ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಉದ್ಘಾಟನೆ

ಸೂರಂಬೈಲು : ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ಸದಸ್ಯೆ ಅನಿತಾಶ್ರೀ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಜಯಂತಿ, ಕುಂಬಳೆ ಎಚ್ ಎಂ ಫಾರಂ ಕಾರ್ಯದರ್ಶಿ ಸುರೇಂದ್ರನ್ ಎಂ ವಿ, ಪಿಟಿಎ ಅಧ್ಯಕ್ಷ ಮೊಯಿದು ಸೀತಾಂಗೋಳಿ, ಎಂಪಿಟಿಎ ಅಧ್ಯಕ್ಷೆ ರಾಜಿ ರಾಜೇಶ್, ಪಿಟಿಎ ಉಪಾಧ್ಯಕ್ಷ ರಮೇಶ್ …

ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಜೀವಂತ

ಕುಂಬಳೆ: ಚಿಕಿತ್ಸೆಗಾಗಿ  ದಾಖ ಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂ ತವಾಗಿರುವುದು ತಿಳಿದು ಬಂದಿದೆ. ಇದರಿಂದ ವ್ಯಕ್ತಿಯನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಇದೀಗ  ಚಿಕಿತ್ಸೆ ಯಲ್ಲಿದ್ದಾರೆ. ಕುಂಬಳೆ ಕಂಚಿಕಟ್ಟೆ ರಾಮ್‌ನಗರ ನಿವಾಸಿ ರಾಮ್ ನಾಥ್ ಗಟ್ಟಿ (70) ಎಂಬವರಿಗೆ ಒಂದು ವಾರ ಹಿಂದೆ ೨೪ ಗಂಟೆ ಕಾಲ ವಿದ್ಯುತ್ ಮೊಟಕುಗೊಂಡ ಸಂದರ್ಭದಲ್ಲಿ  ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಇವರನ್ನು …

ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಶಾಕ್ ತಗಲಿ  ಮೃತ್ಯು

ಕುಂಬಳೆ: ದೀಪಾವಳಿ ಆಚರಣೆಯಂಗವಾಗಿ ಅಲಂಕಾರ ದೀಪ ಅಳವಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪುತ್ತಿಗೆ ಆಚಾರಿಮೂಲೆಯ ನಾಗೇಶ್ ಆಚಾರ್ಯ ಎಂಬವರ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ೯.೩೦ರ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಮನೆಯಲ್ಲಿ ವಿದ್ಯುತ್ ದೀಪಗಳನ್ನು ನೇತಾಡಿಸುತ್ತಿದ್ದಾಗ ರಾಜೇಶ್‌ಗೆ ಶಾಕ್ ತಗಲಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು   ಮರಣೋತ್ತರ ಪರೀಕ್ಷೆಗಾಗಿ …

ಮನೆಗೆ ತಲುಪಿ ಬಾಲಕಿಯನ್ನು ಬಿಗಿದಪ್ಪಿಕೊಂಡ ವ್ಯಕ್ತಿ ಪೋಕ್ಸೋ ಪ್ರಕಾರ ಬಂಧನ

ಕಾಸರಗೋಡು: ಮಸೀದಿಯ ಹಣ ಸಂಗ್ರಹವೆಂದು ತಿಳಿಸಿ ಮನೆಗೆ ತಲುಪಿ 9ರ ಹರೆಯದ ಬಾಲಕಿಯನ್ನು ಬಿಗಿದಪ್ಪಿಕೊಂಡ  ವ್ಯಕ್ತಿಯನ್ನು ನಾಗರಿಕರು  ಸೆರೆಹಿಡಿದು ಶಾಸ್ತಿ ಮಾಡಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೊಡಕ್ಕಾಡ್ ವೆಳ್ಳಚ್ಚೇರಿ ಹೌಸ್‌ನ ಖಾಲಿದ್ ಮುಸ್ಲಿಯಾರ್ (59) ಎಂಬಾತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈತನನ್ನು ನೀಲೇಶ್ವರ ಎಸ್‌ಐ ಜಿಷ್ಣು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಕಳೆದ ದಿನ ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಸೀದಿಯ ಹಣ ಸಂಗ್ರಹಕ್ಕೆಂದು ತಿಳಿಸಿ ಖಾಲಿದ್ ಮುಸ್ಲಿಯಾರ್ ಒಂದು ಮನೆಗೆ ತಲುಪಿದ್ದನು. ಈಸಂದರ್ಭದಲ್ಲಿ ತಾಯಿ ಮನೆಯಲ್ಲಿಲ್ಲವೆಂದೂ, …

ಶಬರಿಮಲೆ: ಹೈಕೋರ್ಟ್‌ಗೆ ಮಧ್ಯಂತರ ತನಿಖಾ ವರದಿ ಸಲ್ಲಿಸಿದ ಎಸ್‌ಐಟಿ

ಕೊಚ್ಚಿ: ಶಬರಿಮಲೆ ದೇಗುಲದಲ್ಲಿ ಚಿನ್ನ ನಾಪತ್ತೆಯಾಗಿರುವುದು ಕಳವೇ ಆಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಹೈಕೋರ್ಟ್‌ಗೆ ಸಲ್ಲಿಸಿದ ತನಿಖೆಯ ಪ್ರಗತಿಯ ಕುರಿತಾದ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ ಪ್ರಕರಣದ ತನಿಖೆಯ ಪ್ರಗತಿಯ ಕುರಿತಾದ  ವರದಿಯನ್ನು ಹಂತಹಂತವಾಗಿ ಸಲ್ಲಿಸುವಂತೆ ಹೈಕೋ ರ್ಟ್ ತನಿಖಾ ತಂಡಕ್ಕೆ ನಿರ್ದೇಶ ನೀಡಿತ್ತು. ಅದರಂತೆ ಈತನಕ ನಡೆಸ ಲಾದ ತನಿಖೆಯ  ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ಗೆ ಸಲ್ಲಿಸಿದೆ. ಹೈಕೋರ್ಟ್‌ನ ಮುಚ್ಚಿದ ಕೊಠಡಿಯಲ್ಲಿ ಸಂಬಂಧಪಟ್ಟ ನ್ಯಾಯ ಮೂರ್ತಿಗಳು …

ಲೇಡಿಸ್ ಹಾಸ್ಟೆಲ್‌ಗೆ ನುಗ್ಗಿದ ಯುವಕ ಸೆರೆ

ಕಣ್ಣೂರು: ಲೇಡಿಸ್ ಹಾಸ್ಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ಯುವಕನನ್ನು ಸೆಕ್ಯೂರಿಟಿ ನೌಕರರು ಕೈಯಾರೆ ಸೆರೆಹಿಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ತಾವಕ್ಕರದಲ್ಲಿ ಕಾರ್ಯಾಚರಿಸುವ ಮಹಿಳಾ ಹಾಸ್ಟೆಲ್‌ಗೆ ಯುವಕ ಅತಿಕ್ರಮಿಸಿ ನುಗ್ಗಿದ್ದನು. ಕಣ್ಣೂರು ನಗರ ವ್ಯಾಪ್ತಿಯಲ್ಲಿ ವಾಸಿಸುವ ಯುವಕ ಹಾಸ್ಟೆಲ್‌ಗೆ ನುಗ್ಗಿದ್ದು, ಈ ವಿಷಯ ತಿಳಿದು ಹಾಸ್ಟೆಲ್ ನೌಕರರು  ಆತನನ್ನು ಸೆರೆ ಹಿಡಿದಿದ್ದಾರೆ.ಜೀಪೊಂದರಲ್ಲಿ ತಲುಪಿದ ವ್ಯಕ್ತಿ ಹಾಸ್ಟೆಲ್ ಸಮೀಪ ನಿಲ್ಲಿಸಿ ಆವರಣಗೋಡೆ ದಾಟಿ ಹಾಸ್ಟೆಲ್‌ನೊ ಳಗೆ ನುಗ್ಗಿದ್ದಾನೆನ್ನಲಾಗಿದೆ. ಹಾಸ್ಟೆಲ್‌ನಲ್ಲಿದ್ದ  ಕೆಲವು ಹೆಣ್ಮಕ್ಕಳು ಈತನನ್ನು ಕಂಡು ವಾರ್ಡನ್‌ಗೆ …

ಅನಧಿಕೃತ ಪಟಾಕಿ ವಶ

ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಾರಾ ಟಕ್ಕಿರಿಸಿದ್ದ ಪಟಾಕಿಗಳನ್ನು ಮಂ ಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಮಂಜೇಶ್ವರ ಮಿತ್ತಕನಿಲದ ಭರತ್ (36) ವಿರುದ್ಧ ಕೇಸು ದಾಖಲಿಸ ಲಾಗಿದೆ. ನಿನ್ನೆ ಸಂಜೆ ಹೊಸಂ ಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಮಾರಾಟ ನಡೆಯುತ್ತಿರು ವುದರ ಬಗ್ಗೆ ಮಾಹಿತಿ ಲಭಿಸಿದ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಚೈನೀಸ್ ಪಟಾಕಿ ಸೇರಿ 37 ವಿಧದ ಪಟಾಕಿ ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೋಳಿ ವ್ಯಾಪಾರಿಯ ಸರ ಅಪಹರಣ: ಕಾಪಾ ಕಾಯ್ದೆ ಉಲ್ಲಂಘಿಸಿದ ಆರೋಪಿ ವಿರುದ್ಧ ಕೇಸು

ಕುಂಬಳೆ: ಕಾಪಾ ಕಾಯ್ದೆ ಉಲ್ಲಂಘಿಸಿ ಜಿಲ್ಲೆಗೆ ಅನಧಿಕೃತವಾಗಿ ತಲುಪಿ  ಸರ ಅಪಹರಣ ನಡೆಸಿದ ವ್ಯಕ್ತಿ ವಿರುದ್ಧ  ಕುಂಬಳೆ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬಂದ್ಯೋಡು ಅಡ್ಕ ವೀರನಗರದ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29) ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ.   ಬೇರೆ ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಲಾಗಿತ್ತು. ಇದರಂತೆ 2025 ಜನವರಿ 31 ರಿಂದ  ಒಂದು ವರ್ಷ ಕಾಲ ಜಿಲ್ಲೆಗೆ ಪ್ರವೇಶಿಸುವುದಕ್ಕೆ ಈತನಿಗೆ  ನಿಷೇಧ ಹೇರಲಾಗಿತ್ತು. ಅದನ್ನು …

ತೋಟದ ಕಟ್ಟಡದಲ್ಲಿ ದಾಸ್ತಾನು ಇರಿಸಿದ್ದ 2 ಟನ್ ರಬ್ಬರ್ ಹಾಲು ಕಳವು

ಪೈವಳಿಕೆ: ತೋಟದ ಹಿತ್ತಿಲ ಕಟ್ಟಡದಲ್ಲಿ ದಾಸ್ತಾನಿರಿಸಿದ್ದ ಎರಡು ಟನ್ ರಬ್ಬರ್ ಹಾಲು ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಬಾಯಿಕಟ್ಟೆ ಪೆರಿಯಪ್ಪಾಡಿ ಯಲ್ಲಿ ಶಿಹಾಬ್ ಎಂಬವರು ಗೇಣಿ ರೂಪದಲ್ಲಿ ಪಡೆದು ನಡೆಸುತ್ತಿರುವ ತೋಟದಲ್ಲಿ ದಾಸ್ತಾನು ಇರಿಸಿದ್ದ ಮಾಲನ್ನು ಈ ರೀತಿ ಕಳವುಗೈಯ್ಯಲಾಗಿದೆ. ಈ ತೋಟ ನಡೆಸುತ್ತಿರುವ ಶಿಹಾಬ್ ಅಕ್ಟೋಬರ್ 12ರಂದು ಸಂಜೆ ತಮ್ಮ ಊರಿಗೆ ಹೋಗಿದ್ದರು. ಅ. ೧೮ರಂದು ಅವರು ಹಿಂತಿರುಗಿ ಬಂದಾಗಲಷ್ಟೇ ಕಳವು ನಡೆದ ವಿಷಯ ಅವರಗಮನಕ್ಕೆ ಬಂದಿದೆ. ತೋಟದ ಗೇಟು ಮತ್ತು ಕಟ್ಟಡದ …

ಮರ ಕಡಿಯುವ ವೇಳೆ ಬಿದ್ದು ಕಾರ್ಮಿಕ ಸಾವು

ಕಾಸರಗೋಡು: ರಬ್ಬರ್ ಮರ ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮರ ಕಡಿಯುವ ಕಾರ್ಮಿಕ ವೆಳ್ಳರಿಕುಂಡು ನಾಟುಕ್ಕಲ್ಲಿನ ಪುಲಿಕೋಡನ್ ವಿಜಯನ್ (56) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ಅಲ್ಲೇ ಪಕ್ಕದ ರಬ್ಬರ್ ಮರದ ರೆಂಬೆಗಳನ್ನು ಕಡಿಯುತ್ತಿದ್ದ ವೇಳೆ  ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ದಿವಂಗತರಾದ ಕಾಮಲತ್ ಕೃಷ್ಣನ್-ಕಮ್ಮಾಡತ್ತ್ ದಂಪತಿ ಪುತ್ರನಾಗಿರುವ ಮೃತರು ಪತ್ನಿ …