ಶಬರಿಮಲೆ ದೇವಸ್ವಂ ಮಂಡಳಿಯ ಆಡಳಿತ ಸಮಿತಿ ವಿರುದ್ಧವೂ ಎಫ್.ಐ.ಆರ್ ದಾಖಲು: ಸಂಕಷ್ಟದಲ್ಲಿ ಸಿಲುಕಿದ ಎಡರಂಗ , ಇ.ಡಿಯಿಂದಲೂ ಸಮಾನಾಂತರ ತನಿಖೆ ಆರಂಭ; ಆರೋಪಿಗಳ ವಿಚಾರಣೆ ಆರಂಭ, ಬಂಧನ ಶೀಘ್ರ
ಪಂದಳಂ: ಶಬರಿಮಲೆ ದೇಗುಲದಿಂದ ಚಿನ್ನ ಕದ್ದ ಪ್ರಕರಣದಲ್ಲಿ 2019ರ ತಿರುವಿದಾಂಕೂರ್ ದೇವಸ್ವಂ ಮಂಡಳಿಯ ವಿರುದ್ಧವೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಅಂದು ಮುಜರಾಯಿ ಮಂಡಳಿ ಅಧ್ಯಕ್ಷರಾಗಿದ್ದ ಸಿಪಿಎಂ ನೇತಾರ ಎ. ಪದ್ಮಕುಮಾರ್ ಹಾಗೂ ಮಂಡಳಿ ಸದಸ್ಯರಾಗಿದ್ದ ಸಿಪಿಎಂ ಪ್ರತಿನಿಧಿಗಳಾದ ಕೆ.ಪಿ. ಶಂಕರ್ದಾಸ್ ಮತ್ತು ಎನ್. ವಿಜಯ್ ಕುಮಾರ್ ಕೂಡಾ ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಆದರೆ ಎಫ್ಐಆರ್ನಲ್ಲಿ ಇವರ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಚಿನ್ನ ಕದ್ದು ಸಾಗಿಸಿದ ಪ್ರಕರಣದಲ್ಲಿ …