ಬಿಪಿ ಪರೀಕ್ಷಿಸಲು ನಿರಾಕರಿಸಿದ ಆರೋಪ: ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರದ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಲು ಮಾನವ ಹಕ್ಕು ಆಯೋಗ ನಿರ್ದೇಶ
ಬದಿಯಡ್ಕ: ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತಲುಪಿದ ರೋಗಿಯ ರಕ್ತದೊತ್ತಡ ಪರೀಕ್ಷಿಸಲು ನಿರಾಕರಿಸಿದ ವೈದ್ಯೆ ವಿರುದ್ಧ ಇಲಾಖೆ ಮಟ್ಟದ ಕ್ರಮ ಕೈಗೊಳ್ಳಬೇಕೆಂದು ಮಾನವಹಕ್ಕು ಆಯೋಗ ನಿರ್ದೇಶಿಸಿದೆ. ಕೈಗೊಂಡ ಕ್ರಮಗಳನ್ನು ೨ ತಿಂಗಳೊಳಗೆ ಕಾಸರಗೋಡು ಡಿಎಂಒ ಲಿಖಿತವಾಗಿ ತಿಳಿಸಬೇಕೆಂದೂ ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶದಲ್ಲಿ ತಿಳಿಸಿದ್ದಾರೆ. ೨೦೨೧ ಸೆಪ್ಟಂಬರ್ ೨೯ರಂದು ಆರೋಪಕ್ಕೆಡೆಯಾದ ಘಟನೆ ನಡೆದಿದೆ. ತಾನು ರಕ್ತದೊತ್ತಡಕ್ಕೆ ಔಷಧಿ ಸೇವಿಸುತ್ತಿದ್ದೇನೆಂದು ವೈದ್ಯರೊಂದಿಗೆ ತಿಳಿಸಿದ್ದು, ಈ ವೇಳೆ ಬಿಪಿ ಪರೀಕ್ಷಿಸಬೇಕಾದರೆ ಶುಕ್ರವಾರ ಬರುವಂತೆ ತಿಳಿಸಿದ್ದಾರೆಂದು ದೂರುಗಾರನಾದ …