ಓಣಂ ಸ್ಪೆಷಲ್ ಡ್ರೈವ್: ಮನೆಯಲ್ಲಿ ಬಚ್ಚಿಟ್ಟಿದ್ದ ಮೆಥಾಫಿಟಾಮಿನ್ ಪತ್ತೆ

ಕುಂಬಳೆ: ಮನೆಯಲ್ಲಿ ಬಚ್ಚಿಟ್ಟಿದ್ದ ಮಾದಕವಸ್ತುವಾದ 8.98 ಗ್ರಾಂ ಮೆಥಾಫಿಟಮಿನ್ ಅಬಕಾರಿ ತಂಡ ಓಣಂ ಸ್ಪೆಷಲ್ ಡ್ರೈವ್ ಪ್ರಕಾರ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಮುಖಾರಿಕಂಡ ತಂಶೀರಾ ಮಹಲ್ ವೀಟಿಲ್‌ನ ಮೊಹಮ್ಮದ್ ರಿಸ್ವಾನ್ (27) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆತ ಮನೆಯಲ್ಲಿ ಇಲ್ಲದ ಕಾರಣ ಆತನನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ ವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟಕ್ಕಾಗಿ ಮನೆಯಲ್ಲಿ ಮಾದಕದ್ರವ್ಯ ಬಚ್ಚಿಟ್ಟಿರುವ …

ವ್ಯಾಪಾರಿಯನ್ನು ಯುವತಿ ಮನೆಗೆ ಕರೆಸಿ ಫೊಟೋ, ವೀಡಿಯೋ ತೆಗೆದು ಹಣ, ಮೊಬೈಲ್ ಫೋನ್‌ಗಳ ಲಪಟಾವಣೆ: ದಂಪತಿ ಸಹಿತ ಮೂವರ ಬಂಧನ

ಕುಂಬಳೆ: ಸಾಲ ಕೊಟ್ಟ ವ್ಯಾಪಾರಿ ಯನ್ನು ಉಪಾಯದಿಂದ ಮನೆಗೆ ಕರೆಸಿ ಬೆಡ್‌ರೂಂನಲ್ಲಿ ವಿವಿಧ ರೀತಿಯ ಫೊಟೋ ತೆಗೆದು ಬ್ಲ್ಯಾಕ್‌ಮೇಲ್ ನಡೆಸಿ ಹಣ ಹಾಗೂ ಮೊಬೈಲ್ ಫೋನ್ ಲಪಟಾಯಿಸಿದ ಆರೋಪದಂತೆ ದಂಪತಿ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮುಟ್ಟಂ ಬಂಗರ ನಿವಾಸಿಯಾದ ೬೪ರ ಹರೆಯದ ವ್ಯಾಪಾರಿ ನೀಡಿದ ದೂರಿನಂತೆ ಕುಬಣೂರಿನ ರಿಸ್ವಾನ (28), ಈಕೆಯ ಪತಿ ಹಸ್ಸನ್ ಆಸಿಫ್ (33), ಸಂಬಂಧಿಕ ಮೊಗ್ರಾಲ್ ನಿವಾಸಿ ಮುಹ ಮ್ಮದ್ ಸಿರಾಜ್ (32) ಎಂಬಿವರನ್ನು ಬಂಧಿಸಲಾಗಿದೆ. ಇವರಿಗೆ ನ್ಯಾಯಾಲಯ ರಿಮಾಂಡ್ …

ಆಹಾರ ಸೇವಿಸುತ್ತಿದ್ದಾಗ ಕುಸಿದುಬಿದ್ದ ಪದವಿ ವಿದ್ಯಾರ್ಥಿ ಚಿಕಿತ್ಸೆ ಮಧ್ಯೆ ಮೃತ್ಯು

ಕುಂಬಳೆ: ಆಹಾರ ಸೇವಿಸುತ್ತಿದ್ದ ವೇಳೆ ಕುಸಿದುಬಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಮೃತಪಟ್ಟನು. ಕುಂಬಳೆ ಕುಂಟಂಗೇರಡ್ಕದ ಅಬ್ದುಲ್ಲ ಎಂಬವರ ಪುತ್ರ ಮುಬಾರಿಸ್  (18) ಮೃತಪಟ್ಟ ದುರ್ದೈವಿ. ಶನಿವಾರ ರಾತ್ರಿ ಮನೆಯಲ್ಲಿ ಆಹಾರ ಸೇವಿಸುತ್ತಿದ್ದಾಗ ಮುಬಾರಿಸ್ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಅಲ್ಲಿ ವೈದ್ಯರು ನಡೆಸಿದ ತಪಾಸಣೆ ವೇಳೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದುಬಂತು.  ಈ ಹಿನ್ನೆಲೆಯಲ್ಲಿ  ಮಂಗಳೂರಿನ ಆಸ್ಪತ್ರೆಗೆ  ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ …

ವಾಹನಗಳಲ್ಲಿ ಹಿಂಬಾಲಿಸಿ  ಬಂದು ಯುವಕರಿಬ್ಬರ ಮೇಲೆ ಹಲ್ಲೆ: ಐದು ಮಂದಿ ವಿರುದ್ಧ ಕೇಸು ದಾಖಲು

ಬದಿಯಡ್ಕ: ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ಸ್ನೇಹತರಿಬ್ಬರ ಮೇಲೆ ಹಲ್ಲೆ  ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಐದು ಮಂದಿ ಯ ವಿರುದ್ದ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ವಳಮಲೆ ನಿವಾಸಿ ಧ್ವನೀಶ್ ಶೆಟ್ಟಿ ಸಿ.ಆರ್ (18) ಮತ್ತು ಆತನ ಸ್ನೇಹಿತ ಬದಿಯಡ್ಕ ಯಶ್ವಂತ್(19) ಎಂಬವರು  ಹಲ್ಲೆಗೊಳಗಾಗಿದ್ದು, ಆ ಬಗ್ಗೆ ಧ್ವನೀಶ್ ನೀಡಿದ ದೂರಿನಂತೆ ಶುಹೈಬ್ (26), ಬದಿಯಡ್ಕದ ಹನನ್ ಶಹಲ್ (18) ಹಾಗೂ ಕಂಡರೆ ಗುರುತುಹಚ್ಚಲು ಸಾಧ್ಯವಾಗುವ ಇತರ ಮೂವರು ಸೇರಿದಂತೆ  ಒಟ್ಟು ಐದು ಮಂದಿ …

ಬಿಜೆಪಿಯಿಂದ ಓಣಂ ಕಿಟ್ ವಿತರಣೆ

ನಾರಂಪಾಡಿ: ಬಿಜೆಪಿ ಬದಿಯಡ್ಕ ಮಂಡಲ ೫ನೇ ವಾರ್ಡ್ ನಾರಂಪಾಡಿ ಸಮಿತಿ ವತಿಯಿಂದ ೬೦ರಷ್ಟು ಕುಟುಂಬಗಳಿಗೆ ಓಣಂ ಕಿಟ್‌ಗಳನ್ನು ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಓಣಂನಂತಹ ಆಚರಣೆ ಸಂದರ್ಭಗಳಲ್ಲಿ ಧರ್ಮ, ಸಮಾಜ, ರಾಷ್ಟ್ರೀಯ ಭಿನ್ನತೆಗಳನ್ನು ಮರೆತು ಒಂದಾಗಲಿರುವ ವೇದಿಕೆಗಳಾಗಬೇಕೆಂದು ಅವರು ಆಹ್ವಾನ ನೀಡಿದರು. ಬೂತ್ ಅಧ್ಯಕ್ಷ ಸತ್ಯಗೋಪಾಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್ ಮಾತನಾಡಿದರು.

ಅಣಂಗೂರಿನಿಂದ ಹೊಸ ಬಸ್ ನಿಲ್ದಾಣವರೆಗೆ ವನ್‌ವೇ ಏರ್ಪಡಿಸಲು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹ

ಕಾಸರಗೋಡು: ನಗರದ ಸಂಚಾರ ತಡೆ ಸಮಸ್ಯೆ ಪರಿಹಾರಕ್ಕಾಗಿ ಅಣಂಗೂರಿನಿಂದ ಹೊಸ ಬಸ್ ನಿಲ್ದಾಣದವರೆಗೆ ವನ್‌ವೇ ವ್ಯವಸ್ಥೆ ಏರ್ಪಡಿಸಬೇಕೆಂದು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವುದಕ್ಕಾಗಿ  ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಈ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಾಧಿಕಾರದ ಸಭೆ ಮುಂದಿನ ತಿಂಗಳು ಮೊದಲ ವಾರದಲ್ಲಿ ನಡೆಸುವುದಕ್ಕಾಗಿ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ನಗರದ ಸಾರಿಗೆ ತಡೆ ಪರಿಹರಿಸಲು ತುರ್ತು ಕ್ರಮ ಅನಿವಾರ್ಯವೆಂದು …

ಹೃದಯಾಘಾತ: ಪಾಮೋಯಿಲ್ ಸೇಲ್ಸ್ ಎಕ್ಸಿಕ್ಯೂಟಿವ್ ನಿಧನ

 ಕಾಸರಗೋಡು: ಖಾಸಗಿ ಪಾಮೋ ಯಿಲ್ ಕಂಪೆನಿಯ ಕಾಸರಗೋಡು ಸೇಲ್ಸ್ ಎಕ್ಸಿಕ್ಯೂಟಿವ್ ಹೃದಯಾಘಾತ ದಿಂದ ನಿಧನ ಹೊಂದಿದರು. ಕಾಸರ ಗೋಡು ಬೀಚ್ ರಸ್ತೆ ಪೈ ಕಪೌಂಡ್‌ನ ದಿ| ಜಯರಾಮ ಪೈಯವರ ಪುತ್ರ ವೆಂಕಟೇಶ್ ಪೈ (42) ನಿಧನ ಹೊಂದಿ ದವರು.  ನಿನ್ನೆ ಮುಂಜಾನೆ ೪.೩೦ರ ವೇಳೆ ವಾಂತಿಯುಂಟಾಗಿ ಅಸ್ವಸ್ಥಗೊಂಡಿ ದ್ದರು. ಕೂಡಲೇ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಗೀತಾ ಪೈ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಸುನಿಲ್ ಪೈ ಈ ಹಿಂದೆ …

ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆ: ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಸಾಕಾರದತ್ತ

ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ಡಿಪಿಆರ್‌ಗೆ ಅಂಗೀಕಾರ ಲಭಿಸಿದೆ. ನಿರ್ಮಾಣ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬಹುದಾಗಿದೆ. ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆಯಾಗಿದೆ ಇದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರದೇಶದ ಹಲವು ಕಾಲದ ಬೇಡಿಕೆ ಕೂಗಿಗೆ ಪರಿಹಾರವಾ ಗಲಿದೆ. ಜನರ ಈ ಆಗ್ರಹಕ್ಕೆ ಬೇಕಾಗಿ ಮಧ್ಯೆ ಪ್ರವೇಶಿಸಲು ಸಾಧ್ಯವಾಗಿರುವುದ ರಲ್ಲಿ ಅತಿಯಾದ ಅಭಿಮಾನವಿದೆ ಎಂದು ಅಶ್ವಿನಿ ನುಡಿದರು. ಇದಕ್ಕೆ ಬೇಕಾಗಿ ಸಹಾಯ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ …

ಕಾರ್ಮಿಕರಿಗೆ ಪ್ರತಿಕೂಲವಾಗುವ ಲೇಬರ್  ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕು- ಬಿಎಂಎಸ್

ಕಾಸರಗೋಡು: ೨೯ ಲೇಬರ್ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಸಂಕ್ಷಿಪ್ತಗೊಳಿಸುವಾಗ ಅದರಲ್ಲಿ ಕಾರ್ಮಿಕರಿಗೆ ಪ್ರತಿಕೂಲವಾಗಿ ಬಾಧಿಸುವ ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕೆಂದು ಬಿಎಂಎಸ್ ಕಾಸರಗೋಡು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ವಲಯ ಉಪಾಧ್ಯಕ್ಷ ಜನಾರ್ದನ ಕಡಪ್ಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರದೀಪ್ ಕೇಳೋತ್ ಶುಭ ಕೋರಿದರು. ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಚಟುವಟಿಕಾ ವರದಿ, ವಲಯ ಕೋಶಾಧಿಕಾರಿ ಪುಷ್ಪರಾಜ್ ಆಯ ವ್ಯಯಲೆಕ್ಕ ಮಂಡಿಸಿದರು. ವಲಯ ಪ್ರಬಾರ ಗುರುದಾಸ್ …

ನಗರದ ಹಿರಿಯ ವ್ಯಾಪಾರಿ ನಿಧನ

ಕಾಸರಗೋಡು: ನಗರದ ವ್ಯಾಪಾರಿ ಹಾಗೂ ಸೂಪರ್ ಎಂಟರ್‌ಪ್ರೈಸಸ್ ಮಾಲಕ ಪಳ್ಳಂ ಹೈದ್ರೋಸ್ ಮಸೀದಿ ಮಾಜಿ ಕಾರ್ಯದರ್ಶಿಯಾಗಿದ್ದ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸಮೀಪದ ನಿವಾಸಿ ಅಬ್ದುಲ್ಲ ಸೂಪರ್ ಪಳ್ಳಂ (83) ನಿಧನ ಹೊಂದಿದರು. ಮೃತರು ಪತ್ನಿ ನಫೀಸ, ಮಕ್ಕಳಾದ ಅಶ್ರಫ್, ಫಿರೋಜ್, ಮಿಸ್ರಿಯ, ಶಹರ್ಬಾನು, ಅಳಿಯಂದಿ ರಾದ ಅಬ್ದುಲ್ ಜಲೀಲ್ ಚೂರಿ, ಜಬ್ಬಾರ್ ಕೋಳಿಯಾಡ್, ಸಮೀರ್ ಪಟ್ಲ, ಸೊಸೆಯಂದಿರಾದ ನಸೀಮ, ಹಬೀಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.