ಸ್ಥಳೀಯಾಡಳಿತ ಚುನಾವಣೆ: ಹತ್ತೊಂಬತ್ತು ಪಂಚಾಯತ್ಗಳ ಮೀಸಲಾತಿ ಕ್ರಮ ಪೂರ್ಣ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಪೂರ್ವಭಾವಿಯಾಗಿ ನಡೆಸಲಾಗುತ್ತಿರುವ ವಾರ್ಡ್ ವಿಭಜನೆಗಳ ಪೈಕಿ ಮಂಜೇಶ್ವರ, ಕಾರಡ್ಕ ಮತ್ತು ಹೊಸದುರ್ಗ ಬ್ಲೋಕ್ಗೊಳಪಟ್ಟ 19 ಗ್ರಾಮ ಪಂಚಾಯತ್ಗಳ ವಾರ್ಡ್ ವಿಭಜನೆ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದೆ. ಇನ್ನು ಕಾಸರಗೋಡು, ನೀಲೇಶ್ವರ ಮತ್ತು ಪರಪ್ಪ ಬ್ಲೋಕ್ಗಳಿಗೊಳಪಟ್ಟ ವಾರ್ಡ್ಗಳ ಮೀಸಲು ಕ್ರಮ ಇಂದು ಬೆಳಿಗ್ಗೆ ಆರಂಭಗೊAಡಿದೆ.ಬ್ಲೋಕ್ ಪಂಚಾಯತ್ಗಳ ವಾರ್ಡ್ಗಳ ಮೀಸಲಾತಿ ಅ. 18 ಮತ್ತು ಜಿಲ್ಲಾ ಪಂಚಾಯತ್ನ ವಾರ್ಡ್ಗಳ ಮೀಸಲಾತಿ ಆಯ್ಕೆ ಅ.21ರಂದು ನಡೆಯಲಿದೆ. ಅದೃಷ್ಠ ಚೀಟಿ ಎತ್ತುವ ಮೂಲಕ ಮೀಸಲಾತಿ ವಾರ್ಡ್ಗಳನ್ನು ಆರಿಸಲಾಗುತ್ತಿದೆ. …

ಕೇರಳ ಇನ್ನು ಕಡುಬಡವರಿಲ್ಲದ ರಾಜ್ಯ: ಘೋಷಣೆ ಶೀಘ್ರ

ತಿರುವನಂತಪುರ: 63,106  ಕುಟುಂಬಗಳಿಗೆ ಸುರಕ್ಷಿತ ಮನೆ, ಆಹಾರ, ಔಷಧಿ ಖಚಿತಪಡಿಸಿ ಕಡು ಬಡವರಿಲ್ಲದ ರಾಜ್ಯವೆಂಬ ಗುರಿಯತ್ತ ಕೇರಳ ಸಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ  64,006 ಕುಟುಂಬಗ ಳನ್ನು ಕಡುಬಡವರಿದ್ದಾರೆಂದು ಪತ್ತೆಹಚ್ಚಲಾಗಿತ್ತು. 1,30,009 ಮಂದಿ ಆದರಲ್ಲಿ ಒಳಗೊಂಡಿದ್ದರು. ಇನ್ನುಳಿದ 900 ಕುಟುಂಬಗಳನ್ನು ಎರಡು ವಾರದೊಳಗೆ ಬಡತನ ಮುಕ್ತವಾಗಿಸಿ ನವಂಬರ್ 1ರಂದು ಕಡುಬಡವರ ರಹಿತ ರಾಜ್ಯವಾಗಿ ಘೋಷಿಸಲು ಸರಕಾರ ಗುರಿಯಿರಿಸಿದೆ. ಕಾಸರಗೋಡು, ಕಣ್ಣೂರು, ಕೋಟ್ಟಯಂ ಜಿಲ್ಲೆಗಳನ್ನು ಕಡು ಬಡತನಮುಕ್ತ ಜಿಲ್ಲೆಗಳಾಗಿ ಘೋಷಿಸಲಾಗಿದೆ. ಕಡುಬಡ ಕುಟುಂಬಗಳ ಪೈಕಿ 4687 ಕುಟುಂಬಗಳಿಗೆ ಲೈಫ್ …

ಕುಂಬಳೆ ಪೇಟೆಯ ನೂತನ ಟ್ರಾಫಿಕ್ ವ್ಯವಸ್ಥೆ ಅಸಮರ್ಪಕ-ಬಿಜೆಪಿ

ಕುಂಬಳೆ: ವೇಗವಾಗಿ ಬೆಳೆಯುತಿ ರುವ ಕುಂಬಳೆ ಪೇಟೆಯಲ್ಲಿ ಇತ್ತೀ ಚೆಗಿನಿಂದ ಜ್ಯಾರಿಗೊಳಿಸಿದ ನೂತನ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಕುಂಬಳೆಗೆ ದಿನನಿತ್ಯ ಬರುವ ಸಾವಿರಾರು ಪ್ರಯಾಣಿಕರು ಹಾಗೂ ವ್ಯಾಪಾರಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆಂದು ಬಿಜೆಪಿ ಪಂಚಾಯತ್ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ. ಈಗ ಜ್ಯಾರಿಗೊಳಿಸಿದ ನೂತನ ಟ್ರಾಪಿಕ್ ನಿಯಮಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಮಾಡಲು ಅಧಿಕಾರಿಗಳು ಗಮನಹರಿ ಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಕುಂಬಳೆ ಪೊಲೀಸ್ ಠಾಣೆ ರಸ್ತೆಯ ಸಮೀಪ ಗ್ರಾಮ ಪಂಚಾಯತ್, ಕೃಷಿ ಭವನ, ಗ್ರಾಮ ಕಚೇರಿ, ಮೃಗಾಸ್ಪತ್ರೆ, ನೀರಾವರಿ ಇಲಾಖೆ …

ಕುಂಬಳೆ ಪೇಟೆಯ ಟ್ರಾಫಿಕ್ ವ್ಯವಸ್ಥೆಗಳು ಅವೈಜ್ಞಾನಿಕ – ಕೆವಿವಿಇಎಸ್

ಕುಂಬಳೆ: ಕುಂಬಳೆ ಪೇಟೆಯ  ಟ್ರಾಫಿಕ್ ಪರಿಷ್ಕರಣೆಗೆ ಸಂಬಂಧಿಸಿ ಜ್ಯಾರಿಗೊಳಿಸಿದ ವ್ಯವಸ್ಥೆಗಳು ಅವೈಜ್ಞಾನಿಕವಾಗಿದೆಯೆಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕ ಅಧ್ಯಕ್ಷ ರಾಜೇಶ್ ಮನಯತ್ ಆರೋಪಿಸಿದ್ದಾರೆ. ಪ್ರಾಯೋಗಾರ್ಥವಾಗಿ ಜ್ಯಾರಿಗೊಳಿಸಿದ ಪರಿಷ್ಕಾರ ಬಸ್ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ. ಕುಂಬಳೆಯ ಮಿನಿ ಸಿವಿಲ್ ಸ್ಟೇಷನ್ ಎಂದೇ ತಿಳಿಯಲ್ಪಡುವ ಪೊಲೀಸ್ ಠಾಣೆ ರಸ್ತೆಗೆ ತಲುಪಲು ದೀರ್ಘದೂರ ನಡೆದು ಹೋಗಬೇಕಾದ ಸ್ಥಿತಿ ಉಂಟಾಗಿದೆ. ಶ್ರೀ ಕಣಿಪುರ ಗೋಪಾಲಕೃಷ್ಣ ಕ್ಷೇತ್ರ, ಪಂಚಾಯತ್ ಕಚೇರಿ, ಪೊಲೀಸ್ ಠಾಣೆ, ವಿವಿಧ ಕಚೇರಿಗಳು, ಮೀನು, ಮಾಂಸ ಮಾರುಕಟ್ಟೆಗಳು …

ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಉದ್ಘಾಟನೆ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಉದ್ಘಾಟನಾ ಸಮಾರಂಭ ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಯಿತು. ಇಂದು ಸಮಾಪ್ತಿಗೊಳ್ಳಲಿದೆ. ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ  ವಿಜಯ ಕುಮಾರ್ ಧ್ವಜಾರೋ ಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವರ್ಕಾಡಿ ಪಂಚಾಯತ್  ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಎಕೆಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಕಮಲಾಕ್ಷಿ …

ಭಜನೆ ಹಾಡುಗಾರ, ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತ ವೆಂಕಟ್ರಮಣ ಆಚಾರ್ಯ ಪೆರ್ಲ ನಿಧನ

ಹೊಸಂಗಡಿ: ಮಂಜೇಶ್ವರ ಬೀಚ್ ರಸ್ತೆ ನಿವಾಸಿ ಖ್ಯಾತ ಭಜನೆ ಹಾಡುಗಾರ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಾರ್ಮೋನಿಯಂ ವಾದಕ ಪಿ.ಎನ್ ವೆಂಕಟ್ರಮಣ ಆಚಾರ್ಯ ಪೆರ್ಲ (89) ಮೊನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಇವರು ಆರಿಕ್ಕಾಡಿ ಕೆಳಗಿನ ಮನೆ ತರವಾಡಿನ ಹಿರಿಯರಾಗಿದ್ದರು. ಇವರ ಭಜನೆಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿತ್ತು. ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನಿಂದ ಸನ್ಮಾನಗೊಂಡಿದ್ದರು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಸಂಘದ ಪ್ರಾರಂಭ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಹೇಮಾವತಿ, …

ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್ ಆರಂಭ

ಕಾಸರಗೋಡು: ಮಂಗಳೂರಿಗೆ ಕಾಸರಗೋಡು ಡಿಪ್ಪೋದಿಂದ ಹೊಸತಾಗಿ ಆರಂಭಿಸಿದ ಕೆಎಸ್‌ಆರ್ ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್‌ಗೆ ಶಾಸಕ ಎನ್.ಎ. ನೆಲ್ಲಿಕುನ್ನು ಚಾಲನೆ ನೀಡಿದರು. ಕಾಸರಗೋಡು ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಟಿಒ ಪ್ರಿಯೇಶ್ ಕುಮಾರ್, ಕಂಟ್ರೋಲಿಂಗ್ ಆಫೀಸರ್ ಎಂ.ಕೆ. ಸಜಿತ್, ಮೋಹನನ್ ಪಾಡಿ, ನಂದ ಕುಮಾರ್ ಭಾಗವಹಿಸಿದರು. ಕುಂಬಳೆ, ಬಂದ್ಯೋಡು, ಕೈಕಂಬ, ಉಪ್ಪಳ, ಹೊಸಂಗಡಿ, ಮಂಜೇಶ್ವರ, ತಲಪಾಡಿ, ತೊಕ್ಕೊಟ್ಟು ಎಂಬೆಡೆಗಳಲ್ಲಿ ಈ ಬಸ್‌ಗೆ ನಿಲುಗಡೆ ಇರುತ್ತದೆ. ಎರಡು ಬಸ್‌ಗಳು ಈ ರೀತಿ ಸಂಚಾರ ಆರಂಭಿಸಿವೆ.

ವಿದ್ಯಾರ್ಥಿನಿಯರನ್ನು ಕಾರಿನಲ್ಲಿ ಹಿಂಬಾಲಿಸಿ ಫೋನ್ ನಂಬ್ರ ನೀಡುವಂತೆ ಒತ್ತಾಯ: ಇಬ್ಬರ ಬಂಧನ

ಮಂಜೇಶ್ವರ: ರಸ್ತೆಯಲ್ಲಿ ನಡೆದುಹೋಗುತ್ತಿರುವ ವಿದ್ಯಾರ್ಥಿನಿಯರ ಸಹಿತ ಯುವತಿಯರನ್ನು ಕಾರಿನಲ್ಲಿ ಹಿಂಬಾಲಿಸಿ ಅವರಲ್ಲಿ ಫೋನ್ ನಂಬ್ರ ನೀಡುವಂತೆ ಒತ್ತಾಯಿಸುವ ತಂಡಗಳು ಮಂಜೇಶ್ವರ ಭಾಗದಲ್ಲಿ ವ್ಯಾಪಕಗೊಂಡ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ಒಂದು ದೂರಿನಂತೆ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಉದ್ಯಾವರ ನಿವಾಸಿ ಜಮಾಲುದ್ದೀನ್ ಫೈಸಲ್ (39) ಹಾಗೂ ಹೊಸಬೆಟ್ಟು ನಿವಾಸಿ ರಾಫಿಲ್ (45) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಲ್ಲಿ ನಡೆದು …

ಎಣ್ಮಕಜೆ ಬಳಿ ಜುಗಾರಿ ದಂಧೆ: 6 ಮಂದಿ ಸೆರೆ; 1,03,820 ರೂ. ವಶ

ಪೆರ್ಲ: ಎಣ್ಮಕಜೆ ಕುಂಞಿಪ್ಪಾರ ಎಂಬಲ್ಲಿನ  ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 1,03,820 ರೂಪಾಯಿಗಳನ್ನು ವಶಪಡಿಸಲಾಗಿದೆ. ಅಡ್ಯನಡ್ಕ ಚವರ್ಕಾಡ್ ನಿವಾಸಿ ಕೆ. ಗಿರೀಶ್ (36), ಸುರತ್ಕಲ್ ಕಾನ ಗಣೇಶ್ ಬೀಡಿ ಫ್ಯಾಕ್ಟರಿ ಸಮೀಪದ ಮುಹಮ್ಮದ್ ಹನೀಫ (48), ದಕ್ಷಿಣ ಕನ್ನಡ ಮಡಿಗುಡ್ಡೆ ಬಲ್ಲಾಳ್‌ಬಾಗ್‌ನ ರಾಜ (53), ವಿಟ್ಲದ ಪ್ರಶಾಂತ (34), ಎಣ್ಮಕಜೆ ಪಳ್ಳಕ್ಕಾನದ ಅಬ್ದುಲ್ಲ (55), ಮಂಗಳೂರು ಕುಂಜುಮುಗರುವಿನ ರಾಧಾಕೃಷ್ಣನ್ ನಾಯರ್ (56) ಎಂಬಿವರನ್ನು ಬದಿಯಡ್ಕ ಎಸ್‌ಐ ಟಿ. ಅಖಿಲ್, …

ಯುವತಿ ನಿದ್ದೆಯಲ್ಲಿ ನಿಧನ

ಕಾಸರಗೋಡು: ನಿದ್ರಿಸಿದ್ದ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಳಿಯತ್ತಡ್ಕ ಬಳಿಯ ಗುವೆತ್ತಡ್ಕ ಜಿ.ಕೆ.ನಗರದ ವಿನ್ಸೆಂಟ್ ಕ್ರಾಸ್ತ ಎಂಬವರ ಪುತ್ರಿ ಸೌಮ್ಯ ಕ್ರಾಸ್ತ (25) ಮೃತ ಯುವತಿ. ಈಕೆ ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳಲಿಲ್ಲವೆನ್ನಲಾಗಿದೆ. ಇದರಿಂದ ಮನೆಯವರು ಎಬ್ಬಿಸಲೆತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಅಷ್ಟರೊಳಗೆ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಸಂಬಂಧಿಕರಲ್ಲಿ ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಯಿತು. …