ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡು ಕಲ್ಲು ಇದರ ನೂತನ ಸಮಿತಿ ರಚನೆ ಫ್ರೆಂಡ್ಸ್ ಸಭಾಭವನದಲ್ಲಿ ನಡೆಯಿತು. ಸುರೇಶ್ ಶೆಟ್ಟಿ ನಿರೂಪಿಸಿದರು. ಪ್ರವೀಣ್ ಪಟ್ಲ ಸ್ವಾಗತಿಸಿದರು. ಲೋಕೇಶ್ ನೋಂಡ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ಉಪಾಧ್ಯಕ್ಷರಾಗಿ ಲೋಕೇಶ್ ನೋಂಡ, ಕೃಷ್ಣ ಕಯ್ಯಾರು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರದೀಪ್ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ, ಜೀವನ್ ಪಟ್ಲ, ಕೋಶಾಧಿಕಾರಿ ಯಾಗಿ ಅರುಣ್ ಡಿ ಸೋಜಾ, ಸಾಂಸ್ಕೃತಿಕ …

ಬಾಲಗೋಕುಲ ಉತ್ತರ ಕೇರಳಂ ರಾಜ್ಯ ವಾರ್ಷಿಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಬಾಲಗೋಕುಲ ಉತ್ತರ ಕೇರಳಂ ಇದರ ರಾಜ್ಯ ವಾರ್ಷಿಕ ಸಮ್ಮೇಳನದ  ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರು ನಿನ್ನೆ ಬಿಡುಗಡೆಗೊಳಿಸಿದರು. ಜುಲೈ  1೦ರಿಂದ 13ರ ವರೆಗೆ ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ  ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯ್ಕ್, ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಸಹಿತ ಹಲವರು ಗಣ್ಯರು ಭಾಗವಹಿಸುವರು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಯವರು ಮಕ್ಕಳಲ್ಲಿ ಆರ್ಷಜ್ಞಾನ ಹಾಗೂ ದೇಶಪ್ರೇಮವನ್ನು ಬೆಳೆಸುವ, …

ಐತಿಹಾಸಿಕ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಬೇಕೆಂಬ ಬೇಡಿಕೆ:  ಸಚಿವರಿಗೆ ಮನವಿ

ಕುಂಬಳೆ:  ಪ್ರಸಿದ್ಧ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ  ಕೇಂದ್ರವಾಗಿ ಭಡ್ತಿಗೊಳಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಇಕ್ಕೇರಿ ನಾಯಕರ ರಾಜವಂಶದ ಆಡಳಿತ ವೇಳೆ ನಿರ್ಮಾಣಗೊಂಡಿದ್ದ  ಹಾಗೂ ಮೈಸೂರು  ರಾಜನಾಗಿದ್ದ ಟಿಪ್ಪು ಸುಲ್ತಾನ್ ಈ ಭಾಗಕ್ಕೆ ಬಂದಾಗ ತಂಗುತ್ತಿದ್ದ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಬೇಕೆಂಬ ಬೇಡಿಕೆಯೊಂದಿಗೆ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ. ಕುಂಬಳೆ 1೦ನೇ ಶತಮಾನದಿಂದ 18ನೇ ಶತಮಾನದವರೆಗೆ ತುಳುವಂಶದ ಕೇಂದ್ರವಾಗಿತ್ತು.  ಇತಿಹಾಸಗಳ ಪುಟದಲ್ಲಿ ಸೇರಿಕೊಂಡು ಮಹತ್ವ ಪಡೆದಿರುವ  ಆರಿಕ್ಕಾಡಿಯ ಕೆಂಪುಕಲ್ಲು ಕೋಟೆಯು ಈಗ ಕೆಲವು ಭಾಗಗಳು ಮಾತ್ರ ಉಳಿದುಕೊಂಡಿವೆ. …

ಕುಂಬಳೆ ಪಂಚಾಯತ್ ಬಸ್ ತಂಗುದಾಣದಲ್ಲಿ ನೀರು ತಂಗಿ ನಿಂತು ಸಮಸ್ಯೆ

ಕುಂಬಳೆ: ಕುಂಬಳೆ ಪಂಚಾಯತ್ ಬಸ್ ತಂಗುದಾಣ ಶೆಲ್ಟರ್‌ನಲ್ಲಿ ನೀರು ತುಂಬಿಕೊಂಡಿರುವುದಾಗಿ ಸ್ಥಳೀಯರು, ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ತಂಗುದಾಣದಲ್ಲಿ ನೀರು ತಂಗಿನಿಲ್ಲುವ ಕಾರಣ ಪ್ರಯಾಣಿಕರಿಗೆ ಬಸ್‌ಗೆ ಹತ್ತಲು, ಇಳಿಯಲು ಸಮಸ್ಯೆಯಾಗು ತ್ತಿದೆ. ಜನರು ಅಂಟು ರೋಗ ಬೆದರಿಕೆ ಭೀತಿಯಲ್ಲಿರುವ ಮಧ್ಯೆ ಕೆಸರು ನೀರು ತಂಗಿ ನಿಲ್ಲುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಶೀಘ್ರವೇ ಇದಕ್ಕೊಂದು ಪರಿಹಾರ ಕಾಣಬೇಕೆಂದು ಬಿಜೆಪಿ ಕುಂಬಳೆ ಸಮಿತಿ, ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ. ಜಂಟಿಯಾಗಿ ಜರಗಿದ ಸಭೆಯಲ್ಲಿ ಈ ಅಭಿಪ್ರಾಯ ಕೇಳಿಬಂದಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿಗೆ …

ಮುಸ್ಲಿಂ ಲೀಗ್‌ನಿಂದ ಅವಕಾಶವಾದಿ ರಾಜಕೀಯ- ರವೀಶ ತಂತ್ರಿ ಕುಂಟಾರು

ಪೈವಳಿಕೆ: ದೇಶದಲ್ಲಿ ಬಿಜೆಪಿ ಅಲೆ ಕಾರ್ಯಗತವಾಗುತ್ತಿದೆ. ಕೇರಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿದೆ. ಬಿಜೆಪಿಯಷ್ಟು ಮತ ಇಲ್ಲದ ಮುಸ್ಲಿಂ ಲೀಗ್ ಕೇರಳದಲ್ಲಿ ನಿರ್ಣಾಯಕ ಶಕ್ತಿಯಾಗಿರುವುದು ಅವರ ಅವಕಾಶವಾದಿ ರಾಜಕೀಯ ದಿಂದಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಮುಖಂಡ ಕುಂಟಾರು ರವೀಶ ತಂತ್ರಿ ನುಡಿದರು. ಸಜಂಕಿಲ ದಲ್ಲಿ ನಡೆದ ಮಂಜೇಶ್ವರ ಮಂಡಲ ಬಿಜೆಪಿ ಪ್ರಶಿಕ್ಷಣ ಶಿಬಿರ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮುಸ್ಲಿಂ ಲೀಗ್ ತನ್ನದೇ ಶಕ್ತಿಯಿಂದಲ್ಲ, ಐಕ್ಯರಂಗದ ಹೆಸರಲ್ಲಿ ಕಾಂಗ್ರೆಸ್ ಹಾಗೂ ಕೇರಳ ಕಾಂಗ್ರೆಸ್ ಮತಗಳ ಜೊತೆಗೆ …

ಕಂಚಿಕಟ್ಟೆ ಸೇತುವೆ ಬಳಿ ಗುಡ್ಡೆ ಕುಸಿತ ಭೀತಿ: ಪ್ರಯಾಣಿಕರು ಆತಂಕದಲ್ಲಿ

ಕುಂಬಳೆ: ಅಪಘಾತ ಬೆದರಿಕೆ ಎದುರಿಸುವ ಕಂಚಿಕಟ್ಟೆ ಸೇತುವೆ ಬಳಿ ರಸ್ತೆ ಹಾನಿಗೊಳ್ಳುವ ಸ್ಥಿತಿಗೆ ತಲುಪಿದೆಯೆಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಸೇತುವೆಯಿಂದ ೨೫೦ ಮೀಟರ್ನಷ್ಟು ದೂರದಲ್ಲಿ ರಸ್ತೆಗೆ ಹೊಂದಿಕೊಂಡು ಕಲ್ಲಿನ ಗೋಡೆ ಆಂಶಿಕವಾಗಿ ಕುಸಿದು ನಿಂತಿದೆ. ರಸ್ತೆಗೆ ಹೊಂದಿಕೊಂಡು ಬೆಳೆಯುವ ಮರದ ಬುಡದ ಬಳಿಯಲ್ಲೇ ಕಲ್ಲು ಬಿರುಕು ಬಿಟ್ಟು ಕೆಳಗೆ ಬಿದ್ದಿದೆ. ಇನ್ನು ಕೂಡ ಈ ರೀತಿ ಮುಂದುವರಿದರೆ ಮರ ಹಾಗೂ ಅದರೊಂದಿಗಿರುವ ಕಲ್ಲಿನ ಗೋಡೆ ರಸ್ತೆಗೆ ಬೀಳುವ ಸ್ಥಿತಿಯಿದೆಯೆಂದು ಪ್ರಯಾಣಿಕರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ದಾರಿಯಾಗಿ …

ಮನೆಗೆ ನುಗ್ಗಿ ಯುವತಿ, ಸ್ನೇಹಿತನ ವೀಡಿಯೋ ಚಿತ್ರೀಕರಣ: ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದಾಗ ವೀಡಿಯೋ ಪ್ರಚಾರ ಮಾಡುವುದಾಗಿ ಬೆದರಿಕೆ; ಇಬ್ಬರು ಪೊಲೀಸ್ ಕಸ್ಟಡಿಗೆ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ  ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 27ರ ಹರೆಯದ ಗೃಹಿಣಿಯ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ಇಬ್ಬರು ಪೊಲೀಸರ ಕಸ್ಟಡಿಯಲ್ಲಿರುವುದಾಗಿ ಸೂಚನೆಯಿದೆ. ಜೂನ್ 23ರಂದು ರಾತ್ರಿ 10.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯ ಮನೆಗೆ ಅತಿಕ್ರಮಿಸಿದ ನುಗ್ಗಿದ ಆರೋಪಿಗಳು ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ …

13ರ ಬಾಲಕನಿಗೆ  ಹಲ್ಲೆ: ಹಲವು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಉಸ್ತಾದ್ ವಿರುದ್ಧ ಇನ್ನೊಂದು ಕೇಸು

ಕಾಸರಗೋಡು: 15ಕ್ಕೂ ಅಧಿಕ ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಮಲಪ್ಪುರಂ, ವಳಾಂಜೇರಿ ಆದವನಾಡ್ ಉಸ್ತಾದ್ ವಿರುದ್ಧ ಬೇಕಲ ಪೊಲೀಸರು ಇನ್ನೊಂದು ಕೇಸು ದಾಖಲಿಸಿದ್ದಾರೆ. 13ರ ಹರೆಯದ ಬಾಲಕನನ್ನು ಹಲವು ದಿನಗಳ ಕಾಲ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದನೆಂಬ ದೂರಿನಂತೆ ಎಂ.ಕೆ. ಮೊಹಮ್ಮದ್ ಉಸ್ತಾದ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದರೊಂದಿಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧವಿರುವ ಪ್ರಕರಣಗಳ ಸಂಖ್ಯೆ ಮೂರು ಆಗಿ ಹೆಚ್ಚಳಗೊಂಡಿದೆ. ಈ ಮೊದಲು ಎರಡು ಪೋಕ್ಸೋ ಕೇಸುಗಳನ್ನೂ ಈತನ ವಿರುದ್ಧ ನೋಂದಾಯಿಸಲಾಗಿತ್ತು. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ …

ಮಾದಕ ಪದಾರ್ಥ ಸಹಿತ ಯುವಕ ಸೆರೆ

ಬದಿಯಡ್ಕ: ಮಾದಕ ವಸ್ತುವಾದ ಎಂಡಿಎಂಎ ಸಹಿತ ಯುವಕನೋರ್ವ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕ ನಿವಾಸಿ ಅಬ್ದುಲ್ ಜವಾದ್ ಸಿ.ಎಂ. ಬಂಧಿತ ವ್ಯಕ್ತಿ. ಈತನ ಕೈವಶ 0.49 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆ ನೆಲ್ಲಿಕಟ್ಟೆ ಸಮೀಪದ ಚೆನ್ನಡ್ಕದಲ್ಲಿ ಬದಿಯಡ್ಕ ಠಾಣೆ ಎಸ್‌ಐ ರೂಪೇಶ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ಪೊಲೀಸರ ವಾಹನವನ್ನು ಕಂಡು ಓಡಿ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಶಂಕೆ ತೋರಿ ಬೆನ್ನಟ್ಟಿ ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಿಂದ ಮಾದಕವಸ್ತು …

ಹಿರಿಯ ಯಕ್ಷಗಾನ ಕಲಾವಿದ ಮಧೂರು ವೆಂಕಟಕೃಷ್ಣ ನಿಧನ

ಮಧೂರು: ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥದಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಯಾಗಿದ್ದ  ಮಧೂರು  ಂಕಟಕೃಷ್ಣ (87) ನಿಧನಹೊಂದಿದರು.  ವಯೋಸಹಜ ಅಸೌಖ್ಯದಿಂದಿದ್ದ ಇವರು ನಿನ್ನೆ ಸಂಜೆ ಮಧೂರಿನ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಸುಮಿತ್ರ, ಮಕ್ಕಳಾದ ಜ್ಯೋತಿಲಕ್ಷ್ಮಿ, ಮುರಳೀಮಾಧವ (ಯಕ್ಷಗಾನ ಕಲಾವಿದ), ಡಾ| ನಾರಾಯಣ, ಅಳಿಯ ಡಾ| ನಾಗ ಭೂಷಣ್ (ಬೆಂಗಳೂರು), ಸೊಸೆಯಂ ದಿರಾದ  ಸಂಧ್ಯಾ, ಡಾ| ದೀಪ್ತಿ, ಸಹೋದರಿ ಮೀನಾಕ್ಷಿ ಶಿಬರೂರಾಯ (ಪೆರುದಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರಿಯರಾದ ಪಾರ್ವತಿ ಸರಳಾಯ, …