ಅದ್ರುಕುಳಿಯಿಂದ ನಾಪತ್ತೆಯಾದ ಯುವತಿ ಪತ್ತೆಗಾಗಿ ಲುಕೌಟ್ ನೋಟೀಸ್

ಕಾಸರಗೋಡು: ಚೆರ್ಕಳ ಪಾಡಿ ಅದ್ರುಕುಳಿಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದರಂಗವಾಗಿ ವಿದ್ಯಾನಗರ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ(39)ಯ ಪತ್ತೆಗಾಗಿ ಲುಕೌಟ್ ನೋಟೀಸ್ ಹೊರಡಿಸಲಾಗಿದೆ. ಕಳೆದ ಅಕ್ಟೋಬರ್ 25ರಂದು ಬೆಳಿಗ್ಗೆ ಮನೆಯಿಂದ ಹೋದ ಲಕ್ಷ್ಮಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್‌ರ ನೇತೃತ್ವದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆಯಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯ …

ಪಿಡಬ್ಲ್ಯುಡಿಯ ಅನಾಸ್ಥೆ: ಬ್ಯಾಂಕ್ ರಸ್ತೆ ದುರಸ್ತಿಗೊಳಿಸದಿದ್ದರೆ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸುವುದಾಗಿ ಎಚ್ಚರಿಕೆ

ಕಾಸರಗೋಡು: ನಗರದ ರೈಲ್ವೇ ನಿಲ್ದಾಣ-ಕರಂದಕ್ಕಾಡು-ಮಧೂರು ರೂಟ್‌ನಲ್ಲಿ ರಸ್ತೆ ಶೋಚನೀಯಾವಸ್ಥೆ ಗೊಂಡು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಹಲವು ಬಾರಿ ದೂರು ನೀಡಿದ್ದರೂ ಇದುವರೆಗೂ ಸೂಕ್ತ ಪರಿಹಾರ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆ  ಡಾಮರೀಕರಣ ಆರಂಭಗೊಂಡು ತಿಂಗಳುಗಳು ಕಳೆದರೂ ಇನ್ನೂ ಕೂಡಾ ಕಾಮಗಾರಿ ಪೂರ್ತಿ ಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟ ವರಿಗೆ ಈ ಬಗ್ಗೆ ತಿಳಿಸಲಾಗಿದ್ದರೂ ಮಳೆಯ ಹೆಸರಲ್ಲಿ ಮುಂದೂಡಲಾಗು ತ್ತಿತ್ತು.  ಮಳೆಗಾಲ ಮುಗಿದಾಗ ಡಾಮರೀಕರಣ ಪೂರ್ತಿಗೊಳಿಸುವು ದಾಗಿ ಪಿಡಬ್ಲ್ಯು ಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ರಸ್ತೆಯಲ್ಲಿ …

ಬೆಳ್ಳೂರು ಪಂಚಾಯತ್‌ನಲ್ಲಿ ಬಿಜೆಪಿ ನಾಯಕತ್ವ-ಕಾರ್ಯಕರ್ತರ ಮಧ್ಯೆ ಸ್ಪರ್ಧೆ: ಸ್ವತಂತ್ರ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ನಾಮಪತ್ರ ಸಲ್ಲಿಕೆ

ಮುಳ್ಳೇರಿಯ: ಬಿಜೆಪಿಗೆ ಅಡಿ ಪಾಯ ಭದ್ರವಾಗಿರುವ  ಪಂಚಾ ಯತ್‌ಗಳಲ್ಲಿ ಒಂದಾಗಿರುವ ಬೆಳ್ಳೂರಿ ನಲ್ಲಿ ಈ ಬಾರಿ ಪಕ್ಷ ತೀವ್ರ  ಸವಾಲನ್ನು ಎದುರಿಸುತ್ತಿದೆಯೆಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆಯಲ್ಲಿ  ಈ ಪಂಚಾಯತ್ ನಲ್ಲಿ ಪಕ್ಷದ ಮುಖಂ ಡರು ಹಾಗೂ ಕಾರ್ಯಕರ್ತರ ಮಧ್ಯೆ ಪ್ರಧಾನ ಸ್ಪರ್ಧೆಯೆಂದು ಇಲ್ಲಿನವರು ತಿಳಿಸುತ್ತಾರೆ. ಅಭ್ಯರ್ಥಿ ನಿರ್ಣಯದಲ್ಲಿ ಉಂಟಾಗಿ ರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಪಂಚಾಯತ್‌ನಲ್ಲಿ ಈ ಬಾರಿ ಉಪಾ ಧ್ಯಕ್ಷೆಯಾಗಿರುವ ಗೀತಾ ಸ್ವತಂತ್ರೆಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ತನಗಾಗಿ ಅಲ್ಲ ಕಾರ್ಯಕರ್ತರಿಗಾಗಿ ತಾನು …

ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಮುಳಿಯಾರು ಚೂರಿಮೂಲೆಯ ದಿ| ಕೃಷ್ಣ ನಾಯ್ಕ್‌ರ ಪುತ್ರ ಸಿ.ಎಚ್. ರಾಜೇಶ್ವರ (37) ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮನೆಯೊಳಗೆ ಮೃತದೇಹ ಪತ್ತೆಯಾಗಿದೆ. ಇವರು ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ ಪುಷ್ಪ, ಪತ್ನಿ ಸೌಮ್ಯ (ಚಾಪಾಡಿಯಲ್ಲಿ ಅಂಗನವಾಡಿ ಅಧ್ಯಾಪಿಕೆ), ಮಕ್ಕಳಾದ ಗಂಗ, ನಿವೇದ್ಯ, ಸಹೋದರ- ಸಹೋದರಿಯರಾದ ರಘುವರ, ಸುಶೀಲ, ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪನಯಾಲ್ ಬ್ಯಾಂಕ್ ನೌಕರ ಮನೆ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಪನಯಾಲ ಸಹಕಾರಿ ಬ್ಯಾಂಕ್‌ನ ನೌಕರನನ್ನು ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ.  ಪನಯಾಲ್ ನಿವಾಸಿ ಟಿ. ರಾಜೇಂದ್ರನ್ (56) ಮೃತಪಟ್ಟವರು. ಸಿಪಿಎಂ ಬ್ರಾಂಚ್ ಸದಸ್ಯರಾಗಿದ್ದಾರೆ. ೫ ತಿಂಗಳು ಕಳೆದರೆ ಸೇವೆಯಿಂದ ನಿವೃತ್ತರಾಗಲಿರುವಂತೆಯೇ ರಾಜೇಂದ್ರನ್ ಇಂದು ಮುಂಜಾನೆ ಮನೆ ಹಿತ್ತಿಲಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ  ಕಂಡುಬಂದಿದ್ದಾರೆ. ಕೂಡಲೇ ಹಗ್ಗ ತುಂಡುಮಾಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾ ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮಹಜರಿಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಿನ್ನೆ ರಾತ್ರಿವರೆಗೆ ಪಂಚಾಯತ್ …

ಶಬರಿಮಲೆ ಚಿನ್ನ ಕಳವು: ಬಂಧಿತ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಜೈಲಿಗೆ; ತನಿಖೆ ಮಾಜಿ ಮುಜುರಾಯಿ ಸಚಿವರತ್ತ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಬಂಧಿಸಿದ ತಿರುವಿದಾಂಕೂರು ದೇವಸ್ವಂ ಮಂಡಳಿ   ಮಾಜಿ ಅಧ್ಯಕ್ಷ, ಸಿಪಿಎಂ ನೇತಾರ ಹಾಗೂ ಮಾಜಿ ಶಾಸಕನೂ ಆಗಿರುವ  ಎ. ಪದ್ಮಕುಮಾರ್‌ರನ್ನು ಕೊಲ್ಲಂ ವಿಜಿಲೆನ್ಸ್  ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ತಿರುವನಂತಪುರ ಸ್ಪೆಷಲ್ ಜೈಲಿನಲ್ಲಿ ೧೪ ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪದ್ಮಕುಮಾರ್‌ನನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರನ್ನು ಇಂದು …

ನಿವೃತ್ತ ಹಡಗು ಉದ್ಯೋಗಿ ನಿಧನ

ಬದಿಯಡ್ಕ: ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್ ನಿವಾಸಿ ಶ್ಯಾಮ್ ಶೆಟ್ಟಿ (62) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಹಡಗಿನಲ್ಲಿ ಉದ್ಯೋ ಗಿಯಾಗಿದ್ದ ಇವರು ನಿವೃತ್ತಿ ಬಳಿಕ ಮನೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹ ವನ್ನು ನಿನ್ನೆ ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಮೂಕಂಪಾರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದಿವಂಗತರಾದ ರಾಮಯ್ಯ ಶೆಟ್ಟಿ- ಲಕ್ಷ್ಮಿ ಶೆಟ್ಟಿ ದಂಪತಿ ಪುತ್ರನಾದ ಮೃತರು ಪತ್ನಿ ಉಷಲತ (ಬ್ರಹ್ಮಾವರದಲ್ಲಿ ಸರಕಾರಿ ಶಾಲೆ ಅಧ್ಯಾಪಿಕೆ), …

ಸೀಟು ವಿಭಜನೆ ತರ್ಕ: ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನೇತಾರರ ಮಧ್ಯೆ ಹೊಡೆದಾಟ ; ಅಮಾನತು

ಕಾಸರಗೋಡು: ಕಾಂಗ್ರೆಸ್‌ನಲ್ಲಿ ಸೀಟು ವಿಭಜನೆ ತರ್ಕದ ಹಿನ್ನೆಲೆಯಲ್ಲಿ ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ನೇತಾರರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಡಿಸಿಸಿ ಉಪಾಧ್ಯಕ್ಷ ಜೇಮ್ಸ್‌ಪಂದಮಾಕಲ್ ಹಾಗೂ ಡಿ.ಕೆ.ಟಿ.ಎಫ್ ಜಿಲ್ಲಾಧ್ಯಕ್ಷ ವಾಸು ದೇವನ್ ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನಲ್ಲಿ ಸೀಟು ವಿಭಜನೆಗೆ ಸಂಬಂಧಿಸಿ ಹೊಡೆದಾಟ ನಡೆದಿರುವು ದಾಗಿ ಹೇಳಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ದೂರವಾದ ಜೇಮ್ಸ್ ಪಂದಮಾಕಲ್ ಡಿಡಿಎಫ್ ಎಂಬ ಸಂಘಟನೆಯನ್ನು ರೂಪೀಕರಿಸಿದ್ದರು. ಅನಂತರ ಚರ್ಚೆ ನಡೆಸಿ ಕಳೆದ ವರ್ಷ ಅವರ ಸಹಿತ ಏಳು ಮಂದಿಯನ್ನು ಕಾಂಗ್ರೆಸ್‌ಗೆ …

ಆರ್ಲಪದವು ಪರಿಸರದ ಸಿಸಿ ಟಿವಿಯಲ್ಲಿ ಕಂಡುಬಂದ ಪ್ರಾಣಿ ಚಿರತೆಯೇ? ಸ್ಥಳೀಯರಲ್ಲಿ ಮತ್ತೆ ಆತಂಕ

ಬೆಳ್ಳೂರು:  ಬೆಳ್ಳೂರು, ಎಣ್ಮಕಜೆ ಪಂಚಾಯತ್ ಗಡಿ ಪ್ರದೇಶದಲ್ಲಿ  ಚಿರತೆ ಕಂಡುಬಂದಿರುವುದು ಸ್ಥಳೀಯರಲ್ಲಿ ಮತ್ತೆ ಭೀತಿಗೆ ಕಾರಣವಾಗಿದೆ.  ಬೇಡಡ್ಕ ಪಂಚಾಯತ್‌ನ ಕೊಳತ್ತೂರಿನಿಂದ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಹಿಡಿದ ಚಿರತೆಯನ್ನು ಕೇರಳ-ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ, ಪಾಣಾಜೆ, ಆರ್ಲಪದವು  ಜನವಸತಿ ಪ್ರದೇಶದಲ್ಲಿ  ತೆರೆದುಬಿಟ್ಟಿದ್ದರೆಂದು ಈ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಈ ಪರಿಸರದಲ್ಲಿ ಕಳೆದ ಬುಧವಾರ ರಾತ್ರಿ  ಚಿರತೆಯನ್ನು ಹೋಲುವ ಪ್ರಾಣಿಯೊಂದರನ್ನು ಸ್ಥಳೀಯನಾದ ಓರ್ವರು ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಕಂಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಲಪದವು ಬದ್ರಿಯಾ ಮಸೀದಿಯಲ್ಲಿರುವ ಸಿಸಿ ಟಿವಿಯನ್ನು ಪರಿಶೀಲಿಸಿದಾಗ  …

ಕುಖ್ಯಾತ ಕಳವು ಆರೋಪಿ ತೊರಪ್ಪನ್ ಸಂತೋಷ್ ಮೇಲ್ಪರಂಬದಲ್ಲಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿ ತೊರಪ್ಪನ್ ಸಂತೋಷ್ ಮತ್ತೆ ಸೆರೆಗೀಡಾಗಿದ್ದಾನೆ. ಇಂದು ಮುಂಜಾನೆ ಮೇಲ್ಪರಂಬ ಹಳೆಯ ಮಿಲ್ಮಾ ಬೂತ್ ಸಮೀಪದ ಕ್ಯಾಶ್‌ಮಾರ್ಟ್ ಹೈಪರ್ ಮಾರ್ಕೆಟ್‌ನಲ್ಲಿ ಕಳವು ನಡೆಸಲು ಯತ್ನಿಸುತ್ತಿದ್ದ ವೇಳೆ ತೊರಪ್ಪನ್ ಸಂತೋಷ್‌ನನ್ನು ನಾಗರಿಕರು ಸೆರೆ ಹಿಡಿದಿದ್ದಾರೆ. ನಾಗರಿಕರ ಕೈಯಿಂದ ತಪ್ಪಿಸಿಕೊಳ್ಳಲು ಈತ ಸೂಪರ್ ಮಾರ್ಕೆಟ್ ಕಟ್ಟಡದ ಒಂದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಇದರಿಂದ ಕಾಲಿಗೆ ಗಾಯಗೊಂಡಿದ್ದ ಈತ ಓಡಲು ಸಾಧ್ಯವಾಗದೆ ನಾಗರಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾದ ತೊರಪ್ಪನ್ ಸಂತೋಷ್ ಕುಡಿಯಾನ್‌ಮಲ ಪೊಲೀಸ್‌ಠಾಣೆ …