ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕರಣೆ ಇಂದಿನಿಂದ ಜ್ಯಾರಿ

ಕುಂಬಳೆ: ಪೇಟೆಯಲ್ಲಿ ಕಂಡು ಬರುತ್ತಿರುವ ಸಾರಿಗೆ ಅಡಚಣೆ ನಿವಾರಣೆ ಅಂಗವಾಗಿ ಪೊಲೀಸರು ಏರ್ಪಡಿಸಿದ ಟ್ರಾಫಿಕ್ ಪರಿಷ್ಕರಣೆ ಇಂದಿನಿಂದ ಜ್ಯಾರಿಗೆ ಬಂದಿದೆ. ಇಂದಿನಿಂದ ಈ ತಿಂಗಳ 16ರವರೆಗೆ ಈ ವ್ಯವಸ್ಥೆಯನ್ನು ಪ್ರಯೋಗಾರ್ಥವಾಗಿ ಜ್ಯಾರಿಗೊಳಿಸಲಾಗುತ್ತಿದೆ. 16ರ ಬಳಿಕ ಇದನ್ನು ಶಾಶ್ವತಗೊಳಿಸಲಾಗುವುದು. ಅನಂತರ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ನೂತನ ಟ್ರಾಫಿಕ್ ಪರಿಷ್ಕಾರದಂತೆ ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ ನಿರ್ಮಿಸಲಾದ ೬ ಬಸ್ ವೈಟಿಂಗ್ ಶೆಡ್‌ಗಳ ಮುಂಭಾಗದಲ್ಲೇ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳನ್ನು ನಿಲ್ಲಿಸಬೇಕಾಗಿದೆ. ಇದರಂತೆ …

1ರಿಂದ 10ನೇ ತರಗತಿ ತನಕ ಮಲಯಾಳ ಕಲಿಕೆ ಕಡ್ಡಾಯ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ: ಕನ್ನಡ ಭಾಷಾ ಅಲ್ಪಸಂಖ್ಯಾತರಲ್ಲಿ ಕಳವಳ

ತಿರುವನಂತಪುರ: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆರಂಭ ಗೊಂಡು ಹತ್ತನೇ ತರಗತಿ ತನಕ ಮಲಯಾಳಂ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ರಾಜ್ಯ ವಿಧಾನಸಭೆ   ಅನುಮೋದನೆ ನೀಡಿದೆ.  ಹೊರ ರಾಜ್ಯಗಳಲ್ಲಿ ಕಲಿತು ಬಳಿಕ ಕೇರಳದಲ್ಲಿ ೯ ಮತ್ತು ೧೦ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಈ ಮಸೂದೆಯಲ್ಲಿ  ಮಲಯಾಳಂ ಭಾಷಾ ಕಲಿಕೆ ಕಡ್ಡಾಯಗೊಳಿಸಲಾಗಿಲ್ಲ.  ಇಂತಹ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಅವರು ಮಲಯಾಳಂ ಭಾಷೆ ಆಯ್ಕೆ ಮಾಡಬಹುದೆಂದು ಈ ವಿಧಯಕದಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಸg ಗೋಡು ಜಿಲ್ಲೆಯ …

ವಾಹನ ಅಪಘಾತ : ಕೆಎಸ್‌ಇಬಿ ಲೈನ್‌ಮ್ಯಾನ್‌ಗೆ ಗಂಭೀರ ಗಾಯ

ಸೀತಾಂಗೋಳಿ: ಇಲ್ಲಿನ ಕಿನ್‌ಫ್ರಾ ಪಾರ್ಕ್ ಸಮೀಪ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಕೆಎಸ್‌ಇಬಿ ಲೈನ್ ಮ್ಯಾನ್ ಗಂಭೀರ ಗಾಯಗೊಂ ಡಿದ್ದಾರೆ. ಸೀತಾಂಗೋಳಿ ಸೆಕ್ಷನ್‌ನ ಲೈನ್‌ಮ್ಯಾನ್ ಆಗಿರುವ ವಯ ನಾಡು ನಿವಾಸಿ ವಿನೋದ್ (46) ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿನೋದ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಬುಲ್ಲೆಟ್ ಬೈಕ್ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.

ತೈವಳಪ್ಪ್‌ನಲ್ಲಿ ಹಸಿರು ಪತಾಕೆಗೆ ಕಿಚ್ಚಿರಿಸಿರುವುದಾಗಿ ದೂರು: ಯುವಕನ ವಿರುದ್ಧ ಕೇಸು

ಮಾಯಿಪ್ಪಾಡಿ: ಶಿರಿಬಾಗಿಲು ತೈವಳಪ್ಪ್‌ನಲ್ಲಿ ನಬಿ ದಿನಾಚರಣೆ ಯಂಗವಾಗಿ ಸ್ಥಾಪಿಸಿದ್ದ ಹಸಿರು ಪತಾಕೆಯನ್ನು ಕಿತ್ತು ತೆಗೆದು ಬೆಂಕಿ ಹಚ್ಚಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ತೈವಳಪ್ಪ್ ನಿವಾಸಿ ಅಬ್ದುಲ್ಲ ನೀಡಿದ ದೂರಿನಂತೆ ಶಿರಿಬಾಗಿಲಿನ ನವೀನ್ ಕುಮಾರ್ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೆಪ್ಟಂಬರ್ 21ರಂದು ತೈಪಳಪ್ಪ್‌ನಲ್ಲಿ ನಬಿ ದಿನಾ ಚರಣೆಯಂಗವಾಗಿ ಸ್ಥಾಪಿಸಿದ್ದ ಹಸಿರು ಪತಾಕೆಯನ್ನು ಸ್ಥಳೀಯವಾಗಿ ಕಲಹ ಸೃಷ್ಟಿಸಬೇ ಕೆಂಬ ಉದ್ದೇಶದೊಂದಿಗೆ  ನಾಶ ಪಡಿಸಿರುವುದಾಗಿಯೂ, ದೂರು ದಾರನನ್ನು ಹಾಗೂ ಜೊತೆಗಿದ್ದವರನ್ನು ಬೆದರಿಸಿರುವುದಾಗಿಯೂ ಪೊಲೀಸರು ದಾಖಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ.

ಇನ್‌ಸ್ಟಾಗ್ರಾಂ ಮೂಲಕ ಪರಿಚಯ:ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹಲವರಿಂದ ಲೈಂಗಿಕ ದೌರ್ಜನ್ಯ: 5 ಮಂದಿ ಸೆರೆ

ಕಲ್ಲಿಕೋಟೆ: ಇಲ್ಲಿಗೆ ಸಮೀಪದ ನಾದಾಪುರದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಹಲವು ಬಾರಿ ಲೈಂಗಿಕ ದೌರ್ಜನ್ಯಗೈದ ಪ್ರಕರಣದಲ್ಲಿ ಬಸ್ ನೌಕರ ಸಹಿತ ೫ ಮಂದಿ ಸೆರೆಯಾಗಿದ್ದಾರೆ. ಏರಮಲ ಪೂತಲತ್ತ್ ತಾಳೇಕುಣಿ ಆದಿತ್ಯನ್ (19), ಕೋಟಪ್ಪಳಿ ಸಾಯುಜ್ (19) ಆಯಂಚೇರಿ ನಿವಾಸಿ ಸಾಯುಜ್ (20), ತಯ್ಯಿಲ್ ನಿವಾಸಿ ಅನುನಂದ್ (18), ವಲ್ಯೋಟ್ ಪಾರಮ್ಮೇಲ್ ಆದಿತ್ಯನ್ (19) ಸೆರೆಯಾದವರು. ಬಾಲಕಿ ನೀಡಿದ ಹೇಳಿಕೆಯಂತೆ ವಿಭಿನ್ನ ಸಮ ಯಗಳಲ್ಲಿ ದೌರ್ಜನ್ಯ ನಡೆಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ೫ ಕೇಸು ದಾಖಲಿಸಲಾಗಿದೆ. …

ಬಾಲಕಿಗೆ ಕಿರುಕುಳ ನೀಡಿ ಅದರ ವೀಡಿಯೋ ತೋರಿಸಿ ಹಣ ಪಡೆಯಲೆತ್ನಿಸಿದ ಯುವಕರಿಬ್ಬರ ಸೆರೆ

ಕಾಸರಗೋಡು: ಬಾಲಕಿಯೊಂದಿಗೆ ಪ್ರೇಮದ ನಾಟಕವಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿ ಅದರ  ಫೋಟೋ ತೆಗೆದು  ಮತ್ತು ವೀಡಿಯೋ ಚಿತ್ರೀಕರಣ ನಡೆಸಿ ಅದನ್ನು ತೋರಿಸಿ ಹಣ ಪಡೆಯಲೆತ್ನಿಸಿದ ಆರೋಪದಂತೆ ಯುವಕ ಮತ್ತು ಆತನಿಗೆ ಸಹಾಯವೊದಗಿಸಿದ ಸ್ನೇಹಿತನ ವಿರುದ್ಧ  ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಅವರಿಬ್ಬರನ್ನು   ಬಂಧಿಸಿದ್ದಾರೆ. ಮೂಲತಃ ಕೋಳಿಯಡ್ಕ ನಿವಾಸಿ ಹಾಗೂ ಈಗ ವಿದ್ಯಾನಗರ ಬಿಸಿ ರೋಡ್‌ನ ನಿಹಾಲ್ ಅಪಾರ್ಟ್‌ಮೆಂ ಟ್‌ನಲ್ಲಿ ವಾಸಿಸುತ್ತಿರುವ ಕೆ.ಎಂ. ಮೊಹಮ್ಮದ್ ಅಫ್ರೀದಿ (23) ಮತ್ತು ಆತನ ಸ್ನೇಹಿತ ಕಾಸರಗೋಡು ಅಣಂಗೂರು ಸುಲ್ತಾನ್‌ನಗರ …

1 ಲೋಡ್ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ಚಂದೇರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಲೋಡ್ ತಂಬಾಕು ಉತ್ಪನ್ನಗಳ ಸಹಿತ ಉಳಿಯತ್ತಡ್ಕ ನಿವಾಸಿಗಳಾದ ಇಬ್ಬರು ಸೆರೆಗೀಡಾಗಿದ್ದಾರೆ. ಉಳಿಯತ್ತಡ್ಕ ನ್ಯಾಷನಲ್‌ನಗರ ಬಿಸ್ಮಿಲ್ಲಾ ಮಹಲ್‌ನ ಎ.ವಿ. ಶಮೀರ್ (40), ಎ.ಎಂ. ಯೂಸಫ್ (68) ಎಂಬಿವರನ್ನು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಪ್ರಶಾಂತ್‌ರ ನೇತೃತ್ವದಲ್ಲಿ ಬಂಧಿಸಲಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆ ಪಯ್ಯನ್ನೂರು ಭಾಗಕ್ಕೆ ತೆರಳುತ್ತಿದ್ದ ಲಾರಿಯನ್ನು ಮುಂಡ್ಯಕ್ಕಾವ್ ಕ್ಷೇತ್ರ ಸಮೀಪ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ತಂಬಾಕು ಉತ್ಪನ್ನಗಳನ್ನು ಕಾಸರಗೋಡಿನಿಂದ ಲಾರಿಯಲ್ಲಿ …

ಸಂಚರಿಸುತ್ತಿದ್ದ ಟೆಂಪೋ ಬೆಂಕಿಗಾಹುತಿ : ಅನಾಹುತದಿಂದ ಪಾರಾದ ಚಾಲಕ

ಕಾಸರಗೋಡು: ಸಂಚರಿಸುತ್ತಿದ್ದ ಟೆಂಪೋಗೆ ಬೆಂಕಿ ತಗಲಿ ಚಾಲಕ ಕೆಳಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾದ ಘಟನೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಈ ಟೆಂಪೋ ಮೀನು ಹೇರಿಕೊಂಡು ಪಳ್ಳಿಕ್ಕೆರೆಯಿಂದ  ಉಳ್ಳಾಲಕ್ಕೆ ಹೋಗುತ್ತಿತ್ತು. ದಾರಿ ಮಧ್ಯೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಗೆ ತಲುಪಿದಾಗ ಇದ್ದಕ್ಕಿದ್ದಂತೆ ಅದರಲ್ಲಿ ಬೆಂಕಿ ಎದ್ದಿತು. ತಕ್ಷಣ ಚಾಲಕ ಟೆಂಪೋ ನಿಲ್ಲಿಸಿ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾದರು. ಊರವರು ಸೇರಿ ಬೆಂಕಿ ನಂದಿಸಲೆತ್ನಿಸಿ ದರೂ ಅದು ಸಫಲವಾಗಿಲ್ಲ. ಬಳಿಕ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ …

22.5 ಕೆಜಿ ಗಾಂಜಾ ವಶ ಪ್ರಕರಣ : ಮೂವರು ಆರೋಪಿಗಳಿಗೆ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: 2022 ಫೆಬ್ರವರಿ 4ರಂದು ರಾತ್ರಿ ಕಾಸರಗೋಡು ಮೊಗ್ರಾಲ್ ಪುತ್ತೂರಿಗೆ ಸಮೀಪದ ಚೌಕಿ ಪೆಟ್ರೋಲ್ ಬಂಕ್‌ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 22.5 ಕಿಲೋ ಗಾಂಜಾವನ್ನು ಕಾಸರಗೋಡು ಪೊಲೀಸರು ವಶಪಡಿ ಸಿದ ಪ್ರಕರಣದ ಮೂವರು ಆರೋಪಿ ಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ತಲಾ ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾg. ನೆಲ್ಲಿಕಟ್ಟೆ ಅಮೂಸ್ ನಗರದ ಅಬ್ದುಲ್ …

ಬಿಜೆಪಿ ಕಲೆಕ್ಟ್ರೇಟ್ ಮಾರ್ಚ್: ಜಲಫಿರಂಗಿ ಪ್ರಯೋಗ; ವೀರಪ್ಪನ್, ಕಾಯಂಕುಳಂ ಕೊಚ್ಚುಣ್ಣಿಯವರನ್ನು ಮೀರಿಸಿದ ಲೂಟಿ ಕೇರಳದಲ್ಲಿ ನಡೆಯುತ್ತಿದೆ- ಎ.ಪಿ. ಅಬ್ದುಲ್ಲ ಕುಟ್ಟಿ

ಕಾಸರಗೋಡು: ಕಾಡುಗಳ್ಳ ವೀರಪ್ಪನ್ ಮತ್ತು ಕುಖ್ಯಾತ ಚೋರ ಕಾಯಂಕುಳಂ ಕೊಚ್ಚುಣ್ಣಿ ಎಂಬವರನ್ನೂ ಮೀರಿಸುವ ರೀತಿಯ ಲೂಟಿ, ಅವ್ಯವಹಾರ ಹಾಗೂ ಭ್ರಷ್ಟಾಚಾರದತ್ತ ಇಂದು ಕೇರಳ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಹೇಳಿದ್ದಾರೆ. ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜ್ಯ ಮುಜರಾಯಿ ಖಾತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸ ಬೇಕು, ತಿರುವಿದಾಂಕೂರ್ ದೇವಸ್ವಂ ಮಂಡಳಿಯನ್ನು ಬರ್ಖಾಸ್ತುಗೊಳಿ ಸಬೇಕು ಎಂಬಿತ್ಯಾದಿ …