ಮಹಿಳೆಯನ್ನು ಕುತ್ತಿಗೆ ಹಿಸುಕಿ ಕೊಲೆ: ಪತಿ ಬಂಧನ

ಕೋಟಯಂ: ರೋಗ ಬಾಧಿಸಿ ಹಾಸಿಗೆ ಹಿಡಿದಿದ್ದ ಮಹಿಳೆಯನ್ನು  ಪತಿ ಕುತ್ತಿಗೆ ಹಿಸುಕಿ ಕೊಲೆಗೈದ ಘಟನೆ ಕೋಟಯಂನ ಕಿಡಂಗೂರ್ ಎಂಬಲ್ಲಿ ನಡೆದಿದೆ. ಮಾಂದಾಡಿಕ್ಕ ವಲಯಿಲ್ ಏಲಕ್ಕೋಡತ್ ವೀಟಿಲ್ ರಮಣಿ (70) ಎಂಬವರು ಕೊಲೆಗೀಡಾದವರು. ಈ ಸಂಬಂಧ ಪತಿ ಸೋಮನ್(74)ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಇಂದು ಮುಂಜಾನೆ ಒಂದೂವರೆ ಗಂಟೆ ವೇಳೆ ಘಟನೆ ನಡೆದಿದೆ. ರಮಣಿಯನ್ನು ಕೊಲೆಗೈದ ಬಳಿಕ ಓರ್ವ ಪುತ್ರನನ್ನು ಕೊಲೆಗೈ ಯ್ಯಲು ಸೋಮನ್ ಯತ್ನಿಸಿದ್ದು, ಈ ವೇಳೆ ಬೊಬ್ಬೆ ಕೇಳಿ ಇನ್ನೋರ್ವ ಪುತ್ರ ತಲುಪಿ ತಡೆದಿದ್ದನೆನ್ನಲಾಗಿದೆ.

ಮಳೆ: ರಸ್ತೆಯಲ್ಲಿ ಕಟ್ಟಿನಿಂತ ನೀರಿನಿಂದ ಕುಂಬಳೆಯಲ್ಲಿ ಸಮಸ್ಯೆ

ಕುಂಬಳೆ: ನಿನ್ನೆ ರಾತ್ರಿ ಸುರಿದ ಮಳೆಯಿಂದ ಕುಂಬಳೆಯಲ್ಲಿ ರಸ್ತೆ ಬದಿ ನೀರು ಕಟ್ಟಿ ನಿಂತು ಪ್ರಯಾಣಿಕರು ಸಮಸ್ಯೆಗೀಡಾದರು. ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ  ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ ಭಾಗಕ್ಕೆ ತೆರಳುವ ಬಸ್‌ಗಳ ನಿಲುಗಡೆ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಬಸ್ ಪ್ರಯಾಣಿಕರು ಮಾತ್ರವಲ್ಲದೆ ಪಾದಚಾರಿಗಳು ಕೂಡಾ ನಡೆದಾಡಲು ಸಮಸ್ಯೆ ಎದುರಿಸಬೇಕಾಗಿ ಬಂತು. ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದರೂ ಅದಕ್ಕೆ ಪರಿಹಾರ ಕಾಣಲು ಸಂಬಂಧ ಪಟ್ಟವರು ಮುಂದಾಗಲಿಲ್ಲ. 

ಜಿಲ್ಲಾ ಶಾಲಾ ಕ್ರೀಡಾಕೂಟ: ಹೊಸದುರ್ಗ ಚಾಂಪಿಯನ್; ಕಾಸರಗೋಡಿಗೆ ದ್ವಿತೀಯ ಸ್ಥಾನ

ಕಾಸರಗೋಡು: ನೀಲೇಶ್ವರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟದಲ್ಲಿ ಹೊಸದುರ್ಗ ಶಿಕ್ಷಣ ಉಪಜಿಲ್ಲೆ 25 ಚಿನ್ನ, 18 ಬೆಳ್ಳಿ ಹಾಗೂ 14 ಕಂಚಿನ ಪದಕಗಳ ಸಹಿತ 211 ಅಂಕ ಗಳಿಸಿ ಚಾಂಪಿಯ ನ್ಶಿಪ್ ಪಟ್ಟ ಅಲಂಕರಿಸಿದೆ. ಕಾಸರಗೋಡು ಶಿಕ್ಷಣ ಉಪಜಿಲ್ಲೆ 16 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕ ಪಡೆದು 169 ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದಿದೆ.153 ಅಂಕಗಳೊAದಿಗೆ ಚೆರುವತ್ತೂರು ಶಿಕ್ಷಣ ಉಪಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ. ಉಳಿದಂತೆ ಮಂಜೇಶ್ವರ (96 ಅಂಕ), ಕುಂಬಳೆ …

ಕೆಳಗಿನ ಉಳುವಾರು ನಿವಾಸಿ ಕುವೈಟ್‌ನಲ್ಲಿ ನಿಧನ

ಕುಂಬಳೆ: ಕೆಳಗಿನ ಉಳುವಾರು ನಿವಾಸಿ ಅಬ್ದುಲ್ ರಹ್ಮಾನ್ ಕೆ.ವಿ. (60) ಕುವೈಟ್‌ನಲ್ಲಿ ನಿಧನರಾದರು. ಕಳೆದ 40 ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಇವರು ಮೂರು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಬಳಿಕ ಅಲ್ಲಿನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದು ವಿಶ್ರಾಂತಿಯಲ್ಲಿದ್ದರು. ಈ ವೇಳೆ ನಿಧನ ಸಂಭವಿಸಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.  ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಆಯಿಷಾ, ಪುತ್ರಿ ತಾಹಿರ, ಅಳಿಯ ಉಸ್ಮಾನ್, ಸಹೋದರ ಸಹೋದರಿಯರಾದ ಮುಹಮ್ಮದ್, ಇಬ್ರಾಹಿಂ, ಖದೀಜ, ಆಯಿಷ, …

ವಿಕಸಿತ ಕುಂಬ್ಡಾಜೆ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರ ಸಮಾವೇಶ ನಾಳೆ

ಬದಿಯಡ್ಕ: ಭಾರತೀಯ ಜನತಾ ಪಾರ್ಟಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ವಿಕಸಿತ ಭಾರತದೊಂದಿಗೆ ವಿಕಸಿತ ಕುಂಬ್ಡಾಜೆ ಎಂಬ ಸಂಕಲ್ಪವನ್ನಿಟ್ಟುಕೊAಡು ಮುಂಬರುವ ತ್ರಿಸ್ತರ ಪಂಚಾಯತ್ ಚುನಾವಣೆಯ ಮುನ್ನುಡಿಯಾಗಿ ಕಾರ್ಯಕರ್ತರ ಸಮಾವೇಶ ಹಾಗೂ ಜನಪ್ರತಿನಿದಿsಗಳಿಗೆ ಅಭಿನಂದನಾ ಕಾರ್ಯಕ್ರಮ ನಾಳೆ ಬೆಳಗ್ಗೆ ಅಗಲ್ಪಾಡಿ ಜಯನಗರ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಕೇರಳ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್, ಬಿಜೆಪಿ ಮಂಗಳೂರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., …

ತುಳುನಾಡ ಬಾಲೆ ಬಂಗಾರ್ ಸ್ಪರ್ಧೆ: ಮಕ್ಕಳ ಭಾವಚಿತ್ರ ಆಹ್ವಾನ

ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ದಶಮಾನೋತ್ಸವದಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆ ನಡೆಯಲಿದೆ. ನಾಲ್ಕು ವರ್ಷ ದೊಳಗಿನ ಮಕ್ಕಳ ಭಾವಚಿತ್ರಗಳನ್ನು ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿ ತೆಗೆದು ಕಳುಹಿಸಬೇ ಕಾಗಿದೆ. 6X9 ಅಳತೆಯ ಭಾವಚಿ ತ್ರವನ್ನು ಕಳುಹಿಸಿದರೆ ಸಾಕಾಗುವುದು. ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣಪತ್ರದ ಕರಡು ಪ್ರತಿ, ಪೋಷಕರ ವಿಳಾಸ …

ಕೂಡ್ಲು: ರಜತರಂಗ ಉದ್ಘಾಟನೆ 20ರಂದು

ಕೂಡ್ಲು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ 25 ನೇ ವರ್ಷಕ್ಕೆ ಕಾಲಿರಿಸಿದ್ದು, 25 ನೇ ವಾರ್ಷಿಕೋತ್ಸವವನ್ನು ವೈವಿಧ್ಯಮಯವಾಗಿ ವರ್ಷಪೂರ್ತಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಗಳು, ಕೊಂಡೆವೂರು ಶ್ರೀಗಳು ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಗೌರವಾಧ್ಯಕ್ಷರಾಗಿರುವ ರಜತ ಮಹೋತ್ಸವ ಸಮಿತಿ ರಚಿಸಲಾಗಿದೆ. ರಜತರಂಗದ ಉದ್ಘಾಟನಾ ಕಾರ್ಯಕ್ರಮ ಈ ತಿಂಗಳ 20 ರಂದು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಜರಗಲಿದೆ. ಮಧೂರು ಕ್ಷೇತ್ರದ ನಿವೃತ್ತ ಪ್ರಧಾನ ಅರ್ಚಕ ಶ್ರಿ ಕೃಷ್ಣ …

ದುಬಾಯಿಯಲ್ಲಿ ಆತ್ಮಹತ್ಯೆಗೈದ ಯುವಕನ ಮೃತದೇಹ ಊರಿಗೆ

ಕಾಸರಗೋಡು: ದುಬಾಯಿ ಯಲ್ಲಿ ಮೃತಪಟ್ಟ ಮುನ್ನಾಡ್ ಪೆರಿಂಗಾನ ನಿವಾಸಿಯ ಮೃತದೇಹ ವನ್ನು ಊರಿಗೆ ತಲುಪಿಸಲಾಯಿತು. ಕೆ. ಮೋಹನನ್-ಕೆ.ತಂಗಮಣಿ ದಂಪತಿ ಪುತ್ರ ಕೆ. ಸುಧೀಶ್ (30) ದುಬಾಯಿಯಲ್ಲಿ ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಕಳೆದ ಒಂದು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರ. ಮೃತ ಯುವಕ ತಂದೆ, ತಾಯಿ, ಸಹೋದರರಾದ ವಿನೀತ್, ವಿನಯನ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನ

ಮಾನ್ಯ: ಜನ್ಮದಿನವನ್ನು ಐಷಾರಾಮಿಯಾಗಿ ಆಚರಿಸುವ ಬದಲು ಊರಿನ ದೇವಸ್ಥಾನ, ಭಜನಾಮಂದಿರಗಳಲ್ಲಿ ಆ ದಿನದಂದು ಶಾಶ್ವತ ಪೂಜೆಯ ಸಂಕಲ್ಪವನ್ನು ತೊಟ್ಟುಕೊಂಡು ಆಚರಿಸಬೇಕು, ಇದು ನಮ್ಮ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವುದರೊಂದಿಗೆ ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮುಂದುವರಿಸಿಕೊಂಡು ಹೋಗಲು ಕಾರಣವಾಗುತ್ತದೆ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಕಾಟಿಪಳ್ಳ ಸುಬ್ರಹ್ಮಣ್ಯ ಹೇಳಿದರು. ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನದ ಅಂಗವಾಗಿ ಪುದುಕೋಳಿ ಶ್ರೀಕೃಷ್ಣ ಭಟ್ಟರಿಗೆ ರಶೀದಿ ಹಸ್ತಾಂತರಿಸಿ ಅವರು ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ನರಸಿಂಹ …

ಮಾನಿಷಾದ ಅಂದರೂ ಹೋಗೇ ಬಿಟ್ಟರುಅಮ್ಮಣ್ಣಾಯರು

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಮೇಳವೊಂದು ಕಾಸರಗೋಡು ಜಿಲ್ಲೆಯಲ್ಲಿ ಪ್ರದರ್ಶನ ಆರಂಭಿಸಿದರೆ ಸುತ್ತಮುತ್ತಲ ಪ್ರದೇಶಗಳಲ್ಲೇ ವಾರಾನುಗಟ್ಟಲೆ ಪ್ರದರ್ಶನ ನೀಡುತ್ತಿದ್ದ ಕಾಲವೂ ಇತ್ತು. ಆದರೆ ಅದು ಈಗ ನೆನಪು ಮಾತ್ರ. ಜಿಲ್ಲೆಯಲ್ಲಿ ಯಕ್ಷಗಾನ ಟೆಂಟ್ ಮೇಳಗಳ ಪ್ರದರ್ಶನ ಕಡಿಮೆಯಾಗುತ್ತಾ ಬಂದಿದೆ. ಇದ್ಯಾಕೆ ಈಗ ನೆನಪಾಯಿತೆಂದರೆ ಪ್ರಸಿದ್ಧ ಭಾಗವತರಾದ …