ನಾಮನಿರ್ದೇಶನ ಪತ್ರಿಕೆ ಮಲೆಯಾಳದಲ್ಲಿ : ಕನ್ನಡಿಗ ಅಭ್ಯರ್ಥಿಗಳಿಗೆ ಸಮಸ್ಯೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಲ್ಲಿಸುವ ನಾಮನಿರ್ದೇಶನ ಪತ್ರಿಕೆಯು ಕೇವಲ ಮಲೆಯಾಳ ಭಾಷೆಯಲ್ಲಿ ಮಾತ್ರವೇ ಮುದ್ರಣಗೊಂಡಿದೆ. ಇದರಿಂದ ಜಿಲ್ಲೆಯ ಕನ್ನಡ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಮಲೆಯಾಳ ಓದಲು, ಬರೆಯಲು ತಿಳಿಯದ ಕನ್ನಡಿಗರಾದ ಅಭ್ಯರ್ಥಿಗಳು ನಾಮನಿರ್ದೇಶನ ಪತ್ರಿಕೆಯನ್ನು ಭರ್ತಿಗೊಳಿಸುವುದು ಹೇಗೆ ಎಂಬ ಆತಂಕ ಎದುರಾದ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ನಾಮನಿರ್ದೇಶನ ಪತ್ರಿಕೆಯಲ್ಲಿ ಹಲವು ಮಾಹಿತಿಗಳನ್ನು ದಾಖಲಿಸಬೇಕಾಗಿದೆ. ಆದರೆ ಮಲೆಯಾಳ ತಿಳಿಯದವರು ಫಾರ್ಮ್ ಭರ್ತಿಗೊಳಿಸುವ ವೇಳೆ ಎಲ್ಲಾದರೂ ಎಡವಟ್ಟಾದರೆ ಕೆಲವೊಮ್ಮೆ ನಾಮಪತ್ರ ತಿರಸ್ಕರಿಸಲ್ಪಡುವ ಸಾಧ್ಯತೆ ಇದೆ. ಅಲ್ಲದೆ ಭವಿಷ್ಯದಲ್ಲಿ …

ಟಯರ್ ಪಂಕ್ಚರ್ ಆಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ: ಚಾಲಕ ಪಾರು

ಕಾಸರಗೋಡು: ಕಲ್ಲಿಕೋಟೆ ಭಾಗದಿಂದ ಉಳ್ಳಾಲಕ್ಕೆ ಹೋಗುತ್ತಿದ್ದ ಮೀನು ಹೇರಿದ ಲಾರಿ ಮೊಗ್ರಾಲ್  ಪುತ್ತೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ೮ ಗಂಟೆಗೆ ನಡೆದಿದೆ. ಲಾರಿಮಗುಚಿಬಿದ್ದ ಪರಿಣಾಮ ಅದರಲ್ಲಿದ್ದ ಮೀನು ರಸ್ತೆಯಿಡೀ ಚೆಲ್ಲಾಪಿಲ್ಲಿಯಾಗಿ ಬಿದ್ದವು.  ಲಾರಿಯಲ್ಲಿ ಚಾಲಕ ಮಾತ್ರವೇ ಇದ್ದು ಅವರು ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ  ಪಾರಾಗಿದ್ದಾರೆ. ವಡಗರೆ ನಿವಾಸಿ ವಿಜಿನ್ ಕುಮಾರ್ (35)  ಈ ಅಪಾಯದಿಂದ ಪಾರಾದ ಲಾರಿ ಚಾಲಕ. ಮೀನು ಲಾರಿ ಮಗುಚಿಬಿದ್ದ …

ಎಡಿಎಂ ನವೀನ್‌ಬಾಬು ಸಾವು: ತನಿಖೆ ನಡೆಸಿದ ಕಣ್ಣೂರು ಮಾಜಿ ಎಸಿಪಿ ಸಿಪಿಎಂ ಅಭ್ಯರ್ಥಿ

ಕಣ್ಣೂರು: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಿದ ಮಾಜಿ ಎ.ಸಿ.ಪಿ. ಟಿ.ಕೆ. ರತ್ನಕುಮಾರ್ ಕಣ್ಣೂರಿನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಶ್ರೀಕಂಠಪುರ ನಗರಸಭೆಯ ಕೋಟೂರು ವಾರ್ಡ್‌ನಿಂದ ಇವರನ್ನು ಕಣಕ್ಕಿಳಿಸಲು ಸಿಪಿಎಂ ನಿರ್ಧರಿಸಿದೆ. ಕಣ್ಣೂರು ರೇಂಜ್ ಐ.ಜಿ.ಯವರ ನೇತೃತ್ವದಲ್ಲಿ ಸಿಟಿ ಪೊಲೀಸ್ ಕಮಿಶನರ್ ಅಜಿತ್ ಕುಮಾರ್, ಅಸಿಸ್ಟೆಂಟ್ ಕಮಿಶನರಾಗಿದ್ದ ರತ್ನಕುಮಾರ್ ಎಂಬಿವರ ನೇತೃತ್ವದಲ್ಲಿ ನವೀನ್‌ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಲಾಗಿತ್ತು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಪಿ.ಪಿ. ದಿವ್ಯಾ ಈ …

ಬೃಹತ್ ಪ್ರಮಾಣದ ವಾಶ್, ಮದ್ಯ ವಶ: ಓರ್ವನ ವಿರುದ್ಧ ಕೇಸು ದಾಖಲು

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಿಡಲಾಗಿದ್ದ 260 ಲೀಟರ್ ಹುಳಿರಸ ಮತ್ತು 10 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಾಲೋಂ ಗ್ರಾಮದ ಎಡಕಾನ ನಿವಾಸಿ ಸಿನೋಜ್ ಎಂ.ಬಿ. ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಾಲೋಂ ಎಡಕಾನದಲ್ಲಿ ಈ ಅಬಕಾರಿ ಕಾರ್ಯಾಚರಣೆ ನಡೆದಿದೆ. …

ರಸ್ತೆ ಬದಿ ವಿಶ್ರಾಂತಿ ನಿಲ್ದಾಣ ಯೋಜನೆ: ಮಂಜೇಶ್ವರದ ಸಮಗ್ರ ಅಭಿವೃದ್ಧಿ ಗುರಿ

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಬಹುದಾದ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೩೫ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಿಫ್‌ಬಿ ಸಹಾಯದೊಂದಿಗೆ ಕಾರ್ಯ ಗತಗೊಳಿಸುವ ಈ ಯೋಜನೆಗೆ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.  ಸಂಯೋಜಿತ ಚೆಕ್ ಪೋಸ್ಟ್ ಗಾಗಿ ಮೀಸಲಿಟ್ಟ ಮಂಜೇಶ್ವರದ ಸ್ಥಳದಲ್ಲಿ ವಿಶ್ರಾಂತಿ ನಿಲ್ದಾಣದ ಬೃಹತ್ ಯೋಜನೆ ಜ್ಯಾರಿಗೆ ಬರಲಿದೆ. ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೋಸ್ಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಭೂಮಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಓವರ್‌ಸೀಸ್ …

ನಿವೃತ್ತ ಪೋಸ್ಟ್ ಮಾಸ್ತರ್ ನಿಧನ

ಮೀಂಜ: ನಿವೃತ್ತ ಪೋಸ್ಟ್ ಮಾಸ್ತರ್ ದೇರಂಬಳ ನಿವಾಸಿ ರಾಮಚಂದ್ರ (73) ನಿಧನ ಹೊಂದಿದರು. ಹಿರಿಯ ಕೃಷಿಕರಾಗಿದ್ದರು.  ಮೃತರು ಪತ್ನಿ ವಿಮಲಾ, ಮಕ್ಕಳಾದ  ರೂಪಕಲಾ, ರಾಜೇಶ್, ಹರೀಶ, ಸತೀಶ, ಚರಣ್, ಅಳಿಯ ಹರಿಪ್ರಸಾದ್, ಸಹೋದರ-ಸಹೋದರಿಯರು  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೂರಕ್ಕಳಿ ಕಲಾವಿದ ನಿಧನ

ಹೊಸದುರ್ಗ: ಹಿರಿಯ ಸಿಪಿಐ ನೇತಾರ, ಪೂರಕ್ಕಳಿ ಕಲಾವಿದ ವೆಳ್ಳೂರಿನ ಪಿ. ನಾರಾಯಣನ್ (83) ನಿಧನ ಹೊಂದಿ ದರು. ಪೂರಕ್ಕಳಿ ಕಲಾವಿದ, ಹಾಡುಗಾರ, ತರಬೇತುದಾರ, ಸಂಸ್ಕೃತ ಪಂಡಿತ, ನಾಟಕ ನಟ, ಕೃಷಿಕ, ಲೇಖಕ ಮೊದಲಾದ ರಂಗಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಶಾಲಾ ಯುವಜ ನೋತ್ಸವಗಳಲ್ಲಿ  ಪೂರಕ್ಕಳಿ ಯನ್ನು ಸ್ಪರ್ಧೆಯಾಗಿ ಘೋಷಿಸಿರುವುದು ಇವರ ನೇತೃತ್ವದಲ್ಲಿದ್ದ ಪೂರಕ್ಕಳಿ ಅಕಾಡೆಮಿ ಯಾಗಿತ್ತು. ಕೇರಳ ಜಾನಪದ ಅಕಾಡೆ ಮಿಯ ಪೂರಕ್ಕಳಿಗಿರುವ ಪುರಸ್ಕಾರ  ಮೊದಲ ಬಾರಿಗೆ ಲಭಿಸಿರುವುದು ಇವರಿಗಾಗಿತ್ತು. ಇವರ ಪತ್ನಿ ಟಿ. ನಾರಾಯಣಿ ಈ ಹಿಂದೆ …

ಜಿಲ್ಲಾ ಪಂಚಾಯತ್ ಎಡರಂಗದ ಸೀಟು ಹಂಚಿಕೆ ಪೂರ್ಣ: 10ರಲ್ಲಿ ಸಿಪಿಎಂ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಎಡರಂಗದ ಸೀಟು ಹಂಚಿಕೆ ಕ್ರಮ ಪೂರ್ಣಗೊಂಡಿದೆ ಎಂದು ಎಡರಂಗದ ಕೆ.ಪಿ. ಸತೀಶ್ಚಂದ್ರನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂತೆ ಜಿಲ್ಲಾ ಪಂಚಾಯತ್‌ನ ಹತ್ತು ಡಿವಿಶನ್‌ಗಳಲ್ಲಿ ಸಿಪಿಎಂ, ಮೂರರಲ್ಲಿ ಸಿಪಿಐ, ಐಎಲ್‌ಎಲ್-2, ಕೇರಳ ಕಾಂಗ್ರೆಸ್ (ಎಂ)-1, ಆರ್‌ಜೆಡಿ-1 ಮತ್ತು ಎನ್‌ಸಿಪಿ (ಎಸ್)ಗೆ ಒಂದು ಡಿವಿಷನ್‌ನಲ್ಲಿ ಸ್ಪರ್ಧಿಸಲಿದೆ. ಚೆರುವತ್ತೂರು, ಕಯ್ಯೂರು, ಮಡಿಕೈ, ಕುಟ್ಟಿಕೋಲ್, ಬೇಕಲ, ಚಿಟ್ಟಾರಿಕಲ್, ಪುತ್ತಿಗೆ, ಕುಂಬಳೆ, ಚೆಂಗಳ, ದೇಲಂಪಾಡಿ ಡಿವಿಷನ್‌ನಲ್ಲಿ ಸಿಪಿಎಂ ಸ್ಪರ್ಧಿಸಲಿದೆ. ಬದಿಯಡ್ಕ, ಕುಂಜತ್ತೂರು ಮತ್ತು ಪೆರಿಯ ಡಿವಿಷನ್‌ಗಳನ್ನು ಸಿಪಿಐಗೆ ನೀಡಲಾಗಿದೆ. …

ಸ್ಥಳೀಯಾಡಳಿತ ಸಂಸ್ಥೆಗಳಿಂದ ಸ್ಪರ್ಧಿಸುವ ಮುಸ್ಲಿಂಲೀಗ್ ಅಭ್ಯರ್ಥಿಗಳು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಜಿಲ್ಲೆಯ ಮೊದಲ ಹಂತದ ಮುಸ್ಲಿಂ ಲೀಗ್ ಅಭ್ಯರ್ಥಿಗಳ ಯಾದಿಯನ್ನು ಪಕ್ಷದ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ಘೋಷಿಸಿದೆ.ಕುಂಬಳೆ: ಪಂಚಾಯತ್ನ ವಾರ್ಡ್ 1ರಿಂದ ಕೌಸರ್ ಜಮಾಲ್, 3-ಎ.ಕೆ. ಆರಿಫ್, 4-ಎಂ.ಪಿ. ಖಾಲಿದ್, 6-ನೌಫಿಯಾ ಹುಸೈನ್, 17-ಹಮೀದ್ ಕೊಯಿಪ್ಪಾಡಿ, 18-ಫಾತಿಮತ್ ಇನಾಸ್ ಫವಾಸ್.ಮೀಂಜ: 2-ಸಲೀಂ ಎಂ.ಎ, 4-ಸಿದ್ದಿಕ್ ಕೆ, 7- ಮುಹಮ್ಮದ್ ಶೆರೀಫ್, 8-ಮಿಸ್ರಿಯಾ ಕೆ, 16-ಸಿ.ಎ. ತಾಜುದ್ದೀನ್, 17-ಬೀಫಾತಿಮ.ಮಂಜೇಶ್ವರ: ವಾರ್ಡ್ 2-ಇಲ್ಯಾಸ್, 7-ಅಬ್ದುಲ್ ರಜಾಕ್, 3-ಸಫಾ ಫಾರೂಕ್, ಬಂಗ್ರಮAಜೇಶ್ವರ-ರತ್ನಾಕರನ್, 18-ಕೆಎಂಕೆ ಅಬ್ದುಲ್ ರಹ್ಮಾನ್ ಹಾಜಿ, …

ಪೊಲೀಸ್ ಜೀಪು ಅಪಘಾತ: ತಪ್ಪಿದ ದುರಂತ

ಕಾಸರಗೋಡು: ವಾಹನ ತಪಾಸಣೆ ನಡೆಸಿ ಠಾಣೆಗೆ ಮರಳುತ್ತಿದ್ದ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ರಾಜಪುರಂ ಠಾಣೆಯ ವಾಹನ ನಿನ್ನೆ ರಾತ್ರಿ 9 ಗಂಟೆಗೆ ಮುಂಡೋಟ್ ಸೈಂಟ್ ಫಯಸ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಜೀಪು ಮೋರಿ ಸಂಕಕ್ಕೆ ಢಿಕ್ಕಿ ಹೊಡೆದ ಬಳಿಕ ರೋಡಿಗೆ ಮಗುಚಿ ಬಿದ್ದಿದೆ. ವಾಹನದಲ್ಲಿ ಸಿಐಪಿ ಪ್ರದೀಪ್ ಕುಮಾರ್, ಎಎಸ್‌ಐ ಮೋನ್ಸ್ ಎಂಬಿವರಿದ್ದರು. ಇವರು ಅದೃಷ್ಟವಶಾತ್ ಗಾಯಗಳಿಲ್ಲದೆ ಪಾರಾಗಿದ್ದಾರೆ.