ಹುಲಿವೇಷ ತಂಡಗಳಿಗೆ ಕೇಂದ್ರ ಸರಕಾರದಿಂದ 24 ಲಕ್ಷ ರೂ.

ತೃಶೂರು: ಓಣಂ ಹಬ್ಬದ ಅಂಗವಾಗಿ ನಡೆಯುವ ಹುಲಿವೇಷ ತಂಡಗಳಿಗೆ ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಧನ ಸಹಾಯ ಮಂಜೂರು ಮಾಡಿದೆ. ಎಂಟು ತಂಡಗಳಿಗಾಗಿ ಒಟ್ಟು 24 ಲಕ್ಷ ರೂಪಾಯಿಗಳನ್ನು ಕೇಂದ್ರ ಪ್ರವಾಸಿ ಸಚಿವಾಲಯ ನೀಡಲಿದೆ. ಕೇಂದ್ರ ಸಚಿವ ಸುರೇಶ್‌ಗೋಪಿಯವರ ಪ್ರಯತ್ನ ಫಲವಾಗಿ ಈ ಮೊತ್ತ ಮಂಜೂರು ಮಾಡಲಾಗಿದೆ. ಪ್ರತೀ ತಂಡಕ್ಕೆ ತಲಾ 3 ಲಕ್ಷ ರೂಪಾಯಿ ಲಭಿಸಲಿದೆ. ಡಿಪಿಪಿಎಚ್ ಸ್ಕೀಂ ಪ್ರಕಾರ ಮೊತ್ತ ನೀಡಲಾಗುವುದು. ಇದಲ್ಲದೆ ದಕ್ಷಿಣ ವಲಯ ಕಲ್ಚರಲ್ ಸೆಂಟರ್ ಹುಲಿ ವೇಷ ತಂಡಗಳಿಗೆ …

ಮೇಸ್ತ್ರಿ ನಿಧನ

ಮಂಗಲ್ಪಾಡಿ: ಪುಳಿಕುತ್ತಿ ನಿವಾಸಿ ಕುಞಂಬು ಮೇಸ್ತ್ರಿ (68) ನಿಧನ ಹೊಂದಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆದಿತ್ಯವಾರ ಸಂಜೆ ನಿಧನ ಸಂಭವಿಸಿದೆ. ಒಂದು ವಾರದ ಹಿಂದೆ ಹೃದಯಾಘಾತ ಉಂಟಾಗಿದ್ದು, ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ನಾರಾಯಣಿ, ಪತ್ನಿ ಯಶೋದ, ಮಕ್ಕಳಾದ ಅನಿಲ್ ಕುಮಾರ್, ಶ್ರೀಜಿತ್, ಶ್ರೀಜಾ, ಸಿಂಧು, ಸೊಸೆ ಯಂದಿರಾದ ಸರಿತಾ, ಸವಿತಾ, ಅಳಿಯ ವಿನೋದ್, ಸಹೋದರಿಯರಾದ ಪಾರ್ವತಿ, ಕಾರ್ತ್ಯಾಯಿನಿ, ಸುಶೀಲಾ, ಲಕ್ಷ್ಮೀ, ಸಹೋದರ ರಾಘವನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ಕುಂಞಿರಾಮ ಮಣಿಯಾಣಿ, ಓರ್ವ ಅಳಿಯ …

ಕುಂಬಳೆಯ ಟೋಲ್ ಬೂತ್ ನಿರ್ಮಾಣ ಕ್ರಿಯಾ ಸಮಿತಿಯಿಂದ ಮಾರ್ಚ್

ಕುಂಬಳೆ: ಕುಂಬಳೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಟೋಲ್ ಬೂತ್ ನಿರ್ಮಾಣದ ವಿರುದ್ಧ ಶಾಸಕರ ನೇತೃತ್ವದಲ್ಲಿ  ಕುಂಬಳೆ ಟೋಲ್ ಫ್ಲಾಜಾ ವಿರುದ್ಧ ಕ್ರಿಯಾ ಸಮಿತಿಯ ಮಾರ್ಚ್ ನಡೆಯಿತು. ನಿನ್ನೆ ಬೆಳಿಗ್ಗೆ ಕುಂಬಳೆ ಪೇಟೆಯಿಂದ ಮೆರವಣಿಗೆಯೊಂದಿಗೆ ಮಾರ್ಚ್ ಆರಂಭಗೊಂಡಿತು. ಮಾನದಂಡ ಪಾಲಿಸದೆ ಆರಿಕ್ಕಾಡಿಯಲ್ಲಿ ಟೋಲ್ ಫ್ಲಾಜಾ ನಿರ್ಮಿಸಲಾಗುತ್ತಿದೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ. ಮೆರವಣಿಗೆ ಟೋಲ್ ಬೂತ್ ಸಮಿಪಕ್ಕೆ ತಲುಪಿದಾಗ ಪೊಲೀಸರು ತಡೆಯೊಡ್ಡಿದರು. ಬ್ಯಾರಿಕೇಡ್‌ಗಳನ್ನು ದಾಟಿ ಮುಷ್ಕರನಿರತರು ಮುಂದೆ ಸ್ವಾಗತಿಸಲೆತ್ನಿಸಿದಾಗ ಜಲಪಿರಂಗಿ ಪ್ರಯೋಗಿಸಿ ಅವರನ್ನು ತಡೆಯಲಾಯಿತು. ಶಾಸಕರಾದ ಎಕೆಎಂ ಅಶ್ರಫ್, …

ಬಾಯಾರು ಕುಟುಂಬ ಆರೋಗ್ಯ ಕೇಂದ್ರ ಉದ್ಘಾಟನೆ ವಿಳಂಬ: ಬಿಜೆಪಿಯಿಂದ ನಾಳೆ ಅಣಕು ಪ್ರತಿಭಟನೆ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರಿನಲ್ಲಿರುವ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ 2023ರಲ್ಲಿ ಪೂರ್ಣಗೊಂಡರೂ ಇದು ವರೆಗೆ ಉದ್ಘಾಟನೆಗೊಳ್ಳದ ಕಾರಣ ಉಪಯೋಗಕ್ಕಿಲ್ಲದಂತಾಗಿದೆ. ಕಟ್ಟಡದ ಒಳಗಿರುವ ಪೀಠೋಪಕರಣಗಳು ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಾಯಾರು ಸೊಸೈಟಿ ಹತ್ತಿರದಿಂದ ಮೆರವಣಿಗೆ ಮೂಲಕ ಸಾಗಿ ಬಿಜೆಪಿ ಕಟ್ಟಡದ ಅಣಕು ಉದ್ಘಾಟನೆ ಮಾಡುವ ಮೂಲಕ ಪ್ರತಿಭಟಿಸಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ವಿನಂತಿಸಿದೆ.

ಪೆರ್ಮುದೆಯಲ್ಲಿ ಮೋಂತಿ ಫೆಸ್ಟ್ ಆಚರಣೆ

ಪೆರ್ಮುದೆ: ಇಲ್ಲಿನ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ನಿನ್ನೆ ತೆನೆ ಹಬ್ಬ ಆಚರಿಸಲಾಯಿತು. ಮಾತೆ ಮೇರಿಯ ಗ್ರೋಟೊ ಬಳಿ ತೆನೆಗಳ ಆಶೀರ್ವಚನ ನಡೆಯಿತು. ಬಳಿಕ ಬಾಳೆಮೇರಿಯನ್ನು ಸ್ತುತಿಸಿ ಪುಷ್ಪನಮನ ಸಲ್ಲಿಸಲಾಯಿತು. ಇಗರ್ಜಿಯಲ್ಲಿ ದಿವ್ಯ ಬಲಿಪೂಜೆ ಜರಗಿದ್ದು, ಫಾ| ಹೆರಾಲ್ಡ್ ಡಿಸೋಜಾ, ಫಾ| ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು. ಓಣಂ ಹಬ್ಬದಂಗವಾಗಿ ಭಾರತೀಯ ಕಥೋಲಿಕ ಯುವ ಸಂಚಲನ ಪೆರ್ಮುದೆ ಘಟಕ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಸಿಹಿ ಹಂಚಲಾಯಿತು.

ಎಸ್.ವಿ. ಭಟ್ ಸಂಸ್ಮರಣೆ ನಾಳೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ಎಸ್. ವಿ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಾಳೆ ಸಂಜೆ 4.30 ಕ್ಕೆ ಕಾಸರಗೋಡು ಬೀರಂತಬೈಲಿ ನಲ್ಲಿರುವ ‘ಕನ್ನಡ ಅಧ್ಯಾಪಕ ಭವನ’ದಲ್ಲಿ ನಡೆಯಲಿದೆ.ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ. ಪುಂಡ ರೀಕಾಕ್ಷ ಆಚಾರ್ಯ ಎಸ್ ವಿ ಭಟ್ ರ ಸಂಸ್ಮರಣೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ …

ಪೊಲೀಸ್ ದೌರ್ಜನ್ಯ: ಜಿಲ್ಲೆಯ ಪೊಲೀಸ್ ಠಾಣೆಗಳ ಮುಂದೆ ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾಸರಗೋಡು: ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಅಮಾಯಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ಜಿಲ್ಲೆಯ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನಾ ಸಭೆ ನಡೆಸಲು ಪಕ್ಷದ ಜಿಲ್ಲಾ ಸಮಿತಿ ಸಭೆ ತೀರ್ಮಾನಿಸಿದೆ. ಇದರಂತೆ ಜಿಲ್ಲಾ ಮಟ್ಟದ ಪ್ರತಿಭಟನಾ ಸಭೆ ಬೇಡಗಂ  ಪೊಲೀಸ್ ಠಾಣೆ ಮುಂದೆ ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.  ಇದನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಇದರ ಹೊರತಾಗಿ ಮೇಲ್ಪರಂಬ, ಬೇಕಲ, ರಾಜಪುರಂ, ವೆಳ್ಳರಿಕುಂಡ್, ಅಂಬಲತರ, ಹೊಸದುರ್ಗ, ಬದಿಯಡ್ಕ, …

ಬಿಜೆಪಿ ಜಯನಗರ ವಾರ್ಡ್ ಸಮಾವೇಶ

ಮಾರ್ಪನಡ್ಕ: ಬಿಜೆಪಿ ಜಯ ನಗರ 11ನೇ ವಾರ್ಡ್ ಸಮಿತಿ ಸಮಾವೇಶ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ಜರಗಿತು. ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ. ಎಂ.ಎಲ್ ಉದ್ಘಾಟಿಸಿ ಮಾತನಾಡಿದರು, ಪಕ್ಷದ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಮುಖ್ಯ ಅತಿಥಿಯಾಗಿದ್ದರು. ವಾರ್ಡು ಪ್ರತಿನಿಧಿ ಹರೀಶ ಗೋಸಾಡ ಇವರನ್ನು ವಾರ್ಡ್ ಸಮಿತಿಯ ಪರವಾಗಿ ಅಶ್ವಿನಿ ಎಂ.ಎಲ್.ಸನ್ಮಾನಿಸಿದರು. ವಾಸುದೇವ ಭಟ್ ಚೋಕೆಮೂಲೆ ಅಧ್ಯಕ್ಷತೆ ವಹಿಸಿ ದರು. ಬೂತ್ ಅಧ್ಯಕ್ಷ ನಾರಾಯಣ ನಾಯಕ್, ದಾಮೋದರ ಮಾರ್ಪನಡ್ಕ, ಸೂರ್ಯನಾರಾಯಣ ಮಾಳಿಗೆಮನೆ, ಶಿವಪ್ಪ ನಾಯಕ್, ನಾಗರಾಜ ಭಟ್ …

ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಭಾಸ್ಕರನಗರದಲ್ಲಿ ರಂಜಿಸಿದ ಓಣಂ ಆಚರಣೆ

ಕುಂಬಳೆ: ಶೆಟ್ಟಿಗದ್ದೆ ಭಾಸ್ಕರನಗರದಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆದ ಓಣಂ ಆಚರಣೆ ಜನಮನ ರಂಜಿಸಿತು. ಸಾವಿರಾರು ಮಂದಿ ಭಾಗವಹಿಸಿದ ಈ ಬೃಹತ್ ಕಾರ್ಯ ಕ್ರಮಕ್ಕೆ ಡಿವೈಎಸ್ಪಿ ಹಾಗೂ  ಸಿನಿಮಾ ನಟನಾದ ಸಿಬಿ ಥೋಮಸ್ ದೀಪ ಬೆಳಗಿಸಿ ಚಾಲನೆ ನೀಡಿದರು. ತುಳು ಚಿತ್ರನಟಿ ರೂಪಶ್ರೀ ವರ್ಕಾಡಿ, ಕರ್ನಾಟಕ ಜಾನಪದ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್, ಚಿತ್ರನಟ, ನಿರ್ದೇಶಕ ಅಶ್ವತ್ಥ್, ಪಂಚಾಯತ್ ಸದಸ್ಯೆಯರಾದ ಸುಲೋಚನ, ಶೋಭಾ,  ರಾಜು ಸ್ಟೀಫನ್, ರವಿ ನಾಯ್ಕಾಪು …

6 ತಿಂಗಳ ಹಿಂದೆಯಷ್ಟೇ ವಿವಾಹಿತಳಾದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಯುವಕ ನೋರ್ವನನ್ನು ಪ್ರೀತಿಸಿ ಆರು ತಿಂಗಳ ಹಿಂದೆಯಷ್ಟೇ  ಆತನನ್ನು ಮದುವೆ ಯಾದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದುಮ ಅರಮಂ ಗಾನ ಅಲಿಂಗಾಲ್ ತೊಟ್ಟಿಯಿಲ್ ವೀಟಿಲ್ ರಂಜೀಶ್ ಎಂಬವರ ಪತ್ನಿ ಕೆ. ನಂದನ (20) ಸಾವನ್ನಪ್ಪಿದ ಯುವತಿ. ಪೆರಿಯ ಆಯಂಪಾರ ವಿಲ್ಲಾರಂಪದಿ ನಿವಾಸಿ ಕೆ. ರವಿ- ಸೀನಾ ದಂಪತಿ ಪುತ್ರಿಯಾಗಿರುವ ನಂದನ ರಂಜೀಶ್‌ನನ್ನು ಪ್ರೀತಿಸಿ ಆರು ತಿಂಗಳ ಹಿಂದೆ ಆತನ ಜತೆಗೆ ಹೋಗಿದ್ದಳು. ಬಳಿಕ ಕಳೆದ ಎಪ್ರಿಲ್ ೨೬ರಂದು ಅವರು …