ಮತ ಕಳ್ಳತನ ಆರೋಪಿಸಿ ರಾಹುಲ್ ಗಾಂಧಿ ಯಾತ್ರಾ: ಬಂದ್ಯೋಡ್‌ನಲ್ಲಿ ಬೆಂಬಲ ಮೆರವಣಿಗೆ

ಬಂದ್ಯೋಡು: ಮತ ಕಳ್ಳತನ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ‘ವೋಟರ್ ಅಧಿಕಾರ್ ಯಾತ್ರಾ’ದ ಸಮಾರೋಪದಂಗವಾಗಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬಂದ್ಯೋಡ್‌ನಲ್ಲಿ ಬೆಂಬಲ ಸೂಚಕ ಮೆರವಣಿಗೆ ನಡೆಯಿತು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಉದ್ಘಾಟಿಸಿ ಮಾತನಾಡಿ, ಅರ್ಹ ಮತದಾರರನ್ನು  ಅಂತಿಮ ಮತದಾರರ ಪಟ್ಟಿಯಿಂದ ಹೊರತುಪಡಿಸಿ ವಿಪಕ್ಷಗಳ ಬಲ ಕುಗ್ಗಿಸಿ ವಾಮ ಮಾರ್ಗಗಳ ಮೂಲಕ ಆಡಳಿತ ಬಿಜೆಪಿ ನಡೆಸುತ್ತಿದ್ದು, ಇದಕ್ಕೆ ಚುನಾವಣಾ ಆಯೋಗವು ಕೈಜೋಡಿಸಿರುವುದು ವಿಪರ್ಯಾಸ ಎಂದು ನುಡಿದರು. …

ಪಂಚಾಯತ್ ಡಿಡಿ ಕಚೇರಿ ನೌಕರ ನಿಧನ

ಕಾಸರಗೋಡು: ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿಯ ನೌಕರ ಹೃದಯಾಘಾ ತದಿಂದ ನಿಧನ ಹೊಂದಿದರು. ತೆರುವತ್ ನಿವಾಸಿ ಸಜಿತ್ ಕುಮಾರ್ (44) ಮೃತಪಟ್ಟವರು. ನ್ಯುಮೋನಿಯಾ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವಿವಾಹಿತನಾಗಿದ್ದಾರೆ. ಮೃತರು ತಂದೆ ಕೆ. ಪುರುಷೋತ್ತಮ, ತಾಯಿ ಬೇಬಿ, ಸಹೋದರರಾದ ವಿ.ವಿ. ಅಜಿತ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೈಕಂಬದಲ್ಲಿ ತ್ಯಾಜ್ಯ ವಿರುದ್ಧ ಕ್ರಿಯಾ ಸಮಿತಿ ಹೋರಾಟಕ್ಕೆ

ಉಪ್ಪಳ: ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದ ವಿರುದ್ಧ ಆಂದೋಲನ ತೀವ್ರಗೊಳಿಸಲು ಕ್ರಿಯಾ ಸಮಿತಿ ಮುಂದೆ ಬಂದಿದೆ. ಕೈಕಂಬದ ಅಪಾರ್ಟ್‌ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ತಿಳಿಸಿದೆ. ಈ ಅಪಾರ್ಟ್‌ಮೆಂಟ್‌ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರ ಣಗೊ ಳ್ಳುತ್ತಿದ್ದು, ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ಈ ಮಧ್ಯೆ ನಿರಂತರವಾಗಿ ಫ್ಲಾಟ್‌ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದೆ. ಪಂಚಾಯತ್, ಆರೋಗ್ಯ ಇಲಾಖೆ …

ಅಂತಿಮ ಮತದಾರರ ಪಟ್ಟಿ ಇಂದು ಪ್ರಕಟ

ತಿರುವನಂತಪುರ: ಸ್ಥಳೀಯಾಡಳತ ಚುನಾವಣೆಗಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ಕಳೆದ ತಿಂಗಳ 30ರಂದು ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದವರಿಂದ ಮಾಹಿತಿ ಸಂಗ್ರಹಕ್ಕೆ  29ರ ವರೆಗೆ ಸಮಯ ನೀಡಿದ ಹಿನ್ನೆಲೆಯಲ್ಲಿ ಪಟ್ಟಿ  ಬಿಡುಗಡೆ ಇಂದಿಗೆ ಮುಂದೂಡಲಾಗಿತ್ತು.

ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಅಭಿನಂದನೆ

ಮಂಜೇಶ್ವರ: ಕಲ್ಲಿಕೋಟೆ ವಲಯ ದಲ್ಲಿ ಪಕ್ಷ ತೀರ್ಮಾನಿಸಿದ ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಅಭಿನಂದನೆ ಸಲ್ಲಿಸಲಾಯಿತು. ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್, ಕೆ.ವಿ. ಭಟ್ ಇವರು ಗೌರವ ಸ್ವೀಕರಿಸಿ ದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೃಷ್ಣದಾಸ್, ರಾಜ್ಯ ಉಪಾಧ್ಯಕ್ಷರಾದ ಎಂ.ಟಿ. ರಮೇಶ್, ಶ್ರೀಕಾಂತ್, ಶಾನ್ ಜೋರ್ಜ್, ಸಜೀವನ್, ಗೋಪಾಲಕೃಷ್ಣ, ನವ್ಯಾ ಹರಿದಾಸ್ ಉಪಸ್ಥಿತರಿದ್ದರು.

ಮುಂದಿನ ರಾಜ್ಯೋದಯ ದಿನದಂದು ಕೇರಳ ಕಡು ಬಡವರಿಲ್ಲದ ಮೊದಲ ರಾಜ್ಯವಾಗಲಿದೆ- ಸಚಿವ ಕೆ. ರಾಜನ್

ಕಾಸರಗೋಡು: ಮುಂದಿನ ಕೇರಳ ರಾಜ್ಯೋದಯ ದಿನದಂದು ಕಡು ಬಡವರಿಲ್ಲದ ಮೊದಲ ರಾಜ್ಯವಾಗಿ ಕೇರಳ ಬದಲಾಗಲಿದೆ ಎಂದು ಸಚಿವ ಕೆ. ರಾಜನ್ ನುಡಿದರು. ಕಾಸರಗೋಡು ರೆವೆನ್ಯೂ ಡಿವಿಷನಲ್ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಮಟ್ಟದ ಪಟ್ಟೆ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾನೂನುಗಳು, ಕಾಯ್ದೆಗಳು ಜನಸಾಮಾನ್ಯರಿಗೆ ಸಹಾಯಕವಾಗುವ ರೀತಿಯಲ್ಲಿ ನೌಕರರು ವ್ಯವಸ್ಥಿತಗೊಳಿಸಬೇಕೆಂದು, ಕಾನೂನುಗಳ ಸಿಕ್ಕುಗಳನ್ನು ತೋರಿಸಿ ಜನರನ್ನು ಸಂಕಷ್ಟಭರಿತರಾಗಿ ಮಾಡಬಾರದೆಂದು ನೌಕರರಿಗೆ ಸಚಿವರು ನಿರ್ದೇಶ ನೀಡಿದರು. ರಾಜ್ಯದ ಒಕ್ಕಲಿಗರ ದೂರುಗಳು ಹಾಗೂ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹಾರಗೊಳಿಸಿದ ರಾಜ್ಯವಾಗಿ ಕೇರಳ …

ಕೇರಳದಲ್ಲಿ ತೃತೀಯ ಬಾರಿ ಎಡರಂಗ ಜಯಭೇರಿ ಬಾರಿಸಲಿದೆ- ಎಂ.ವಿ. ಜಯರಾಜನ್

ಪೈವಳಿಕೆ: ಪೈವಳಿಕೆಯ ಶೆಟ್ಟಿ ಸಹೋದರರ 68ನೇ ಹುತಾತ್ಮ ದಿನಾಚರಣೆಯನ್ನು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿಸಿದರು. ಅವರು ಮಾತನಾಡಿ, ಕೇರಳ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿಗೆ ಸೇರುತ್ತಿದೆ ಮಾತ್ರವಲ್ಲ ಶಿಕ್ಷಣರಂಗ, ಆರೋಗ್ಯರಂಗದಲ್ಲಿ ವಿಶ್ವಕ್ಕೇ ಮಾದರಿಯಾಗುತ್ತಿದೆ. ಪ್ರತೀ ತಿಂಗಳು ವಿವಿಧ ಪಿಂಚಣಿಗಳಿಗಾಗಿ 900 ಕೋಟಿ ರೂ. ವೆಚ್ಚ ಮಾಡುತ್ತಿದೆ. ಆರೋಗ್ಯರಂಗದಲ್ಲಿ ಕೇಂದ್ರ ಸರಕಾರದ 36 ಅಂಗೀಕಾರ ರಾಜ್ಯಕ್ಕೆ ದೊರಕಿದೆ. ವಯನಾಡಿನಲ್ಲಿ ಪ್ರಾರಂಭಿಸಲಾದ ರೈಲು ಸುರಂಗ ಮಾರ್ಗ ಭಾರತದ 3ನೇ ಅತೀ ಉದ್ದದ ಹಾಗೂ ಪ್ರಥಮ ದ್ವಿಮುಖ …

ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಪೆರ್ಲ: ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅಡ್ಕಸ್ಥಳ ಬಳಿಯ ರಾಮಜ್ಜಗುರಿ ನಿವಾಸಿ ಯುವತಿ ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಇಲ್ಲಿನ ರಾಧಾಕೃಷ್ಣರೈ- ನಳಿನಿ ದಂಪತಿ ಪುತ್ರಿ ಮಯೂರಿ (26) ನಿಧನ ಹೊಂದಿದ ಯುವತಿ. ಇವರು ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಹಿಂತಿರುಗಿದ್ದರು. ಶನಿವಾರ ಜ್ವರ ಉಲ್ಬಣಗೊಂಡು ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಸ್‌ನಲ್ಲಿ 120 ಗ್ರಾಂ ಗಾಂಜಾ ಸಾಗಾಟ: ಜಾರ್ಖಂಡ್ ನಿವಾಸಿ ಸೆರೆ

ಮಂಜೇಶ್ವರ: ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿಯಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ ಜಾರ್ಖಂಡ್ ನಿವಾಸಿ ಸೆರೆಯಾಗಿದ್ದಾನೆ. ಲತೇಹಾರ್ ಜಿಲ್ಲೆಯ ಬಿಂಶುಬಂದ್ ರೇವಂತ್ ಕುರ್ದ್ ನಿವಾಸಿ ಆಶಿಶ್ ಕುಮಾರ್ ತಿವಾರಿ (24) ಸೆರೆಯಾದ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ವೇಳೆ ವಾಹನ ತಪಾಸಣಾನಿರತರಾಗಿದ್ದ ಅಬಕಾರಿ ದಳ ಅಧಿಕಾರಿಗಳು ಗಾಂಜಾ ಸಾಗಾಟ ಪತ್ತೆಹಚ್ಚಿದ್ದಾರೆ. ಈತನ ಕೈವಶ 120 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಆರೋಪಿ ಹಾಗೂ ಗಾಂಜಾವನ್ನು ಕುಂಬಳೆ ರೇಂಜ್‌ಗೆ ಹಸ್ತಾಂತರಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಜಿನು ಜೇಮ್ಸ್‌ರ …