ನಾಮನಿರ್ದೇಶನ ಪತ್ರಿಕೆ ಮಲೆಯಾಳದಲ್ಲಿ : ಕನ್ನಡಿಗ ಅಭ್ಯರ್ಥಿಗಳಿಗೆ ಸಮಸ್ಯೆ
ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಲ್ಲಿಸುವ ನಾಮನಿರ್ದೇಶನ ಪತ್ರಿಕೆಯು ಕೇವಲ ಮಲೆಯಾಳ ಭಾಷೆಯಲ್ಲಿ ಮಾತ್ರವೇ ಮುದ್ರಣಗೊಂಡಿದೆ. ಇದರಿಂದ ಜಿಲ್ಲೆಯ ಕನ್ನಡ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಮಲೆಯಾಳ ಓದಲು, ಬರೆಯಲು ತಿಳಿಯದ ಕನ್ನಡಿಗರಾದ ಅಭ್ಯರ್ಥಿಗಳು ನಾಮನಿರ್ದೇಶನ ಪತ್ರಿಕೆಯನ್ನು ಭರ್ತಿಗೊಳಿಸುವುದು ಹೇಗೆ ಎಂಬ ಆತಂಕ ಎದುರಾದ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ನಾಮನಿರ್ದೇಶನ ಪತ್ರಿಕೆಯಲ್ಲಿ ಹಲವು ಮಾಹಿತಿಗಳನ್ನು ದಾಖಲಿಸಬೇಕಾಗಿದೆ. ಆದರೆ ಮಲೆಯಾಳ ತಿಳಿಯದವರು ಫಾರ್ಮ್ ಭರ್ತಿಗೊಳಿಸುವ ವೇಳೆ ಎಲ್ಲಾದರೂ ಎಡವಟ್ಟಾದರೆ ಕೆಲವೊಮ್ಮೆ ನಾಮಪತ್ರ ತಿರಸ್ಕರಿಸಲ್ಪಡುವ ಸಾಧ್ಯತೆ ಇದೆ. ಅಲ್ಲದೆ ಭವಿಷ್ಯದಲ್ಲಿ …
Read more “ನಾಮನಿರ್ದೇಶನ ಪತ್ರಿಕೆ ಮಲೆಯಾಳದಲ್ಲಿ : ಕನ್ನಡಿಗ ಅಭ್ಯರ್ಥಿಗಳಿಗೆ ಸಮಸ್ಯೆ”