ಪೈವಳಿಕೆ ಕಾಂಗ್ರೆಸ್‌ನಿಂದ ಗಾಂಧಿ ಸ್ಮೃತಿ

ಪೈವಳಿಕೆ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ಆಚರಣೆ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆಯಿತು. ಮಂಡಲ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮಾತನಾಡಿದರು. ಉಪಾಧ್ಯಕ್ಷ ಶಾಜಿ ಎನ್. ಸಿ. ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್, ಬ್ಲೋಕ್ ಕಾರ್ಯದರ್ಶಿ ರಾಘವೇಂದ್ರ ಭಟ್, ಎಡ್ವರ್ಡ್, ರಾಮ ಏದಾರ್ ಉಪಸ್ಥಿತರಿದ್ದರು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಶಿವರಾಮ ಶೆಟ್ಟಿ ಸ್ವಾಗತಿಸಿದರು. ಗಂಗಾಧರ ನಾಯ್ಕ ವಂದಿಸಿದರು.

ಬದಿಯಡ್ಕದಲ್ಲಿ ಕೇರಳ ಮರಾಟಿ ಶಾರದೋತ್ಸವ ಮೆರವಣಿಗೆ

ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 18ನೇ ವರ್ಷದ ಶಾರದೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಿತು. ವಿಗ್ರಹ ಪ್ರತಿಷ್ಠೆ, ಪೂಜೆ, ಮಹಾಗಣಪತಿ ಹೋಮ, ವಿವಿಧ ಭಜನ ಸಂಘ ಗಳಿಂದ ಭಜನೆ. ಧ್ವಜಾರೋಹಣ, ಆಯುಧ ಪೂಜೆ ಜರಗಿತು. ಮಕ್ಕಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಮಹಾಪೂಜೆ, ಅನ್ನ ಸಂತರ್ಪಣೆ, ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ ಮೊದಲಾದ ಸಾಂಸ್ಕೃತಿಕ …

ಕಾಂತಾರ ಚಾಪ್ಟರ್1ರ ಬಗ್ಗೆ ಭರ್ಜರಿ ಅಭಿಪ್ರಾಯ: ಸಿನಿಮಾ ನೋಡಿದ ಯುವಕನಿಂದ ವಿಚಿತ್ರ ವರ್ತನೆ

ಕಾಸರಗೋಡು: ಅಭಿಮಾನಿಗಳ ಕಾಯುವಿಕೆಗೆ ವಿರಾಮವಿಟ್ಟು ಕಾಂತಾರ ಚಾಪ್ಟರ್ 1 ಥಿಯೇಟರ್ ಗಳಿಗೆ ತಲುಪಿದೆ. ಈ ಸಿನಿಮಾ ಬೋಕ್ಸ್ ಆಫೀಸಿನಲ್ಲಿ ಇತಿಹಾಸ ಸೃಷ್ಟಿಸಬಹು ದೆಂದು ಮೊದಲ ದಿನ ಸಿನಿಮಾ ನೋಡಿದವರು ಅಭಿಪ್ರಾಯ ಪಡುತ್ತಾರೆ. ಚಿತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈಮಧ್ಯೆ ಸಿನಿಮಾವನ್ನು ನೋಡಿ ದರುಶನ ಬಂದ ರೀತಿಯಲ್ಲಿ ವರ್ತಿಸಿದ ಯುವಕನ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ. ಸಿನಿಮಾ ಮುಗಿದ ಕೂಡಲೇ ಈತ ಹೊರಬಂದು ನಾಯಕನಟ ನಟಿಸಿದ ರೀತಿಯಲ್ಲೇ ನಟಿಸಿ ನೆಲಕ್ಕೆ ಬಿದ್ದು ಹೊರಳಾಡಿ …

ಅಂಗಡಿಗೆ ಜೆರ್ಸಿ ಖರೀದಿಗೆ ಬಂದ ಬಾಲಕನಿಗೆ ನಗ್ನತೆ ಪ್ರದರ್ಶನ: ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸೆರೆ

ಪಾಲಕ್ಕಾಡ್: ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯನ್ನು ಪೋಕ್ಸೋ ಪ್ರಕರಣದಲ್ಲಿ ಸೆರೆಹಿಡಿಯಲಾಗಿದೆ. ಪುದುನಗರಂ ಚೆಟ್ಟಿಯತ್ ಕುಳಂಬು ಬ್ರಾಂಚ್ ಕಾರ್ಯದರ್ಶಿ  ವಾರಿಯತ್ತುಕುಳಂ ಎನ್. ಶಾಜಿ (35) ಸೆರೆಯಾದ ವ್ಯಕ್ತಿ. ಮಂಗಳವಾರ ಬೆಳಿಗ್ಗೆ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. ಕೊಡುವಾಯೂರಿನಲ್ಲಿ ಕ್ರೀಡಾ ಉಪಕgಣಗಳನ್ನು ಮಾರಾಟ  ಮಾಡುವ ಅಂಗಡಿ ಶಾಜಿಗಿದೆ. ಜೆರ್ಸಿ ಖರೀದಿಗೆಂದು ಅಂಗಡಿಗೆ ಬಂದ ಹತ್ತನೇ ತರಗತಿ ವಿದ್ಯಾರ್ಥಿಗೆ ಶಾಜಿ ತನ್ನ ಖಾಸಗಿ ಅಂಗವನ್ನು ತೋರಿಸಿರುವುದಾಗಿಯೂ, ಹಡುಗನಲ್ಲೂ ಅದೇ ರೀತಿ ತೋರಿಸಲು ಆಗ್ರಹಿಸಿರುವು ದಾಗಿಯೂ  ದೂರಲಾಗಿದೆ. ಬಾಲಕರ ಹೆತ್ತವರು ನೀಡಿದ ದೂರಿನಂತೆ ಕೇಸು …

ಆದ್ಯಂತ್ ಅಡೂರಿಗೆ ದಸರಾ ಕವಿ ಸಾಧಕ ಪ್ರಶಸ್ತಿ

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿಯನ್ನು ಆದ್ಯಂತ್ ಅಡೂರಿಗೆ  ನೀಡಿ ಗೌರವಿಸಲಾಯಿತು. ತಬಲಾ ವಾದನ, ಗಾಯನ, ಚಿತ್ರಕಲೆ,ಸಾಹಿತ್ಯ, ಭಜನೆ, ಕ್ರೀಡೆ ಮೊದಲಾದ ಕ್ಷೇತ್ರದಲ್ಲಿ ಪ್ರತಿಭೆ ತೋರಿದ ಈತ ಅಡೂರು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ. ಮಂಗಳೂರು ಆಕಾಶವಾಣಿಯ ಬಾಲವೃಂದ ವಿಭಾಗದಲ್ಲಿ  ಈತನ ಸಂದರ್ಶನ ಪ್ರಸಾರವಾಗಿದೆ.  ಚಟುಚುಟುಕು  ಪ್ರಕಟಿತ ಚುಟುಕು ಸಂಕಲನ, ಕನ್ನಡ ಭವನದ ಭರವಸೆಯ ಬೆಳಕು ಪ್ರಶಸ್ತಿ, ಕಲ್ಕೂರಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ …

ಬಹುಮಾನ ಬಂದ ಲಾಟರಿ ಟಿಕೆಟ್‌ನ ಜೆರೋಕ್ಸ್ ಪ್ರತಿ ತೆಗೆದು ಮಾರಾಟಗಾರನಿಗೆ ನೀಡಿ ವಂಚನೆ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಕಲರ್ ಜೆರೋಕ್ಸ್ ಪ್ರತಿ ತೆಗೆದು ಮಾರಾಟಗಾರರನ್ನು ವಂಚಿಸುವ ತಂಡ ರಾಜ್ಯದಲ್ಲಿ ಸಕ್ರಿಯಗೊಂಡಿರುವುದಾಗಿ ತಿಳಿದು ಬಂದಿದೆ. ತೃಶೂರಿನಲ್ಲಿ ವ್ಯಕ್ತಿಯೋ ರ್ವ ಲಾಟರಿ ಮಾರಾಟಗಾರನಿಗೆ ಲಾಟರಿ ಟಿಕೆಟ್‌ನ ಜೆರೋಕ್ಸ್ ಪ್ರತಿ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಕಾಟೂರು ಪೆರಿಞನಂ ನಿವಾಸಿ ನೆಲ್ಲಿಪರಂಬಿಲ್‌ನ ತೇಜಸ್ ಎಂಬವರನ್ನು ವ್ಯಕ್ತಿಯೋರ್ವ ವಂಚಿಸಿದ್ದಾನೆ. ಸೆ. ೨೭ರಂದು ಘಟನೆ ನಡೆದಿದೆ. ಬೈಕ್‌ನಲ್ಲಿ ತಲುಪಿದ ಯುವಕ ತೇಜಸ್‌ರಿಗೆ 21ರಂದು ಡ್ರಾ ನಡೆದ ಲಾಟರಿಯ ಆರು ಟಿಕೆಟ್‌ಗಳನ್ನು ನೀಡಿ ಬಹುಮಾನ ಇದೆಯೇ ಎಂದು ಪರಿಶೀಲಿಸುವಂತೆ …

ಪರಿಶಿಷ್ಟ ವಿಭಾಗದವರ ಸೌಲಭ್ಯಗಳನ್ನು ಕೇಂದ್ರ ಕಸಿಯುತ್ತಿದೆ- ಮುಖ್ಯಮಂತ್ರಿ

ಹೊಸದುರ್ಗ: ಪರಿಶಿಷ್ಟ ವಿಭಾಗದವರಿಗಾಗಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜ್ಯಾರಿಗೊ ಳಿಸುತ್ತಿರುವಾಗ ಕೇಂದ್ರ ಸರಕಾರ ಸೌಲಭ್ಯಗಳನ್ನು ಇಲ್ಲದಂತೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದರು. ಸಾಮಾಜಿಕ ಐಕ್ಯದಾರ್ಢ್ಯ ಪಾಕ್ಷಿಕಾಚರಣೆಯ ರಾಜ್ಯ ಮಟ್ಟದ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದ್ದರು. ಪರಿಶಿಷ್ಟ ವಿಭಾಗದವರ ಕ್ಷೇಮಕ್ಕಾಗಿ ಬಜೆಟ್‌ನಲ್ಲಿ 12.7 ಶೇ. ಮೊತ್ತವನ್ನು ಮೀಸಲಿಡಲಾಗಿದೆ. 6.3 ಶೇ. ಮಾತ್ರವೇ ಕೇಂದ್ರ ಮೀಸಲಿಡುವುದು. ಲೈಫ್ ಯೋಜನೆಯಲ್ಲಿ 4.5 ಲಕ್ಷಕ್ಕೂ ಅಧಿಕ ಮನೆಗಳಲ್ಲಿ 28 ಶೇ.ವನ್ನು ಪರಿಶಿಷ್ಟ ವಿಭಾಗದವರಿಗೆ ಲಭ್ಯಗೊಳಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಸಚಿವ …

ಚೇವಾರಿನಲ್ಲಿ ಗಾಂಧೀಜಯಂತಿ ಆಚರಣೆ

ಪೈವಳಿಕೆ: ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ  ಜಯಂತಿಯ ಅಂಗವಾಗಿ ಜರಗಿದ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಂ ಭಟ್ ಉದ್ಘಾಟಿಸಿದರು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಿಕ್ಷಕ ರವಿಕುಮಾರ್ ವಂದಿಸಿದರು. ತದನಂತರ ಪರಿಸರ ಶುಚೀಕರಣಕ್ಕೆ ಚಾಲನೆ ನೀಡಲಾಯಿತು. ರಾಜೇಶ್ವರಿ.ಬಿ, ಪ್ರಮೀಳಾ.ಡಿ.ಎನ್, ಗೋಪಾಲ ಕೃಷ್ಣ ಭಟ್ ಶುಭ ಹಾರೈಸಿದರು.

ಯುವ ನ್ಯಾಯವಾದಿ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಘಟನೆ: ತನಿಖೆ ಆರಂಭ; ಮೊಬೈಲ್ ಫೋನ್ ಪೊಲೀಸ್ ಕಸ್ಟಡಿಗೆ

ಕುಂಬಳೆ: ಯುವ ನ್ಯಾಯ ವಾದಿ ಯೊಬ್ಬರು ತನ್ನ ಕಚೇರಿ ಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುರಿತು ಪೊಲೀಸರು  ತನಿಖೆ ತೀವ್ರಗೊ ಳಿಸಿದ್ದಾರೆ. ಯುವ ನ್ಯಾಯವಾದಿ, ಪ್ರಜಾ ಪ್ರಭುತ್ವ ಮಹಿಳಾ ಅಸೋಸಿ ಯೇಶನ್‌ನ ಕುಂಬಳೆ ಏರಿಯಾ ಕಮಿಟಿ ಸದಸ್ಯೆ ಹಾಗ ವಿಲ್ಲೇಜ್ ಕಾರ್ಯದರ್ಶಿಯೂ ಆಗಿರುವ ಬತ್ತೇರಿಯ ಸಿ. ರಂಜಿತ ಕುಮಾರಿ (30) ಅವರ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಮುಟ್ಟಂ ಬೇರಿಕೆ ನಿವಾಸಿಯಾದ ಕೃತಶ್ ಎಂಬವರ ಪತ್ನಿಯಾದ ರಂಜಿತ ಕುಮಾರಿ ಕಾಸರ ಗೋಡು …

ಕಣ್ಣೂರಿನಲ್ಲಿ ಬಿಜೆಪಿ ನೇತಾರನ ಮನೆಗೆ ಬಾಂಬೆಸೆತ

ಕಣ್ಣೂರು: ಕಣ್ಣೂರು ಸಮೀಪದ ಚೆರುಕುನ್ನಿನಲ್ಲಿ ಬಿಜೆಪಿ ನೇತಾರನ ಮನೆಗೆ ದುಷ್ಕರ್ಮಿಗಳು ಬಾಂಬೆಸೆದು ಹಾನಿಗೊಳಿಸಿದ್ದಾರೆ. ಬಿಜೆಪಿಯ ಕಲ್ಯಾಶ್ಶೇರಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಬಿಜುರ  ಮನೆಗೆ ಇಂದು ಮುಂಜಾನೆ 2.30ರ ವೇಳೆ ಬಾಂಬೆಸೆಯಲಾಗಿದೆ. ಒಂದರ ಬಳಿಕ ಒಂದರಂತೆ ಮೂರು ಬಾಂಬ್ ಗಳನ್ನು ಈ ಮನೆಗೆ ಎಸೆಯಲಾಗಿದೆ.  ಇದರಿಂದ ಮನೆಯ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿವೆ. ಮಾತ್ರವಲ್ಲದೆ ಮನೆಗೆ ಬಾರೀ ಹಾನಿ ಉಂಟಾಗಿದೆ. ವಿಷಯ ತಿಳಿದ ಕಣ್ಣಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಬಾಂಬೆಸೆದವರು ಯಾರು ಮತ್ತು ಅದರ ಹಿಂದಿನ …