ಹಿರಿಯ ಖಾಸಗಿ ಬಸ್ ನಿರ್ವಾಹಕ ನಿಧನ

ಮುಳ್ಳೇರಿಯ: ಖಾಸಗಿ ಬಸ್‌ನ ಹಿರಿಯ ನಿರ್ವಾಹಕನಾಗಿದ್ದ ಮುಳ್ಳೇರಿಯ ನಿವಾಸಿ ಶೇಖ್ ಎಂ.ಎಸ್. ಆದಂ (75) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹಿರಿಯ ಸಿಪಿಎಂ ಕಾರ್ಯಕರ್ತನಾಗಿದ್ದಾರೆ. ಮೃತರು ಪತ್ನಿ ರಸಿಯಬಾನು, ಮಕ್ಕಳಾದ ಶಮೀರ್, ರಶೀದ್, ಫೌಸಿಯಾಬಾನು, ನಿಲೋಫರ್, ಅಳಿಯ- ಸೊಸೆಯಂದಿರಾದ ಮೈನಾಸ್, ಶಿಬಾ, ಖಲೀಲ್, ಮಜೀದ್, ಸಹೋದರಿ ಶಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಬಳೆ ಸಿಎಚ್‌ಸಿ ರಸ್ತೆಯಿಂದ ಗಾಂಜಾ ಸಹಿತ ಯುವಕ ಸೆರೆ

ಕುಂಬಳೆ: ಇಲ್ಲಿನ ಸಿಎಚ್‌ಸಿ ರಸ್ತೆಯಲ್ಲಿ ಗಾಂಜಾ ಸಹಿತ ಯುವಕ ಸೆರೆಯಾಗಿದ್ದಾನೆ. ಕೊಪಾಡಿ ನಿವಾಸಿ ಸಿ.ಕೆ. ಚೇತನ್ (26)ನನ್ನು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದೆ. ವಿದ್ಯಾರ್ಥಿಗಳು ಸಹಿತದವರಿಗೆ ಗಾಂಜಾ ವಿತರಿಸುವ ವ್ಯಕ್ತಿಯಾಗಿದ್ದಾನೆ ಸೆರೆಯಾದವ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟಿವ್ ಆಫೀಸರ್ ಕೆ.ವಿ. ಮನಾಸ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಇ. ರಾಹುಲ್, ಪ್ರವೀಣ್ ಕುಮಾರ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಎಂ.ವಿ. ಕೃಷ್ಣಪ್ರಿಯ ದಾಳಿಯಲ್ಲಿ …

ಭಾರತದ ವಿರುದ್ದ ಟ್ರಂಪ್ ತೆರಿಗೆ ಆನೆಗೆ ಇಲಿ ಹೊಡೆದಂತೆ-ಅಮೆರಿಕ ತಜ್ಞರು

ಹೊಸದಿಲ್ಲಿ: ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವ ಭಾರತದ ಮೇಲೆ  ತೆರಿಗೆಯುದ್ಧಕ್ಕಿಳಿದಿ ರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿ ವಿರುದ್ಧ ಅಮೆರಿಕದ ಆರ್ಥಿಕ ತಜ್ಞರೇ ಈಗ ರಂಗಕ್ಕಿಳಿದಿ ದ್ದಾರೆ. ಭಾರತದ ವಿರುದ್ಧ ಅಮೆರಿಕ ಸಾರಿರುವ ಆರ್ಥಿಕ ಸಮರ ಆನೆಯ ಮೇಲೆ ಇಲಿ ಹೊಡೆದಂತಾಗಲಿದೆ. ತೆರಿಗೆ ಸಮರ ಮೂಲಕ  ತನ್ನ ಕಾಲಿಗೆ ತಾನೇ ಗುಂಡು ಹೊಡೆದಂತೆ ಎಂದು ಅಮೆರಿಕದ ಖ್ಯಾತ ಆರ್ಥಿಕ ತಜ್ಞ ರಿಚಾರ್ಜ್ ಊಲ್ಫ್ ಹೇಳಿದ್ದಾರೆ. ವಿಶ್ವಸಂಸ್ಥೆ ಲೆಕ್ಕಾಚಾರ ಪ್ರಕಾರ ಭಾರತ ಭೂಮಿಯ ಮೇಲೆ ಅತೀ …

ಮಾಹಿ ನಿರ್ಮಿತ ಮದ್ಯದೊಂದಿಗೆ ಕರ್ನಾಟಕದ ಮೂವರ ಸೆರೆ

ಕಾಸರಗೋಡು: ಮಾಹಿ ನಿರ್ಮಿತ ಮದ್ಯದೊಂದಿಗೆ ಮೂವರನ್ನು ಕಾರು ಸಹಿತ ಪೊಲೀಸರು ಬಂಧಿಸಿದ್ದಾರೆ.  25 ಲೀಟರ್ ಮಾಹಿ ಮದ್ಯವನ್ನು  ವಶಪಡಿಸಲಾಗಿದೆ. ಕರ್ನಾಟಕ ಮಡ್ಯ ನಿವಾಸಿಗಳದ ನವೀನ್ (31),ಸುರೇಶ್ (30) ಮತ್ತು ಜಯಕುಮಾರ್ (25) ಎಂಬವರು ಬಂಧಿತರಾದವರು.  ಚಿತ್ತಾರಿಕ್ಕಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ರಂಜಿತ್ ರವೀಂದ್ರನ್ ಮತ್ತು ಎಎಸ್‌ಐ ಸುನಿಲ್ ಅಬ್ರಹಾಂ ನೇತೃತ್ವದ ಪೊಲೀಸರ ತಂಡ ನಿನ್ನೆ ಕುನ್ನಂಗೈಯಿಂದ ಮಾಲು ಸಹಿತ ಬಂಧಿಸಿದೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಓಣಂ ಔತಣ ಸುಡಲಿದೆ: ಹೆಚ್ಚುತ್ತಿರುವ ತರಕಾರಿ ಬೆಲೆ

ಕಾಸರಗೋಡು: ಓಣಂ ಹಬ್ಬ ಸನಿಹದಲ್ಲಿರುವಂತೆ ತರಕಾರಿಗಳ ಬೆಲೆ ಗಗನದತ್ತ ಮುಖ ಮಾಡಿದೆ. ಲಿಂಬೆಹುಳಿ ಹೊರತುಪಡಿಸಿ ಇತರ ಎಲ್ಲಾ ತರಕಾರಿ ಸಾಮಗ್ರಿಗಳಿಗೆ ಬೆಲೆ 100ರ ಗಡಿ ದಾಟದಿದ್ದರೂ ದಿನ ದಿಂದ ದಿನಕ್ಕೆ ದರ ಹೆಚ್ಚಳವುಂಟಾಗು ತ್ತಿರುವುದು ಓಣಂ ಔತಣದ ಬಗ್ಗೆ ಕುಟುಂ ಬಗಳಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಓಣಂ ಹಬ್ಬದ ಸಮಯವಾಗುವಾಗ ವ್ಯಾಪಾರಿಗಳು ತರಕಾರಿ ಬೆಲೆ ಹೆಚ್ಚಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಜನರು ನುಡಿಯುತ್ತಾರೆ. ಆದರೆ ಮಾರುಕಟ್ಟೆ ಅನುಸಾರವಾಗಿ ಬೆಲೆ ಹೆಚ್ಚಳವಾಗುತ್ತಿರುವುದಾಗಿ ವ್ಯಾಪಾರಿಗಳು ತಿಳಿಸುತ್ತಾರೆ. ತಮಿಳು ನಾಡಿನಿಂದ ಪ್ರಧಾನವಾಗಿ ಕಾಸg ಗೋಡು …

ಖಾಝಿ ಸಿ.ಎಂ. ಅಬ್ದುಲ್ಲ ಮೌಲವಿ ನಿಗೂಢ ಸಾವು: ತನಿಖೆ ಕಣ್ಣೂರು ರೇಂಜ್ ಡಿಐಜಿಗೆ

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಖಾಝಿ ಸಿ.ಎಂ. ಅಬ್ದುಲ್ಲ ಮೌಲವಿಯವರ ೧೫ ವರ್ಷ ಹಳೆಯದಾಗಿರುವ ನಿಗೂಢ ಮರಣಕ್ಕೆ ಸಂಬಂಧಿಸಿ ತನಿಖೆ ಇನ್ನು ಕಣ್ಣೂರು ರೇಂಜ್ ಡಿಐಜಿಯವರ ಮೇಲ್ನೋಟದಲ್ಲಿ ನಡೆಯಲಿದೆ. ನಿಗೂಢ ಸನ್ನಿವೇಶದಲ್ಲಿ ಅಬ್ದುಲ್ಲ ಮೌಲವಿಯವರ ಮರಣದಲ್ಲಿ ಕೊಲೆ ಕೃತ್ಯ ಸಾಧ್ಯತೆ ಇದೆ ಎಂದು ಸೂಚಿಸಿ ಖಾಝಿ ಆಕ್ಷನ್ ಸಮಿತಿ ಉಪಾಧ್ಯಕ್ಷ ಉಬೈಲುಲ್ಲ ಕಡವತ್, ಚೆಂಬರಿಕ ಜುಮಾ ಮಸೀದಿ ಸಮಿತಿ ಸದಸ್ಯ ಸರ್ದಾರ್ ಮುಸ್ತಫ ಎಂಬಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ನೀಡಿದ ಮನವಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. …

ಹೃದಯಾಘಾತದಿಂದ ನಿಧನ

ಮಂಜೇಶ್ವರ: ಸುಂಕದಕಟ್ಟೆ ಸಮೀಪದ ನೀರಳಿಕೆ ನಿವಾಸಿ ಚಿದಾನಂದ ಭಟ್ (65) ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು.  ಪುರೋಹಿತ ರಾಗಿದ್ದ ಇವರು ಕೈರಂಗಳ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದರು. ಮೃತರು ಪತ್ನಿ ಪುಷ್ಪಲತಾ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಬಳಗ, ಕಾಸರಗೋಡಿನ ಕನ್ನಡಿಗರು ವಾಟ್ಸಪ್ ಬಳಗ ಸಂತಾಪ ಸೂಚಿಸಿದೆ.

ಪ್ರತಾಪನಗರ ಶ್ರೀ ಗಣೇಶೋತ್ಸವಕ್ಕೆ ಸಂಭ್ರಮದ ಸಮಾಪ್ತಿ

ಉಪ್ಪಳ: ಪ್ರತಾಪನಗರದ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ 42ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿ ಗೊಂಡಿತು. ಕಳೆದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜಿಸಿದ ಗಣಪತಿಯ ಶೋಭಾಯಾತ್ರೆ ನಿನ್ನೆ ಸಂಜೆ ಉತ್ಸವಾಂಗಣದಿಂದ ಹೊರಟು ಸೋಂಕಾಲು, ಕೈಕಂಬ, ಐಲ ಮಹಾದ್ವಾರ, ಪಾರಕಟ್ಟೆ ದಾರಿಯಾಗಿ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ವಿಗ್ರಹ ಜಲ ಸ್ತಂಭನ ನಡೆಯಿತು. ಸ್ತಬ್ದ ಚಿತ್ರ, ಕುಣಿತ ಭಜನೆ ಮೊದಲಾದ ಸಾಂಸ್ಕೃತಿಕ ವೈಭವಗಳು …

ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕ ಗಣೇಶೋತ್ಸವ

ಮೀಂಜ :ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ ಕ್ಲಬ್ ತಿಲಕ್ ನಗರ ಎಲಿಯಾಣ ಇದರ ವತಿಯಿಂದ 4ನೇ ವರ್ಷದ ಶ್ರೀ ಗಣೇಶೋತ್ಸವ ಜರಗಿತು. ಬೆಳಗ್ಗೆ ಗಣಪತಿ ಪ್ರತಿಷ್ಠೆ ಗಣಪತಿ ಹವನ ಶ್ರೀ ಶಾಸ್ತ ಭಜನಾ ಮಂದಿರ ಚಿನಾಲದ ವತಿಯಿಂದ ಭಜನಾ ಸೇವೆ ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉತ್ತಮ ಕೃಷಿ ಕಾರ್ಮಿಕರಿಗೆ ನೀಡುವ ಈ ವರ್ಷದ ‘ ಸ್ಪಂದನ ಗ್ರಾಮೀಣ ಪ್ರಶಸ್ತಿ’ಯನ್ನು ಕುಂಞÂ ಪೂಜಾರಿ ಹಾಗೂ ಭಾಗಿ ದಂಪತಿಗೆ ನೀಡಲಾಯಿತು.ನಂತರ ಗ್ರಾಮದ …

ತಲಪಾಡಿ ಅಪಘಾತ: ಶಾಸಕ ಎಕೆಎಂ ಅಶ್ರಫ್ ಸಂತಾಪ

ತಲಪಾಡಿ: ತಲಪಾಡಿಯಲ್ಲಿ ಸಂಭವಿಸಿದ ವಾಹನ ಅಪಘಾತ ಅತ್ಯಂತ ದುಃಖಕರವಾಗಿದೆ ಎಂದು ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದಾಗಿ ಶಾಸಕ ಎಕೆಎಂ ಅಶ್ರಫ್ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪೂರ್ತಿಯಾಗುವುದರೊಂದಿಗೆ ದುರಂತಗಳು ಹೆಚ್ಚುತ್ತಿದೆ. ಅಪರಿಮಿತ ವೇಗ ಹಾಗೂ ಭಾರೀ ಮಳೆ ಅಪಘಾ ತಗಳಿಗೆ ಕಾರಣವಾಗುತ್ತಿದ್ದು, ಸರ್ವೀಸ್ ರಸ್ತೆಯನ್ನು ಮಾತ್ರ ಉಪಯೋಗಿ ಸಬೇಕಾದ ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಲವೊಮ್ಮೆ ಪ್ರಧಾನ ರಸ್ತೆಯ ಮೂಲಕ ಸಂಚರಿಸುತ್ತಿರುವುದು, ಸರ್ವೀಸ್ ರಸ್ತೆ, ಪ್ರಧಾನರಸ್ತೆಗಳಲ್ಲಿ ಸ್ಪರ್ಧಾತ್ಮಕ ಓಟದ ಮಧ್ಯೆ ಕೆಲವು ಚಾಲಕರು ಹೆಡ್‌ಸೆಟ್ ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಈ …