ಬ್ಲೋಕ್ ಪಂಚಾಯತ್ ಮೀಸಲಾತಿ ವಾರ್ಡ್

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬAಧಿಸಿ ಜಿಲ್ಲೆಯ ಬ್ಲೋಕ್ಗಳ ಮೀಸಲಾತಿ ಕ್ರಮ ಪೂರ್ಣ ಗೊಳಿಸಲಾಗಿದೆ. ಇದರಂತೆ ಕಾರಡ್ಕ ಬ್ಲೋಕ್ ಪಂಚಾಯತ್ನ 10ನೇ ವಾರ್ಡ್ ಕುಂಡAಗಳಿಯನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ನ್ನಾಗಿ ಆರಿಸಲಾಗಿದೆ. ದೇಲಂಪಾಡಿ (ವಾರ್ಡ್ 5)ನ್ನು ಪರಿಶಿಷ್ಟ ಪಂಗಡ ವಿಭಾಗಕ್ಕಾಗಿ ಮೀಸಲಿರಿಸಲಾ ಗಿದೆ. ಉಳಿದಂತೆ ಬೆಳ್ಳೂರು (3), ಆದೂರು (4), ಅಡೂರು (6), ಕೊಳತ್ತೂರು (11), ಪೊವ್ವಲ್ (12), ಮುಳಿಯಾರು (13) ಮತ್ತು ಕಾರಡ್ಕ (14)ನ್ನು ಮಹಿಳಾ ಮೀಸಲಾತಿ ವಾರ್ಡ್ಗಳನಾನಾಗಿ ಆರಿಸಲಾಗಿದೆ.ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16ನೇ ವಾರ್ಡ್ …

ಸಿಡಿಲು ಬಡಿದು ಮನೆ ಬಿರುಕು: ವಯರಿಂಗ್ ನಾಶ

ಉಪ್ಪಳ: ಸಿಡಿಲಿನ ಆಘಾತಕ್ಕೆ ಮನೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಪರಿಶಿಷ್ಟ ಪಂಗಡದವರ ಕೇಂದ್ರ ನಿವಾಸಿ ಕೂಲಿ ಕಾರ್ಮಿಕ ಉಮೇಶ ಎಂಬವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಈ ವೇಳೆ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋಗಿದ್ದು, ವಿದ್ಯುತ್ ಉಪಕರಣಗಳು ಹಾನಿಗೊಂಡಿದೆ.ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಲ್ಪಾಡಿ ವಿಲೇಜ್ ಅಧಿಕಾರಿಗಳು, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಬು ಬಂದ್ಯೋಡು …

ವೆಳ್ಳರಿಕುಂಡ್ ಬಳಿ ಮಾವೋಯಿಸ್ಟ್ ಪೋಸ್ಟರ್ ಪತ್ತೆ: ಜಾಗ್ರತಾ ನಿರ್ದೇಶ; ತನಿಖೆ ಆರಂಭ

ಕಾಸರಗೋಡು: ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಲಾತಡ ಎಂಬಲ್ಲಿ ಮಾವೋಯಿಸ್ಟ್ ಪೋಸ್ಟರ್ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಜಾಗ್ರತಾ ನಿರ್ದೇಶ ಹೊರಡಿಸಲಾಗಿದೆ. ವೆಳ್ಳರಿಕುಂಡ್ ಪೊಲೀಸರು ಹಾಗೂ ವಿವಿಧ ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ಲಾತಡ ಬಸ್ ವೈಟಿಂಗ್ ಶೆಡ್‌ನಲ್ಲಿ ಮೂರು ಪೋಸ್ಟರ್‌ಗಳನ್ನು ಅಂಟಿಸಿರುವುದು ನಿನ್ನೆ ಪತ್ತೆಯಾಗಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಪರಿಶೀಲಿಸಿ ದಾಗ ಸಮೀಪದ ಗೋಡೆಗಳಲ್ಲೂ ಪೋಸ್ಟರ್‌ಗಳನ್ನು ಅಂಟಿಸಿರುವುದು ಕಂಡು ಬಂದಿದೆ. ಕೂಡಲೇ ಆ ಪೋಸ್ಟರ್‌ಗಳನ್ನು ಪೊಲೀಸರು ತೆರವುಗೊಳಿಸಿದರು. ‘ಜನಕೀಯ ವಿಮೋಚನ ಮುನ್ನಣಿ …

ಕೆಲಸಕ್ಕೆಂದು ತೆರಳಿದ ಯುವಕ ನಿರ್ಜನ ಪ್ರದೇಶದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಿಂಜ: ಮನೆಯಿಂದ ಕೆಲಸ ಕ್ಕೆಂದು ತೆರಳಿದ ಯುವಕನೋರ್ವ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಕುಳೂರು ನಿವಾಸಿ ದಿ| ಸಂಜೀವರ ಪುತ್ರ ಹರೀಶ (40) ಮೃತಪಟ್ಟ ಯುವಕ. ಕೂಲಿ ಕಾರ್ಮಿಕರಾಗಿದ್ದ ಇವರು ನಿನ್ನೆ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಸುಮಾರು 8.30ರ ವೇಳೆ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ …

ಪೊಲೀಸ್‌ನ ಪತ್ನಿ ಕಿಚ್ಚಿರಿಸಿದ ವೃದ್ಧೆ ಮೃತ್ಯು:ಆರೋಪಿ ಸೆರೆ

ಪತ್ತನಂತಿಟ್ಟ: ಪೊಲೀಸ್‌ನ ಪತ್ನಿ ಬೆಂಕಿ ಹಚ್ಚಿದ ಆಶಾ ಕಾರ್ಯಕರ್ತೆ ಮೃತಪಟ್ಟರು. ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪತ್ತನಂತಿಟ್ಟ ಕೇಳ್ಪಾಯೂರ್ ನಿವಾಸಿ ಲತಾ ಕುಮಾರಿ (61) ಮೃತಪಟ್ಟವರು. ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿರುವಾಗ ನಿನ್ನೆ ರಾತ್ರಿ ಮರಣ ಸಂಭವಿಸಿದೆ. ಅಕ್ಟೋಬರ್ 9ರಂದು ಘಟನೆ ನಡೆದಿದೆ. ಕಳವು ಯತ್ನವನ್ನು ತಡೆಯುತ್ತಿದ್ದ ಮಧ್ಯೆ ತಮಗೆ ಬೆಂಕಿ ತಗಲಿದೆಯೆಂದು ಚಿಕಿತ್ಸೆ ವೇಳೆ ಲತಾ ಕುಮಾರಿ ತಿಳಿಸಿದ್ದರು. ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಪೊಲೀಸ್‌ನ ಪತ್ನಿ ಸುಮಯ್ಯ ಮನೆಗೆ ಅತಿಕ್ರಮಿಸಿ ನುಗ್ಗಿ ಕಿಚ್ಚಿರಿಸಿರುವುದಾಗಿ  ಲತಾ ಕುಮಾರಿ ಹೇಳಿಕೆ ನೀಡಿದ್ದಾರೆ. …

ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ಇಡುಕ್ಕಿಯಲ್ಲಿ ಮಹಾಪ್ರವಾಹ, ಭೂಕುಸಿತ

ತಿರುವನಂತಪುರ: ಮುಂಗಾರುಮಳೆ ಬಳಿಕ ರಾಜ್ಯದಲ್ಲಿ ಸ್ವಾತಿ ಮಳೆ ಸುರಿಯಲಾರಂಭಿಸಿರು ವಂತೆಯೇ  ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ಇಡುಕ್ಕಿ ಜಿಲ್ಲೆಯಲ್ಲಿ ನಿನ್ನೆಯಿಂದ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು ಇದರಿಂದ  ಜಿಲ್ಲೆಯ ಕಟ್ಟಪನ, ಕುಳಂದಪ್ಪಾರೆ ಯಲ್ಲಿ ಇಂದು ಮುಂಜಾನೆ ಭಯಂಕರ ಸದ್ದಿ ನೊಂದಿಗೆ ಭಾರೀ  ಭೂಕುಸಿತವುಂ ಟಾಗಿದೆ. ಮಾತ್ರವಲ್ಲ ಈ ಪ್ರದೇಶದ ಹಲವು ರಸ್ತೆಗಳು ಮತ್ತು ಕೃಷಿ ತೋಟಗಳು ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿ …

ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸೇರಿ 10 ಸಾವು

ಕಾಬೂಲ್: ಕದನ ವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಅದರಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟ್ ಆಟಗಾರರು ಸೇರಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಅರ್ಗುನ್ ಮತ್ತು  ಬರ್ಮಲ್ ಜಿಲ್ಲೆಗಳಲ್ಲಿ ಪಾಕಿಸ್ತಾನ  ಈ ವೈಮಾನಿಕ ದಾಳಿ ನಡೆಸಿದೆ. ಈ ದಾಳಿ ನಮ್ಮ ಮೂವರು ಆಟಗಾರರು ಸೇರಿದಂತೆ 12 ಮಂದಿಯ ಪ್ರಾಣ ಅಪಹರಿಸಿದೆ. ಇದು ಹೇಡಿತನದ ದಾಳಿಯಾಗಿದೆ. ವೀರ ಕ್ರಿಕೆಟಿಗರ ಸಾವು ನಮಗೆ ಅಪಾರ ನೋವು …

ಶಬರಿಮಲೆ ದೇಗುಲದ ನೂತನ ಮುಖ್ಯ ಅರ್ಚಕರಾಗಿ ಇ.ಡಿ. ಪ್ರಸಾದ್ ಆಯ್ಕೆ

ಶಬರಿಮಲೆ: ಶಬರಿಮಲೆ ದೇಗುಲದ ಹೊಸ ಮುಖ್ಯ ಅರ್ಚಕರನ್ನಾಗಿ ತೃಶೂರು ಚಾಲಕುಡಿ ನಿವಾಸಿ ಎರನ್ನೂರು ಮನಯಿಲ್‌ನ ಇ.ಡಿ. ಪ್ರಸಾದ್‌ರನ್ನು ಆರಿಸಲಾಗಿದೆ. ಮಾಲಿಗಪುರಂ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಕೊಲ್ಲಂ ಕುಟ್ಟಿಕಡ ನಿವಾಸಿ ಎಂ.ಜಿ. ಮನು ನಂಬೂದಿರಿ ಆಯ್ಕೆಗೊಂಡಿದ್ದಾರೆ. ಅದೃಷ್ಟ ಚೀಟಿ ಎತ್ತುವ ಮೂಲಕ ಈ ಇಬ್ಬರನ್ನು ಆರಿಸಲಾಗಿದೆ.  ಶಬರಿಮಲೆ ದೇಗುಲದ ಅರ್ಚಕ ಸ್ಥಾನಕ್ಕಾಗಿ ಅಂತಿಮ ಹಂತ ಪಟ್ಟಿಯಲ್ಲಿ 14 ಮಂದಿಯ ಹೆಸರು ಒಳಗೊಂಡಿತ್ತು. ಆ ಪೈಕಿ ಡ್ರಾ ಎತ್ತುವ ಮೂಲಕ ಈ ಇಬ್ಬರು ಹೊಸ ಅರ್ಚಕರನ್ನು ಆರಿಸಲಾಗಿದೆ. ಶಬರಿಮಲೆ ದೇಗುಲದ …

ಪ್ಲಾಂಟೇಶನ್ ಕಾರ್ಪರೇಶನ್ ಮಾಜಿ ನೌಕರ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದ ವ್ಯಕ್ತಿ ಬೆಳಿಗ್ಗೆ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೋವಿಕ್ಕಾನ ಮುಪ್ಪತ್ತಿಯಾರ್ ಎಂಬಲ್ಲಿನ ಎಂ. ಚೋಯಿ (73) ಮೃತ ವ್ಯಕ್ತಿ. ಇವರು ಮುಳಿ ಯಾರು ಪ್ಲಾಂಟೇಶನ್ ಕಾರ್ಪರೇಶನ್‌ನಲ್ಲಿ ದೀರ್ಘ ಕಾಲ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಇವರು ಮನೆಯಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಚೋಯಿ …

ಸಹಪಾಠಿಯ ಮನೆಗೆ ಬಂದು 36 ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಯುವತಿ ಸೆರೆ

ಕಲ್ಲಿಕೋಟೆ: ಸಹಪಾಠಿಯ ಮನೆಗೆ ಅತಿಥಿಯಾಗಿ ಬಂದು ೩೬ ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಆಂಧ್ರ ನಿವಾಸಿಯಾದ ಯುವತಿ ಮುಂಬೈಯಲ್ಲಿ ಸೆರೆಗೀಡಾಗಿದ್ದಾಳೆ.  ವಿಜಯವಾಡ ನಿವಾಸಿಯಾದ ತೊಟ್ಟಾಬಾನು ಸೌಜನ್ಯ (24) ಎಂಬಾಕೆಯನ್ನು ಫರೋಕ್ ಎಸ್‌ಪಿ ಎ.ಎಂ. ಸಿದ್ದಿಕ್ ನೇತೃತ್ವದ ತಂಡ ಹಾಗೂ ಬೇಪೂರ್ ಪೊಲೀಸರು ಸೇರಿ ಸೆರೆ ಹಿಡಿದಿದ್ದಾರೆ. ಸೆರೆಗೀಡಾದ ಸೌಜನ್ಯ ಬೇಪೂರ್ ನಿವಾಸಿಯಾದ ಗಾಯತ್ರಿಯ ಸಹಪಾಠಿಯಾ ಗಿದ್ದಾಳೆ.  ಇವರು ಬೆಂಗಳೂರಿನ ಕಾಲೇಜೊಂದರಲ್ಲಿ ಒಂದೇ ತರಗತಿಯಲ್ಲಿ ಸ್ನಾತಕೋತ್ತರ ಕೋರ್ಸ್ ಕಲಿಯುತ್ತಿದ್ದರು. ಜುಲೈ 17ರಂದು ಸೌಜನ್ಯ ಬೇಪೂರಿನ ಗಾಯತ್ರಿಯ ಮನೆಗೆ ಬಂದಿದ್ದಳು. ಮೂರು …