ಅಟ್ಟೆಗೋಳಿ ಯೂತ್ ಕ್ಲಬ್ ಗ್ರಂಥಾಲಯ, ವಾಚನಾಲಯ ನೂತನ ಪದಾಧಿಕಾರಿಗಳ ಆಯ್ಕೆ

ಪೈವಳಿಕೆ: ಕಯ್ಯಾರು ಗ್ರಾಮದ ಅಟ್ಟೆಗೋಳಿ ಯೂತ್ ಕ್ಲಬ್  ಗ್ರಂಥಾಲಯ ಹಾಗೂ ವಾಚನಾಲಯ ಆಡಳಿತ ಸಮಿತಿಯನ್ನು ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್‌ನ ನಿರ್ದೇಶದ ಪ್ರಕಾರ ಮೂರು ವರ್ಷದ ಕಾಲಾವಧಿಗೆ ರೂಪೀಕರಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಕುಶಲ, ಉಪಾಧ್ಯಕ್ಷರಾಗಿ ಮೊಹಮ್ಮದ್ ಬಶೀರ್ ಮಾಸ್ತರ್, ಕಾರ್ಯದರ್ಶಿಯಾಗಿ ಉಮೇಶ ಎ, ಜತೆ ಕಾರ್ಯದರ್ಶಿಯಾಗಿ ರಮೇಶ್ ಎ.ಎಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹಮ್ಮದ್ ಹುಸೈನ್ ಮಾಸ್ತರ್, ಪ್ರೊಫೆಸರ್ ಪಿ.ಎನ್. ಮೂಡಿತ್ತಾಯ, ಅಬ್ದುಲ್ ಗಫೂರ್, ಸಂಧ್ಯಾ, ಮೊಹಮ್ಮದ್ ಪೊಡಿಮೋನು, ಲಿನೆಟಾ ಕ್ರಾಸ್ತ, …

ಜೋಯಿಂಟ್ ಕೌನ್ಸಿಲ್ ಜಿಲ್ಲಾ ಮಹಿಳಾ ಸಮಿತಿಯಿಂದ ಕಲೆಕ್ಟ್ರೇಟ್ ಮಾರ್ಚ್

ಕಾಸರಗೋಡು: ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ತಡೆಗಟ್ಟಬೇಕು, ಮೂಢನಂಬಿಕೆ ಮರೆಯಲ್ಲಿ  ಮಹಿಳೆಯರ ವಿರುದ್ಧ ಚಟುವಟಿಕೆಯನ್ನು ತಡೆಯಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಜೋಯಿಂಟ್ ಕೌನ್ಸಿಲ್ ಜಿಲ್ಲಾ ಮಹಿಳಾ ಸಮಿತಿ ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಿತು. ಮಾರ್ಚ್‌ಗೆ ಜೋಯಿಂಟ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ನರೇಶ್ ಕುಮಾರ್ ಕುನ್ನಿಯೂರ್ ಧ್ವಜ ಹಾರಿಸಿ ಚಾಲನೆ ನೀಡಿದರು. ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಭಾರ್ಗವಿ ಉದ್ಘಾಟಿಸಿದರು. ಮಹಿಳಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ. ಪ್ರೀತ, ರಾಜ್ಯ ಸಮಿತಿ ಸದಸ್ಯೆ ಯಮುನಾ ರಾಘವನ್, ಜಿಲ್ಲಾ ಕಾರ್ಯದರ್ಶಿ  …

ಕಾಡ ಮಲ್ಲಿಗೆ ಪರಿಮಳದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ಮ೦ಗಳೂರು: ಯಕ್ಷಗಾನ ಹಿರಿಯ ಭಾಗವತ ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ (೬೫) ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ‘ರಸರಾಗ ಚಕ್ರರ‍್ತಿ’ ಎಂಬ ಬಿರುದು ಹೊ೦ದಿದ್ದರು. ದಾಮೋದರ ಮಂಡೆಚ್ಚರ ಗರಡಿಯಲ್ಲಿ ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚ೦ಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು.ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ, …

ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಕೃಷಿಕ ಮೃತ್ಯು

ಬದಿಯಡ್ಕ: ರಸ್ತೆ ಅಡ್ಡ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಕೃಷಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರಡಾಲ ಬೋಳುಕಟ್ಟೆ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ವಾಸಿಸುವ ಚಂಬಲ್ತಿಮಾರು ತರವಾಡು ಮನೆಯ ಸಿ. ಗೋಪಾಲಕೃಷ್ಣ ಭಟ್ (74)  ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 7.15ರ ವೇಳೆ ಅಪಘಾತ ಸಂಭವಿಸಿದೆ. ಮನೆಗೆ ಹೋಗಲು ಬೋಳುಕಟ್ಟೆ ಸಮೀಪ ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಮುಳ್ಳೇರಿಯ ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಭಟ್‌ರನ್ನು …

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ  ಬಸ್ ಕಂಡಕ್ಟರ್ ನಿಧನ

ನೀರ್ಚಾಲು:  ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಖಾಸಗಿ ಬಸ್ ಕಂಡಕ್ಟರ್ ನಿಧನ ಹೊಂದಿದರು. ನೀರ್ಚಾಲು ಏಣಿಯರ್ಪು ಬುರುಡಡ್ಕದ ಉದಯ ಕುಮಾರ್ (56) ಮೃತಪಟ್ಟ ದುರ್ದೈವಿ. ಇವರು ಕುಂಬಳೆ- ಮುಳ್ಳೇರಿಯ ರೂಟ್‌ನಲ್ಲಿ ಸಂಚರಿಸುವ ಗುರುವಾಯೂರಪ್ಪನ್ ಬಸ್‌ನ ಕಂಡಕ್ಟರ್ ಆಗಿದ್ದರು. ಈ ಹಿಂದೆ ಕಾಸರಗೋಡು- ತಲಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲೂ ಕಂಡಕ್ಟರ್ ಆಗಿ  ಕೆಲಸ ನಿರ್ವಹಿಸಿದ್ದರು. ಉಸಿರಾಟ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ದಿವಂಗತರಾದ ಡ್ರೈವರ್ ಬಾಲಕೃಷ್ಣನ್- ಪದ್ಮಾವತಿ …

ತರಗತಿಗೆ ಮೊಬೈಲ್ ತಂದ ವಿಷಯ ಪ್ರಾಂಶುಪಾಲರಿಗೆ ತಿಳಿಸಿದ ವಿದ್ಯಾರ್ಥಿನಿಯರು: ಪ್ರಶ್ನಿಸಿದ ವಿದ್ಯಾರ್ಥಿಗೆ ಮೂವರು ವಿದ್ಯಾರ್ಥಿಗಳಿಂದ ಹಲ್ಲೆ

ಕುಂಬಳೆ: ಮೊಬೈಲ್ ಫೋನ್ ತರಗತಿಗೆ ತಂದ ವಿಷಯವನ್ನು ಪ್ರಾಂಶುಪಾಲರೊಂದಿಗೆ ತಿಳಿಸಿದ ವಿದ್ಯಾರ್ಥಿನಿಯರನ್ನು ಫೋನ್ ತಂದ ವಿದ್ಯಾರ್ಥಿ ಪ್ರಶ್ನಿಸಿದ್ದು, ಈ ವಿದ್ಯಾರ್ಥಿಯನ್ನು ಇತರ ಮೂವರು ವಿದ್ಯಾರ್ಥಿಗಳು ಸೇರಿ ತರಗತಿ ಕೊಠಡಿಯಲ್ಲಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹಲ್ಲೆಗೈದ ಮೂವರು ವಿದ್ಯಾರ್ಥಿಗಳ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋ ಮವಾರ ಬೆಳಿಗ್ಗೆ 10 ಗಂಟೆ ವೇಳೆ ಮುಟ್ಟಂ ಕುನಿಲ್ ಶಾಲೆಯಲ್ಲಿ ಘಟನೆ ನಡೆದಿದೆ. ಮಂಗಲ್ಪಾಡಿ ನಯಾ ಬಜಾರ್ ನಿವಾಸಿಯಾದ ವಿದ್ಯಾರ್ಥಿಯ ದೂರಿನಂತೆ ಬಂಬ್ರಾಣ, ಉಪ್ಪಳ ನಿವಾಸಿಗಳಾದ ವಿದ್ಯಾರ್ಥಿಗಳ …

ಮೊಗ್ರಾಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್: ಫ್ರಿಡ್ಜ್ ನಾಶ

ಮೊಗ್ರಾಲ್: ಇಲ್ಲಿನ ಚಾಳಿಯಂ ಗೋಡ್ ನಿಶಾದ್ ಕ್ವಾರ್ಟರ್ಸ್‌ನ ಮೀನು ಮಾರಾಟ ಕಾರ್ಮಿಕ ಪಿ. ಶರೀಫ್ ಹಸೈನಾರ್‌ರ ಮನೆಯ ಫ್ರಿಡ್ಜ್ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ಆಗಿರಬೇಕೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ಘಟನೆ ನಡೆದಿದೆ. ಫ್ರಿಡ್ಜ್‌ಗೆ ಬೆಂಕಿ ತಗಲಿದ ಸಮಯದಲ್ಲಿ ಯಾರೂ ಇರಲಿಲ್ಲ. ಶರೀಫ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಕೊಠಡಿಯೊಳಗೆ ಹೊಗೆ ಕಂಡ ಸಮೀಪ ನಿವಾಸಿಗಳು ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಒಳಗೆ ನುಗ್ಗಿ ಬೆಂಕಿ ನಂದಿಸಿದ್ದಾರೆ. ಆ ವೇಳೆ ಫ್ರಿಡ್ಜ್ ಸಂಪೂರ್ಣ ಉರಿದು ಹೋಗಿತ್ತು.

ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆ: ದೂರು

ಕಾಸರಗೋಡು: ನಿನ್ನೆ ಬೆಳಿಗ್ಗೆ ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವು ದಾಗಿ ದೂರ ಲಾಗಿದೆ.  ಮೀತಲ್ ಮಾಂಙಾಡ್ ಪುಡಿಯಕಂಡ ಎಂಬಲ್ಲಿನ ಅಬ್ದುಲ್ ರಹಿಮಾನ್‌ನ ಪುತ್ರ ಅಬ್ದುಲ್ ವಾಸಿದ್ (14) ನಾಪತ್ತೆಯಾದ ವಿದ್ಯಾ ರ್ಥಿಯಾ ಗಿದ್ದಾನೆ. ಈ ಬಗ್ಗೆ ಬಾಲಕನ ಸಂಬಂಧಿಕ ಅಬ್ಬಾಸ್  ಬೇಕಲ್ ಮೇಲ್ಪ ರಂಬ ಪೊಲೀಸರಿಗೆ ದೂರು ನೀಡಿದ್ದಾರೆ.  ಅಬ್ದುಲ್ ವಾಸಿದ್ ಪತ್ತೆಯಾದಲ್ಲಿ ಆ ಬಗ್ಗೆ ಮೇಲ್ಪರಂಬ ಇನ್‌ಸ್ಪೆಕ್ಟರ್, ಎಸ್‌ಐ ಅಥವಾ  ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.

ಬಾಳೆಪುಣಿ ಬಸ್ ತಂಗುದಾಣ ಬಳಿ ಯುವಕನ ಮೃತದೇಹ ಪತ್ತೆ

ವರ್ಕಾಡಿ: ಬಾಳೆಪುಣಿ ಮುದುಂಗಾರುಕಟ್ಟೆ ಬಸ್ ತಂಗುದಾಣ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಮಹಜರಿಗಾಗಿ ಕೊಂಡೊಯ್ಯಲಾಗಿದೆ. ಮುದುಂ ಗಾರು ಕಟ್ಟೆ ಬಳಿಯ ಪಾತೂರು ನಿವಾಸಿ ಮುಹಮ್ಮದ್ ನಿಯಾಸ್ (28) ಮೃತಪಟ್ಟ ಯುವಕನೆಂದು ಪತ್ತೆಹಚ್ಚಲಾಗಿದೆ. ಈತ ಕೋಣಾಜೆ ಠಾಣೆ ವ್ಯಾಪ್ತಿಯ ಸರ ಕಳ್ಳತನದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಸ್ ತಂಗುದಾಣದ ಸಮೀಪ ಸ್ಕೂಟರ್ ನಿಲ್ಲಿಸಲೆಂದು ಹೋಗಿದ್ದ ವ್ಯಕ್ತಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಆ ಬಳಿಕ ಸ್ಥಳೀಯರು ಸೇರಿ ಪರಿಶೀಲಿಸಿದಾಗ ಮೃತ ವ್ಯಕ್ತಿ …

ಮೊಗ್ರಾಲ್ ಶಾಲೆ ಫಂಡ್ ಅವ್ಯವಹಾರ : ವಿಜಿಲೆನ್ಸ್ ತನಿಖೆ ಆರಂಭ

ಕಾಸರಗೋಡು: ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ  ಅಭಿವೃದ್ಧಿ ಫಂಡ್‌ನಿಂದ ಸುಮಾರು ೩೪ ಲಕ್ಷ ರೂಪಾಯಿ ಆರ್ಥಿಕ ಅವ್ಯವಹಾರ ನಡೆಸಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡ ನಿನ್ನೆ ಶಾಲೆಗೆ ತಲುಪಿ ತನಿಖೆ ಆರಂಭಿಸಿದೆ. ಡಿವೈಎಸ್‌ಪಿ ಉಣ್ಣಿಕೃಷ್ಣನ್‌ರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಈ ಹಿಂದಿನ ಹೈಯರ್ ಸೆಕೆಂಡರಿ ಪ್ರಿನ್ಸಿಪಾಲ್ ಇನ್‌ಚಾರ್ಜ್ ಅನಿಲ್ ಹಣಕಾಸು ಅವ್ಯವಹಾರ ನಡೆಸಿರುವುದಾಗಿ ವಿಜಿಲೆನ್ಸ್ ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಮಾಹಿತಿಯಿದೆ. ಶಾಲಾ ಪಿಟಿಎ ಕುಂಬಳೆ ಪೊಲೀಸ್, ವಿಜಿಲೆನ್ಸ್ ಹಾಗೂ ಡಿಡಿಇಗೆ ಈ ಬಗ್ಗೆ ದೂರು ನೀಡಿತ್ತು. ಶಾಲೆಗೆ ಮಂಜೂರು …