ಮಿಲ್ಮಾ ಹಾಲಿನ ಬೆಲೆ ಲೀಟರ್‌ಗೆ 4 ರೂ. ಏರಿಕೆ

ತಿರುವನಂತಪುರ: ಮಿಲ್ಮಾ ಹಾಲಿನ ಬೆಲೆ ಪ್ರತೀ ಲೀಟರ್‌ಗೆ ತಲಾ 4ರೂ.ನಂತೆ  ಹೆಚ್ಚಿಸಲು ಮಿಲ್ಮಾದ ನಿರ್ದೇಶಕ ಮಂಡಳಿ ಸಭೆ ತೀರ್ಮಾನಿಸಿದೆ. ಈ ಹೆಚ್ಚಳ ಜೂನ್ ೧ರಿಂದ ಜ್ಯಾರಿಗೆ ಬರಲಿದೆ. ಇದಕ್ಕೆ ಹೊಂದಿಕೊಂಡು ಮಿಲ್ಮಾ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ. ಈ ತೀರ್ಮಾನದಂತೆ ಹೋಮೋ ಜೆನೈಸ್ಡ್  ಟೋನ್ಡ್ ಹಾಲಿನ ಅಧ ಲೀಟರ್‌ನ ಬೆಲೆ   28 ರೂ.ಗೇರಲಿದೆ. ಹೀಗೆ ಹೆಚ್ಚಿಸಲಾಗುವ 4 ರೂ.ನಲ್ಲಿ 3ರೂ 35 ಪೈಸೆ ಹೈನುಗಾರಿಕಾ ಕೃಷಿಕರಿಗೆ, 26 ಪೈಸೆ ಹೈನುಗಾರಿಕಾ ಸೊಸೈಟಿಗೆ ಹಾಗೂ ಬಾಕಿ ಹಣ ಮಿಲ್ಮಾ …

ಪರಂಬಳ ದುರ್ಗಾಶಕ್ತಿ ಕುಣಿತ ಭಜನಾ ತಂಡ ಸಭೆ ಮೇ 24ರಂದು

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ 24ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಲಿದೆ. ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ರಮ್ಯಾ ಎನ್. ಸೀತಾಂಗೋಳಿ ಅಧ್ಯಕ್ಷತೆ ವಹಿಸÀÄವರು. ಗೀತಾ ಸಾಹಿತ್ಯ ಸಂಭ್ರಮದ ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡÀÄವರು. ಮುಖ್ಯ ಅತಿಥಿಗಳಾಗಿ ಕುಂಬಳೆ ಅಬಕಾರಿ ಅಧಿಕಾರಿ …

ಅನಂತಪುರ ಕೈಗಾರಿಕಾ ಕೇಂದ್ರ ಪರಿಸರ ಮಲಿನೀಕರಣಕ್ಕೆ ತುರ್ತು ಪರಿಹಾರ ಉಂಟಾಗಬೇಕು- ಬಿಜೆಪಿ

ಕುಂಬಳೆ: ಅನಂತಪುರ ಇಂಡಸ್ಟ್ರಿಯಲ್ ಏರಿಯ ಪರಿಸರದ ಮಲಿನೀಕರಣ, ದುರ್ವಾಸನೆಗೆ ತುರ್ತು ಪರಿಹಾರ ಉಂಟಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಸ್ಥಳೀಯರ ಜೊತೆ ಕೈಗಾರಿಕಾ ಪ್ರಾಂಗಣದ ವಿವಿಧ ಸಂಸ್ಥೆಗಳನ್ನು ಸಂದರ್ಶಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ಕೈಗಾರಿಕೀಕರಣ ಜನರ ಆರ್ಥಿಕ ಪ್ರಗತಿಗೆ ಅನಿವಾರ್ಯವಾಗಿದೆ. ಆದರೆ ಜನರ ಆರೋಗ್ಯಕ್ಕೆ ಹಾನಿ ಉಂಟಾಗುವ, ಜಲಮೂಲಗಳು, ವಾತಾವರಣ ಮಲೀನಗೊಳ್ಳುವಂತಹ ಕೈಗಾರಿಕೆಗಳನ್ನು ತೊರೆಯಲು ಕೈಗಾರಿಕಾ ಇಲಾಖೆ ಸಿದ್ಧವಾಗಬೇಕು ಎಂದು ಅವರು ಆಗ್ರಹಿಸಿದರು. ಕಾರ್ಯದರ್ಶಿ ಪಿ.ಆರ್. ಸುನಿಲ್, ಮಂಡಲ ಅಧ್ಯಕ್ಷ ಸುನಿಲ್ …

ಹೊಸಂಗಡಿ ರೈಲ್ವೇ ಗೇಟ್ ಬಳಿ ರಸ್ತೆಯಲ್ಲಿ  ಮಳೆನೀರು ಸಂಗ್ರಹ: ಪಾದಚಾರಿಗಳಿಗೆ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್‌ಗೆ ಹೊಂದಿಕೊA ಡಿರುವ ರಸ್ತೆಯನ್ನು ನವೀಕರಣ ಗೊಳಿಸಿ ಅಭಿವೃದ್ದಿಪಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ಮಳೆ ನೀರು ಕಟ್ಟು ನಿಲ್ಲುವುದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ಎರಡು ವರ್ಷದ ಹಿಂದೆ ಇಂಟರ್‌ಲಾಕ್ ಅಳವಡಿಸಿ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ. ಆದರೆ ಸಮತಟ್ಟು ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊAಡು ವಾಹನ ಸಂಚಾರದ ವೇಳೆ ನಡೆದು ಹೋಗುವರ ಮೇಲೆ ಕೆಸರು ನೀರು ಎರಚುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಗೇಟ್ ಹಾಕಿದ ವೇಳೆ ವಾಹನಗಳು ನೀರಿನಲ್ಲಿ ನಿಲ್ಲಬೇಕಾಗುತ್ತಿದೆ. ಕಳಪೆ ಕಾಮಗಾರಿ ಕಾರಣವೆಂದು …

ಗಂಟಲಲ್ಲಿ ಎದೆಹಾಲು ಸಿಲುಕಿದ ಶಂಕೆ: ಮೂರು ತಿಂಗಳ ಮಗು ಸಾವು

ಕಾಸರಗೋಡು: ಗಂಟಲಲ್ಲಿ ಎದೆಹಾಲು ಸಿಲುಕಿರುವುದಾಗಿ ಶಂಕಿಸಲಾಗುತ್ತಿರುವ ಮೂರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ನಡೆದಿದೆ.  ನಗರದ ನೆಲ್ಲಿಕುಂಜೆ ಕಸಬಾ ತಾಯಲ್ ಹೌಸ್‌ನ  ಶಾಜಹಾನ್-ಆಯಿಷಾ ದಂಪತಿ ಪುತ್ರ ತ್ವಾಹಾ ಅಬ್ದುಲ್ಲ ಸಾವನ್ನಪ್ಪಿದ ಮಗು. ಈ ಮಗುವಿಗೆ ನಿನ್ನೆ ರಾತ್ರಿ ತಾಯಿ ಎದೆಹಾಲು ಉಣಿಸಿ ತೊಟ್ಟಿಲಲ್ಲಿ ಮಲಗಿಸಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ 6 ಗಂಟೆ ವೇಳೆ ಮಗು  ಚಲನರಹಿತವಾಗಿರುವುದನ್ನು ಗಮನಿಸಿದ ಮನೆಯವರು ಮಗುವನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು.  ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗು ಮೃತಪಟ್ಟಿರುವುದನ್ನು …

ಕುಂಬ್ಡಾಜೆ ಬ್ಯಾಂಕ್ ಸೆಕ್ಯುರಿಟಿ ನೌಕರನ ಕೊಲೆಗೆ ಬಳಸಿದ ಚಾಕು ಇರ್ದೆ ಹೊಳೆಯಲ್ಲಿ ಪತ್ತೆ

ಬದಿಯಡ್ಕ:  ಮಾರ್ಪನಡ್ಕದಲ್ಲಿ ಯುವಕನನ್ನು ಇರಿದು ಕೊಲೆಗೈಯ್ಯಲು ಬಳಸಿದ ಚಾಕುವನ್ನು  ಪೊಲೀಸರು ಪತ್ತೆಹಚ್ಚಿದ್ದಾರೆ. ನಿನ್ನೆ ಆರೋಪಿಗಳನ್ನು ಸೇರಿಸಿಕೊಂಡು ಕರ್ನಾಟಕದ ಪುತ್ತೂರು ಬಳಿಯ ಇರ್ದೆ ಹೊಳೆಯಲ್ಲಿ ನಡೆಸಿದ ಶೋಧ ವೇಳೆ ಚಾಕು ಪತ್ತೆಯಾಗಿದೆ. ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣನ್‌ರ ನೇತೃತ್ವದಲ್ಲಿ ಆರೋಪಿಗಳಾದ ಕುಂಬ್ಡಾಜೆ ಮೈಲ್ತೊಟ್ಟಿಯ ಕಿರಣ್ (30), ಕರುವತ್ತಡ್ಕದ ಅಖಿಲೇಶ್ (25) ಎಂಬಿವರನ್ನು  ಕರೆದೊಯ್ದು  ನಡೆಸಿದ ಶೋಧ ವೇಳೆ  ನೀರಿಲ್ಲದ ಹೊಳೆಯಲ್ಲಿ  ಚಾಕು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈವೇಳೆ ಅವರಿಗೆ ರಿಮಾಂಡ್ …

ಮಡಿಕೈ ವೆಳ್ಳೂಡದಲ್ಲಿ ಚಿರತೆ ಹಟ್ಟಿಯಿಂದ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದು ತಿಂದ ಸ್ಥಿತಿಯಲ್ಲಿ

ಹೊಸದುರ್ಗ: ಸ್ವಲ್ಪ ಸಮಯದ ವಿರಾಮದ ಬಳಿಕ ಮಡಿಕೈ ಪಂಚಾಯತ್‌ನ ವೆಳ್ಳುಡದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದುತಿಂದಿದೆ. ಮಡಿಕೈ ಪಂಚಾಯತ್‌ನ ಹೈನುಗಾರ ಸುರೇಶ್‌ರ ಹಟ್ಟಿಯಿಂದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿದೆ. ಹಟ್ಟಿಯಲ್ಲಿ ಸುಮಾರು 40ರಷ್ಟು ದನಗಳಿವೆ. ಎಂದಿನಂತೆ ನಿನ್ನೆ ರಾತ್ರಿ 7 ಗಂಟೆಗೆ ದನಗಳಿಗೆ ಮೇವು ನೀಡಲು ಸುರೇಶ್ ಹಟ್ಟಿಗೆ ತಲುಪಿದಾಗ ಕರು ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಪರಿಸರವೆಲ್ಲ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ರಾತ್ರಿಯಾದ ಕಾರಣ ಹೆಚ್ಚು ಹುಡುಕಾಟ ನಡೆಸಿರಲಿಲ್ಲ. …

ಹಂಗಾಮಿ ಸ್ಪೀಕರ್ ಆಗಿ ಜಿ. ಸುಧಾಕರನ್ ಪ್ರಮಾಣವಚನ ಸ್ವೀಕಾರ: ಖಾತೆ ಹಂಚಿಕೆ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ

ತಿರುವನಂತಪುರ: ಕೇರಳದ ೧೬ನೇ ವಿಧಾನಸಭೆಯ ಮೊದಲ ಅಧಿವೇಶನ ನಾಳೆ ಆರಂಭಗೊಳ್ಳಲಿ ರುವಂತೆಯೇ ಯುಡಿಎಫ್ ಬೆಂಬಲಿತ ಅಭ್ಯರ್ಥಿ ಯಾಗಿ ಗೆಲುವು ಸಾಧಿಸಿದ ಹಿರಿಯ ರಾಜಕಾರಣಿ ಜಿ. ಸುಧಾಕ ರನ್ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್    ಅವರು ಜಿ. ಸುಧಾಕರನ್‌ರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು. ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿಯುಕ್ತ ಶಾಸಕರು ನಾಳೆ ಶಾಸಕರಾಗಿ ಪ್ರಮಾಣವಚನ …

ಹುಂಜಕೋಳಿ ಕುಕ್ಕಿ ವೃದ್ದೆಗೆ ಗಾಯ:ಮುಖಕ್ಕೆ 12 ಹೊಲಿಗೆ ಹಾಕಿ ಚಿಕಿತ್ಸೆ

ಕೊಲ್ಲಂ: ಹುಂಜಕೋಳಿ ಕುಕ್ಕಿ ವೃದ್ದೆ ಗಂಭೀರವಾಗಿ ಗಾಯಗೊಂಡಿ ದ್ದಾರೆ. ಕುಯಪ್ಪಳ್ಳಿ ಮರುದಮನ್ ಪಳ್ಳಿ ಸುಜಿತ್ ಭವನ ನಿವಾಸಿ ಜೋಯ್ಸ್ (74) ಹುಂಜ ಕೋಳಿ ಕುಕ್ಕಿ ಗಾಯಗೊಂಡಿರುವ ವೃದ್ದೆ. ನಿನ್ನೆ ಅಂಗಡಿಗೆ ಹೋಗಿ ಮನೆಗೆ ಮರಳುತ್ತಿ ರುವ ಮಧ್ಯೆ ಇವರದೇ ಕೋಳಿ ಕುಕ್ಕಿದೆ. ಹಾರಿ ಬಂದು ತಲೆಯಮೇಲೆ ಕುಳಿತ ಕೋಳಿ ಮೂಗಿನ ಬದಿ, ಹುಬ್ಬಿಗೆ ಕುಕ್ಕಿ ಗಾಯಗೊಳಿಸಿದೆ. ಜೋಯ್ಸ್‌ರ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆಯೋರ್ವೆ ತಲುಪಿ ಕೋಳಿಯನ್ನು ಓಡಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಕ್ಕೆ 12 ಹೊಲಿಗೆ ಹಾಕಿರುವುದಾಗಿ …

ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರ: ಮೂವರ ಬಂಧನ

ಕೊಚ್ಚಿ: ಫ್ಯಾಶನ್ ಶೋನಲ್ಲಿ ಭಾಗವಹಿಸಲು ಅವಕಾಶವೊದಗಿಸವು ದಾಗಿ ತಿಳಿಸಿ ಯುವತಿಯರನ್ನು ದುಬಾಯಿಗೆ ತಲುಪಿಸಿ ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸುವ ಯುವತಿಯರ  ತಂಡ ಸೆರೆಗೀಡಾಗಿದೆ. ಆಲುವ  ತೈನೋತ್‌ನ ಕಡವಿಲ್ ರೋಡ್‌ನ ಮನೆಯೊಂದರಲ್ಲಿ  ವಾಸಿಸುವ ಗುರುವಾಯೂರು ತೈಕ್ಕಾಡ್ ನಿವಾಸಿ ಸ್ಟೋಯಿಸಿಟಿ ಮುಟ್ಟತ್ತ್  ಯಾನೆ ಸಿಂಧು (56), ತಿರುವನಂತಪುರ ಕುನ್ನತ್ತುಕಾಲ್ ಮಣ್ಣಂಕೋಡ್ ಪೊಂಙವಿಳ ಜೆಸಿ ವೀಟಿಲ್‌ನ ಅಲೀನ ಎಬ್ರಹಾಂ (23), ಮಲಪ್ಪುರಂ ಪೊನ್ನಾನಿ ಬಿಎಂ ಪುಕ್ಕಯಿಲ್ ವೀಟಿಲ್‌ನ ಮಂಜಿಮ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ಕರೆದೊಯ್ದು  …