ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆ

ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ 474.9 ಗ್ರಾಂ ಚಿನ್ನವನ್ನು ಕದ್ದು ಸಾಗಿಸಲಾಗಿದೆ ಯೆಂದು ಈ ಬಗ್ಗೆ ತನಿಖೆ ನಡೆಸಿದ ದೇವಸ್ವಂ ವಿಜಿಲೆನ್ಸ್ ಎಸ್ಪಿ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನ ಲೇಪ ನಡೆಸಿದ ಬಳಿಕ ಬಾಕಿ ಉಳಿದ 474.9 ಗ್ರಾಂ ಚಿನ್ನವನ್ನು ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ …

ಮದ್ಯಪಾನಗೈದು ಜಗಳ: ಮಾವನನ್ನು ಹೊಡೆದು ಕೊಂದ ಅಳಿಯ

ತಿರುವನಂತಪುರ: ಮಾವನನ್ನು ಅಳಿಯ ಹೊಡೆದು ಕೊಂದ ಘಟನೆ ನಡೆದಿದೆ. ಕುಡಪ್ಪನಕುನ್ನು ನಿವಾಸಿ ಸುಧಾಕರನ್ ಕೊಲೆಗೀಡಾದವರು. ಈತನ ಅಳಿಯ ರಾಜೇಶ್ ಆಕ್ರಮಣ ನಡೆಸಿದ್ದಾನೆ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ರಾಜೇಶ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುಧಾಕರ ಹಾಗೂ ರಾಜೇಶ್ ಒಂದೇ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಕೊಲೆ ನಡೆಸಲಾಗಿದೆ. ಮದ್ಯಪಾನ ಗೈದು ಬರುತ್ತಿದ್ದ ರಾಜೇಶ್ ದಿನವೂ ಮಾವನ ಜೊತೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದನೆನ್ನಲಾಗಿದೆ. ನಿನ್ನೆ ರಾತ್ರಿಯೂ ಕುಡಿದು ಬಂದು ಮಾವನಲ್ಲಿ ಜಗಳ ನಡೆಸಿದ್ದು, ಕ್ರೂರವಾಗಿ ಹಲ್ಲೆಗೈದಿದ್ದಾನೆ. ಈ ಬಗ್ಗೆ ಪೊಲೀಸರಿಗೆ …

ಅನಧಿಕೃತ ಮರಳು ಸಾಗಾಟ: ಪಿಕಪ್ ವಶ ಚಾಲಕ ಸೆರೆ

ಪೈವಳಿಕೆ: ಕಳಾಯಿ ಹೊಳೆಯಿಂದ ಅನಧಿಕೃತ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್‌ನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಠಾಣೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ ವಶಪಡಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಕಳಾಯಿ ಪರಿಸರದಿಂದ ಸೆರೆ ಹಿಡಿಯಲಾಗಿದೆ. ಚಾಲಕ ಮೀಯಪದವು ಬೇರಿಕೆ ನಿವಾಸಿ ಮೊಹಮ್ಮದ್ ಶಾಫಿ (27) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಎಸ್‌ಐ ಗಸ್ತು ನಡೆಸುತ್ತಿದ್ದ ವೇಳೆ ಕೊಮ್ಮಂಗಳ ಭಾಗಕ್ಕೆ ತೆರಳುತ್ತಿದ್ದ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದ ವೇಳೆ ದಾಖಲುಪತ್ರಗಳಿಲ್ಲದೆ ಮರಳು ಸಾಗಿಸುತ್ತಿದ್ದ …

ಕೋಟೆಕ್ಕಲ್ ಆರ್ಯ ವೈದ್ಯಶಾಲಾ ಏಜೆಂಟ್ ನಿಧನ

ಮಂಜೇಶ್ವರ: ಹೊಸಂಗಡಿ ಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಕೋಟ್ಟಕ್ಕಲ್ ಆರ್ಯವೈದ್ಯ ಶಾಲಾ ಮಾಲಕ ಚಿಗುರುಪಾದೆ ತೊಟ್ಟೆತ್ತೋಡಿ ನಿವಾಸಿ ಪಿ.ಶೇಷಪ್ಪ ವೈದ್ಯರ್ ಪೆರ್ವಡಿ (74) ಕುಸಿದು ಬಿದ್ದು ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಸುಮಾರು 11 ಗಂಟೆ ವೇಳೆ ಹೊಸಂಗಡಿಯಲ್ಲಿರುವ ವೈದ್ಯ ಶಾಲೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಮಂ ಗಳೂರು ಆಸ್ಪತ್ರೆಗೆ ತಲುಪಿಸಿದರೂ ನಿಧನ ಹೊಂದಿದರು.ಮೃತರು ಪತ್ನಿ ತೊಟ್ಟೆತ್ತೋಡಿ ಶಾಲೆಯ ನಿವೃತ್ತ ಅಧ್ಯಾಪಿಕೆ ವಿಜಯಲಕ್ಷಿ÷್ಮÃ, ಸಹೋದರ ಮೋನಪ್ಪ ಮೂಲ್ಯ, ಸಹೋದರಿ ಯರು …

ಸೈಬರ್ ವಂಚನೆ ಪ್ರಕರಣ: ಆಲಪ್ಪುಳ ನಿವಾಸಿ ಸೆರೆ

ಕಾಸರಗೋಡು:  ಸೋಶ್ಯಲ್ ಮೀಡಿಯಾದ ಮೂಲಕ ಶೇರ್ ಮಾರ್ಕೆಟ್‌ಗೆ ಸಂಬಂಧಿಸಿದ ತರಗತಿಗಳನ್ನು ನೀಡಿ ಬಳಿಕ ಹಲವು ರೀತಿಯ ಅಗತ್ಯಗಳ  ನೆಪವೊಡ್ಡಿ ಹಣ ಎಗರಿಸಿದ ಪ್ರಕರಣದ ಓರ್ವನನ್ನು ಕಾಸರಗೋಡು ಸೈಬರ್ ಪೊಲೀಸರು  ಬಂಧಿಸಿದ್ದಾರೆ. ವಲಿಯಪರಂಬ ಇಡಯಿಲ್ಲಾಕಾಟ್ ನಿವಾಸಿಯೋರ್ವರಿಂದ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 20.13  ಲಕ್ಷ ರೂ. ಎಗರಿಸಿದ ನಾಲ್ವರು ಆರೋಪಿಗಳ ಪೈಕಿ ಓರ್ವನಾದ ಆಲಪ್ಪುಳ ಅಂಬಲಪ್ಪುಳ ಕಾರೂರು ನಿವಾಸಿ ಜಿ. ಬಿಜು ಕುಮಾರ್ (54) ಬಂಧಿತ ಆರೋಪಿ. ಹೀಗೆ ವಂಚಿಸಿದ ಹಣದಲ್ಲಿ ಮೂರು ಲಕ್ಷ ರೂ. ಬಿಜು ಕುಮಾರ್‌ನ ಮಾಲಕತ್ವದಲ್ಲಿರುವ …

ಮುಂಡಿತ್ತಡ್ಕ ರಸ್ತೆಯ ಶೋಚನೀಯಾವಸ್ಥೆ: ಪರಿಹಾರ ಕಂಡುಕೊಳ್ಳಲು ಆಗ್ರಹ

ಕಾಸರಗೋಡು: ಕಾಸರಗೋಡು -ಮುಂಡಿತ್ತಡ್ಕ ರಸ್ತೆ ಮಳೆಗಾಲದ ಬಳಿಕ ತೀವ್ರ ಶಿಥಿಲಗೊಳ್ಳತೊಡ ಗಿದ್ದು, ರಸ್ತೆಯ ಮಧ್ಯ ಭಾಗ ಮತ್ತು ಇಕ್ಕೆಡೆಗಳಲ್ಲಿ ಭಾರೀ ಹೊಂಡಗಳು ರೂಪುಗೊಂಡಿದ್ದು, ಅದು ಸಾರಿಗೆ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸತೊಡಗಿದೆ. ಈ ರೂಟ್‌ಗಳಲ್ಲಿ ದೈನಂದಿನ ಹಲವು ಖಾಸಗಿ ಬಸ್‌ಗಳು ಅತ್ತಿತ್ತ ಸೇವೆ ನಡೆಸುತ್ತಿವೆ. ರಸ್ತೆ ಹೊಂಡಗಳಿಂದ ತುಂಬಿ ತುಳುಕುತ್ತಿರುವುದರಿಂದಾಗಿ ಬಸ್‌ಗಳು ಕುಪ್ಪಳಿಸಿಕೊಂಡು ಸಾಗಬೇಕಾದ ಸ್ಥಿತಿ ಉಂಟಾಗಿದೆ.  ಮಾತ್ರವಲ್ಲ ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬರುತ್ತಿದೆ. ಇದರ ಹೊರತಾಗಿ ಇಂತಹ ರಸ್ತೆಯಲ್ಲಿ ಸೇವೆ ನಡೆಸುವ ಬಸ್‌ಗಳೂ  ಹಾನಿಗೊಳಗಾಗಿ …

ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಬೆಂಬಲ: ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ ಓರ್ವ ಸೆರೆ

ಮಂಗಳೂರು: ನಿಷೇಧಿತ ಸಂಘಟನೆಯಾದ  ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಚಾರಪಡಿಸಿದ ವ್ಯಕ್ತಿಯನ್ನು ಮಂಗಳೂರು ನೋರ್ತ್ ಪೊಲೀಸರು ಬಂಧಿಸಿದ್ದಾರೆ. ಕಸಬಾ ರಾಮಕುಂಜ ನಿವಾಸಿ ಬೀಜತ್ತಳಿ ಹೌಸ್ನ ಸಯ್ಯಿದ್ ಇಬ್ರಾಹಿಂ ತಂಙಳ್ (55)ನನ್ನು ಸೆರೆ ಹಿಡಿಯಲಾಗಿದೆ. ಉರ್ವಾಸ್ಟೋರ್ ಸಮೀಪದಿಂದ ಈತನನ್ನು ಸೆರೆ ಹಿಡಿಯಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿದ್ದಾರೆ. ಆರೋಪಿ ವಿರುದ್ಧ ಯುಎಪಿಎ ಪ್ರಕಾರ ಕೇಸು ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಕ್ಟೋಬರ್ ೨೪ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಲಾಗಿದೆ. 2020ರಲ್ಲಿ ಭಾರತ ಸರಕಾರ ಪಿಎಫ್‌ಐಯನ್ನು …

13ರ ಬಾಲಕನಿಗೆ ಸಲಿಂಗರತಿ ಕಿರುಕುಳ: ಎರಡು ಪೋಕ್ಸೋ ಕೇಸು ದಾಖಲು

ಕಾಸರಗೋಡು: ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 13ರ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿದ್ದಾರೆ. ವಿಭಿನ್ನ ದಿನಗಳಲ್ಲಾಗಿ ದೌರ್ಜನ್ಯಗೈದ 23ರ ಯುವಕ ಹಾಗೂ ಇನ್ನೋರ್ವ ಅಪ್ರಾಪ್ತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. 13ರ ಬಾಲಕ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ವಂಚನೆ ನಡೆಸಿದ ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಆನ್‌ಲೈನ್ ವಂಚನೆಗಾಗಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ವಂಚನೆ ನಡೆಸಿದ ಇಬ್ಬರ ವಿರುದ್ಧ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. ಆದರೆ ಈ ಪ್ರಕರಣದ ಆರೋಪಿಗಳು ಈಗ ವಿದೇಶದಲ್ಲಿರುವುದರಿಂದಾಗಿ  ಅವರನ್ನು ಸದ್ಯ ಸೆರೆಹಿಡಿಯಲು ಸಾಧ್ಯವಾಗಿಲ್ಲವೆಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.  ಇದೇ ರೀತಿ ಹಲವು ವಿದ್ಯಾರ್ಥಿಗಳ  ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚನಾ ಜಾಲ ಬಾಡಿಗೆಗೆ ತೆಗೆದುಕೊಂಡು ಅದನ್ನು ತಮ್ಮ ವಂಚನೆಗಾಗಿ ಬಳಸಿದ ಬಗ್ಗೆಯೂ ಸೈಬರ್ ಪೊಲೀಸರಿಗೆ ತಿಳಿಸಿದ್ದಾರೆ. ಹೀಗೆ ಬಾಡಿಗೆಗೆ ತಮ್ಮ ಬ್ಯಾಂಕ್ …

ಮಕ್ಕಳ ಬ್ಯಾಂಕ್ ಖಾತೆಗಳನ್ನು ಬೆಲೆಗೆ ಖರೀದಿಸುವ ಜಾಲ ಕಾಸರಗೋಡಿನಲ್ಲಿ ಕಾರ್ಯವೆಸಗುತ್ತಿದೆ ಎಚ್ಚರ

ಕಾಸರಗೋಡು: ಶಾಲಾ ಕಾಲೇಜು ವಿದ್ಯಾರ್ಥಿಗಳ   ಬ್ಯಾಂಕ್ ಖಾತೆಗಳನ್ನು ಬೆಲೆಗೆ ಖರೀದಿಸಿ ಅದನ್ನು ವಂಚನಾ ಕೃತ್ಯಗಳಿಗಾಗಿ ಉಪಯೋಗಿಸುವ ಜಾಲ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯವೆಸಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದ್ದು ಅದರಂತೆ   ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ  ಇತರ ಮಕ್ಕಳ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರು ನೀಡಿದ ನಿರ್ದೇಶ ಪ್ರಕಾರ ಪೊಲೀಸರು ಇಂತಹ ಕ್ರಮಕ್ಕೆ  ಮುಂದಾಗಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಬ್ಯಾಂಕ್ …