ಮೀನು ಕಾರ್ಮಿಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮೀನು ಕಾರ್ಮಿಕನಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರುವಾಡ್ ಕಡಪ್ಪುರ ನಿವಾಸಿ ದಿ| ಮೊಹಮ್ಮದ್ ನಾಸರ್ ಎಂಬವರ ಪುತ್ರ ಮೊಹಮ್ಮದ್ ಅಯಾಸ್ (37) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ರಾತ್ರಿ ಇವರು ಊಟ ಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ತೆರೆದು ನೋಡಿದಾಗ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಮೃತರು ತಾಯಿ ಮರಿಯಮ್ಮ, ಪತ್ನಿ ಫಸೀಲ, ಪುತ್ರಿ ದಿಯಾ, ಸಹೋದರ ರಿಯಾಸ್, ಸಹೋದರಿ ಸನಾ ಹಾಗೂ …

ಶಬರಿಮಲೆ ಕ್ಷೇತ್ರ ದ್ವಾರಪಾಲಕ ಮೂರ್ತಿಗಳ ಚಿನ್ನದ ತೂಕದಲ್ಲಿ ವ್ಯತ್ಯಾಸ : ತುರ್ತು ಗೊತ್ತುವಳಿ ಮಂಡನೆ ನಿರಾಕರಿಸಿದ ಸಭಾಧ್ಯಕ್ಷ; ಸದನ ಬಹಿಷ್ಕರಿಸಿದ ವಿರೋಧಪಕ್ಷ

ತಿರುವನಂತಪುರ: ಶಬರಿಮಲೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಸ್ಥಾಪಿಸಲಾಗಿರುವ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ  ಚಿನ್ನದ ತೂಕದಲ್ಲಿ 4.5 ಕೆ.ಜಿ ಕಡಿಮೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆ ವಿಷಯದ ಬಗ್ಗೆ ಸದನದ ಇಂದಿನ ಎಲ್ಲಾ ಕಾರ್ಯಕಲಾಪಗಳನ್ನು ಬದಿಗಿರಿಸಿ ಸಮಗ್ರ ಚರ್ಚೆ ನಡೆಸಬೇಕೆಂದು ಮಾಜಿ ಸಚಿವ ತಿರುವಾಂಜೂರು ರಾಧಾಕೃಷ್ಣನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ತುರ್ತು ಗೊತ್ತುವಳಿ ಮಂಡಿಸಿದರು. ಆದರೆ ಈ ವಿಷಯ ಈಗ ಹೈಕೋ ರ್ಟ್‌ನ ಪರಿಗಣನೆಯಲ್ಲಿರುವುದರಿಂ ದಾಗಿ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚಿಸುವಂತಿಲ್ಲವೆಂದು ಹೇಳಿ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಕಾಸರಗೋಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಅಣಂಗೂರು ಜೆ.ಪಿ. ನಗರದ ರಾಮಣ್ಣ (80) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿರು. ಈ ಹಿಂದೆ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರೂ, ಬಳಿಕ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಸೆಕ್ಯೂರಿಟಿ ನೌಕರನಾಗಿದ್ದರು. ಕರಂದಕ್ಕಾಡು ವೀರ ಹನುಮಾನ್ ವ್ಯಾಯಾಮ ಶಾಲೆಯ ಹಿರಿಯ ಸದಸ್ಯರೂ ಆಗಿದ್ದರು. ಇವರ ಪತ್ನಿ ಗಿರಿಜ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಜೇಶ್, ಹೇಮಲತ, ಅಳಿಯ ಪದ್ಮನಾಭ (ಮಂಗಳೂರು), ಸೊಸೆ ವಿದ್ಯಾ, ಸಹೋದರರಾದ ನಾರಾಯಣ …

10ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಪ್ರಕರಣ: ಮೊಬೈಲ್ ಫೋನ್ ಪೊಲೀಸ್ ವಶಕ್ಕೆ; ಪರಿಶೀಲನೆಗೆ ಸೈಬರ್ ಸೆಲ್‌ನ ಸಹಾಯ ಯಾಚನೆ

ಕಾಸರಗೋಡು: ಬಂದಡ್ಕ ಬೇತಲಂ ಉಂದತ್ತಡ್ಕ ನಿವಾಸಿಯಾದ ೧೦ನೇ ತರಗತಿ ವಿದ್ಯಾರ್ಥಿನಿ ದೇವಿಕ (16) ಎಂಬಾಕೆ ನೇಣು ಬಿಗಿದು ಸಾವಿಗೀಡಾದ ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಮಂಗಳವಾರ ಬೆಳಿಗ್ಗೆ ದೇವಿಕ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.  ದೇವಿಕ ಹಾಗೂ ಸಹೋದರ ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ತಂದೆ ನಿಧನರಾದ ಬಳಿಕ ತಾಯಿ ಬೇರೊಬ್ಬನನ್ನು ಮದುವೆಯಾಗಿದ್ದರು. ಇದೇ ವೇಳೆ ದೇವಿಕ ಆತ್ಮಹತ್ಯೆಗೈಯ್ಯಲು ಕಾರಣವೇ ನೆಂದು ಇದುವರೆಗೆ ನಡೆದ ತನಿಖೆಯಲ್ಲಿ …

ಉಪ್ಪಳ ಗೇಟ್ ಬಳಿ ಮುಂದುವರಿಯುತ್ತಿರುವ ಅಪಘಾತ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಉಪ್ಪಳ: ಉಪ್ಪಳ ಗೇಟ್ ಆಸು ಪಾಸಿನಲ್ಲಿ ನಿರಂತರ ವಾಹನ ಅಪ ಘಾತಗಳು ಸಂಭವಿಸುತ್ತಿದ್ದು ಸಾರ್ವ ಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಒಂದು ತಿಂಗಳಲ್ಲಿ ಹಲವಾರು ವಾಹನ ಗಳು ಅಪಘಾತಕ್ಕೀಡಾಗಿ ಹಲವಾರು ಮಂದಿ ಗಾಯಗೊಂಡಿರುವAತೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ಮತ್ತೆ ಉಪ್ಪಳ ಗೇಟ್ ಬಳಿಯಲ್ಲಿ ಕಾರುಗಳು ಢಿಕ್ಕಿ ಹೊಡೆದಿವೆ. ಮಂಗಳೂರು ಭಾಗದಿಂದ ಕಾಸರಗೋಡು ಕಡೆಗೆ ಸಂಚರಿಸುತ್ತಿರುವ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಕ್ಷಣಗಣನೆ: ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ

ಪತ್ತನಂತಿಟ್ಟ: ಪಂಪಾದಲ್ಲಿ ನಾಳೆ ನಡೆಯಲಿರುವ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರಲ್ಲಿ ದೇಶ ವಿದೇಶಗಳಿಂದಾಗಿ 3500 ಪ್ರತಿನಿಧಿ ಗಳು ಭಾಗವಹಿಸಲಿ ದ್ದಾರೆಂದು ಮುಜುರಾಯಿ ಖಾತೆ ಸಚಿವ ವಿ.ಎಸ್. ವಾಸನ್ ತಿಳಿಸಿದ್ದಾರೆ. ಅಯ್ಯಪ್ಪ ಸಂಗಮವನ್ನು ನಾಳೆ ಬೆಳಿಗ್ಗೆ 9.30೦ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿ ಸುವರು. ಭಾಗವಹಿಸುವ ಪ್ರತಿನಿಧಿಗಳ ಹೆಸರು ನೋಂದಾವಣೆ ನಾಳೆ ಬೆಳಿಗ್ಗೆ 6ರಿಂದ ಆರಂಭಗೊಳ್ಳ ಲಿದೆ. ಜಾಗತಿಕ ಸಮ್ಮೇಳನದಂಗ ವಾಗಿ ಬೆಳಿಗ್ಗೆ 11.30ರಿಂದ ಮೂರು ವೇದಿಕೆಗಳಲ್ಲಾಗಿ ಚರ್ಚೆ ಆರಂಭಗೊಳ್ಳಲಿದೆ. ಜರ್ಮನ್ ತಂತ್ರಜ್ಞಾನದೊಂದಿಗೆ ಹವಾ …

16ರ ಬಾಲಕನಿಗೆ ಕಿರುಕುಳ ನೀಡಿದ ಮತ್ತಿಬ್ಬರ ಬಂಧನ: ಸೆರೆಗೀಡಾದವರ ಸಂಖ್ಯೆ 12ಕ್ಕೆ

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡ 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಮತ್ತಿಬ್ಬರನ್ನು ಸೆರೆ ಹಿಡಿಯಲಾಗಿದೆ. ಪೇರಾಂಬ್ರ ನಿವಾಸಿಯೂ, ಪಯ್ಯನ್ನೂರಿನ ಖಾಸಗಿ ಸಂಸ್ಥೆಯೊಂದರ ಮೆನೇಜರ್ ಆಗಿರುವ ಪ್ರಜೀಶ್ ಯಾನೆ ಆಲ್ಬಿನ್ (40), ಕಲ್ಲಿಕೋಟೆ ಮಾಂಕಾವು ಕಿಣಾಶೇರಿಯ ಅಬ್ದುಲ್ ಮನಾಫ್ (37) ಎಂಬಿವರು ಸೆರೆಗೀಡಾದ ಮತ್ತಿಬ್ಬರು ಆರೋಪಿಗಳು. ಪ್ರಜೀಶ್‌ನನ್ನು ಪಯ್ಯನ್ನೂರು ಪೊಲೀಸರು ಹಾಗೂ ಮನಾಫ್‌ನನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 12ಕ್ಕೇರಿದೆ. ಇನ್ನೂ ನಾಲ್ಕು …

2011ರ ಕಾಞಂಗಾಡ್ ಗಲಭೆ: ತಲೆಮರೆಸಿಕೊಂಡ ಆರೋಪಿ ಸೆರೆ

ಕಾಸರಗೋಡು: 2011ರಲ್ಲಿ ಕಾಞಂಗಾಡ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಯೆಂದು ಘೋಷಿಸಿದ ಯುವಕ ಸೆರೆಗೀಡಾಗಿದ್ದಾನೆ. ಹೊಸದುರ್ಗ ಕಡಪ್ಪುರದ ದೀಪು (35) ಎಂಬಾತ ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. 2011ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ತಂಡ ಸೇರಿ ಆಕ್ರಮಣ ಹಾಗೂ ಪುರಾವೆ ಗಳನ್ನು ನಾಶಗೊಳಿಸಲಾಯಿತು ಮೊದಲಾದ ಕಾಯ್ದೆಗಳ ಪ್ರಕಾರ ದೀಪು ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿಯನ್ನು ಪಂಧಿಸಲಾಗಿತ್ತು. ಅನಂತರ ಜಾಮೀನಿನಲ್ಲಿ ಬಿಡು ಗಡೆಗೊಂಡಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗದ …

ಮಂಜೇಶ್ವರ, ಬೇಕಲ ಸೇರಿದಂತೆ 100 ವರ್ಷಕ್ಕಿಂತ ಹಳೆಯದಾದ ರೈಲ್ವೇ ಸೇತುವೆಗಳ ಬದಲು ಹೊಸ ಸೇತುವೆ ನಿರ್ಮಾಣ

ಮಂಜೇಶ್ವರ: ಮಂಜೇಶ್ವರ, ಬೇಕಲ, ಚಿತ್ತಾರಿ, ನೀಲೇಶ್ವರ ಸೇರಿದಂತೆ ಉತ್ತರ ಕೇರಳದ ನೂರು ವರ್ಷಕ್ಕಿಂತ ಹಳೆಯದಾದ 10 ರೈಲ್ವೇ ಸೇತುವೆಗಳನ್ನು ಕೆಡವಿ ಹೊಸ ಸೇತುವೆಗಳನ್ನು ನಿರ್ಮಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ. ಇವು ಬ್ರಿಟೀಷ್ ಕಾಲದಲ್ಲಿ ನಿರ್ಮಿಸಲಾಗಿರುವ ರೈಲ್ವೇ ಸೇತುವೆಗಳಾಗಿವೆ. ಜ್ಯಾರಿಯ ಲ್ಲಿರುವುದಕ್ಕಿಂತಲೂ ಹೆಚ್ಚು ಹಳಿಗಳನ್ನು ನಿರ್ಮಿಸಲು ಸಾಧವಾಗುವ ರೀತಿಯ ವಿಸ್ತೀರ್ಣದಲ್ಲಿ ಈ ಹೊಸ ಸೇತುವೆಗಳನ್ನು ನಿರ್ಮಿಸಲಾಗುವುದು. ಈ ಸೇತುವೆಗಳನ್ನು ರೈಲ್ವೇ ಇಲಾಖೆಯೇ ನೇರವಾಗಿ ನಿರ್ಮಿಸಲಿದೆ. ರೈಲುಗಳ ವೇಗದ ಮಿತಿಯನ್ನು 130 ಕಿಲೋ ಮೀಟರ್‌ಗೇರಿಸುವ ರೀತಿಯಲ್ಲಿ ಮಂಗಳೂರು-ಶೊರ್ನೂರು ನಡುವಿನ ರೈಲು …

ಸಜಂಕಿಲದಲ್ಲಿ ಕಣ್ಮುಚ್ಚಿದ ಬೀದಿ ದೀಪ: ದುರಸ್ತಿಗೆ ಆಗ್ರಹ

ಪೈವಳಿಕೆ: ಪಂಚಾಯತ್‌ನ 11ನೇ ವಾರ್ಡ್ ಸಜಂಕಿಲ ಪರಿಸರದಲ್ಲಿ ದಾರಿ ದೀಪ ಕೆಟ್ಟು ಹೋಗಿ ತಿಂಗಳು ಕಳೆದರೂ ದುರಸ್ತಿಗಾಗಿ ವಾರ್ಡ್ ಪ್ರತಿನಿಧಿ ಹಾಗೂ ಮಾಜಿ ಪ್ರತಿನಿಧಿ ಮನವಿ ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಿದ್ದಾರೆ. ವಾರ್ಡ್ ಪ್ರತಿನಿಧಿ ಗೀತಾ ನಾಯ್ಕ್, ಬಿಜೆಪಿ ಮುಖಂಡ, ಮಾಜಿ ಪಂ.ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಈ ಬಗ್ಗೆ ಅಧಿಕಾರಿಗಳಿಗೆ ಈ ಹಿಂದೆಯೇ ದೂರು ನೀಡಿದ್ದರು. ಸರ್ಕುತ್ತಿ, ಸಜಂಕಿಲ, ಆವಳಮಠ ಪ್ರದೇಶದಲ್ಲಿನ ಸುಮಾರು ೧೦ರಷ್ಟು ಬೀದಿ ದೀಪ ಕೆಟ್ಟು ತಿಂಗಳು ಕಳೆದಿದೆ. ಈ  ಪ್ರದೇಶ …