ತಲಪ್ಪಾಡಿ ಬಳಿ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯರಾಶಿ: ಸಂಚಾರ ಸಮಸ್ಯೆ

ಮಂಜೇಶ್ವರ:  ಪಂಚಾಯತ್ ವ್ಯಾಪ್ತಿಯ ತೂಮಿನಾಡು-ತಲಪ್ಪಾಡಿ ಮಧ್ಯೆಯ ಸರ್ವೀಸ್ ರಸ್ತೆ ಬಳಿ  ಅಪಾರ ಪ್ರಮಾಣದ ತ್ಯಾಜ್ಯ ತುಂಬಿಕೊಂಡಿದ್ದು ದುರ್ವಾಸನೆ ಹಾಗೂ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.  ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಪ್ಲಾಸ್ಟಿಕ್, ಆಹಾರ ತ್ಯಾಜ್ಯಗಳು, ಪ್ಯಾಂಪರ್ಸ್ ಸಹಿತ ವಿವಿಧ ತ್ಯಾಜ್ಯಗಳು ಕಂಡುಬರುತ್ತಿದ್ದು, ಫುಟ್ಪಾತ್ ಸಂಪೂರ್ಣ ಹರಡಿಕೊಂ ಡಿದೆ. ತ್ಯಾಜ್ಯ ತೆರವುಗೊಳಿಸಿ ಶುಚೀಕ ರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಡ-ಬಲ ರಂಗಗಳು ಒಂದಾಗುವ ಕಾಲ ಸಮೀಪದಲ್ಲಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಚುನಾವಣಾ ಕಾರ್ಯಾಲಯವನ್ನು ಬಿಜೆಪಿ ಜಿಲ್ಲಾ ಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿ ದರು. ಎಡ-ಬಲ ಒಕ್ಕೂಟಗಳು ಒಂದಾಗುವ ಕಾಲ ಸಮೀಪದಲ್ಲಿದೆ ಎಂದು ಅಶ್ವಿನಿ ನುಡಿದರು. ಬಿಹಾರ ಸಹಿತ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಎಡ ಒಕ್ಕೂಟಗಳು ಇತರ ಪಕ್ಷಗಳೊಂದಿಗೆ ಸೇರಿ ಒಂದಾಗಿ ಸ್ಪರ್ಧಿಸಿದರೂ ಎನ್‌ಡಿಎಯನ್ನು ಸೋ ಲಿಸಲು ಸಾಧ್ಯವಾಗದಿರಲು ಕಾರಣ ನರೇಂದ್ರ ಮೋದಿ ಸರಕಾರ ಜ್ಯಾರಿಗೊಳಿ ಸಿದ ಜನಕ್ಷೇಮ ಯೋಜನೆಗಳು ಮತ್ತು ಅಭಿವೃದ್ಧಿ ಎಂದು ಅವರು ನುಡಿದರು. ಆಡಳಿತ ನಡೆಸುವ …

ಟೋಲ್ ಶುಲ್ಕ ರದ್ದುಪಡಿಸದಿದ್ದರೆ ಖಾಸಗಿ ಬಸ್ ಸಂಚಾರ ಮೊಟಕುಗೊಳಿಸಬೇಕಾಗಿ ಬರಲಿದೆ – ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಕುಂಬಳೆಯ ಸಮೀಪದ ಆರಿಕ್ಕಾಡಿ ಟೋಲ್‌ಗೇಟ್‌ನಲ್ಲಿ ಬಸ್‌ಗಳಿಗೆ ಹೋಗಿಬರಲು 440 ರೂ. ದರದಲ್ಲಿ ಯೂಸರ್ ಫೀ ನೀಡಬೇಕೆಂಬ ಸೂಚನೆ ಲಭಿಸಿದ್ದು, ನಾಲ್ಕು ಟ್ರಿಪ್‌ಗಳಾಗಿ ಸಂಚರಿಸುವ ಒಂದು ಬಸ್‌ಗೆ ದಿನಕ್ಕೆ 1760ರೂ. ನೀಡಬೇಕಾಗಿ ಬರಲಿದೆ ಎಂದು ಕಾಸರಗೋಡು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಿಳಿಸಿದೆ. ಸಾಮಾನ್ಯ ಬಸ್‌ಗಳಿಗೆ ದಿನವೊಂದಕ್ಕೆ 1000- 1500 ರೂ. ಮಾತ್ರವೇ ಉಳಿತಾಯವಾಗುತ್ತಿದ್ದು, ಅದರಲ್ಲಿ 1700 ಟೋಲ್ ನೀಡಬೇಕಾಗಿ ಬಂದರೆ ಮತ್ತೆ ಸರ್ವೀಸ್ ನಡೆಸಬೇಕಾದ ಅಗತ್ಯವಿಲ್ಲವೆಂದು ಈ ಹಿನ್ನೆಲೆಯಲ್ಲಿ ಸಂಚಾರ ನಿಲುಗಡೆಗೊಳಿಸಬೇಕಾದ ಸ್ಥಿತಿ ಉಂಟಾಗಲಿದೆ …

ಮೂಸೋಡಿ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಬೀಳುವ ಸ್ಥಿತಿಯಲ್ಲಿ ಮರದ ರೆಂಬೆಗಳು: ಸ್ಥಳೀಯರಲ್ಲಿ ಭೀತಿ

ಉಪ್ಪಳ: ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳು ಯಾವುದೇ ಕ್ಷಣ ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮೂಸೋಡಿ ರಸ್ತೆಯಲ್ಲಿ ಅಪಾಯಕಾರಿ ಮರಗಳಿಂದ ಆತಂಕ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ಬೃಹತ್ ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿ ಮೇಲೆ ಭಾಗಿಕೊಂಡಿವೆ. ಪ್ರಮುಖ ವಿದ್ಯುತ್ ತಂತಿಗಳು ಮನೆಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮರಗಳ ರೆಂಬೆಗಳು ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಮುರಿದು ಬಿದ್ದರೆ …

ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕುಂಬಳೆ: ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನದಂಗವಾಗಿ ನಡೆಯುವ ಕಾಸರಗೋಡು ಜಿಲ್ಲಾ ಸಮ್ಮೇಳನ ಈ ತಿಂಗಳ ೧೭ರಂದು ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂಗವಾಗಿ ಮೆರವಣಿಗೆ, ಪ್ರತಿನಿಧಿ ಸಮ್ಮೇಳನ, ವಯರಿಂಗ್, ಪ್ಲಂಬಿಂಗ್ ಉತ್ಪನ್ನ ಪ್ರದರ್ಶನ, ಸಾಂತ್ವನ ಸಹಾಯ ವಿತರಣೆ ನಡೆಯಲಿದೆ. ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸುವರು.   ಜಿಲ್ಲಾಧ್ಯಕ್ಷ ರಾಜು ಕಪ್ಪಣಕ್ಕಾಲ್ ಅಧ್ಯಕ್ಷತೆ ವಹಿಸುವರು. ರಾಜ್ಯ, ಜಿಲ್ಲಾ ಮುಖಂಡರು ಭಾಗವಹಿಸುವರು. ರಾಜ್ಯ ಅಸಿಸ್ಟೆಂಟ್ …

ಚೇವಾರು, ಕುಳೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಪೈವಳಿಕೆ: ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರಗಿತು. ಪಿಟಿಎ ಅಧ್ಯಕ್ಷ ಅಬ್ದುಲ್ ಅಸೀಸ್ ಚೇವಾರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ರಾಜೇಶ್ವರಿ ಶುಭ ಕೋರಿದರು. ಉಪಜಿಲ್ಲಾ ಮಟ್ಟದ ವಿದ್ಯಾರಂಗ, ವಿಜ್ಞಾನೋತ್ಸವ, ಕ್ರೀಡಾಕೂಟ , ಕಲೋತ್ಸವಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು. ರವಿಕುಮಾರ್ ಸ್ವಾಗತಿಸಿ, ಪ್ರಸಾದ್ ರೈ ವಂದಿಸಿದರು. ರಾಜೇಶ್ವರಿ ಟೀಚರ್ ಸಿಹಿ ಹಂಚಿಸಿದರು. ಪ್ರಮೀಳಾ ಡಿ.ಎನ್., ಗೀತಾಂಜಲಿ, ಸಾತ್ವಿಕ್ ಎನ್., ಹಾರೀಸ್ ಟಿ., ಫಾಯಸ್, …

ಬಿಹಾರದಲ್ಲಿ ಎನ್.ಡಿ.ಎ ಭರ್ಜರಿ ಜಯಭೇರಿಯತ್ತ: ಮಹಾ ಪತನಗೊಂಡ ಮಹಾಘಟ್ ಬಂಧನ್

ಪಾಟ್ನಾ:  ಬಿಹಾರ ರಾಜ್ಯ  ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಜಯಭೇರಿಯತ್ತ ಸಾಗತೊಡಗಿದೆ. ಆ ಮೂಲಕ ತನ್ನ ಆಡಳಿತವನ್ನು ಮತ್ತೆ ನಿರಾತಂಕವಾಗಿ  ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.  ಒಟ್ಟು 243 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 122 ಸದಸ್ಯರ ಬಲ ಬೇಕಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಅಧಿಕಾರವನ್ನು ಪ್ರಚಂಡ ಬಹುಮತದೊಂದಿಗೆ …

ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಕೆಎಸ್‌ಇಬಿ ಗುತ್ತಿಗೆ ನೌಕರ ದಾರುಣ ಮೃತ್ಯು: ನಾಡಿನಲ್ಲಿ ಶೋಕಸಾಗರ

ಮುಳ್ಳೇರಿಯ: ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಕೆಎಸ್‌ಇಬಿಯ ಗುತ್ತಿಗೆ ನೌಕರ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕೆಎಸ್‌ಇಬಿ ಮುಳ್ಳೇರಿಯ ಇಲೆಕ್ಟ್ರಿಕಲ್ ಸೆಕ್ಷನ್ ನೌಕರನಾದ ಕುಂಟಾರು ಹುಣಸೆಯಡ್ಕ ನಿವಾಸಿ ಎಚ್. ಯತೀಶ (41) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ಕಾರಡ್ಕ ಬಳಿಯ ಮೂಡಾಂಕುಳ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ಸ್ಥಾಪಿಸಿದ ಬಳಿಕ ಮತ್ತೊಂದು ಕಂಬದಿಂದ ತಂತಿ ಎಳೆದು ಕಟ್ಟುತ್ತಿದ್ದಾಗ ದುರ್ಘಟನೆ ಉಂಟಾಗಿದೆ. ಈ ವೇಳೆ ಯತೀಶ ಕಂಬದ …

ವಿವಾಹಿತ ಯುವತಿ ಬಸ್ ಕಂಡಕ್ಟರ್‌ನೊಂದಿಗೆ ಪರಾರಿ

ಕಣ್ಣೂರು: ವಿವಾಹಿತ ಯುವತಿ  ಬಸ್ ಕಂಡಕ್ಟರ್‌ನೊಂದಿಗೆ ಪರಾರಿಯಾದ ಬಗ್ಗೆ ದೂರಲಾಗಿದೆ. ಕಣ್ಣೂರು ಬಳಿಯ ಕಣ್ಣವಂ ನೆಡುಂಪೊಯಿಲ್ ಪುಳಕುಟ್ಟಿ ನಿವಾಸಿಯಾದ ೨೪ರ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಕಳೆದ ಬುಧವಾರ ಮಧ್ಯಾಹ್ನ 1.30ರ ವೇಳೆ ಈಕೆ ಮನೆಯಿಂದ ಹೊರಗೆ ಹೋಗಿದ್ದಳೆನ್ನಲಾಗಿದೆ. ಅನಂತರ ಮನೆಗೆ ಮರಳಿ ತಲುಪಿಲ್ಲವೆಂದು ತಿಳಿಸಿ  ಪುಳತ್ತುಂಕರ ನಿವಾಸಿಯಾದ ಪತಿ ಕಣ್ಣವಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆ ವೇಳೆ ಯುವತಿ ಖಾಸಗಿ ಬಸ್‌ನ ಕಂಡಕ್ಟರ್‌ನೊಂದಿಗೆ ಪರಾರಿಯಾಗಿರು ವುದಾಗಿ ತಿಳಿದು ಬಂದಿದೆ. 

ಕರಾಟೆ ಕಲಿಯಲು ಬಂದ ಬಾಲಕಿಗೆ ಕಿರುಕುಳ ಯತ್ನ: ತರಬೇತುದಾರನ ವಿರುದ್ಧ ಕೇಸು

ಹೊಸದುರ್ಗ: ಕರಾಟೆ ಕಲಿಯಲು ಬಂದ 14ರ ಹರೆಯದ ಬಾಲಕಿಗೆ ತರಬೇತುದಾರ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ತರಬೇತುದಾರನಾದ ಮುರಾಳ ಎಂಬಲ್ಲಿನ ಟಿ.ಕೆ. ಪ್ರಸನ್ನ ಎಂಬಾತನ ವಿರುದ್ಧ ತಳಿಪರಂಬ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯಾದ ಬಾಲಕಿಗೆ ಈತ ಕಳೆದ ಜನವರಿ ತಿಂಗಳಲ್ಲಿ ವಳ್ಳಕ್ಕೀಲ್ ಪಾರ್ಕ್‌ನಲ್ಲಿ  ಕಿರುಕುಳ ನೀಡಲೆತ್ನಿಸಿ ರುವುದಾಗಿ ಆರೋಪಿಸಲಾಗಿದೆ.