ಪೆರ್ವೋಡಿ ಕುಳಿಯಾರ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಿಗೆ ಸಮಸ್ಯೆ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ 7 ವಾರ್ಡ್ ಪೆರ್ವೋಡಿ ಕುಳಿಯಾರ್ ಪರಿಸರದಲ್ಲಿ ತ್ಯಾಜ ವಸ್ತುಗಳನ್ನು ನಿರ್ಜನ ಪ್ರದೇಶದಲ್ಲಿ ತಂದು ಹಾಕಿ ಬೆಂಕಿ ಹಚ್ಚಿರುವುದಾಗಿ ದೂರಲಾಗಿದೆ. ತ್ಯಾಜ್ಯ ರೋಗಗಳನ್ನು ಕೈ ಬೀಸಿ ಕರೆಯುತ್ತಿದೆ. ಈ ಪರಿಸರದಲ್ಲೇ ರೋಗಿಯಾದ ಮಹಿಳೆಯೊಬ್ಬರು ವಾಸವಾಗಿದ್ದು, ಆತಂಕದ ವಾತಾವರಣ ಉಂಟಾಗಿದೆ. ತ್ಯಾಜ್ಯವನ್ನು ಜನವಾಸವಿರುವ ಪ್ರರ್ದೇಶದಲ್ಲಿ ಉಪೇಕ್ಷಿಸಿ ಉರಿಸುವುದರಿಂದ ಪರಿಸರ ನಿವಾಸಿಗಳು ಸಮಸ್ಯೆಗೀಡಾಗಿದ್ದಾರೆ. ನಿನ್ನೆ ಈ ಪ್ರದೇಶಕ್ಕೆ ವಾರ್ಡ್ ಪ್ರತಿನಿದಿ ರಾಮ ಏದಾರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು …

ಚುನಾವಣೆ: ‘ವೋಟ್‌ವಂಡಿ’ ಪ್ರಯಾಣ ಆರಂಭ

ಕಾಸರಗೋಡು: ವಿಧಾನಸಭಾ ಚುನಾವಣೆಗಿರುವ ಔಪಚಾರಿಕ ಸಿದ್ಧತೆ ಜಿಲ್ಲೆಯಲ್ಲಿ ಸಕ್ರಿಯವಾಯಿತು. ಜಿಲ್ಲಾ ಆಡಳಿತ ಕೂಟದ ಚುನಾವಣೆ ಪ್ರಚಾರ ಕಾರ್ಯಕ್ರಮದ ಕಾಲೇಜು ಮಟ್ಟದ ಪ್ರಯಾಣ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಉದ್ಘಾಟಿಸಿ ದರು. 18 ವರ್ಷ ಪೂರ್ತಿಗೊಂಡ, ಚುನಾವಣೆಯ ಗುರುತು ಚೀಟಿ ಕೈವಶವಿರುವ ಎಲ್ಲಾ ಪೌರರು ಮದತಾನದ ಹಕ್ಕನ್ನು ವಿನಿಯೋಗಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ವೇಳೆ ಕರೆ ನೀಡಿದರು. ಚುನಾವಣೆಯ ಪೂರ್ವ ಭಾವಿಯಾಗಿ ಮೊದಲ ಮತದಾರರಿಗೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ, ಇಲೆಕ್ಟ್ರೋನಿಕ್ ವೋಟರ್ ಮಿಷನ್ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ …

ಬಿಜೆಪಿ ನಾಯಕತ್ವ ಸಭೆ ನಳಿನ್ ಕುಮಾರ್ ಕಟೀಲ್‌ರಿಂದ ಉದ್ಘಾಟನೆ

ಕಾಸರಗೋಡು: ಚುನಾವಣೆಯ ಪೂರ್ವಭಾವಿ ಸಿದ್ಧತೆಯಂಗವಾಗಿ  ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾಸರಗೋಡು ಲೋಕಸಭಾ ಮಂಡಲದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ, ಪಂಚಾಯತ್ ಏರಿಯಾ ಇನ್‌ಚಾರ್ಜ್‌ಗಳ ನಾಯಕತ್ವ ಸಭೆಯನ್ನು ಬಿಜೆಪಿ ಕರ್ನಾಟಕ ಮಾಜಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಕೇರಳದಲ್ಲಿ ಬಿಜೆಪಿಗೆ ಸ್ಥಳವಿಲ್ಲವೆಂದು ಪ್ರಚಾರ ಪಡಿಸಿದವರಿಗಿರುವ ತಿರುಗೇಟಾಗಿದೆ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶವೆಂದು ಅವರು ನುಡಿದರು. ಮುಂದಿನ ವಿಧಾನಸಭಾ ಮಂಡಲ ಚುನಾವಣೆ ಗಳಲ್ಲೂ ಬಿಜೆಪಿಯ ಶಕ್ತಿ ಪ್ರಕಟವಾಗಲಿದೆ ಎಂದು ಅವರು ನುಡಿದರು. ಬಿಜೆಪಿ ಜಿಲ್ಲಾ ಸಮಿತಿ …

ಬಿದ್ದು ಸಿಕ್ಕಿದ ಒಂದೂವರೆ ಪವನ್ ತೂಕದ ಚಿನ್ನದ ಕಾಲ್ಗೆಜ್ಜೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಇಲ್ಯಾಸ್

ಕುಂಬಳೆ: ಆರಿಕ್ಕಾಡಿಯಲ್ಲಿ ಬಿದ್ದು ಸಿಕ್ಕಿದ 2 ಲಕ್ಷ ರೂ. ಮೌಲ್ಯದ ಚಿನ್ನದ ಕಾಲ್ಗೆಜ್ಜೆಯನ್ನು ಕೋಟೆಕಾರಿನ ಇಲೆಕ್ಟ್ರೀಶ್ಯನ್ ಇಲ್ಯಾಸ್ ವಾರೀಸುದಾರರನ್ನು ಪತ್ತೆಹಚ್ಚಿ ಹಿಂತಿರುಗಿಸಿದರು. ಇಲ್ಯಾಸ್‌ನ ಈ ಮಾದರಿ ಕೆಲಸವನ್ನು ಸ್ಥಳೀಯರು ಪ್ರಶಂಶಿಸಿದ್ದಾರೆ. ಆರಿಕ್ಕಾಡಿಯ ಇನ್ನೋರ್ವ ಸಮಾಜಸೇವಕ ರಫೀಕ್ ಅಬ್ಬಾಸ್‌ರ ಸಹೋದರಿಯ ಒಂದೂವರೆ ಪವನ್ ತೂಕದ ಕಾಲ್ಗೆಜ್ಜೆ ವಾರಗಳ ಹಿಂದೆ ಆರಿಕ್ಕಾಡಿಯಲ್ಲಿ ಕಳೆದುಹೋಗಿತ್ತು. ಮನೆಯವರು ಎಲ್ಲಾ ಕಡೆ ಹುಡುಕಿಯೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಬೀದಿ ದೀಪ ದುರಸ್ತಿಗೆಂದು ಇಲ್ಯಾಸ್ ಆರಿಕ್ಕಾಡಿಗೆ ತಲುಪಿದ್ದರು. ದಾರಿ ಮಧ್ಯೆ ಹೊಳೆಯುತ್ತಿರುವ ಕಾಲ್ಗೆಜ್ಜೆಯನ್ನು ನೋಡಿ …

16ರ ಹರೆಯದ ಬಾಲಕಿಗೆ ದೌರ್ಜನ್ಯ: 15ರ ಬಾಲಕ ಸಹಿತ 5 ಮಂದಿ ವಿರುದ್ಧ ಪೋಕ್ಸೋ ಕೇಸು

ಹೊಸದುರ್ಗ: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ ಬಾಲಕಿಗೆ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ 15ರ ಬಾಲಕ ಸಹಿತ ೫ ಮಂದಿ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕೋಳಿ ಅಂಗಡಿ ನೌಕರನಾದ ವಯಕ್ಕರ ಪೋತ್ತಂಕಂಡ ನಿವಾಸಿ ನೌಶಾದ್, ತೃಕರಿಪುರದ ಫಾಯಿಸ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಇವರನ್ನು ಸಮಗ್ರವಾಗಿ ತನಿಖೆಗೊಳ ಪಡಿಸಲಾಗುವುದು. ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು. ತೃಕರಿಪುರದ ರಾಶಿದ್, ಉದಿನೂರು ವಿಲ್ಲೇಜ್‌ನಲ್ಲಿ ವಾಸವಾ ಗಿರುವ …

18ರ ಕೆಳಗಿನ ಪ್ರಾಯದವರ ಮಧ್ಯರಾತ್ರಿಯ ಚಹಾ ಸೇವನೆ: ಹೆತ್ತವರು ಜಾಗ್ರತೆ ಪಾಲಿಸಬೇಕೆಂದು ಪೊಲೀಸ್

ಕುಂಬಳೆ: ಮಧ್ಯರಾತ್ರಿ ಬಳಿಕದ ಗೂಡಂಗಡಿಗಳ ಚಟುವಟಿಕೆ ಹಾಗೂ ಆ ಸಮಯದಲ್ಲಿ ಯುವಕರ ಚಹಾ ಸೇವಿಸುವ ಹವ್ಯಾಸದ ಬಗ್ಗೆ ಕುಂಬಳೆ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಆರು ಬೈಕ್‌ಗಳಲ್ಲಾಗಿ 10ರಷ್ಟು ಯುವಕರು ಮಂಗಳೂರಿನಿಂದ ಚಹಾ ಸೇವಿಸಲೆಂದು ಗೂಡಂಗಡಿ ಹುಡುಕಾಡಿ ತಲುಪಿರುವುದನ್ನು ತನಿಖೆಗೊಳಪಡಿಸಲಾಗುತ್ತಿದೆ. ಚೇವಾರಿನಲ್ಲಿ ಇತ್ತೀಚೆಗೆ ಗೂಡಂಗಡಿಯೊಂದರಲ್ಲಿ ಯುವಕರು ಮಧ್ಯರಾತ್ರಿ ವೇಳೆ ಬೊಬ್ಬೆ ಹೊಡೆದು ನಡೆಸಿದ ಸಾಮೂಹಿಕ ಹೊಡೆದಾಟದ ಮಧ್ಯೆ ಪೊಲೀಸ್ ಪಟ್ರೋಲಿಂಗ್ ತಂಡ ಜೀಪು ನಿಲ್ಲಿಸಿ ಸ್ಥಳಕ್ಕೆ ತಲುಪಿದ ಘಟನೆಯ ಹಿಂದೆ ಮಾದಕ ಪದಾರ್ಥ- ಹೊಯ್ಗೆ ಸಾಗಾಟ- …

ರಾಜ್ಯದ ಮೊತ್ತಮೊದಲ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಕಾಸರಗೋಡಿನಲ್ಲಿ: ಫೆ. 28ರಂದು ಸಚಿವರಿಂದ ಶಿಲಾನ್ಯಾಸ

ಕಾಸರಗೋಡು: ರಾಜ್ಯದಲ್ಲಿ ಇದೇ ಪ್ರಥಮವೆಂಬಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಕಾಸರಗೋಡಿನಲ್ಲಿ ಸ್ಥಾಪಿಸಲಾಗು ವುದು. ಮೈಲಾಟಿಯಲ್ಲಿ ಇದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.  ಫೆ. 28ರಂದು ಅಪರಾಹ್ನ 3ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಶಿಲಾನ್ಯಾಸ ನೆರವೇರಿಸುವರು.  ಮೈಲಾಟಿಯಲ್ಲಿರುವ ರಾಜ್ಯ ವಿದ್ಯುನ್ಮಂಡಳಿಯ 220 ಕೆವಿ ವಿದ್ಯುತ್ ಸಬ್ ಸ್ಟೇಶನ್‌ನ ಆವರಣದೊಳಗೆ ಈ 125 ಮೆಘಾವಾಟ್ ಸಾಮರ್ಥ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಾಗುವುದು. ಹಗಲಿನ ವೇಳೆ  ವಿದ್ಯುತ್‌ನ್ನು  ಈ ಸ್ಟೋರೇಜ್‌ನಲ್ಲಿ ದಾಸ್ತಾನಿರಿಸಿ ರಾತ್ರಿ …

ಪತ್ನಿಗೆ ಇರಿದು ಕೊಲೆ ಯತ್ನದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದ ಇಬ್ರಾಹಿಂ

ಹೊಸದುರ್ಗ: ಗೃಹಿಣಿಯನ್ನು ಕಡಿದು ಕೊಲೆಗೈಯ್ಯಲು ಯತ್ನಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಕಾಞಂಗಾಡ್, ಕಡಪ್ಪುರಂ, ಬಾವನಗರ ಇಲ್ಯಾಸ್‌ನಗರದಲ್ಲಿ ರಂಜಾನ್ ವ್ರತಾಚರಣೆ ಆರಂಭ ಗೊಂಡ ದಿನದಂದೇ ದಾರುಣವಾದ ಘಟನೆ ನಡೆದಿದೆ. ಇಬ್ರಾಹಿಂ (62) ಆತ್ಮಹತ್ಯೆಗೈದವರು. ಇವರ ಪತ್ನಿ ಮರಿಯ (೫೫)ರನ್ನು ಗಂಭೀರ ಇರಿತದ ಗಾಯದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಕುಟುಂಬ ಸಮಸ್ಯೆ ಬಗ್ಗೆ ಇಬ್ಬರಲ್ಲಿ ವಾಗ್ವಾದ ವೇರ್ಪಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ರೋಷಗೊಂಡ ಇಬ್ರಾಹಿಂ ಕತ್ತಿ ತೆಗೆದು ಮರಿಯಂರ …

ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ: ಬಾಂಗ್ಲಾದೇಶದ ಪ್ರಜೆ ಸೆರೆ

ಕೊಚ್ಚಿ: ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ ನಡೆಸಿ ಅದರ ಗುಪ್ತ ಮಾಹಿತಿಗಳನ್ನು ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಮೂಲತಃ ಬಾಂಗ್ಲಾದೇಶದ  ಪ್ರಜೆಯಾಗಿ ರುವುದಾಗಿ ಶಂಕಿಸಲಾಗುತ್ತಿರುವ ಹಾಗೂ ಪಶ್ಚಿಮ ಬಂಗಾಲದ ಬರ್ಗಾರಿಯಾದಲ್ಲಿ ವಾಸಿಸುತ್ತಿರುವ ಅಲೀಫ ಇಸ್ಲಾಂ (21) ಎಂಬಾತನನ್ನು ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಇಡುಕ್ಕಿಯಿಂದ ಬಂಧಿಸಿದ್ದಾರೆ. ಭಾರತೀಯ ಸೇನಾ ಪಡೆಗೆ ಸೇರಿದ ಕೊಚ್ಚಿನ್ ಶಿಫ್ ಯಾರ್ಡ್‌ನ ಮಲ್ಪೆ ಘಟಕದ ಹಡಗು ನಿರ್ಮಾಣಗಳ ಬಗ್ಗೆ   ಭಾತೀಯ ನೌಕಾ ಪಡೆಯ  ಉಪಕರಣಗಳು,  ಇತರ ಚಟುವಟಿಕೆಗಳು ಹಾಗೂ ಭಾರತೀಯ ಸೇನಾ ಪಡೆಗೆ ಸಂಬಂಧಿಸಿದ …

ಕುಂಬಳೆ ಬಳಿಯ ಯುವಕ ಮಂಗಳೂರಿನ ವಾಸಸ್ಥಳದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ:  ಕುಂಬಳೆ ಬಳಿಯ ಯುವಕನೋರ್ವ ಮಂಗಳೂರಿನ ವಾಸಸ್ಥಳದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕುಂಬಳೆ ಮಾವಿನಕಟ್ಟೆ ಬಳಿಯ ವಾಳವಳಪ್ ನಿವಾಸಿ ಉದಯ ಎಂಬವರ ಪುತ್ರ  ರೋಶನ್ (22) ಮೃತ ಯುವಕನಾಗಿದ್ದಾನೆ. ಮೊನ್ನೆ ರಾತ್ರಿ  ಘಟನೆ ನಡೆದಿದೆ. ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲಿ ಮೃತದೇಹ ಕಂಡುಬಂದಿದೆ.  ಕೈಯ ನರ ಕತ್ತರಿಸಿದ ಬಳಿಕ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು  ಸಂಶಯಿಸಲಾಗುತ್ತಿದೆ. ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕೂಲ್ ಬಾರ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಶನ್ ಒಂದು ವಾರ ಹಿಂದೆ ಮನೆಗೆ ಬಂದು  …