ಸನಾತನ ಧರ್ಮದ ಬೆನ್ನೆಲುಬು ಆಗಿ ಮಕ್ಕಳು ಬೆಳೆಯಬೇಕು-ಕೆ.ಪಿ. ಶಶಿಕಲಾ ಟೀಚರ್

ಕಾಸರಗೋಡು: ಮಕ್ಕಳು ಸನಾತನ ಧರ್ಮದ ಬೆನ್ನೆಲುಬಾಗಿ ಬೆಳೆಯಬೇ ಕೆಂದು ಹಿಂದೂ ಐಕ್ಯವೇದಿ ರಾಜ್ಯ ರಕ್ಷಾಧಿಕಾರಿ ಕೆ.ಪಿ. ಶಶಿಕಲಾ ಟೀಚರ್ ಕರೆನೀಡಿದ್ದಾರೆ. ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗವಾಗಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸನಾತನ ಧರ್ಮವನ್ನು ಇತಿಶ್ರೀಗೊಳಿಸುವ ರೀತಿಯ ಯತ್ನಗಳು ಕೇರಳದಲ್ಲಿ ಹಲವು ವರ್ಷಗಳಿಂದಲೇ ಆರಂಭಗೊಂಡಿದೆ. ವಿವಾದಗಳನ್ನು ಸೃಷ್ಟಿಸಿ ಸನಾತನ ಧರ್ಮ ಇಲ್ಲದಾಗಿಸುವ ಯತ್ನ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀ ಗುರುವಾಯೂರು ಕ್ಷೇತ್ರದ ವಿಷಯದಲ್ಲಿ ಈ ರೀತಿಯ …

ಕೇರಳ ಬೆಲೆಯೇರಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ- ಎಂ.ಎಲ್. ಅಶ್ವಿನಿ ಆರೋಪ

ಕುಂಬ್ಡಾಜೆ: ಕೇರಳ ಅಭಿವೃದ್ಧಿಯಲ್ಲಿ ಅಲ್ಲ ಬೆಲೆಯೇರಿಕೆಯಲ್ಲಿ ಒಂದನೇ ಸ್ಥಾನದಲ್ಲಿದೆ ಎಂದು, ೧೦ ವರ್ಷದ ಆಡಳಿತದಲ್ಲಿ ಕೇರಳವನ್ನು ಭಾರೀ ಸಾಲದ ಕೂಪಕ್ಕೆ ತಳ್ಳಿದುದಾಗಿದೆ ಪಿಣರಾಯಿ ವಿಜಯನ್‌ರ ಕೊಡುಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕುಂಬ್ಡಾಜೆ ಪಂಚಾ ಯತ್ ನಾಲ್ಕನೇ ವಾರ್ಡ್ ಸಮ್ಮೇಳನ ಏತಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತೆಂಗಿನ ಮರಗಳು ತುಂಬಿ ತುಳುಕುವ ಕೇರಳದಲ್ಲಿ ತೆಂಗಿನಕಾಯಿಯ ಬೆಲೆ ಜನಸಾಮಾ ನ್ಯರಿಗೆ ಸಹಿಸಿಕೊಳ್ಳುವು ದಕ್ಕಿಂತಲೂ ಹೆಚ್ಚಾಯಿತು. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳೀಯರು ಸಂಕಷ್ಟಕ್ಕೀ …

ಬಿ.ವಿ. ನಾರಾಯಣ ಭಟ್ ಕುಂಚಿನಡ್ಕ ನಿಧನ

ಪೆರ್ಲ: ಕಾಟುಕುಕ್ಕೆ ಸಮೀಪ ಕುಂಚಿನಡ್ಕ ನಿವಾಸಿ ಬಿ.ವಿ. ನಾರಾಯಣ ಭಟ್ (77) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಮ್ಮ ನಿವಾಸದಲ್ಲೇ ನಿರಂತರವಾಗಿ 350ಕ್ಕೂ ಹೆಚ್ಚು ರಾಮಾಯಣ ಪಾರಾಯಣ ಮಾಡಿದ್ದ ಇವರಿಗೆ ಶ್ರೀರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ರಾಮಾಯಣ ಸಿದ್ಧ ಎಂಬ ಬಿರುದು ನೀಡಿ ಗೌರವಿಸಿದ್ದರು. 300ಕ್ಕೂ ಹೆಚ್ಚು ಭಾಗವತ ರಾಮಾಯಣ ಮಾಡಿರುತ್ತಾರೆ. ಅಳಿಕೆ ಶ್ರೀ ಸತ್ಯಸಾಯಿ ವಿಹಾರ ಕಾಲೇಜಿನ ನಿವೃತ್ತ ಉದ್ಯೋಗಿ ಎಣ್ಮಕಜೆ ಹವ್ಯಕ …

ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾನವ ಹಕ್ಕು ಕಾರ್ಯಕರ್ತನಿಂದ ದೂರು

ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಿಲ್ಲ.  ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. …

ನಗರದ ಟ್ರಾಫಿಕ್ ಸಿಗ್ನಲ್ ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೆ ಕ್ರಮ

ಕಾಸರಗೋಡು: ನಗರದ ಹಳೆಯ ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಸಿಗ್ನಲ್ ಆಧುನಿಕ ರೀತಿಯಲ್ಲಿ ಪರಿಷ್ಕರಿಸುವುದಾಗಿ ನಗರಸಭಾ ಚೆಯರ್‌ಮೆನ್ ಅಬ್ಬಾಸ್ ಬೀಗಂ ತಿಳಿಸಿದ್ದಾರೆ. ಎ.ಐ. ಕ್ಯಾಮರಾಗಳ ಸಹಿತ ನೂತನ ತಾಂತ್ರಿಕ ವಿದ್ಯೆಗಳನ್ನು ಬಳಸಿಕೊಂಡು ಆಟೋಮ್ಯಾಟಿಕ್ ಸಿಗ್ನಲ್ ಸಿಸ್ಟಂ ಏರ್ಪಡಿಸಲಾಗುವುದು. ಪ್ರಸ್ತುತ ರಸ್ತೆಯ ಮಧ್ಯದಲ್ಲಿರುವ ಸಿಗ್ನಲ್ ಪೋಸ್ಟ್ ತೆರವುಗೊಳಿಸಲಾಗುವುದು. ಮೈಂಟನೆನ್ಸ್ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದೆ. ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕೆಲಸವನ್ನು ಕೆಲ್ಟ್ರೋನ್ ವಹಿಸಿಕೊಂಡಿದೆ ಎಂದು ಅಬ್ಬಾಸ್ ಬೀಗಂ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಚುನಾವಣೆ: ಮೀಸಲು ವಾರ್ಡ್‌ಗಳನ್ನು ಗುರುತಿಸಲು ಆಪ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲು ಹೊಸ ಆಪ್‌ಗೆ ರೂಪು ನೀಡಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಇನ್‌ಫರ್ಮೇಷನ್ ಕೇರಳ ಮಿಷನ್ ಆಪ್‌ನ್ನು ಈಗಾಗಲೇ ಅಭಿವೃದ್ಧಿ ಪಡಿಸಿದೆ. ಅದರ ಸಹಾಯದೊಂದಿಗೆ ಮೀಸಲಾತಿ ವಾರ್ಡ್‌ಗಳನ್ನು ಗುರುತಿಸಲಾಗುವುದು. ವಾರ್ಡ್‌ಗಳ ಜನಸಂಖ್ಯೆ ಮತ್ತು ಮೀಸಲಾತಿ ವಿಭಾಗದವರ ಜನಸಂಖ್ಯೆಯನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮೀಸಲಾತಿ ವಾರ್ಡ್‌ಗಳನ್ನು ಆರಿಸಲಾಗುವುದು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಂದಿನ ತಿಂಗಳ ಕೊನೆಯ ವಾರದಲ್ಲಿ  ಚೀಟಿ ಎತ್ತುವ ಮೂಲಕ ಮೀಸಲಾತಿ ವಾರ್ಡ್‌ಗಳನ್ನು ನಿರ್ಧರಿಸಲಾಗುವುದು. ಸ್ಥಳೀಯಾಡಳಿತ …

ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನ

ಮಂಜೇಶ್ವರ: ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮಿತಿಯ ವಾರ್ಷಿಕ ಸಮ್ಮೇಳನ ಬಾಯಾರು ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ತಿರುಮಲೇಶ್ವರ ಭಟ್ ಉದ್ಘಾಟಿಸಿದರು. ಸಹಕಾರ ಭಾರತಿ ಪ್ರಾಂತ್ಯ ಅಧ್ಯಕ್ಷ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬಾಯಾರು ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೂವೆತ್ತೋಡಿ, ಜಿಲ್ಲಾ ಸಂಘಟನಾ ಪ್ರಮುಖ್ ಅಶೋಕ್ ಬಾಡೂರು ಮಾತನಾಡಿದರು. ತಾಲೂಕು …

ಬಾಂಬ್ ನಿರ್ಮಾಣ ವೇಳೆ ಉಗ್ರ ಸ್ಫೋಟ ಮಾನವ ಶರೀರ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಬಾಂಬ್ ನಿರ್ಮಾ ಣದ ವೇಳೆ ಉಗ್ರ ಸ್ಫೋಟ ಉಂಟಾಗಿ ಮನೆಯೊಳಗಿದ್ದ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರು ಬಳಿ ನಡೆದಿದೆ. ಕಣ್ಣೂರಿಗೆ ಸಮೀಪದ ಕಣ್ಣಪುರ ಕಿರಳಯಿಲ್‌ನ ಬಾಡಿಗೆ ಮನೆಯೊಂ ದರಲ್ಲಿ ಇಂದು ಮುಂಜಾನೆ ೧.೫೧ರ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟ ದಿಂದ  ಮನೆ ಸಿಡಿದು ಪೂರ್ಣವಾಗಿ ಕುಸಿದುಬಿದ್ದಿದೆ.  ಅದರೊಳಗಿದ್ದ ವ್ಯಕ್ತಿಯ ದೇಹ  ಛಿದ್ರಗೊಂಡು ಅವಯವಗಳು ಎಲ್ಲೆಡೆಗಳಲ್ಲಿ  ಚೆಲ್ಲಾಪಿಲ್ಲಿಯಾಗಿ  ಬಿದ್ದುಕೊಂಡಿದೆ.  ಸ್ಫೋಟ ಅದೆಷ್ಟು ಉಗ್ರವಾಗಿತ್ತೆಂದರೆ ಸಮೀಪದ ಮನೆಗಳ ಗೋಡೆಗಳೂ ಬಿರುಕುಬಿಟ್ಟಿವೆ. ಇದರಲ್ಲಿ ಕೆಲವು ಮನೆಗಳ …

ಸ್ಕೂಟರ್ ಹೆದ್ದಾರಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಕುಂಬಳೆ: ರಸ್ತೆಯ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪಚ್ಚಂಬಳ ದೀನಾರ್ ನಗರದ ಮುಹಮ್ಮದ್ ಎಂಬವರ ಪುತ್ರ ಈಚು ಯಾನೆ ಯೂಸಫ್ (18) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಶಿರಿಯ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿಯಾಗಿದ್ದಾನೆ. ಶಾಲೆಯಲ್ಲಿ ನಿನ್ನೆ ನಡೆದ ಓಣಂ ಕಾರ್ಯಕ್ರಮದ ಬಳಿಕ ಸ್ನೇಹಿತನನ್ನು ಸ್ಕೂಟರ್‌ನಲ್ಲಿ ಮೊಗ್ರಾಲ್‌ನ ಮನೆಗೆ ತಲುಪಿಸಿದ ಯೂಸಫ್ ಪಚ್ಚಂಬಳಕ್ಕೆ ಮರಳುತ್ತಿದ್ದ ವೇಳೆ ರಾತ್ರಿ ೮.೩೦ಕ್ಕೆ …

ಸಮಾಂತರ ಲಾಟರಿ: ಕುಂಬಳೆಯಲ್ಲಿ ಇಬ್ಬರು ಸೆರೆ

ಕುಂಬಳೆ: ಪೇಟೆ ಕೇಂದ್ರೀಕರಿಸಿ  ತತ್ಸಮಾನ ಲಾಟರಿ ನಡೆಸುವ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಅನಂತಪುರದ ಸತೀಶನ್ (75) ನಾರಾಯಣಮಂಗಲದ ರಾಜೇಶ್ (32) ಎಂಬಿವರನ್ನು ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಸೆರೆಹಿಡಿದ ಪೊಲೀಸ್ ತಂಡದಲ್ಲಿ ಎಸ್‌ಐ ಬಾಬು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ ಸುಧೀಶ್ ಸೇರಿದ್ದರು. ಕುಂಬಳೆ ಹಾಗೂ ಪರಿಸರಗಳಲ್ಲಿ ತತ್ಸಮಾನ ಲಾಟರಿ ವ್ಯವಹಾರ ವ್ಯಾಪಕವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಜಿಜೀಶ್‌ರ …