ಅಬಕಾರಿ ಕಚೇರಿಗಳಲ್ಲಿ ವಿಜಿಲೆನ್ಸ್ ತಪಾಸಣೆ

ಕಾಸರಗೋಡು: ಜಿಲ್ಲೆಯ ಅಬಕಾರಿ ಕಚೇರಿಗಳಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ರಾಜ್ಯದ 68 ಸರ್ಕಲ್ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಆಪರೇಶನ್ ಸೇವ್ ಸಿಪ್ ಎಂಬ ಹೆಸರಿನಲ್ಲಿ ನಡೆಸಿದ ತಪಾಸಣೆಯಲ್ಲಿ ಅಬಕಾರಿ ಅಧಿಕಾರಿಗಳ ಕೈಯಿಂದ ಹಾಗೂ ಕಚೇರಿ ಸಮೀಪದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಹಣ ಪತ್ತೆಯಾಗಿದೆ. ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯಲ್ಲಿ ನಡೆಸಿದ ತಪಾಸಣೆ ವೇಳೆ ಲೆಕ್ಕದಲ್ಲಿ ತೋರಿಸದ 6 ಸಾವಿರ ರೂ. ವಿಜಿಲೆನ್ಸ್ ಪತ್ತೆಹಚ್ಚಿದೆ.

ಅಂತಿಮ ಮತದಾರ ಯಾದಿ ಪ್ರಕಟ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ; 2.83 ಕೋಟಿ ಮತದಾರರು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾ ವಣೆಯ ಅಂತಿಮ ಮತದಾರ ಯಾದಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದರಲ್ಲಿ 2,83,12,472 (2.83 ಕೋಟಿ) ಮತದಾರರು ಒಳಗೊಂಡಿದ್ದಾರೆ. ಜುಲೈ 23ರಂದು ಪ್ರಕಟಿಸಲಾದ ಕರಡು ಮತದಾರ ಯಾದಿಯಲ್ಲಿ ಇದ್ದ ಸಂಖ್ಯೆಗಿಂತ ಅಂತಿಮ ಮತದಾರ ಯಾದಿಯಲ್ಲಿ 16,34,216 ರಷ್ಟು ಹೆಚ್ಚಳ ಉಂಟಾಗಿದೆ. ಮತದಾರ ಯಾದಿ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್, ಆಯಾ ಸ್ಥಳೀಯಾಡಳಿತ ಸಂ ಸ್ಥೆಗಳು, ತಾಲೂಕು ಮತ್ತು ಗ್ರಾಮ ಕಚೇರಿಗಳಲ್ಲಿ ಪರಿಶೀಲನೆಗೆ ಲಭಿಸುವುದು.

ಎಂಡಿಎಂಎ ಸಹಿತ ಆಟೋ ಚಾಲಕ ಸೆರೆ

ಕುಂಬಳೆ: ಮಾದಕವಸ್ತುವಾದ ಎಂಡಿಎಂಎ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಆಟೋ ಚಾಲಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಕೊಡ್ಯಮ್ಮೆ ಪೂಕಟ್ಟೆ ನಿವಾಸಿ ಅಬ್ದುಲ್ ಅಸೀಸ್ (42) ಬಂಧಿತ ವ್ಯಕ್ತಿ. ನಿನ್ನೆ ರಾತ್ರಿ 11 ಗಂಟೆಗೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನೇತೃತ್ವದ ಪೊಲೀಸರು ಕೊಡ್ಯಮ್ಮೆ ಜಂಕ್ಷನ್‌ನಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 18.20 ಗ್ರಾಂ ಎಂಡಿಎಂಎ ಪತ್ತೆಯಾ ಗಿದೆ. ಆಟೋ ರಿಕ್ಷಾವನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಇನ್‌ಸ್ಪೆಕ್ಟರ್ ಜತೆಗೆ ಎಸ್‌ಐಕೆ. …

ಅಕ್ರಮ ಮರಳುಗಾರಿಕೆ: ಇಬ್ಬರ ಸೆರೆ

ಕುಂಬಳೆ: ಕೇರಳ ಮಾರಿಟೈಂ ಮಂಡಳಿಯ ವ್ಯಾಪ್ತಿಗೊಳಪಟ್ಟ ಶಿರಿಯಾ ಅಳಿವೆ ಬಾಗಿಲಿನಿಂದ ಅಕ್ರಮವಾಗಿ ತೆಗೆದು ವ್ಯಾನ್‌ನಲ್ಲಿ ಹೊಯ್ಗೆ ಸಾಗಿಸಿದುದಕ್ಕೆ ಸಂಬಂಧಿಸಿ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ(40) ಮತ್ತು  ಪೆರುವಾಡು ಕಡಪ್ಪುರದ ಮೊಹಮ್ಮದ್ ಶಾಫಿ(25) ಎಂಬವರು ಬಂಧಿತ ರಾದವರು. ಬಿಎನ್‌ಎಸ್‌ನ ಸೆಕ್ಷನ್ 305 (ಇ) ಪ್ರಕಾರ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದ. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಶಿರಿಯ ಅಳಿವೆ ಬಾಗಿಲಿನಿಂದ ದೋಣಿ ಉಪಯೋಗಿಸಿ ಹೊಯ್ಗೆ ತೆಗೆದು ಅದನ್ನು ಗೋಣಿ ಚೀಲದಲ್ಲಿ ತುಂಬಿಸಿ ವ್ಯಾನ್‌ನಲ್ಲಿ …

ಓಣಂ ಬಂತು: ಕೈಯಲ್ಲಿ ದುಡ್ಡಿಲ್ಲ: ಎಂಡೋಸಲ್ಫಾನ್ ಸಂತ್ರಸ್ತರಿಗೆ 7 ತಿಂಗಳಿಂದ ಪಿಂಚಣಿ ಮೊಟಕು; ಎಲ್ಲೆಡೆ ನಿರಾಸೆ

ಕಾಸರಗೋಡು: ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ನಿರೀಕ್ಷೆಯನ್ನಿರಿಸಿದ್ದ ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನಿರಾಸೆಯುಂಟು ಮಾಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರಕಾರದಿಂದ ಲಭಿಸಬೇಕಾದ ಪಿಂಚಣಿ ಕಳೆದ 7 ತಿಂಗಳಿಂದ ಲಭಿಸಿಲ್ಲ ವೆನ್ನಲಾ ಗಿದೆ. ಓಣಂ ಹಬ್ಬಾಚರಣೆ ಸಂದರ್ಭದಲ್ಲಿ ಎಲ್ಲರಿಗೂ ಪಿಂಚಣಿ ಸಹಿತ ಸೌಲಭ್ಯಗಳು ಲಭಿಸುತ್ತಿದ್ದು, ತಮಗೂ ಅವರ ಜತೆ ಪಿಂಚಣಿ ಲಭಿಸಬಹುದೆಂದು ಇವರು ನಿರೀಕ್ಷೆಯಿರಿಸಿದ್ದರು. ಆದರೆ ಇದುವರೆಗೆ ಪಿಂಚಣಿ ಮೊತ್ತ ಕೈಗೆ ತಲುಪದಿರುವುದು ಇವರಿಗೆ ತೀವ್ರ ನಿರಾಸೆ ಮೂಡಿಸಿದೆ. ಮಾತ್ರವಲ್ಲ ಓಣಂ ಆಚರಮೆಗೆ ಕೈಯಲ್ಲಿ ನಯಾಪೈಸೆ ಇಲ್ಲದೆ ತೀವ್ರ …

ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿದ ಜೀಪು ಪೊಲೀಸರ ವಶ

ಕಾಸರಗೋಡು: ಬೇಕಲ ಬೀಚ್ ನಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿದ ಜೀಪನ್ನು ಬೇಕಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಬೇಕಲ ಕೋಟೆಯಲ್ಲಿ  ಭಾರೀ ಸಂಖ್ಯೆಯಲ್ಲಿ  ಪ್ರವಾಸಿಗರು ಬಂದು ಸೇರಿದ ವೇಳೆ ಅಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಈ ಜೀಪನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  ವಶಕ್ಕೆ ತೆಗೆದ ವಾಹನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಅದರ ಮಾಲಕನಿಗೆ ನೋಟೀಸು ಜ್ಯಾರಿಗೊ ಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಕುಬಣೂರು ರಸ್ತೆಯಲ್ಲಿ ತ್ಯಾಜ್ಯ ರಾಶಿ: ದುರ್ವಾಸನೆ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವುದು ವ್ಯಾಪಕಗೊಂಡಿದ್ದು, ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ಹೊತ್ತಲ್ಲಿ ವಾಹನಗಳಲ್ಲಿ ತಂದು ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ.ಮಳೆಗೆ ತ್ಯಾಜ್ಯ ದುರ್ವಾಸನೆ ಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, …

ಹಿರಿಯ ಕೃಷಿಕ ನಿಧನ

ಬದಿಯಡ್ಕ: ಬದಿಯಡ್ಕ ಸಮೀಪದ ಮಡಿಪ್ಪು ನಿವಾಸಿ ಕೃಷ್ಣ ಭಟ್ (76) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಹಿರಿಯ ಕೃಷಿಕನಾಗಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕೃಷಿಯ ಜತೆಗೆ ದ್ವಿಚಕ್ರ ವಾಹನಗಳ ದುರಸ್ತಿಯಲ್ಲಿ ನಿಪುಣರಾಗಿದ್ದರು. ಇವರ ಪತ್ನಿ ರುಕ್ಮಿಣಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ  ವೆಂಕಟ್ರಾಜ, ವಿಜಯರಾಜ, ಗಣೇಶ್, ಸೊಸೆಯಂದಿರಾದ ವಿನಯಶ್ರೀ, ವಸುದಾ, ಸಹೋದರ ಗಣಫತಿ ಭಟ್, ಸಹೋದರಿ ಸವಿತ (ಉಪ್ಪಿನಂಗಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಜ್ಲೀಸ್ ಸಂಸ್ಥೆಗಳ ಸನದುದಾನ ಸಮ್ಮೇಳನ

ಕಾಸರಗೋಡು: ಅಡ್ಕತ್ತಬೈಲು ಮಜ್ಲೀಸ್ ಎಜುಕೇಶನ್ ಟ್ರಸ್ಟ್‌ನ ಅಧೀನದಲ್ಲಿ ಕಾರ್ಯಾಚರಿಸುವ ಮಜ್ಲೀಸ್, ಅಲ್ ಬಯಾನ್ ಸಂಸ್ಥೆಗಳ ವಾರ್ಷಿಕ ಹಾಗೂ ಸನದುದಾನ ಸಮ್ಮೇಳನ ಜರಗಿತು. ಇದೇ ವೇಳೆ ಖುರ್‌ಆನ್‌ನಕೈ ಬರಹದ ಪ್ರತಿ ಸಿದ್ಧಪಡಿಸಿದ ವಿದ್ಯಾರ್ಥಿನಿ, ಒಂದೇ ರಾತ್ರಿ ರಕ್ಅತ್ ಸುನ್ನತ್ ನಮಸ್ಕಾರದಲ್ಲಿ ಖುರ್‌ಆನ್ ಕಂಠಪಾಠ ಪಾರಾಯಣ ಮಾಡಿದ 34 ಮಂದಿಯನ್ನು ಅಭಿನಂದಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಕರೀಂ ಸಿಟಿಗೋಲ್ಡ್ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು. ವಿ.ಎಚ್. ಅಲಿಯಾರ್ ಖಾಸಿಮಿ ಮರ್‌ಹು ರಸುಲ್, ಹಾಫೀಸ್ ಹಾಶಿಂ ಹಾಸನಿ …

ಕ್ಷೇತ್ರ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಿನ ಸಂಕಲ್ಪ: ಎಡನೀರುಶ್ರೀ ನೇತೃತ್ವದಲ್ಲಿ 8ರಂದು ಧರ್ಮಸ್ಥಳಕ್ಕೆ ವಾಹನ ಜಾಥಾ

ಎಡನೀರು: ಎಡನೀರು ಮಠದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತರು ಮತ್ತು ಅಭಿಮಾನಿಗಳ ಸಭೆ ಜರಗಿತು. ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಧರ್ಮಸ್ಥಳವು ನಮ್ಮ ನಂಬಿಕೆಯ ಪ್ರಕಾಶ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ ಎಂದರು. ರಾಜಕೀಯ ಜಾತಿ ಮತ ಭೇದ ಭಾವ ಮರೆತು ಒಟ್ಟಾಗಿ ಸಹಕರಿಸಬೇಕೆಂದು ಅವರು ಕರೆ ನೀಡಿದರು. ಸೆ. 8ರಂದು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಎಡನೀರು ಮಠದಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನ …