ಶಬರಿಮಲೆ ದೇವಸ್ವಂ ಮಂಡಳಿಯ ಆಡಳಿತ ಸಮಿತಿ ವಿರುದ್ಧವೂ ಎಫ್.ಐ.ಆರ್ ದಾಖಲು: ಸಂಕಷ್ಟದಲ್ಲಿ ಸಿಲುಕಿದ ಎಡರಂಗ , ಇ.ಡಿಯಿಂದಲೂ ಸಮಾನಾಂತರ ತನಿಖೆ ಆರಂಭ; ಆರೋಪಿಗಳ ವಿಚಾರಣೆ ಆರಂಭ, ಬಂಧನ ಶೀಘ್ರ

ಪಂದಳಂ: ಶಬರಿಮಲೆ ದೇಗುಲದಿಂದ ಚಿನ್ನ ಕದ್ದ ಪ್ರಕರಣದಲ್ಲಿ 2019ರ  ತಿರುವಿದಾಂಕೂರ್ ದೇವಸ್ವಂ ಮಂಡಳಿಯ ವಿರುದ್ಧವೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಅಂದು ಮುಜರಾಯಿ ಮಂಡಳಿ ಅಧ್ಯಕ್ಷರಾಗಿದ್ದ ಸಿಪಿಎಂ ನೇತಾರ ಎ. ಪದ್ಮಕುಮಾರ್ ಹಾಗೂ ಮಂಡಳಿ ಸದಸ್ಯರಾಗಿದ್ದ ಸಿಪಿಎಂ ಪ್ರತಿನಿಧಿಗಳಾದ ಕೆ.ಪಿ. ಶಂಕರ್‌ದಾಸ್ ಮತ್ತು ಎನ್. ವಿಜಯ್ ಕುಮಾರ್ ಕೂಡಾ ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಇವರ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ.  ಚಿನ್ನ ಕದ್ದು ಸಾಗಿಸಿದ ಪ್ರಕರಣದಲ್ಲಿ …

ಆಟೋರಿಕ್ಷಾದಲ್ಲಿ ಸಾಗಿಸತ್ತಿದ್ದ 108 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಕೂಡ್ಲು ಗಂಗೆ ರಸ್ತೆ ಬಳಿ ಕಾಸರಗೋಡು ಎಕ್ಸೈಸ್ ರೇಂಜ್ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 108 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಆ ವಾಹನದಲ್ಲಿದ್ದ ಮಂಜೇಶ್ವರ ಕುಂಜತ್ತೂರು ನಿಶಾಂತ್ ನಿವಾಸದ ಬಿ. ಪ್ರಕಾಶ್ (36) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಆಟೋರಿಕ್ಷಾವನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ. ಈ ಅಬಕಾರಿ  ದಾಳಿ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ …

ಮದುವೆ ಭರವಸೆಯೊಡ್ಡಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಂಗಳೂರಿನಲ್ಲಿ ಸೆರೆ

ಕಾಸರಗೋಡು: ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಪಡನ್ನ ಕೈಪ್ಪಾಟ್‌ನ ಅಬ್ದುಲ್ ಮನಾಫ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಓರ್ವ ಯುವತಿ ನೀಡಿದ ದೂರಿ ನಂತೆ ಈತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಞಂಗಾಡ್ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ಮೇಲ್ನೋಟದಲ್ಲಿ   ಚಂದೇರ ಇನ್ಸ್ ಪೆಕ್ಟರ್ ಎಂ. ಪ್ರಶಾಂತ್‌ರ ನೇತೃತ್ವದಲ್ಲಿ ಎಸ್‌ಐ ಗಳಾದ ಜಿ.ಒ. ಸದಾನಂದನ್, …

ಪತ್ನಿಗೆ ವೀಡಿಯೋಕಾಲ್ ಮಾಡಿದ ಬೆನ್ನಲ್ಲೇ ಯುವಕ ನಾಪತ್ತೆ: ತನಿಖೆ ಆರಂಭ

ಕುಂಬಳೆ: ಪತ್ನಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಜತ್ತೂರುಪದವಿನಲ್ಲಿ ಫ್ಯಾಕ್ಟರಿಯೊಂ ದರ ನೌಕರನಾದ ರೋಹಿತ್ ಕುಮಾರ್ (26) ನಾಪತ್ತೆಯಾದ ವ್ಯಕ್ತಿ. ಉತ್ತರ ಪ್ರದೇಶ ನಿವಾಸಿಯಾದ ಇವರು ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದು ಕೆಲಸ ಆರಂಭಿಸಿದ್ದರ. ಕಂಪೆನಿಯ ಅಧೀನದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ 7.30ರ ವೇಳೆ ಮನೆಯಿಂದ ಹೋದ ಬಳಿಕ ಇವರು ನಾಪತ್ತೆಯಾಗಿದ್ದಾರೆನ್ನಲಾಗಿದೆ. 8 ಗಂಟೆಗೆ ಊರಿನಲ್ಲಿರುವ ಪತ್ನಿಗೆ ವೀಡಿಯೋ ಕಾಲ್ ಮಾಡಿದ್ದು, ಅನಂತರ ಇವರ ಫೋನ್ ಸ್ವಿಚ್‌ಆಫ್ …

ಗಾಳಿ, ಮಳೆ: ತೆಂಗಿನ ಮರ ಬಿದ್ದು ಮನೆಗೆ ಹಾನಿ; ತುಂಡಾಗಿ ಬಿದ್ದ ವಿದ್ಯುತ್ ಕಂಬಗಳು

ಕುಂಬಳೆ: ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ತೆಂಗಿನಮರವೊಂದು ಬುಡಸಮೇತ ಮಗುಚಿ ವಿದ್ಯುತ್ ಕಂಬ ಹಾಗೂ ಮನೆ ಮೇಲೆ ಬಿದ್ದು ಹಾನಿಯುಂಟಾದ ಘಟನೆ ನಡೆದಿದೆ. ಆರಿಕ್ಕಾಡಿ ಕಡವತ್‌ನ ಖಾತಿಂ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬಿದ್ದಿದೆ. ನಿನ್ನೆ ರಾತ್ರಿ ೯.೩೦ರ ವೇಳೆ ಗಾಳಿ ಮಳೆಗೆ ತೆಂಗಿನ ಮರ ಮನೆ ಮೇಲೆ ಬಿದ್ದಿದ್ದು, ಇದರಿಂದ ಮನೆ ಆಂಶಿಕವಾಗಿ ಹಾನಿಗೊಂಡಿದೆ. ಇದೇ ಪರಿಸರದಲ್ಲಿರುವ ವಿದ್ಯುತ್ ಕಂಬ ಕೂಡಾ ಮುರಿದು ಬಿದ್ದಿದೆ. ಘಟನೆ ವೇಳೆ ಮನೆಯೊಳಗೆ ಖಾತಿಂ ಹಾಗೂ ಪತ್ನಿ, …

ಟ್ಯಾಕ್ಸಿ ಚಾಲಕ ಜ್ವರ ಬಾಧಿಸಿ ಮೃತ್ಯು

ಮಂಜೇಶ್ವರ: ಜ್ವರ ಬಾಧಿಸಿ ಟ್ಯಾಕ್ಸಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ನಿವಾಸಿ ದಿ| ಫಕ್ರುದ್ದೀನ್‌ರ ಪುತ್ರ ಅಬ್ದುಲ್ ಜಬ್ಬಾರ್ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ಇವರು ಊರಿಗೆ ಬಂದ ಬಳಿಕ ಉದ್ಯಾವರ ದಲ್ಲಿ ಟ್ಯಾಕ್ಸಿ ಚಾಲಕನಾಗಿದ್ದರು. ನಾಲ್ಕು ದಿನಗಳ ಹಿಂದೆ ಇವರಿಗೆ ಜ್ವರ ಬಾಧಿಸಿತ್ತು. ಕ್ಲಿನಿಕ್‌ವೊಂದ ರಿಂದ ಚಿಕಿತ್ಸೆ ಪಡೆದಿದ್ದರೂ ಜ್ವರ ಕಡಿಮೆಯಾಗಿರಲಿಲ್ಲ. ಈ ಮಧ್ಯೆ  ಜ್ವರ ಉಲ್ಬಣಗೊಂಡು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಇದರಿಂದ ಕೂಡಲೇ ಇವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ …

ನಕಲಿ ಚಿನ್ನ ಅಡವಿರಿಸಿ ವಂಚನೆ: ತೆರುವತ್ ನಿವಾಸಿ ವಿರುದ್ಧ ಕೇಸು

ಕುಂಬಳೆ: ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚಿಸಿದ ಬಗ್ಗೆ ದೂರಲಾಗಿದೆ. ಮುತ್ತೂಟ್ ಫಿನಾನ್ಸ್  ಕುಂಬಳೆ ಶಾಖೆ ಮೆನೇಜರ್ ನೀಲೇಶ್ವರ ಪೇರಾಲ್ ಪೂವಲಂಕೈಯ ಶ್ರೀಕಲ ಶಿಜು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಮುತ್ತೂಟ್ ಫಿನಾನ್ಸ್‌ನ ಕುಂಬಳೆ ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ 2.3 ಲಕ್ಷ ರೂಪಾಯಿ ಲಪಟಾಯಿಸಿದ ಆರೋಪದಂತೆ ಕಾಸರಗೋಡು ತೆರುವತ್‌ನ ಕೆ. ಮುಹಮ್ಮದ್ ಸಲೀಂ (26) ವಿರುದ್ಧ ಕೇಸು ದಾಖಲಿಸಲಾಗಿದೆ. ಸೆ. 29ರಂದು ಈತ 31ಗ್ರಾಂ ನಕಲಿ …

ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸಲೆತ್ನಿಸಿದ ಸ್ನೇಹಿತ, ಅಗ್ನಿಶಾಮಕದಳ ಸಿಬ್ಬಂದಿ ಸೇರಿ ಮೂವರ ಸಾವು

ಕೊಲ್ಲಂ: ಬಾವಿಗೆ ಹಾರಿದ ಯುವತಿಯನ್ನು ರಕ್ಷಿಸಲೆತ್ನಿಸಿದ  ಸ್ನೇಹಿತ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ, ಯುವತಿ ಸೇರಿದಂತೆ ಮೂವರು ದಾರುಣವಾಗಿ  ಸಾವನ್ನಪ್ಪಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ನೆಟ್ಟುವತ್ತೂರು ಪಂಚಾಯತ್‌ನ ಅನಕೋಟ್ಟೂರು ಪಡಿಞಾರ್ ಮುಂಡಪ್ಪಾರಕ್ಕಲ್ ವಿಷ್ಣು ವಿಲಾಸ್ ನಿವಾಸಿ ಅರ್ಚನ (33), ಆಕೆಯ ಜೊತೆ ವಾಸಿಸುತ್ತಿರುವ ಸ್ನೇಹಿತ ಕೊಡುಂಗಲ್ಲೂರು ನಿವಾಸಿ ಶಿವಕೃಷ್ಣನ್ (24) ಮತ್ತು ಅವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೊಟ್ಟಾರಕ್ಕರ ಅಗ್ನಿಶಾಮಕದಳದ ಸಿಬ್ಬಂದಿ ಅಟ್ಟಿಂಗಾಲ್ ಇಳಮ್ಮತ್ತಿಲ್ ಸೋನಿ ಎಸ್. ಕುಮಾರ್ (36) ಸಾವನ್ನಪ್ಪಿದ ದುರ್ದೈವಿಗಳು. ಅರ್ಚನ ನಿನ್ನೆ …

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ದಂಪತಿಯ 2.40 ಕೋಟಿ ರೂ. ಲಪಟಾವಣೆ: 50 ಲಕ್ಷ ರೂ. ಮರಳಿ ವಶಪಡಿಸಿದ ಸೈಬರ್ ಪೊಲೀಸ್

ಕಾಸರಗೋಡು: ಕಾಞಂಗಾಡ್ ನಿವಾಸಿಗಳಾದ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ವಂಚನೆಯಲ್ಲಿ ಸಿಲುಕಿಸಿ 2.40 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ 50 ಲಕ್ಷ ರೂಪಾಯಿಗಳನ್ನು ಕಾಸರಗೋಡು ಸೈಬರ್ ಪೊಲೀಸರು ಮರಳಿ ವಶಪಡಿಸಿಕೊಂಡಿದ್ದಾರೆ. ವಂಚನೆಗಾರರು ಠೇವಣಿಯಿರಿಸಿದ ಇಂಡಸಿಂಡ್ ಬ್ಯಾಂಕ್‌ನ ಬಿಹಾರದ ಸಂಪತ್‌ಚಕ್ ಬ್ರಾಂಚ್‌ನಿಂದ ಎಂಟು ವಾರಗಳಲ್ಲಾಗಿ ೫೦ ಲಕ್ಷ ರೂ. ವಶಪಡಿಸಲಾಗಿದೆ. ಕಾಞಂಗಾಡ್‌ನ ನಿವೃತ್ತ ಅಧ್ಯಾಪಕ ಹಾಗೂ ವೈದ್ಯೆಯಾದ ಪತ್ನಿಯ ಹಣವನ್ನು 2025 ಆಗಸ್ಟ್ 12ರಿಂದ 21ರವರೆಗಿನ ದಿನಾಂಕಗಳಲ್ಲಿ ಹಲವು ಬಾರಿಯಾಗಿ ಲಪಟಾಯಿಸಲಾಗಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಒಳಗೊಂಡಿರುವುದಾಗಿಯೂ …

ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಎಂಎಸ್‌ನಿಂದ ಪಾದಯಾತ್ರೆ

ಕಾಸರಗೋಡು: ಕೇರಳ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಬಿಎಂಎಸ್ ಕಾಸರಗೋಡು ನಗರಸಭಾ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ರಾಘವನ್ ಜಾಥಾ ಲೀಡರ್ ಮನೋಜ್ ಕುಮಾರ್‌ರಿಗೆ ಧ್ವಜ ಹಸ್ತಾಂತರಿಸಿ ಪಾದಯಾತ್ರೆ ಉದ್ಘಾಟಿಸಿದರು. ನಗರಸಭಾ ಸಮಿತಿ ಅಧ್ಯಕ್ಷ ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಜಿಲ್ಲಾ ಸಹ ಸಂಪರ್ಕ್ ಪ್ರಮುಖ್ ಅರುಣ್ ಕುಮಾರ್, ವಲಯ ಅಧ್ಯಕ್ಷ ಬಾಲಕೃಷ್ಣನ್, ಎಸ್.ಕೆ. ಉಮೇಶ್ ಮಾತನಾಡಿದರು. ಪಾದಯಾತ್ರೆಗೆ ವಿವಿಧ ಕೇಂದ್ರಗಳಲ್ಲಿ ಸ್ವಾಗತ ನೀಡಲಾಯಿತು. ಸಮಾರೋಪ ಕಾರ್ಯಕ್ರಮವನ್ನು ಬಿಎಂಎಸ್ ಜಿಲ್ಲಾ …