ವಿ.ಹಿಂ.ಪ. ಬದಿಯಡ್ಕ ಪ್ರಖಂಡ ಗೋಪೂಜೆ 20ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ:- ವಿಶ್ವ ಹಿಂದು ಪರಿಷತ್ ಬದಿಯಡ್ಕ ಪ್ರಖಂಡ ವತಿಯಿಂದ ಅಕ್ಟೋಬರ್ 20 ರಂದು ನಡೆಯುವ ಗೋ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗಣೇಶ ಮಂದಿರದಲ್ಲಿ ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ಪತ್ರಿಕೆ ಬಿಡುಗಡೆ ಗೊಳಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ತನಿಯಪ್ಪ ಬದಿಯಡ್ಕ, ನಗರಾಧ್ಯಕ್ಷ ಶರತ್ ಶೆಟ್ಟಿ, ಪಂಚಾಯತ್ ಸಮಿತಿ ಅಧ್ಯಕ್ಷ ನಾರಾಯಣ.ಪಿ ಪೆರಡಾಲ, ಉಪಾಧ್ಯಕ್ಷ ಇಂದುಶೇಖರ ವಾಂತಿಚಾಲ್, ಹರಿರಾಮ, ಶಿವಪ್ರಸಾದ್, ಭಜರಂಗದಳ ಬದಿಯಡ್ಕ …

ತುಳು ಅಕಾಡೆಮಿ ಸಭಾಂಗಣದಲ್ಲಿ ಪುವೆಂಪು ನೆನಪು ಉದ್ಘಾಟನೆ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯ ಕ್ರಮ ಇಂದು ಬೆಳಿಗ್ಗೆ ಹೊಸಂಗಡಿ ಸಮೀಪದ ದುರ್ಗಿ ಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಭಾವ ಗಾಯನ, ನೃತ್ಯ ವೈಭವ, ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಎಡನೀರು …

ಬಿಜೆಪಿ ಕಚೇರಿಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ಬಾಂಬೆಸೆತ

ಕಣ್ಣೂರು: ಬಿಜೆಪಿ ಕಚೇರಿಗಾಗಿ ಬಾಡಿಗೆಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ   ದುಷ್ಕರ್ಮಿಗಳು ಬಾಂಬೆಸೆದ ಘಟನೆ ಕಣ್ಣೂರು ಸಮೀಪದ ಪೆರಳಶ್ಶೇರಿಯಲ್ಲಿ ನಡೆದಿದೆ. ಪೆರಳಶ್ಶೇರಿ    ಪಳ್ಯ ಎಂಬಲ್ಲಿನ ಶ್ಯಾಮಲ ಎಂಬವರ ಮನೆಗೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ದುಷ್ಕರ್ಮಿಗಳು ಬಾಂಬ್   ಎಸೆದಿದ್ದಾರೆ. ಬಾಂಬ್ ಮನೆಯ ಎದುರುಗಡೆ ಸ್ಫೋಟಗೊಂಡಿದೆ.  ಅದರ ರಭಸಕ್ಕೆ ಸಮೀಪದಲ್ಲಿರುವ ರಸ್ತೆಯ  ತಡೆಗೋಡೆಗೂ ಹಾನಿ ಉಂಟಾಗಿದೆ. ದ್ವಿಚಕ್ರ ವಾಹನದಲ್ಲಿ ತಲುಪಿದ ದುಷ್ಕರ್ಮಿಗಳು   ಬಾಂಬ್ ಎಸೆದಿರುವುದಾಗಿಯೂ, ಅವರು ಸಿಪಿಎಂ ಕಾರ್ಯಕರ್ತರಾಗಿ ದ್ದಾರೆಂದು ಇದೇ ಸಂದರ್ಭದಲ್ಲಿ ಬಿಜೆಪಿ ನೇತಾರರು ಆರೋಪಿಸಿದ್ದಾರೆ. …

ಜಿಲ್ಲಾಧಿಕಾರಿ, ಎಎಸ್‌ಪಿಯ ತುರ್ತು ಕ್ರಮ : ಕುಂಬಳೆಯಲ್ಲಿ 24 ಗಂಟೆ ಬಳಿಕ ವಿದ್ಯುತ್ ಮರುಸ್ಥಾಪನೆ

ಕುಂಬಳೆ: ವಿದ್ಯುತ್ ಮೊಟಕು ಗೊಂಡು 24 ಗಂಟೆ ಕಳೆದರೂ ಸಂಪರ್ಕ ಮರು ಸ್ಥಾಪಿಸದ  ಅಧಿಕಾರಿ ಗಳ ಕ್ರಮವನ್ನು ಪ್ರತಿಭಟಿಸಿ ನಾಗರಿ ಕರು ನಿನ್ನೆ ರಾತ್ರಿ ಕೆಎಸ್‌ಇಬಿ ಕುಂ ಬಳೆ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿದರು. ಇದೇ ವೇಳೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಹಾಗೂ ಎಎಸ್‌ಪಿ ಎಂ. ನಂದಗೋಪನ್ ಮಧ್ಯಪ್ರವೇಶಿ ಸಿದ ಹಿನ್ನೆಲೆಯಲ್ಲಿ ವಿದ್ಯುತ್ ವಿತರಣೆ ಮರು ಸ್ಥಾಪಿಸಲಾಯಿತು. ಮೊನ್ನೆ ರಾತ್ರಿ 7.30ರ ವೇಳೆ ವಿದ್ಯುತ್ ವಿತರಣೆ ಮೊಟಕುಗೊಂಡಿತ್ತು. ನಿನ್ನೆ ರಾತ್ರಿಯಾದರೂ ವಿದ್ಯುತ್ ವಿತರಣೆ ಮರು ಸ್ಥಾಪಿಸಲು ಸಾಧ್ಯವಾಗಿಲ್ಲ. …

ಎಣ್ಮಕಜೆ ಪಂ. ಮಹಿಳಾ ವಾಣಿಜ್ಯ ಸಂಕೀರ್ಣ ವಿ.ಡಿ. ಸತೀಶನ್ ಉದ್ಘಾಟನೆ

ಪೆರ್ಲ: ಎಣ್ಮಕಜೆ ಪಂಚಾಯತ್ ವತಿಯಿಂದ ನಿರ್ಮಿಸಿದ ಮಹಿಳಾ ವಾಣಿಜ್ಯ ಸಂಕೀರ್ಣವನ್ನು ಇಂದು ಬೆಳಿಗ್ಗೆ ರಾಜ್ಯ ವಿಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸಿದರು. ಪೆರ್ಲ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ  ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯೂ ನಡೆಯಿತು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾ ಗಿದರು. ಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಬ್ಲೋಕ್ ಪಂ. ಜನಪ್ರತಿನಿಧಿಗಳು,ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.

ಮುಟ್ಟಿದರೆ ಸುಡುವಷ್ಟು ಬೆಳೆದ ಚಿನ್ನದ ಬೆಲೆ

ಕೊಚ್ಚಿ: ಜನಸಾಮಾನ್ಯರಿಗೆ ಚಿನ್ನವನ್ನು ಸ್ರ‍್ಶಿಸಿದರೆ ಸುಟ್ಟು ಬಿಡುವ ಸ್ಥಿತಿ ರ‍್ಮಾಣವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 2400 ರೂ. ಹೆಚ್ಚಳವಾಗಿದೆ. ಇದರೊಂದಿಗೆ ಪವನ್ಗೆ 94,360 ರೂ. ಎಂಬ ದಾಖಲೆ ರ‍್ಮಾಣವಾ ಗಿದೆ. ಗ್ರಾಂನಲ್ಲಿ 300 ರೂ. ಇಂದು ಹೆಚ್ಚಾಗಿ 11,795 ರೂ.ಗೆ ಮಾರಾಟವಾಗುತ್ತಿದೆ. ಪವನ್ಗೆ ಒಂದು ಲಕ್ಷ ಎಂಬ ಮೈಲುಗಲ್ಲನ್ನು ಶೀಘ್ರವೇ ತಲುಪುವ ನಿರೀಕ್ಷೆ ಇರಿಸಲಾಗಿದೆ. ಅಂತಾರಾಷ್ಟ್ರ ಮಟ್ಟದಲ್ಲಿನ ಚಿನ್ನದ ಬೆಲೆ ಹೆಚ್ಚಳ ರಾಜ್ಯದಲ್ಲೂ ಪ್ರಕಟವಾಗುತ್ತಿದೆ.

ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಇಬ್ಬರ ಬಂಧನ; 10 ಕೋಳಿಗಳ ವಶ

ಕಾಸರಗೋಡು: ಕುತ್ತಿಕೋಲ್ ಕಳಕ್ಕರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಹತ್ತು ಕೋಳಿಗಳನ್ನು ವಶಕ್ಕೆ ತೆಗೆಯಲಾಗಿದೆ. ನಿನ್ನೆ ಸಂಜೆ 6 ಗಂಟೆ ವೇಳೆ ಬೇಡಗಂ ಎಸ್.ಐ. ಸುಮೇಶ್‌ರಾಜ್ ನೇತೃತ್ವದಲ್ಲಿ ಕೋಳಿ ಅಂಕಕ್ಕೆ ಪೊಲೀಸರು ಸುತ್ತುವರಿದಿದ್ದಾರೆ. ಜಿಲ್ಲಾ ಸ್ಪೆಶಲ್ ಬ್ರಾಂಚ್‌ನ ವರದಿಯ ಆಧಾರದಲ್ಲಿ ಈ ಪ್ರದೇಶದ ಮೇಲೆ ಪೊಲೀಸರು ನಿಗಾಯಿರಿಸಿದ್ದರು. ಕೋಳಿ ಅಂಕ ನಡೆಯುತ್ತಿದೆ ಎಂದು ಖಚಿತಪಡಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರನ್ನು ಕಂಡೊಡನೆ ಕೋಳಿ ಅಂಕದಲ್ಲಿ ನಿರತರಾಗಿದ್ದವರು ಪರಾರಿ ಯಾಗಿದ್ದರು. ಈ …

ಎರಡು ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಅನಿರೀಕ್ಷಿತ ಪತ್ತೆ: ಪ್ರಕರಣ ಸುಖಾಂತ್ಯ

ಬಂದ್ಯೋಡು: ನಾಪತ್ತೆಯಾದ ವ್ಯಕ್ತಿಯೋರ್ವರಿಗಾಗಿ ಹುಡುಕಾಡುತ್ತಿದ್ದ ಮಧ್ಯೆ ಅವರು ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಇಚ್ಲಂಗೋಡು ಮೇಲಿನಮನೆ ನಿವಾಸಿ ವಿಠಲ ರೈ (75) ನಾಪತ್ತೆಯಾದ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಲಾಗಿತ್ತು. ಆದಿತ್ಯವಾರ ಸಂಜೆ ಮನೆಯಿಂದ ತೆರಳಿದ ಇವರು ಬಳಿಕ ಹಿಂತಿರುಗಿರಲಿಲ್ಲ. ಇದರಿಂದಾಗಿ ಎರಡು ದಿನಗಳಿಂದ ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬ  ಸಂಕಟಪಡುತ್ತಿದ್ದ ಮಧ್ಯೆ ಇಂದು ಬೆಳಿಗ್ಗೆ ಮನೆ ಪರಿಸರದ ಇನ್ನೊಂದು ಮನೆಯ ಸಿಟೌಟ್‌ನಲ್ಲಿ ಇವರು ಕುಳಿತಿರುವುದು ಪತ್ತೆಯಾಗಿದೆ. ಬಳಿಕ ಆ ಮನೆಯವರು ಇವರನ್ನು  ಗುರುತು …

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾಜಿಲ್ಲೆಯಲ್ಲಿ ಇಂದು ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಆ ವೇಳೆ ಭಾರತೀಯ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಆ ಮೂಲಕ ಮಚ್ಚಿಲ್ ಸೆಕ್ಟರ್‌ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕಿಸ್ತಾನ ಭಯೋತ್ಪಾದಕರು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದರು. ಅದನ್ನು ಗಮನಿಸಿದ ಭಾರತೀಯ ಸೇನೆ ತಕ್ಷಣ ಪ್ರತಿದಾಳಿ ನಡೆಸಿ ಉಗ್ರರು ನುಸುಳುವ ಯತ್ನವನ್ನು ತಡೆದಿದೆ ಮಾತ್ರವಲ್ಲ ಇಬ್ಬರು ಉಗ್ರರನ್ನು …

ಯುವಕ ನಾಪತ್ತೆ

ಮಂಜೇಶ್ವರ: ಕುಂಜತ್ತೂರು ಪದವಿನಲ್ಲಿ ಕಾರ್ಯಾಚರಿ ಸುತ್ತಿರುವ ಕಾರ್ಖಾನೆಯೊಂದರ ನೌಕರ ಉತ್ತರಪ್ರದೇಶ ನಿವಾಸಿ ರೋಹಿತ್ ಕುಮಾರ್ (26) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಮೂರು ತಿಂಗಳ ಹಿಂದೆ ಕುಂಜತ್ತೂರಿಗೆ ಬಂದು ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಕಂಪೆನಿ ಅಧೀನದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಇವರು ವಾಸವಾಗಿದ್ದರು. ಈ ತಿಂಗಳ 10ರಂದು ಬೆಳಿಗ್ಗೆ 7.30ರ ವೇಳ ಮನೆಯಿಂದ ಹೋದ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ  ಮಾಲಿಕ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಮಂಜೇ ಶ್ವರ ಪೊಲೀಸರು ಕೇಸು ದಾಖ ಲಿಸಿ ತನಿಖೆ …