ಕ್ಷೇತ್ರ ಅಂಗಳ ಗುಡಿಸುತ್ತಿದ್ದ ಗೃಹಿಣಿ ಮರದ ರೆಂಬೆ ಬಿದ್ದು ಸಾವು

ಕಲ್ಲಿಕೋಟೆ: ಕ್ಷೇತ್ರ ಅಂಗಳ ಗುಡಿಸುತ್ತಿದ್ದಾಗ ಮರದ ರೆಂಬೆ ಮುರಿದು ತಲೆಗೆ ಬಿದ್ದು ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ಕಲ್ಲಿಕೋಟೆ ಪನ್ನಿಯಂಕರ ನಿವಾಸಿ ಶಾಂತ ಎಂಬವರು ಮೃತ ದುರ್ದೈವಿ. ಮಾಯಂಪಳ್ಳಿ ಶ್ರೀದೇವಿ ಕ್ಷೇತ್ರ ಸಮೀಪ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಶಾಂತರನ್ನು ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.

ಮೀನು ಹಿಡಿಯುತ್ತಿದ್ದ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ

ಕಾಸರಗೋಡು: ಮೀನು ಹಿಡಿಯುತ್ತಿದ್ದ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಪತ್ತೆಯಾಗಿದೆ. ತೃಕ್ಕರಿಪುರ ಸಮೀಪದ ವಲಿಯಪರಂಬ ಸೇತುವೆ ಬಳಿ ನಿವಾಸಿ ಎನ್.ವಿ. ತಂಬಾನ್ (63) ನಾಪತ್ತೆಯಾದ ವ್ಯಕ್ತಿ. ಇವರು ಕಳೆದ ಭಾನುವಾರ ಬೆಳಿಗ್ಗೆ ವಲಿಯಪರಂಬ ಸೇತುವೆ ಬಳಿ ಹೊಳೆಯಿಂದ  ಮೀನು ಹಿಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ  ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದರು.   ಊರವರು, ಅಗ್ನಿಶಾಮಕದಳ ವ್ಯಾಪಕ ಶೋಧ ನಡೆಸಿದ್ದು ಈ ಮಧ್ಯೆ  ನಿನ್ನೆ ಅಲ್ಲೇ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ. ಚಂದೇರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು …

ಪಂಚಾಯತ್ ಚುನಾವಣೆ: ಕುಂಬಳೆಯಲ್ಲಿ ಲೀಗ್‌ಗೆ ಬಹುಮತ ಲಭಿಸಿದರೆ ಅಧ್ಯಕ್ಷ ಯಾರು? ಚರ್ಚೆ ಬಿರುಸು

ಕುಂಬಳೆ: ರಾಜ್ಯದಲ್ಲಿ ಸ್ಥಳೀಯಾ ಡಳಿತ ಚುನಾವಣೆ ಶೀಘ್ರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ  ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಕೆಲವು ಪಂಚಾಯತ್‌ಗಳಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಭಿಸಿದರೆ  ಅಧ್ಯಕ್ಷರು ಯಾರಾಗಿರಬಹುದು ಎಂಬ ಲೆಕ್ಕಾಚಾರ ದಲ್ಲೂ ನೇತಾರರು ತೊಡಗಿಕೊಂಡಿ ದ್ದಾರೆ. ಅದೇ ರೀತಿ ಕುಂಬಳೆ ಪಂಚಾ ಯತ್‌ನಲ್ಲೂ ಮುಸ್ಲಿಂ ಲೀಗ್‌ಗೆ, ಯುಡಿಎಫ್‌ಗೆ ಬಹುಮತ ಲಭಿಸಿದರೆ  ಪಂಚಾಯತ್ ಅಧ್ಯಕ್ಷ ಯಾರಾಗಿರ ಬಹುದು  ಎಂದು ಪರಿಶೀಲಿಸುವ ಮೊದಲೇ ಕಾರ್ಯಕರ್ತರು ಈ ಬಗ್ಗೆ  ಪ್ರಶ್ನೆಗಳನ್ನು ಮುಂದಿಡತೊಡಗಿದ್ದಾರೆ. ಎ.ಕೆ ಆರಿಫ್ …

ಆರಿಕ್ಕಾಡಿ ಟೋಲ್ ಬೂತ್‌ನಲ್ಲಿ ವಾಹನ ನಿಯಂತ್ರಣ, ಹಂಪ್ ನಿರ್ಮಾಣ: ನಾಗರಿಕರಿಂದ ಪ್ರತಿಭಟನೆ

ಕುಂಬಳೆ: ಆರಿಕ್ಕಾಡಿ ಟೋಲ್ ಬೂತ್ ನಿರ್ಮಾಣದ ಹೆಸರಲ್ಲಿ ರಸ್ತೆಗೆ ತಡೆಯೊಡ್ಡಿ ಟೋಲ್ ಬೂತ್‌ನ ಎರಡೂ ಭಾಗದಲ್ಲಿ ಹಂಪ್‌ಗಳನ್ನು ಸ್ಥಾಪಿಸಿದ್ದು, ಅದರಿಂದ ಆಂಬುಲೆನ್ಸ್ ಸಹಿತ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ರುವುದರಿಂದ ಕ್ರಿಯಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ನಾಗರಿಕರು ರಸ್ತೆ ತಡೆಯಲಿರುವ ಕಾಮಗಾರಿಗೆ ತಡೆಯೊಡ್ಡಿದ್ದಾರೆ.  ವಾಹನ ಸಂಚಾರಕ್ಕೆ ತಡೆಯೊಡ್ಡಲು ಇರಿಸಿದ್ದ ಅಡಚಣೆಗಳನ್ನು ನಾಗರಿಕರು ತೆರವು ಗೊಳಿಸಿದ್ದಾರೆ. ಈ ವೇಳೆ ಗುತ್ತಿಗೆ ಕಂಪೆನಿ ನೌಕರರು ಹಾಗೂ ಚಳವಳಿಗಾರರ ಮಧ್ಯೆ ವಾಗ್ವಾದ ನಡೆಯಿತು. ವಿಷಯ ತಿಳಿದು ತಲುಪಿದ ಪೊಲೀಸರು ಎರಡೂ ತಂಡಗಳನ್ನು …

ಹಿರಿಯ ಯಕ್ಷಗಾನ ಕಲಾವಿದ ನಿಧನ

ಉಪ್ಪಳ: ಜೋಡುಕಲ್ಲು ಕೊರತಿ ಮೂಲೆ ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ ರಾಮ ಜೋಗಿ (75) ನಿಧನ ಹೊಂದಿದರು. ಮೃತರು ಪತ್ನಿ ವೇದಾ ವತಿ, ಮಕ್ಕಳಾದ ಸತ್ಯಾವತಿ, ಶ್ಯಾಮಲ, ಯಶೋದ, ಸೋಮನಾಥ, ಅಳಿಯಂ ದಿರಾದ ಮೋಹನ, ರವಿ, ವಿನಯ, ಸೊಸೆ ಸುಭಾಷಿಣಿ, ಸಹೋದರ ಸಹೋದರಿಯ ರಾದ ಅನಂತ, ಜಯಂತ, ಸುಂದರಿ, ಕಮಲ, ಲಕ್ಷ್ಮೀ, ದೇವಕಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕ್ಷೇಮ ಪಿಂಚಣಿ 1800 ರೂ.ಗೇರಿಸಲು  ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಕ್ಷೇಮಪಿಂಚಣಿ ಹೆಚ್ಚಿಸಲು ಚಿಂತಿಸಲಾಗಿದೆ. ೨೦೦ ರೂ. ಹೆಚ್ಚಿಸಲಿರುವ ನಿರ್ದೇಶ ವಿತ್ತಖಾತೆಯ ಪರಿಗಣನೆಯಲ್ಲಿದೆ. 1800 ರೂ.ಗೇರಿಸಲು ಈಗ ಆಲೋಚಿಸಲಾ ಗುತ್ತಿದೆ. ಸ್ಥಳೀಯಾಡಳಿತ ಚುನಾವಣೆಯ ಮುಂಚಿತವಾಗಿ ಈ ತೀರ್ಮಾನ ಉಂಟಾಗಬಹುದೆಂದು ಮಾಹಿತಿಯಿದೆ. ಪ್ರಥಮ ಪಿಣರಾಯಿ ವಿಜಯನ್ ಸರಕಾರದ ಕೊನೆಯ ಹಂತದಲ್ಲಿ 2021ರಲ್ಲಿ  ಅಂತಿಮವಾಗಿ ಪಿಂಚಣಿ ಹೆಚ್ಚಿಸಿ 1600 ರೂ. ಮಾಡಲಾಗಿತ್ತು. ಪಿಂಚಣಿ 2500 ರೂ.ವನ್ನಾಗಿ ಮಾಡುವುದಾಗಿ ಎಡರಂಗ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ 1800 ರೂ. ಎಂಬ ಘೋಷಣೆ ಕೂಡಲೇ ಉಂಟಾಗಲಿದೆ. ರಾಜ್ಯ ತೀವ್ರ ಆರ್ಥಿಕ ಸಂದಿಗ್ಧತೆಯ …

ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರಿನಲ್ಲಿ ಕಾರ್ಯಾರಂಭ

ಮಂಗಳೂರು: ವಿಶ್ವಾಸ ಹಾಗೂ ಪರಂಪರೆಯೊಂದಿಗೆ ಜನರ ಹೃದಯದಲ್ಲಿ ಸ್ಥಾನ ಗಳಿಸಿದ ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರು ಬೆಂದೂರ್‌ವೆಲ್‌ನಲ್ಲಿ ಕಾರ್ಯಾರಂಭ ಗೊಂಡಿದೆ. ನೂತನ ಜ್ಯುವೆಲ್ಲರಿ ಶೋರೂಂನ ಉದ್ಘಾಟನೆಯನ್ನು ಸಿನಿಮಾ ನಟಿ ಸ್ನೇಹಾ ಪ್ರಸನ್ನ ನಿರ್ವಹಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಸಿಟಿ ಸೌತ್ ಶಾಸಕ ಡಿ. ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕರ್ನಾಟಕ ಸ್ಟೇಟ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್, ರೆವರೆಂಡ್ ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ, …

ಚುನಾವಣೆ ಸಮೀಪಿಸುತ್ತಿದ್ದಂತೆ ಮುಸ್ಲಿಂ ಲೀಗ್‌ನಿಂದ ಕೋಮು ಗಲಭೆ ಪ್ರಚೋದನೆ ಯತ್ನ- ಒಬಿಸಿ ಮೋರ್ಚಾ

ಕುಂಬಳೆ: ಶಾಲಾ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷವನ್ನು ತುಂಬುವ ಮೂಲಕ ಮುಸ್ಲಿಂ ಲೀಗ್ ಮತ ಬ್ಯಾಂಕ್ ರಚಿಸಲು ಪ್ರಯತ್ನಿಸುತ್ತಿದೆ ಎಂದು ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದರು. ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿಯ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ಯಾಲೆಸ್ತಿನ್‌ಗೆ ಸಂಬAಧಿಸಿದ ವಿಷಯಗಳಲ್ಲಿ ಬೆಂಬಲ ಘೋಷಿಸಿದ ಮಂಜೇಶ್ವರ ಶಾಸಕರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಹೆಸರಿಗೆ ಧಾರ್ಮಿಕ ಸಾಮರಸ್ಯ, ಕೋಮುವಾದವನ್ನು ಪ್ರಚೋದಿಸುವ ಮೂಲಕ ಮತಗಳನ್ನು ಗಳಿಸುವ ಗುರಿಯನ್ನು ಹೊಂದಿರುವ ಮುಸ್ಲಿಂ ಲೀಗ್‌ನ ಇಂತಹ ಕಾರ್ಯಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ …

ರಾಷ್ಟ್ರಪತಿ ಇಂದು ಕೇರಳಕ್ಕೆ ನಾಳೆ ಶಬರಿಮಲೆಗೆ

ತಿರುವನಂತಪುರ: ನಾಲ್ಕು ದಿನಗಳ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸಂಜೆ  ನೌಕಾಪಡೆಯ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸುವರು. ಇಂದು ರಾಜ್‌ಭವನದಲ್ಲಿ  ಉಳಿದುಕೊಳ್ಳುವ ಅವರು ಅಲ್ಲಿಂದ ನಾಳೆ ಬೆಳಿಗ್ಗೆ 9.35ಕ್ಕೆ ಹೆಲಿಕಾಫ್ಟರ್‌ನಲ್ಲಿ ನಿಲೈಕಲ್‌ಗೆ ಹೋಗುವರು.  ನಂತರ ಕಾರಿನಲ್ಲಿ ಪಂಪಾಗೆ ತಲುಪುವರು. ಅಲ್ಲಿಂದ ವಿಶೇಷ ವಾಹನದಲ್ಲಿ ಶಬರಿಮಲೆ ದೇಗುಲ ಸನ್ನಿಧಾನಕ್ಕೆ ಆಗಮಿಸಿ ದೇವರ ದರ್ಶನ ನಡೆಸುವರು. ರಾಷ್ಟ್ರಪತಿ ಸಂದರ್ಶನ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ವಿಶೇಷ ನಿಯಂತ್ರಣ ಹಾಗೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಬರಿಮಲೆ ದರ್ಶನದ ನಂತರ ತಿರುವನಂತಪುರಕ್ಕೆ ಹಿಂತಿರುಗಲಿರುವ ರಾಷ್ಟ್ರಪತಿ …

ಬಾವಿಗೆ ಬಿದ್ದು ಯುವಕ ಮೃತ್ಯು: ರಕ್ಷಿಸಲು ಹಾರಿದ ಸಹೋದರನಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ

ಕುಂಬಳೆ: ಸರಕಾರಿ ನೌಕರನಾದ ಯುವಕ ಬಾವಿಗೆ ಬಿದ್ದು ಮೃತಪಟ್ಟರು. ರಕ್ಷಿಸಲೆಂದು ಇಳಿದ ಸಹೋದರನನ್ನು ಅಗ್ನಿಶಾಮಕ ದಳ ತಲುಪಿ ಮೇಲೆತ್ತಿದೆ. ಕುಂಬಳೆ ನಾರಾಯಣಮಂಗಲ ನಿವಾಸಿ ವಿವೇಕ್ ಶೆಟ್ಟಿ (28) ಮೃತಪಟ್ಟವರು. ನಿನ್ನೆ ರಾತ್ರಿ 9.30ರ ವೇಳೆ ಘಟನೆ ನಡೆದಿದೆ. ವಿವೇಕ್ ಬಾವಿಗೆ ಬೀಳುವುದನ್ನು ಕಂಡ ಸಹೋದರ ತೇಜಸ್ ಆಗಲೇ ಬಾವಿಗೆ ಹಾರಿದ್ದರು. ಆದರೆ ತೇಜಸ್ ಬಾವಿಯಲ್ಲಿ ಸಿಲುಕಿಕೊಂಡರು. ಸ್ಥಳೀಯರು ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ತೇಜಸ್‌ನನ್ನು ಮೊದಲಾಗಿ ಮೇಲೆತ್ತಿದರು.  ಬಳಿಕ ವಿವೇಕ್‌ನನ್ನು ಮೇಲಕ್ಕೆತ್ತಿ ಕುಂಬಳೆ ಸಹಕಾರಿ …