ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಆಧಾರದಲ್ಲಿ ಸಾಲ ವ್ಯವಸ್ಥೆಯಲ್ಲಿ ಬದಲಾವಣೆ

ಮುಂಬೈ: ಚಿನ್ನ, ಬೆಳ್ಳಿ ಅಡವಿರಿಸಿ ಪಡೆಯುವ ಸಾಲದ ವ್ಯವಸ್ಥೆಗಳನ್ನು ರಿಸರ್ವ್ ಬ್ಯಾಂಕ್ ನವೀಕರಿಸಿದೆ. ಚಿನ್ನಾಭರಣ ಸಾಲದಲ್ಲಿ ನಿಯಂತ್ರಣ ಏರ್ಪಡಿಸುವುದೇ ಹೊಸ ವ್ಯವಸ್ಥೆಯಾಗಿದೆ. ಗ್ರಾಹಕರಿಗೆ ಸಂರಕ್ಷಣೆ, ಸಾಲ ಮರುಪಾವತಿಸುವಲ್ಲಿ ಶಿಸ್ತು ಪಾಲನೆ ಎಂಬೀ ಗುರಿಯೊಂದಿಗೆ ಇದನ್ನು ಜ್ಯಾರಿ ಗೊಳಿಸಲಾಗುವುದು. ಪರಿಷ್ಕರಣೆಯ ಮೊದಲ ಹಂತ ಅಕ್ಟೋಬರ್ 1ರಂದು ಜ್ಯಾರಿಗೆ ಬಂದಿದೆ. ದ್ವಿತೀಯ ಹಂತ ಎಪ್ರಿಲ್ 1ರಿಂದ ಜ್ಯಾರಿಗೆ ಬರಲಿದೆ. ಚಿನ್ನಾಭರಣ ಸಾಲ ಪಡೆದು ಬಳಿಕ ಬಡ್ಡಿ ಪಾವತಿಸಿ ನವೀಕರಿಸುವುದು ಹೊಸ ವ್ಯವಸ್ಥೆಯ ಭಾಗವಾಗಿದೆ. ಇದೇ ವೇಳೆ ಸಾಲದ ಮೊತ್ತವನ್ನು ಅದರ …

ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ 12ರಂದು

ಕಾಸರಗೋಡು: ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಭಾಗವಾಗಿ ಐದು ವರ್ಷ ವಯಸ್ಸಿನವರೆಗಿನ ಎಲ್ಲಾ ಮಕ್ಕಳಿಗೆಸುಸಜ್ಜಿತ ಬೂತ್‌ಗಳ ಮೂಲಕ ಔಷಧ ವಿತರಿಸಲಾಗುವುದು. ಜಿಲ್ಲೆಯಲ್ಲಿ ಒಂದು ಲಕ್ಷ ಮಕ್ಕಳಿಗೆ ಬಿಂದು ಔಷಧಿ ನೀಡಲಾಗುವುದು. ಇದಕ್ಕಾಗಿ 1200 ಬೂತ್‌ಗಳನ್ನು ಸ್ಥಾಪಿಸಲಾಗುವುದು. 12 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ರಾಜ್ಯದಾದ್ಯಂತ ಶಾಲೆಗಳು, ಅಂಗನವಾಡಿಗಳು, ಗ್ರಂಥಾಲಯಗಳು ಮತ್ತು ಸಂಸ್ಥೆಗಳಲ್ಲಿ ಬೂತ್‌ಗಳು ಕಾರ್ಯನಿರ್ವಹಿಸಲಿವೆ. 13 ಮತ್ತು 14 ರಂದು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಅನ್ಯ ರಾಜ್ಯ ಕಾರ್ಮಿಕರ …

ಜಿಲ್ಲೆಯ ಪ್ರಥಮ ಇಂಜಿನಿಯರಿಂಗ್ ಕಾಲೇಜು ಚೆರ್ವತ್ತೂರಿನಲ್ಲಿ

ಕಾಸರಗೋಡು: ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್ ಕಾಲೇಜು ಚೆರ್ವತ್ತೂರಿನಲ್ಲಿ ಆರಂಭಿಸಲಿರುವ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಟೆಕ್ನಿಕಲ್ ಹೈಸ್ಕೂಲ್ ಆವರಣದಲ್ಲಿ  ಕಾಲೇಜು ಆರಂಭಗೊಳ್ಳಲಿದೆಯೆಂದು ಉನ್ನತ ಶಿಕ್ಷಣ ಸಚಿವೆ ಡಾ. ಆರ್. ಬಿಂದು ಶಾಸಕ ಎಂ. ರಾಜಗೋಪಾಲನ್‌ರಿಗೆ ತಿಳಿಸಿದ್ದಾರೆ. ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರನ್ನು ನೋಡೆಲ್ ಆಫೀಸರ್‌ಆಗಿ ನೇಮಕ ಮಾಡಲಾಗಿದೆ. ಬಿಟೆಕ್ ಕೋರ್ಸ್ ಆರಂಭಗೊಳಿಸುವ ಸಿದ್ಧತೆ ನಡೆಸಲಾಗಿದೆ.

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಗಾಂಧಿ ಜಯಂತಿ ಚಿತ್ರ ರಚನೆ ಸ್ಪರ್ಧೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಕಾಸರಗೋಡು ಈಸ್ಟ್ ಘಟಕದ ನೇತೃತ್ವದಲ್ಲಿ ಗಾಂಧಿ ಜಯಂತಿಯಂಗವಾಗಿ ಜಿಡಬ್ಲ್ಯುಎಲ್‌ಪಿ ಶಾಲೆಯಲ್ಲಿ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು. ಈಸ್ಟ್ ಘಟಕ ಅಧ್ಯಕ್ಷ ಸುಜಿತ್‌ರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನಗರಸಭೆ ಕೌನ್ಸಿಲರ್ ವೀಣಾ ಅರುಣ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯ ಕುಮಾರಿ ಸ್ಪರ್ಧಾಳುಗಳಾದ ವಿದ್ಯಾರ್ಥಿಗಳಿಗೆ  ಡ್ರಾಯಿಂಗ್ ಕಿಟ್ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ಕೋಶಾಧಿಕಾರಿ ಶ್ರೀಕಾಂತ್, ಪಿ.ಆರ್.ಒ ಮನೀಶ್, ಘಟಕ ಸಮಿತಿ ಸದಸ್ಯ ದಿನೇಶ್ ಇನ್‌ಸೈಟ್, …

ಬೇಕೂರು: ಬಾಲವೇದಿ ಸೃಜನೋತ್ಸವ

ಉಪ್ಪಳ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮಂಗಲ್ಪಾಡಿ ಮಂಜೇಶ್ವರ ಪಂಚಾಯತ್ ನೇತೃತ್ವ ಸಮಿತಿ ಬಾಲವೇದಿ ಸೃಜನೋತ್ಸವ ಬೇಕೂರು ಸುಭಾಸ್ ನಗರ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿಯಲ್ಲಿ ನಡೆಯಿತು. ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯ ದಾಸಪ್ಪ ಶೆಟ್ಟಿ ಮಾಸ್ಟರ್ ಉದ್ಘಾಟಿಸಿದರು. ಸಮಿತಿ ಸಂಚಾಲಕ ರವೀಂದ್ರ ಶೆಟ್ಟಿ ಬೊಳ್ಳಾರು ಅಧ್ಯಕ್ಷತೆ ವಹಿಸಿದರು. ಭಾಗ್ಯ ಕರುಣಾಕರ ಬರ್ಲಾಯಾ ಸೃಜನೋತ್ಸವದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯ ಕಾರಿ ಸದಸ್ಯೆ ವನಿತಾ ಆರ್ ಶೆಟ್ಟಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ …

ಸೀತಾಂಗೋಳಿಯಲ್ಲಿ ಯುವಕನಿಗೆ ಇರಿತ: ಚಾಕು ಕುತ್ತಿಗೆಯಲ್ಲಿ ಸಿಲುಕಿದ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಯಲ್ಲಿ

ಸೀತಾಂಗೋಳಿ:  ಸೀತಾಂಗೋಳಿ ಯಲ್ಲಿ ನಿನ್ನೆ ರಾತ್ರಿ ಓರ್ವ ಯುವಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಬದಿಯಡ್ಕದ ಕುಟ್ಟನ್ ಯಾನೆ ಅನಿಲ್ ಕುಮಾರ್ (36) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ. ಇವರ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹಣ ವ್ಯವಹಾರಕ್ಕೆ ಸಂಬಂಧಪಟ್ಟ ತರ್ಕವೇ ಇರಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ನಾಲ್ಕು ಮಂದಿಯನ್ನು ಹಾಗೂ ಎರಡು ವಾಹನ ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆ …

ಸಿಪಿಎಂ ನೇತಾರೆ ಯುವ ನ್ಯಾಯವಾದಿಯ ಸಾವು: ಆತ್ಮಹತ್ಯಾ ಪ್ರೇರಣ ಆರೋಪದಂತೆ ನ್ಯಾಯವಾದಿ ಸೆರೆ

ಕಾಸರಗೋಡು: ಯುವ ನ್ಯಾಯವಾದಿಯೂ, ಸಿಪಿಎಂ ಕುಂಬಳೆ ಲೋಕಲ್ ಕಮಿಟಿ ಸದಸ್ಯೆಯಾದ ಬತ್ತೇರಿಯ ರಂಜಿತ (30) ತನ್ನ ನ್ಯಾಯವಾದಿ ಕಚೇರಿಯಲ್ಲಿ  ನೇಣು ಬಿಗಿದು ಸಾವಿಗೀಡಾದ ಬೆನ್ನಲ್ಲೇ ತಲೆಮರೆಸಿಕೊಂಡ ನ್ಯಾಯವಾದಿ ಯನ್ನು ಬಂಧಿಸಲಾಯಿತು. ಪತ್ತನಂತಿಟ್ಟ ಪುರಮುಟ್ಟಂ ಮುಂಡಲಂ ಶಾಂತ ಭವನ್‌ನ ಅನಿಲ್ ಕುಮಾರ್ (45)ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಜಿಜೀಶ್‌ರ ನಿರ್ದೇಶ ಪ್ರಕಾರ ಎಸ್‌ಐ ಕೆ. ಶ್ರೀಜೇಶ್‌ರನ್ನೊಳಗೊಂಡ ತಂಡ ತಿರುವನಂತಪುರದಿಂದ ಸೆರೆ ಹಿಡಿದಿದೆ. ಆತ್ಮಹತ್ಯೆ ಪ್ರೇರಣೆ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಪೊಲೀಸರು …

ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ: ವಿಧಾನಸಭೆಯಲ್ಲಿ ಭುಗಿಲೆದ್ದ ಆಕ್ರೋಶ: ಮುಜರಾಯಿ ಸಚಿವರ ರಾಜೀನಾಮೆಗೆ ವಿಪಕ್ಷೀಯರ ಪಟ್ಟು

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರ ಪಾಲಕ ಮೂರ್ತಿಯ ಚಿನ್ನ ನಾಪತ್ತೆಯಾದ ಪ್ರಕರಣದ ಕಾವು ವಿಧಾನಸಭೆಯನ್ನು ಇಂದು ಅಲ್ಲೋಲ ಕಲ್ಲೋಲಗೊಳಿಸಿದೆ. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನಃ ಆರಂಭಗೊಂಡು ಪ್ರಶ್ನೋತ್ತರ ವೇಳೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್  ಮಾತನಾಡು ತ್ತಿರುವಂತೆಯೇ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಎದ್ದು ನಿಂತು   ಪ್ರಶ್ನೋತ್ತರ ವೇಳೆಯನ್ನು ಬದಿಗಿರಿಸಿ ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು  ಆಗ್ರಹಪಟ್ಟರು. ಆದರೆ ಅದಕ್ಕೆ ಕಿವಿಗೊಡದ ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ಪ್ರಶ್ನೋತ್ತರ ವೇಳೆಯನ್ನು  ಮುಂದುವರಿಸಿದರು. …

ಕುಂಬಳೆ ಶಾಲಾ ಕಲೋತ್ಸವ ಪೊಲೀಸ್ : ಬಿಗು ಕಾವಲಿನೊಂದಿಗೆ ಪುನರಾರಂಭ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ನಿಲುಗಡೆಗೊಳಿಸಿದ್ದ ಕಲೋತ್ಸವವನ್ನು ಇಂದು ಶಾಂತ ವಾತಾವರಣದಲ್ಲಿ ಪುನರಾರಂಭಿಸಲಾ ಯಿತು. ಶಾಲಾ ಪರಿಸರದಲ್ಲಿ ಬಿಗು ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಶಾಲೆಗಿರುವ   ಪ್ರವೇಶದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಮವಸ್ತ್ರ ಹಾಗೂ ಬ್ಯಾಡ್ಜ್ ಧರಿಸಿದ ಮಕ್ಕಳನ್ನು ತಪಾಸಣೆಯ ಬಳಿಕವೇ ಶಾಲಾ ಕಂಪೌಂಡ್‌ನೊಳಗೆ ಪ್ರವೇಶಿಸಲು ಬಿಡಲಾಗುತ್ತಿದೆ. ಕೆಲವು ಮಕ್ಕಳೊಂದಿಗೆ ರಕ್ಷಕರು ತಲುಪಿದ್ದು, ಅವರನ್ನು ತಪಾಸಣೆ ಬಳಿಕ ಕಂಪೌಂ ಡ್‌ನೊಳಗೆ ಕಳುಹಿಸಲಾಯಿತು. ಬಳಿಕ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟ ಕೂಡಲೇ ಮರಳುವಂತೆ ಪೊಲೀಸರು …

ತಲೆಗೆ ಹೊಡೆದು ವೃದ್ದನ ಕೊಲೆ: ನೆರೆಮನೆ ನಿವಾಸಿ ವಿರುದ್ಧ ಕೇಸು

ಕಾಸರಗೋಡು:  ವೃದ್ಧನೋರ್ವನನ್ನು ತಲೆಗೆ ಹೊಡೆದು ಬರ್ಭರವಾಗಿ ಕೊಲೆಗೈದ ಘಟನೆ ನಡೆದಿದೆ. ಹೊಸದುರ್ಗ ಸಮೀಪದ ಕರಿಂದಳಂ ಕುಂಬಳಪ್ಪಳ್ಳಿ ಚಿಟ್ಟೆಮೂಲೆಯ ಉನ್ನತ್ತೀಲೆ ಕೆ. ಕಣ್ಣನ್ (80) ಕೊಲೆಗೀಡಾದ ವ್ಯಕ್ತಿ. ಇದಕ್ಕೆ ಸಂಬಂಧಿಸಿ ಮೃತ ಕಣ್ಣನ್‌ರ ಸಂಬಂಧಿಕ ಹಾಗೂ ನೆರೆಮನೆ ನಿವಾಸಿಯೂ ಆಗಿರುವ ಕೆ. ಶ್ರೀಧರನ್ (45) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಸಂಜೆ  ಕಣ್ಣನ್‌ರನ್ನು ಅವರ ಮನೆಯಲ್ಲೇ ತಲೆಯ ಹಿಂಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿ ಲಾಗಿದೆ. ಅದನ್ನು ಕಂಡ ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು …