ಬಿರಿಯಾನಿಯೊಂದಿಗೆ ಕಚ್ಚಂಬರ್ ಲಭಿಸಿಲ್ಲ ಕ್ಯಾಟರಿಂಗ್ ನೌಕರರಿಗೆ ಹಲ್ಲೆ; ಇಬ್ಬರ ವಿರುದ್ಧ ಕೇಸು

ಕುಂಬಳೆ: ಬಿರಿಯಾನಿಯೊಂದಿಗೆ  ಕಚ್ಚಂಬರ್ ಲಭಿಸದ ದ್ವೇಷದಿಂದ ಕ್ಯಾಟರಿಂಗ್ ನೌಕರರಿಗೆ ಹಲ್ಲೆಗೈದಿರುವುದಾಗಿ ದೂರುಂಟಾಗಿದೆ. ಪೇರಾಲ್ ಕಣ್ಣೂರು ನಿವಾಸಿ ಹಾಗೂ ಜೊತೆಗೆ ಕೆಲಸಕ್ಕೆ ತಲುಪಿದ ಯುವಕನಿಗೆ ಹಲ್ಲೆಗೈಯ್ಯಲಾಗಿದೆ. 21ರ ಹರೆಯದ ಯುವಕನ ದೂರಿನಂತೆ ಅಬ್ಬಾಸ್, ಮಶೂದ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ಸಂಜೆ 3 ಗಂಟೆಗೆ ಸೀತಾಂಗೋಳಿಯ ಆಡಿಟೋರಿಯಂವೊಂದರಲ್ಲಿ ಘಟನೆ ನಡೆದಿದೆ. 21ರ ಹರೆಯದ ಯುವಕ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಣಕ್ಕೆ ಹಣ ಕಂಡುಕೊಳ್ಳುವ ಉದ್ದೇಶದಿಂದ ಈತ ಆದಿತ್ಯವಾರಗಳಂದು ಆಹಾರ ವಿತರಣೆ ಕೆಲಸಕ್ಕೆ ತೆರಳುತ್ತಿರುವುದಾಗಿ ಹೇಳಲಾಗುತ್ತಿದೆ. ಆದಿತ್ಯವಾರ ನಡೆದ …

ನೇಣು ಬಿಗಿದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಕಾರು ಅಪಘಾತ: ಯುವತಿ ಸಾವು; ಮೂವರಿಗೆ ಗಾಯ

ಕಾಸರಗೋಡು: ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವತಿ ಸಾವಿಗೀಡಾಗಿ  ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಬೇತೂರುಪಾರ ತಟ್ಟರಕುಂಡ್‌ನ ದಿ| ಬಾಬು ಎಂಬವರ ಪುತ್ರಿಯೂ ಕಾಸರ ಗೋಡಿನ ಖಾಸಗಿ ಆಸ್ಪತ್ರೆಯ ದ್ವಿತೀಯ ವರ್ಷ ನರ್ಸಿಂಗ್ ವಿದ್ಯಾರ್ಥಿನಿಯಾದ ಮಹಿಮಾ (20) ಎಂಬಾಕೆ ಸಾವನ್ನಪ್ಪಿದ ಯುವತಿ. ಈಕೆ ನಿನ್ನೆ ಬೆಳಿಗ್ಗೆ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.  ಈ ಬಗ್ಗೆ ಗಮನಕ್ಕೆ ಬಂದ …

ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂ. ವಶ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 7.45ರ ವೇಳೆ ಪೊಲೀಸರು ಹೈವೇ ಪಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.  ತುಕಾರಾಮ್ ಎಂಬ ವ್ಯಕ್ತಿ ಹಾಗೂ ಅವರ ಪತ್ನಿ ಕಾರಿನಲ್ಲಿದ್ದರು. ಕಾರು ಚಲಾಯಿಸಿರುವುದು ಅಕ್ಷಯ್ ಎಂಬಾತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಭಾಗದಿಂದ ಬಂದ ಕಾರನ್ನು ಸಂಶಯದ ಮೇರೆಗೆ ತಡೆದು ನಿಲ್ಲಿಸಿ ತಪಾಸಣೆಗೈದಾಗ ಅದರಲ್ಲಿ ಹಣ ಪತ್ತೆಯಾಗಿದೆ. ಕಾರು ಪ್ರಯಾಣಿಕರಿಗೆ ಹಣದ ಮೂಲವನ್ನು ತಿಳಿಸಲು ಸಾಧ್ಯ ವಾಗಿಲ್ಲವೆಂದು ಸೂಚನೆಯಿದೆ. …

ಜಿರಳೆನಾಶಕ ಚೋಕ್ ಸೇವಿಸಿ ಅಸ್ವಸ್ಥಗೊಂಡ ಬಾಲಕ

ಕಾಸರಗೋಡು: ಜಿರಳೆಗಳನ್ನು ಓಡಿಸಲು ಉಪಯೋಗಿಸುವ ಚೋಕ್ ಸೇವಿಸಿ ಅಸ್ವಸ್ಥಗೊಂಡ ೧೫ರ ಹರೆಯದ ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನಲ್ಲಿ ವಾಸಿಸುವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ಈತನನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಾಂಶವುಳ್ಳ  ಚೋಕ್  ಬಾಲಕನ ಹೊಟ್ಟೆಗೆ ಹೇಗೆ ತಲುಪಿದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಕ್ಕಳಿಲ್ಲದ ಮನೆಯಲ್ಲಿ 26 ದಿನದ ಮಗು ಪತ್ತೆ: ನಿಗೂಢತೆ ವ್ಯಕ್ತಪಡಿಸಿದ ನಾಗರಿಕರು; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಮಕ್ಕಳಿಲ್ಲದ ಮನೆಯಲ್ಲಿ ೨೬ ದಿನ ಪ್ರಾಯದ ಮಗು ಕಂಡುಬಂದಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಈ ವಿಷಯ ನಾಡಿನಾದ್ಯಂತ ಸುದ್ಧಿಯಾಗುವುದರೊಂದಿಗೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಮಗುವಿನ ಸ್ವಂತ ತಾಯಿ ಹಾಗೂ ಸಾಕುತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ ಬಳಿಕ ಮಗುವನ್ನು ಸ್ವಂತ ತಾಯಿಗೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಮಗುವನ್ನು ಮಾರಾಟಗೈಯ್ಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಮಾರಾಟಗೈದ ಹಾಗೂ ಖರೀದಿಸಿದ ಬಗ್ಗೆ ಯಾವುದೇ ದೂರುಗಳು ಲಭಿಸಿಲ್ಲ. ಅಲ್ಲದೆ ಈ ವಿಷಯದಲ್ಲಿ ದೂರು …

116 ಕಿಲೋ ಗಾಂಜಾ ವಶ ಪ್ರಕರಣ: ಮುಖ್ಯ ಆರೋಪಿ ಎಂದು ಸಂಶಯಿಸುವ ವ್ಯಕ್ತಿ ಪೊಲೀಸ್ ಬಲೆಯಲ್ಲಿ

ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬಳಿಯ ಸುಳ್ಯಮೆಯಿಂದ 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂದು ಸಂಶಯಿಸುವ ವ್ಯಕ್ತಿ ಪೊಲೀಸ್ ಬಲೆಯಲ್ಲಿದ್ದಾನೆ. ಈತನನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಅಕ್ಟೋಬರ್ ೮ರಂದು ರಾತ್ರಿ 12.30ರ ವೇಳೆ ಶೆಡ್‌ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಪತ್ತೆಯಾಗಿತ್ತು. ಶೆಡ್‌ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ಗಾಂಜಾ ತುಂಬಿಸಿಡಲಾಗಿತ್ತು. …

ಕರ್ನಾಟಕದ ಕುವೆಂಪು ಕರಾವಳಿಗೆ ಪುವೆಂಪು: ಸಾಹಿತ್ಯ, ಸಂಶೋಧನೆಯಲ್ಲಿ ಪುಣಿಂಚಿತ್ತಾಯರ ಕೊಡುಗೆ ಅನರ್ಘ್ಯ-ಬಸವರಾಜ ಎಸ್. ಹೊರಟ್ಟಿ

ಮಂಜೇಶ್ವರ: ಸಮಗ್ರ ಕರ್ನಾ ಟಕಕ್ಕೊಬ್ಬ ಕುವೆಂಪು ಇದ್ದಂತೆ, ಕರಾವಳಿ ಕರ್ನಾಟಕದಲ್ಲಿ ಪುವೆಂಪು. ಅವರು ಸಾಹಿತ್ಯ, ಸಂಶೋಧನೆ, ಭಾಷಾಂತರ ಮೊದಲಾದ ವಿವಿಧ ವಲಯಗಳಲ್ಲಿ ನೀಡಿರುವ ಅನರ್ಘ್ಯ ಕೊಡುಗೆಗಳು ಅಪಾರವಾದುದು. ಅವರ ಸಾಹಿತ್ಯ ಮೌಲ್ಯಯುತವಾಗಿ ಚತುರ್ಭಾಷಾ ವಲಯದ ವಿಶಿಷ್ಟ ಧ್ರುವನಕ್ಷತ್ರ ಪುಂಡೂರು ವೆಂಕಟ ರಾಜ ಪುಣಿಂಚಿತ್ತಾಯರೆAದು ಕರ್ನಾಟಕ ವಿಧಾನಪರಿಷತ್ತು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಗಡಿ ಪ್ರದೇಶಾ ಭಿವೃದ್ಧಿ ಪ್ರಾಧಿಕಾರ, ಡಾ.ಪುಂಡೂರು ವೆಂಕಟ ರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವುಗಳ ಸಂಯುಕ್ತ …

ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ಸ್ಕೂಟರ್ ಸವಾರ ಮೃತ್ಯು

ಕಾಸರಗೋಡು: ಸರಕು ಲಾರಿ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಸ್ಕೂಟರ್ ಪ್ರಯಾಣಿಕ ಮೃತಪಟ್ಟರು.  ಚೆಂಬರಿಕ ತುರುತ್ತಿ ನಿವಾಸಿ ಟಿ.ಎಂ. ಅಬ್ದುಲ್ ರಹ್ಮಾನ್ (62) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ ಮೇಲ್ಪರಂಬ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿತ್ತು. ಟಿ.ಎಂ. ಅಬ್ದುಲ್ ರಹ್ಮಾನ್ ಚಲಾಯಿಸಿದ ಸ್ಕೂಟರ್‌ಗೆ ಕಾಸರಗೋಡಿಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮದ್ರಸಾ ಅಧ್ಯಾಪಕನಾಗಿಯೂ, ಕಾಸರಗೋಡು ಖಾಸಗಿ ಆಸ್ಪತ್ರೆಯ ಪಿಆರ್‌ಒ ಆಗಿಯೂ ಇವರು ಕೆಲಸ ನಿರ್ವಹಿಸಿದ್ದರು. ಮುಸ್ಲಿಂ …

ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಸಮಾರೋಪ

ವರ್ಕಾಡಿ: ಮಂಜೇಶ್ವರ ಉಪ ಜಿಲ್ಲಾ ವಿಜ್ಞಾನ ಮೇಳದ ಸಮಾರೋಪ ಸಮಾರಂಭ ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂ ಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿದರು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ್ಷೆ ಸಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು.ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ ಕೆ, ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಬ್ಲಾಕ್ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೆ ವಿ, ಡಾಕ್ಟರ್ ಮುರಳಿ ಪಿ ಎಸ್, …

ಹಿರಿಯ ಕೃಶಿಕ ನಿಧನ

ಮುಳ್ಳೇರಿಯ: ಕಿನ್ನಿಂಗಾರು ಬಳಿಯ ಬೆಳೇರಿ ನಿವಾಸಿ ಹಿರಿಯ ಕೃಷಿಕ ಕೃಷ್ಣ ಮಣಿಯಾಣಿ (87) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಮೃತರು ಪತ್ನಿ ಬೆಳ್ತಮ್ಮ, ಮಕ್ಕಳಾದ ಯಶೋಧ, ಲೀಲಾವತಿ, ಪದ್ಮಾವತಿ, ಶೀಲಾವತಿ, ಉಮಾಶ್ರೀ, ನಿವೃತ್ತ ಅಧ್ಯಾಪಕ ಕುಂಞಿರಾಮ ಮಾಸ್ತರ್,  ಅಳಿಯಂದಿರಾದ ಚಂದ್ರ, ಮಾಲಿಂಗ, ವೇಣು, ಸೊಸೆ ಶ್ರೀಲತಾ ಟೀಚರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಅಳಿಯಂದಿರಾದ ಕುಂಞಿರಾಮ, ಮಾಲಿಂಗ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.