ಪೋಕ್ಸೋ ಕೇಸು: ಆಟೋ ಚಾಲಕ ಸಹಿತ ಇಬ್ಬರ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 14ರ ಬಾಲಕಿಯನ್ನು ದುರುದ್ದೇಶಪೂರ್ವಕ ಮನೆಗೆ ಕರೆದು ಬರಮಾಡಿಕೊಂಡಿರು ವುದಾಗಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣದಲ್ಲಿ ಕೀಯೂರಿನ ರೋಶಿದ್ (19)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಈ ಮೊದಲು ಕೂಡಾ ಪೋಕ್ಸೋ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಟೋಚಾಲಕನಾದ ಅಬೂಬಕ್ಕರ್ (50) ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈತ ಉರುಡೂರು ಚೇಡಿಮೂಲೆ ನಿವಾಸಿಯಾಗಿದ್ದು, 13ರ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ಆದೂರು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.

ಮೊಗ್ರಾಲ್ ನಿವಾಸಿ ಕೊಲ್ಲಿಯಲ್ಲಿ ನಿಧನ

ಮೊಗ್ರಾಲ್: ಮೊಗ್ರಾಲ್ ಕಡಪ್ಪುರ ನಿವಾಸಿ ಮುಜೀಬ್ ರಹ್ಮಾನ್ (46) ಕೊಲ್ಲಿಯಲ್ಲಿ ಮೃತಪಟ್ಟ ಬಗ್ಗೆ ಊರಿಗೆ ಮಾಹಿತಿ ಲಭಿಸಿದೆ. ಯುಎಇ ಅಜ್ಮಾನ್‌ನ ವಾಸಸ್ಥಳದಲ್ಲಿ  ಕುಸಿದು ಬಿದ್ದ ಇವರು ಕಳೆದೆರಡು ವಾರಗಳಿಂದ ಅಲ್ಲಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಮೃತ ಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ಪಿ.ಎಂ. ಅಬ್ದುಲ್ಲ- ನಫೀಸ ದಂಪತಿ ಪುತ್ರನಾಗಿದ್ದು, ಪತ್ನಿ ಶಹನಾಸ್, ಮಕ್ಕಳಾದ ನಫೀಸತ್ ಮಿರ್ಶಿಬ, ನಿಶಾನ ಫಾತಿಮ, ಮುಹಮ್ಮದ್ ಮುಹಾದ್, ಸಹೋದರಿ ಕುಂಞಿಬೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಆರಿಕ್ಕಾಡಿ ಟೋಲ್ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳಿಸಲು ಕ್ರಿಯಾ ಸಮಿತಿ ತೀರ್ಮಾನ: 19ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಂಗಮ

ಕುಂಬಳೆ: ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸುವುದರ ವಿರುದ್ಧ ಕ್ರಿಯಾ ಸಮಿತಿಯ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಜರಗಿದ ಸರ್ವಪಕ್ಷ ಕ್ರಿಯಾ ಸಮಿತಿಯ ಸಭೆಯಲ್ಲಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಈ ತಿಂಗಳ 19ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜನಪ್ರತಿನಿಧಿಗಳ ಪ್ರತಿಭಟನಾ ಸಂಗಮ ನಡೆಯಲಿದೆ. ಮಂಜೇಶ್ವರ- ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸದಸ್ಯರು, ಕಾಸರಗೋಡು ನಗರಸಭೆಯ ಕೌನ್ಸಿಲರ್‌ಗಳು ಭಾಗವಹಿಸುವರು. ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ …

ವಿಧಾನಸಭೆ ಚುನಾವಣೆ: ವಿ.ಡಿ. ಸತೀಶನ್ ನೇತೃತ್ವದಲ್ಲಿ ‘ನವಯುಗ ಯಾತ್ರೆ’ ಫೆ.6ರಿಂದ; ಕುಂಬಳೆಯಿಂದ ಚಾಲನೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಪೂರ್ವಭಾವಿ ಪ್ರಚಾರದಂಗವಾಗಿ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿ ಯಾತ್ರೆ ನಡೆಸಲು ಯುಡಿಎಫ್ ತೀರ್ಮಾನಿಸಿದೆ. ಇದಕ್ಕೆ ‘ನವಯುಗ ಯಾತ್ರೆ’ ಎಂಬ ಹೆಸರಿಡಲಾಗಿದೆ. ಫೆಬ್ರವರಿ ೬ರಂದು ಕುಂಬಳೆಯಿಂದ ಪ್ರಯಾಣ ಆರಂಭಿಸಲಿದ್ದು, ಮಾರ್ಚ್ 6ರಂದು ತಿರುವನಂತಪುರದಲ್ಲಿ ಸಮಾಪ್ತಿಹೊಂದಲಿದೆ. ‘ಕೇರಳವನ್ನು ಮರುಗಳಿಸಲಾಗುವುದು’  ಎಂಬುದು ಈ ಯಾತ್ರೆಯ ಘೋಷಣೆಯಾಗಿದೆ. ಫೆ. 6ರಂದು ಕುಂಬಳೆಯಲ್ಲಿ ನಡೆಯಲಿರುವ ಯುಡಿಎಫ್‌ನ ಬೃಹತ್ ಕಾರ್ಯಕ್ರಮದಲ್ಲಿ ಯಾತ್ರೆ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ಯುಡಿಎಫ್‌ನ ಎಲ್ಲಾ ಘಟಕ ಪಕ್ಷಗಳ ನೇತಾರರು ಭಾಗವಹಿಸುವರು. ಬಳಿಕ ಯಾತ್ರೆ ಕಾಸರಗೋಡು ಮೂಲಕವಾಗಿ …

ಕೆಂಪುಕಲ್ಲು ಉತ್ಪಾದಕ ಮಾಲಕರಿಂದ ಜ.19ರಂದು ಕಲೆಕ್ಟ್ರೇಟ್ ಮಾರ್ಚ್

ಕಾಸರಗೋಡು: ಲೈಸನ್ಸ್ ಮಂಜೂರು ಮಾಡುವ ವಿಷಯದಲ್ಲಿ ಉಂಟಾಗುತ್ತಿರುವ ಕಾಲವಿಳಂಬ, ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ಕೆಂಪುಕಲ್ಲು ಉತ್ಪಾದನಾ ವಲಯ ಭಾರೀ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದೂ, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಸರಕಾರ ಹೇಳುತ್ತಿದ್ದರೂ, ವಿವಿಧ ಇಲಾಖೆಗಳ ಹಠಮಾರಿತನ ನಿಲುವಿನಿಂದಾಗಿ ಇದಕ್ಕೆ ಈ ತನಕ ಪರಿಹಾರ ಕಂಡುಕೊಳ್ಳದೆ ಇರುವ ನಿಲುವನ್ನು ಪ್ರತಿಭಟಿಸಿ ಜನವರಿ 19ರಂದು ಕಾಸರಗೋಡು ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಲಾಗುವುದೆಂದು ಕೆಂಪುಕಲ್ಲು ಉತ್ಪಾದಕ ಮಾಲಕರ ಕಲ್ಯಾಣ ಸಂಘದ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ …

ಕುಂಬ್ಡಾಜೆ: ವೃದ್ದೆ ಸಾವಿಗೀಡಾಗಿರುವುದು ಉಸಿರುಗಟ್ಟಿ ಎಂಬ ಸೂಚನೆ; ಕೃತ್ಯ ನಡೆಸಿದವರು ಯಾರು? ತನಿಖೆ ತೀವ್ರಗೊಳಿಸಿದ ಬದಿಯಡ್ಕ ಪೊಲೀಸ್

ಬದಿಯಡ್ಕ: ಕುಂಬ್ಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ದೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಇದು ಕೊಲೆ ಕೃತ್ಯವಾಗಿದೆ ಎಂಬ ಅನುಮಾನದ ಮೇರೆಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂಬ ಬಗ್ಗೆ  ಮಾಹಿತಿ ಲಭಿಸಬಹುದೆಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ. ಮವ್ವಾರು ಅಜಿಲದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ. ಶೆಟ್ಟಿ (72) …

ಕಾರು ಢಿಕ್ಕಿ ಹೊಡೆದು ಮೀನು ಮಾರಾಟಗಾರನಿಗೆ ಗಂಭೀರ

ಕುಂಬಳೆ: ಕಾರು ಢಿಕ್ಕಿ ಹೊಡೆದು ಮೀನು ಮಾರಾಟಗಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಂದ್ಯೋಡು ಅಡ್ಕದ ಸಲೀಂ (46) ಎಂಬವರು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಸ್ಕೂಟರ್‌ನಲ್ಲಿ ಮೀನು ಕೊಂಡೊಯ್ದು ಮಾರಾಟ ನಡೆಸುತ್ತಿದ್ದಾರೆ. ಇದರಂತೆ ನಿನ್ನೆಯೂ ಮೀನು ಸಾಗಾಟ ನಡೆಸುತ್ತಿದ್ದಾಗ ಆಗಮಿಸಿದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಕಾರು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸುತ್ತಿದ್ದಾರೆ. ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸಲೀಂರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ತಲುಪಿಸಿರುವು ದಾಗಿಯೂ  ತಿಳಿಸಲಾಗಿದೆ.

ವಸತಿಗೃಹದಲ್ಲಿ ಗೆಳತಿಯ ಜೊತೆ ಯುವಕನ ನಗ್ನಚಿತ್ರ ತೆಗೆದು ಬೆದರಿಕೆ: ಫೋನ್, ನಗದು ಅಪಹರಿಸಿದ 3 ಮಂದಿ ವಿರುದ್ಧ ಕೇಸು

ಹೊಸಂಗಡಿ: ಇಲ್ಲಿನ ವಸತಿಗೃಹದ ಕೊಠಡಿಯಲ್ಲಿ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಮಹಿಳೆಯನ್ನು ಜೊತೆಗೆ ನಿಲ್ಲಿಸಿ ನಗ್ನಚಿತ್ರ ತೆಗೆದು ಬೆದರಿಕೆಯೊಡ್ಡಿ ಫೋನ್ ಹಾಗೂ ಹಣವನ್ನು ಅಪಹರಿಸಿರುವುದಾಗಿ ದೂರಲಾಗಿದೆ. ಉಳ್ಳಾಲ ಮೋಂಟುಗೋಳಿಯ ಮುಹಮ್ಮದ್  ಹನೀಫ್ (41)ನ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಘಟನೆ ನಡೆದಿದೆ. ಗೆಳತಿಯೊಂದಿಗೆ ದೂರುದಾತ ವಸತಿಗೃಹದಲ್ಲಿ ಕೊಠಡಿ ತೆಗೆದಿದ್ದನು. ಈ ಸಮಯದಲ್ಲಿ ಮೂರು ಮಂದಿಯ ತಂಡ ಕೊಠಡಿಗೆ ನುಗ್ಗಿ ಯುವತಿ ಹಾಗೂ ಯುವಕನನ್ನು ಮಂಚದಲ್ಲಿ ಜೊತೆಗೆ …

ವಿದ್ಯುತ್ ತಂತಿ, ಮರ ದೇಹದ ಮೇಲೆ ಬಿದ್ದು ಗಾಯಗೊಂಡ ವಲಸೆ ಕಾರ್ಮಿಕ ಮೃತ್ಯು

ಮಂಜೇಶ್ವರ: ವಿದ್ಯುತ್ ತಂತಿ ಹಾಗೂ ಮರ ತುಂಡಾಗಿ ದೇಹದ ಮೇಲೆ ಬಿದ್ದು ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ವಲಸೆ ಕಾರ್ಮಿಕ  ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಪ್ರದೇಶ ಬಹ್‌ರೈಚ್, ಪಿಪ್ರಾ ಗೌರಾ ನಿವಾಸಿ ಗುಲಾಬ್ ಎಂಬವರ ಪುತ್ರ ವೀರೇಂದ್ರ (44) ಸಾವನ್ನಪ್ಪಿದ ದುರ್ದೈವಿ. ಇವರು ಉಪ್ಪಳ ರೈಲು ನಿಲ್ದಾಣ ಬಳಿ ಬಾಡಿಗೆ ಮನೆಯಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದರು. ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ತೂಮಿನಾಡು ಲಕ್ಷಂವೀಡ್ ಕಾಲನಿಯ ಸಮೀಪದ ಮನೆಯಲ್ಲಿ ಕಾಂಕ್ರೀಟ್ ಕೆಲಸದಲ್ಲಿ ನಿರತರಾಗಿದ್ದ …

ಚೆರ್ಕಳ-ಉಕ್ಕಿನಡ್ಕ ಅಂತಾರಾಜ್ಯ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ 19ರಿಂದ ಖಾಸಗಿ ಬಸ್‌ಗಳ ಅನಿರ್ದಿಷ್ಟಾವಧಿ ಮುಷ್ಕರ

ಕಾಸರಗೋಡು: ಚೆರ್ಕಳ-ಉಕ್ಕಿ ನಡ್ಕ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ತಿಂಗಳ 19ರಿಂದ ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿವೆ ಎಂದು ಪ್ರೈಡ್ ಬಸ್ ಕಾರ್ಮಿಕರ ಯೂನಿಯನ್ ವಲಯ ಅಧ್ಯಕ್ಷ ಹಾರಿಸ್ ಪಿ.ಎಂ.ಎಸ್. ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ೧೯ ಕಿಲೋ ಮೀಟರ್ ಹೊಂಡಗಳಿಂದ ತುಂಬಿಕೊಂಡು ಒಂದು ವರ್ಷ ಕಳೆಯಿತು. ವಾಹನಗಳು ಹೊಂಡಕ್ಕೆ ಬಿದ್ದು ಎದ್ದು ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ತೀವ್ರ ನೋವು ಎದುರಿಸಬೇಕಾಗಿ …