ಅಧಿವೇಶನದಲ್ಲಿ ಭಾಗವಹಿಸದೆ ಇರುವುದು ಮಂಜೇಶ್ವರ ಶಾಸಕರ ಬೇಜವಾಬ್ದಾರಿತನ- ಬಿಜೆಪಿ

ಮೀಂಜ: ಮಂಜೇಶ್ವರ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿ ತನದ ಪರ ಮಾವಧಿ. ಅಭಿವೃದ್ಧಿಯಲ್ಲಿ ಮೂಲ ಭೂತ ಸೌಕರ್ಯದಲ್ಲಿ, ಅತ್ಯಂತ ಹಿಂದುಳಿದ ಪ್ರದೇಶದ ಮಂಜೇಶ್ವರ ವಿಧಾನಸಭಾ ಕೇತ್ರದ ಅಭಿವೃದ್ಧಿಯ ರೂಪುರೇಷೆ ಸಿದ್ದಪಡಿಸಿ ಅಧಿವೇಶನ ದಲ್ಲಿ ಭಾಗವಹಿಸಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇರು ವುದು ಬೇಜವಾಬ್ದಾರಿ, ಮಂಜೇಶ್ವರ ದಲ್ಲಿ ಬಂದು ಕಪಟ ನಾಟಕದ ಹೋ ರಾಟ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾಯವಾದಿ ಸಜೀವನ್ ವಿ.ಕೆ ಅಗ್ರಹಿಸಿದ್ದಾರೆ.ಬಿಜೆಪಿ ಪೈವಳಿಕೆ, ಮೀಂಜ, ವರ್ಕಾಡಿ …

‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಹಲವು ಮಾದಕದ್ರವ್ಯ ಪ್ರಕರಣಗಳ  ಆರೋಪಿಯನ್ನು ಪಿಚ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಞಣಿಕಡವು ಮಯ್ಯತ್ತ್ ರಸ್ತೆ ಬಳಿ ನಿವಾಸಿ ಅರ್ಶಾದ್ ಕೆ. (33) ಬಂಧಿತ ಆರೋಪಿ. ಈತನನ್ನು ಬಳಿಕ ಜೈಲಿಗೆ ಸಾಗಿಸಲಾಗಿದೆ. ಹೊಸದುರ್ಗ ಬೇಕಲ, ಚಂದೇರ ಮತ್ತು ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಾಗಿ ದಾಖಲುಗೊಂಡ ಆರು ಮಾದಕದ್ರವ್ಯ ಪ್ರಕರಣಗಳು ಸೇರಿದಂತೆ ಹತ್ತರಷ್ಟು ಪ್ರಕರಣಗಳಲ್ಲಿ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿರಂತರವಾಗಿ ಮಾದಕದ್ರವ್ಯ ಮಾರಾಟದಂಧೆಯಲ್ಲಿ ನಿರತರಾಗಿರುವವರ ಮೇಲೆ ಹೇರಲಾಗುವ ಪ್ರಿವೆನ್ಶನ್ ಆಫ್ ಇಲ್ಲಾಸಿಟ್ ಟ್ರಾಫಿಕ್ …

ವಿವಿಧೆಡೆ ಶ್ರೀ ನಾರಾಯಣಗುರು ಸಮಾಧಿ ದಿನಾಚರಣೆ

ಕಾಸರಗೋಡು: ಬ್ರಹ್ಮಶ್ರೀ ನಾರಾ ಯಣಗುರುಗಳ ಸಮಾಧಿ ದಿನವನ್ನು ನಿನ್ನೆ ವಿವಿಧೆಡೆ  ಆಚರಿಸಲಾಯಿತು. ಶ್ರೀ ನಾರಾಯಣ ಗುರುಗಳ ಹೆಸರಲ್ಲಿರುವ ಸಂಸ್ಥೆಗಳು  ಸಹಿತ ವಿವಿಧ ಸಂಘಟನೆಗಳು ನಡೆಸಿದ ಕಾರ್ಯಕ್ರಮದಲ್ಲಿ ಭಜನೆ, ಸಾಮೂಹಿಕ ಉಪವಾಸ, ಗುರುಅರ್ಚನೆ, ಸಮಾಧಿಪೂಜೆ, ಸಂಸ್ಮರಣೆ ನಡೆಸಲಾಯಿತು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ವಹಿಸಿದರು. ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್ ನೇತೃತ್ವದಲ್ಲಿ ಗುರುಪೂಜೆ, ಪುಷ್ಪಾರ್ಚನೆ, ಸಂಸ್ಮರಣೆ ನಡೆಸಲಾಯಿತು. ಪಿ.ಕೆ. ರಾಜನ್ ಉದ್ಘಾಟಿಸಿದರು.ಯೂನಿಯನ್ ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ಮೋಹನ ಮೀಪುಗುರಿ, ರಾಜೇಶ್, …

ಬೆಳ್ಳೂರು ಪಂ. ಕಚೇರಿಗೆ ಸಿಪಿಎಂ ಮಾರ್ಚ್

ಬೆಳ್ಳೂರು: ಬೆಳ್ಳೂರು ಪಂಚಾಯತ್ ಲ್ಲಿ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿಯಲ್ಲಿ ವ್ಯಾಪಕ ವಂಚನೆ ನಡೆಸಿರುವುದಾಗಿ ಆರೋಪಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಪಕ್ಷದ ಏರಿಯಾ ಕಾರ್ಯದರ್ಶಿ ಎಂ. ಮಾಧವನ್, ಸದಸ್ಯ ರವೀಂದ್ರನ್ ಮಾತನಾಡಿದರು. ಲೋಕಲ್ ಸೆಕ್ರೆಟರಿ ಕೆ.ಎಚ್. ಸೂಫಿ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಮಿಟಿ ಸದಸ್ಯರಾದ ಎ.ಕೆ. ಕುಶಲ ಸ್ವಾಗತಿಸಿ, ಉಷಾ ವಂದಿಸಿದರು.

ಬಿಲ್ಲವ ಸಂಘದಿಂದ ದತ್ತಿನಿಧಿ ಯೋಜನೆ: ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ವಿತರಣೆ

ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ದತ್ತಿ ನಿಧಿ ಯೋಜನೆಯನ್ವಯ ಬಜಕೂಡ್ಲು  ನಡುಬೈಲು ದಿ| ಪುರುಷೋತ್ತಮ ಪೂಜಾರಿಯವರ ಪುತ್ರಿ ದಿಯಾಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ದಿ| ಪುರುಷೋತ್ತಮರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ದತ್ತಿ ನಿಧಿ ಪ್ರಾಯೋಜಕರಾದ ಪೆರ್ಲ ಅಮೆಕ್ಕಳದ ಬೇಕರಿ ಮಾಲಕ ದಿನೇಶ್ ಜಿ.ಕೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಪಿ. ಶೇಣಿ, ಕಾರ್ಯದರ್ಶಿ ಅಖಿಲೇಶ್ ಕಾನ, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾಸ್ತರ್ …

ರಂಗಭೂಮಿ ಕಲಾವಿದ ಸುಂದರರ ಚಿಕಿತ್ಸೆಗೆ ಸವಾಕ್‌ನಿಂದ ಧನ ಸಹಾಯ ಹಸ್ತಾಂತರ

ಬೆಳ್ಳೂರು: ಹಾವು ಕಚ್ಚಿ ಚಿಕಿತ್ಸೆಯಲ್ಲಿರುವ ಕಾಯಿಮಲೆ ನಿವಾಸಿ, ರಂಗಭೂಮಿ ಕಲಾವಿದ ಸುಂದರ ಎಂಬವರ ಚಿಕಿತ್ಸೆಗಾಗಿ ಸವಾಕ್ ಸಂಘಟನೆಯ ಕಾಸರಗೋಡು ಜಿಲ್ಲಾ ಸಮಿತಿ, ಕಾರಡ್ಕ ಬ್ಲಾಕ್ ಸಮಿತಿ, ಅಭಿನಯ ಕಲಾ ತಂಡ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು. ಸುಂದರ ಈಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.ಸವಾಕ್ ಸಂಘಟನೆಯ ರಾಜ್ಯ ಕೋಶಾಧಿಕಾರಿ, ಜಿಲ್ಲಾ ಅಧ್ಯಕ್ಷ ಉಮೇಶ್ ಸಾಲಿಯಾನ್, ರಾಜ್ಯ ಸಮಿತಿ ಸದಸ್ಯೆ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹ ಬಲ್ಲಾಳ್ ಕಾಸರಗೋಡು, ಭಾರತಿ, …

ಸೇವಾ ಭಾರತಿಯಿಂದ ಸೀತಾಂಗೋಳಿ ಪೇಟೆ ಶುಚೀಕರಣ

ಸೀತಾಂಗೋಳಿ: ಸ್ವಚ್ಛತಾ ದಿನಾ ಚರಣೆಯಂಗವಾಗಿ ಸೇವಾ ಭಾರತಿ ಯ ಪುತ್ತಿಗೆ ಘಟಕದ ಆಶ್ರಯದಲ್ಲಿ ಸೀತಾಂಗೋಳಿ ಪೇಟೆಯನ್ನು ಮಾಲಿನ್ಯಮುಕ್ತಗೊಳಿಸಲಾಯಿತು. ಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ಕಸಗಳನ್ನು ತೆಗೆದÀÄ ಸ್ವಚ್ಛಗೊಳಿಸಿ ಸ್ವಚ್ಛತೆಯ ಕುರಿತಾಗಿ ಉತ್ತಮ ಸಂದೇಶವನ್ನು ನೀಡಲಾಯಿತು. ಪ್ರವೀಣ್ ಕುಮಾರ್, ಅಪ್ಪಣ್ಣ, ಉಮಲತಾ, ದಿನೇಶ್ ಬಬ್ಬರಿಯಕಲ್ಲು, ಉಷಾ, ಶಶಿಕಲಾ ಅನೋಡಿಪಳ್ಳ, ಪ್ರಸನ್ನ, ಅಜಿತ್ ಕುಮಾರ್, ಅರುಣ್ ಕುಮಾರ್, ಉದಯ ಮರಕ್ಕಾಡ್ ಮೊದಲಾ ದವರು ನೇತೃತ್ವ ವಹಿಸಿದ್ದರು. ಸುತ್ತು ಮುತ್ತಲಿನ ಸೇವಾ ಭಾರತಿಯ ಕಾರ್ಯಕರ್ತರು ಭಾಗವಹಿಸಿದರು. ಸ್ವಚ್ಛತೆಯ ಮೂಲಕ …

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಅದ್ದೂರಿ ಚಾಲನೆ: ಬಿಟ್ಟು ನಿಂತ ಬಿಜೆಪಿ, ಯುಡಿಎಫ್ , ಸಂಘಪರಿವಾರ ಸಂಘಟನೆಗಳು

ಪಂಪಾ: ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಪಂಪಾದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಇಂದು ಬೆಳಿಗ್ಗೆ ಮುಜರಾಯಿ ಸಚಿವ ವಿ.ಎನ್. ವಾಸನ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಗಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ದರು.  ಜರ್ಮನ್ ತಂತ್ರಜ್ಞಾನದಿಂದ ನಿರ್ಮಿಸಲಾದ ಹವಾನಿಯಂತ್ರಿತವಾದ ಮೂರು ವೇದಿಕೆಗಳಲ್ಲಾಗಿ  ಈ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ತಿರುವಿ ದಾಂಕೂರ್ ಮುಜರಾಯಿ ಮಂಡಳಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ದೇಶ ವಿದೇಶಗಳಿಂದಾಗಿ ಆಯ್ದ 3500 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇರಳದ ಹಲವು ಸಚಿವರುಗಳು ಮಾತ್ರವಲ್ಲದೆ, ತಮಿಳು ನಾಡಿನ ಸಚಿವರುಗಳಾದ …

ವಾಹನಗಳನ್ನು ಬಾಡಿಗೆಗೆ ತೆಗೆದು ಇತರರಿಗೆ ಹಸ್ತಾಂತರಿಸಿ ವಂಚನೆಗೈಯ್ಯುವ ತಂಡದ ರೂವಾರಿ ಸೆರೆ

ಮಂಜೇಶ್ವರ: ಮಲಕರಿಂದ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಬಳಿಕ ಅದನ್ನು ಇತರರಿಗೆ ಹಸ್ತಾಂತರಿಸುವ ತಂಡದ ರೂವಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಉಳಿಯತ್ತಡ್ಕ ಎಸ್.ಪಿ ನಗರದ ನಿವಾಸಿ ಅಬ್ದುಲ್ ಅಶ್ಫಾಕ್ (31) ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ  ಬಿ.ವಿ. ವಿಜಯ ರೆಡ್ಡಿಯವರ ನಿರ್ದೇಶ ಪ್ರಕಾರ ಅವರ ನೇತೃತ್ವದ ವಿಶೇಷ ಪೊಲೀಸರ ತಂಡದ ಸಹಾಯದೊಂದಿಗೆ ಎಎಸ್‌ಪಿ ಡಾ. ಎಂ. ನಂದ ಗೋಪಾಪನ್‌ರ ನೇತೃತ್ವದಲ್ಲಿ ಮಂಜೇಶ್ವರ, ವಿದ್ಯಾನಗರ, ಕುಂಬಳೆ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಕಾಸರಗೋಡು ಸಬ್ ಡಿವಿಷನ್‌ನ ಪೊಲೀಸ್ …

ಯುವತಿಯ ಕಣ್ಣಿಗೆ ಮೆಣಸಿನಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿದ ಆರೋಪ: ಕೇಸು ದಾಖಲು

ಮುಳ್ಳೇರಿಯ: ಯುವತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಬಳವಂತಡ್ಕದ ಅನುಂಜ ಕೆ. (18) ಎಂಬವರು ಈ ದೂರು ನೀಡಿದ್ದು, ಅದರಂತೆ ಬಳವಂತಡ್ಕದ ಶಂಕರನ್ ವಿ. ಎಂಬವರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ಬಳವಂತಡ್ಕ ಸೇತುವೆ ಬಳಿ ಆರೋಪಿ ತನ್ನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.