ಕರ್ನಾಟಕದ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಂದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ 13 ವರ್ಷಗಳ ಬಳಿಕ ಸೆರೆ
ಕಾಸರಗೋಡು: ಕರ್ನಾಟಕ ನಿವಾಸಿಯಾದ ಹತ್ತರ ಹರೆಯ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು 13 ವರ್ಷಗಳ ಬಳಿಕ ನಂತರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಭಾಗಪ್ಪ ಜುವಲ್ ಪಾಳಿಯ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕರ್ನಾಟಕದಿಂದ ಹೂ ಮಾರಾಟಕ್ಕಾಗಿ ಹೊಸದುರ್ಗಕ್ಕೆ ಬಂದು ಹೊಸದುರ್ಗದ ವಸತಿಗೃಹವೊಂದರಲ್ಲಿ ವಾಸಿಸುತ್ತಿದ್ದ ಕುಟುಂಬದ ಹತ್ತು ವರ್ಷ ಪ್ರಾಯದ ಸುನಿಲ್ ಎಂಬ ಹೆಸರಿನ ಬಾಲಕನನ್ನು ಆ ವಸತಿ …