ್ಟರ್ ಕೆ. ಅಬ್ದುಲ್ ಅಶ್ರಫ್‌ರ ನೇತೃತ್ವದಲ್ಲಿ ಕಣ್ಣೂರು ಹಳೆ ಬಸ್ ನಿಲ್ದಾಣದ ವಸತಿ ಗೃಹದಿಂದ ನಿಜಿಲ್‌ನನ್ನು ಸೆರೆ ಹಿಡಿಯಲಾಗಿದೆ. ಕಣ್ಣೂರು ಭಾಗಕ್ಕೆ ಹ್ಯಾಶಿಶ್ ಆಯಿಲ್ ರಖಂ ಆಗಿ ತಲುಪಿಸುವ ತಂಡದ ಪ್ರಧಾನ ಕೊಂಡಿ ಈತನೆಂದು …

ಕದ್ದು ಸಾಗಿಸುತ್ತಿದ್ದ ವೇಳೆ ಕಾಸರಗೋಡಿನಲ್ಲಿ ಅಪಘಾತಕ್ಕೀಡಾದ ಬೈಕ್: ಮೂವರ ಸೆರೆ

ಕಾಸರಗೋಡು: ಎರ್ನಾಕುಳಂ ಜಿಲ್ಲೆಯ ವಾರಾಪುಳದಿಂದ ಕದ್ದು ಸಾಗಿಸಿದ ಬೈಕ್‌ನ್ನು ಕಾಸರಗೋಡಿನಲ್ಲಿ  ಉಪಯೋಗಿಸುತ್ತಿದ್ದ ಮಧೆ ಅದು ಅಪಘಾತಕ್ಕೀಡಾದ ಘಟನೆ ನಡೆದಿದೆ.  ಈ ಬಗ್ಗೆ  ಪೊಲೀಸರು ನಡೆಸಿದ ತನಿಖೆಯಲ್ಲಿ ಅಪಘಾತಕ್ಕೀಡಾದ ಬೈಕ್ ಕದ್ದು ಸಾಗಿಸಿರುವುದಾಗಿ ದೃಢಪಟ್ಟಿದ್ದು, ಅದಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ನಿವಾಸಿ ಮುಹ್ಮದ್ ಇಷಾಮ್ ಅಲಿಯಾಸ್ ಪಮೀಹ್ (22), ತೃಶೂರು ಚಾವಕ್ಕಾಡ್ ಮುತ್ತಲಿ ಮಾತ್ರಂಕೋ ಟ್‌ನ ಅಮಲ್ (24) ಮತ್ತು ಚೇರ್ತಲ ತ್ರಿಟಾಟ್ಟುಕುಳಂ ಕೊಲ್ಲಂಪ ರಂಬಿಲ್ ವೀಟಿಲ್‌ನ ಅನ್‌ಸೀಲ್ (23) ಎಂಬಿವರನ್ನು ವಾರಾಪುಳ ಪೊಲೀಸರು ಬಂಧಿಸಿದ್ದಾರೆ. ವಾರಾಪುಳ …

ಸಂಚಾರ ನಿಷೇಧ

ಮಜೀರ್ಪಳ್ಳ: ಮಜೀರ್ಪಳ್ಳ- ಬೊಡ್ಡೋಡಿ- ಕೂಟತ್ತಜೆ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 2ರವರೆಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ಮೂಲಕ ಸಾಗುವ ವಾಹನಗಳು ಕೃಷಿ ವಿಜ್ಞಾನ ಕೇಂದ್ರ ರಸ್ತೆ ಮೂಲಕ ಧರ್ಮನಗರ ಸುಂಕದಕಟ್ಟೆ ರಸ್ತೆ ಮೂಲಕ ಹಾಗೂ ಬಲಿಪಗುಳಿಯಿಂದ ಧರ್ಮನಗರ ದರ್ಗ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಎಂದು ಲೋಕೋಪಯೋಗಿ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.

ಮುಹಿಮ್ಮಾತ್ ಅಹ್ದಲ್ ಉರೂಸ್‌ಗೆ ಧ್ವಜಾರೋಹಣ

ಪುತ್ತಿಗೆ: ಮುಹಿಮ್ಮಾತ್ ಸ್ಥಾಪಕ ಸಯ್ಯೀದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ 21ನೇ ಉರೂಸ್‌ಗೆ ಧ್ವಜಾ ರೋಹಣ ನಡೆಸಲಾಯಿತು. ಈ ತಿಂಗಳ 31ರವರೆಗೆ ನಡೆಯುವ  ಕಾರ್ಯ ಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸು ವರು. ಸ್ವಾಗತಸಮಿತಿ ಅಧ್ಯಕ್ಷ ಸೈನುಲ್ ಆಬಿದಿನ್ ತಂಙಳ್ ಎಣ್ಮೂರು ಧ್ವಜಾ ರೋಹಣಗೈದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಮೂಸಲ್ ಮದನಿ ತಲಕ್ಕಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಮುಹ್ಮದ್ ಅಬೀಬ್ ಅಹ್ದಲ್ ತಂಙಳ್, ಮುನಿರುಲ್ ಅಹ್ದಲ್ ತಂಙಳ್ ಸಹಿತ ಹಲವರು ಭಾಗವಹಿ ಸಿದರು. ಖದಮುಲ್ ಅಹ್ದಲಿಯ ಸದಸ್ಯರ …

ಟೈಲರ್ ನಿಧನ

ಹೊಸಂಗಡಿ: ಕೊಪ್ಪಳ ಬಾದೆಮಾರ್ ನಿವಾಸಿ, ಮೇಲಂಗಡಿ ಯಲ್ಲಿ ಟೈಲರ್ ಆಗಿದ್ದ ಉದಯ ಕುಮಾರ್ (59) ನಿಧನ ಹೊಂದಿದರು. ಹೃದಯಾಘಾತ ವುಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಭಗವತೀ ಸೇವಾ ಸಂಘ ವಾಮಂಜೂರು ಇದರ ಕಾರ್ಯಕರ್ತರಾಗಿದ್ದರು. ದಿ| ನಾರಾಯಣ- ದಿ| ಗಿರಿಜ ದಂಪತಿ ಪುತ್ರನಾದ ಮೃತರು ಪತ್ನಿ ರಮಣಿ, ಮಕ್ಕಳಾದ ಶಿಥಿಲ, ಶ್ರಾವಣ್, ಸಹೋದರ ಕಣ್ಣಪ್ಪ ಬಾದೆಮಾರ್, ಸಹೋದರಿಯರಾದ ವಿದ್ಯಾವತಿ, ಶೈಲಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಭಗವತೀ ಸೇವಾಸಂಘ ವಾಮಂಜೂರು ಸಂತಾಪ …

ವಿಮಾನ ದುರಂತ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹಿತ ಆರು ಮಂದಿ ದುರ್ಮರಣ

ಮುಂಬೈ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಎನ್‌ಸಿಪಿ ನೇತಾರ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(66) ಸೇರಿದಂತೆ  ಆರು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ 8.10ಕ್ಕೆ ಲಿಯರ್‌ಜೆಟ್-45 ಎಂಬ ವಿಮಾನದಲ್ಲಿ ಅಜಿತ್ ಪವಾರ್ ಮತ್ತು ಇತರ ೫ ಮಂದಿ ಸಿಬ್ಬಂದಿಗಳು ಬಾರಾಮತಿಗೆ  ತೆರಳಿದ್ದರು.   ವಿಮಾನ ಅಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ  ಬಿದ್ದು ಸ್ಫೋಟಗೊಂಡು ಸಂಪೂರ್ಣವಾಗಿ ಉರಿದುಹೋಗಿದೆ ಯೆಂದು ಪ್ರತ್ಯಕ್ಷದರ್ಶಿಗಳು …

ಅಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 146 ಲೀಟರ್ ಮದ್ಯ ವಶ: ಓರ್ವ ಸೆರೆ

ಕುಂಬಳೆ: ಕುಂಬಳೆಯಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಕ್ವಾಡ್ ನಿನ್ನೆ ಸಂಜೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 146.88 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ ಕುಂಜತ್ತೂರು ನಿಶಾಂತ್ ನಿವಾಸದ ಪ್ರಶಾಂತ್ ಬಿ. ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಕುಂಬಳೆ ರೇಂಜ್ ಅಬಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ. ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಇತರ ಸಿಬ್ಬಂದಿಗಳಾದ …