ರೋಗಾಣು ನಾಶಗೊಳಿಸಲು ವಾಟರ್ ಅಥೋರಿಟಿಯ ಟ್ಯಾಂಕ್‌ನಿಂದ ನೀರು ತೆರವು: ಕುಂಬಳೆ ಪೇಟೆ ಪರಿಸರ ಜಲಾವೃತ

ಕುಂಬಳೆ: ರೋಗಾಣುಗಳನ್ನು ನಾಶಗೊಳಿಸುವ ಉದ್ದೇಶದಿಂದ ಕುಂಬಳೆಯಲ್ಲಿ ವಾಟರ್ ಅಥೋರಿಟಿ ನೌಕರರು ಕುಡಿಯುವ ನೀರು ಟ್ಯಾಂಕ್ ತೆರೆದ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯ ವಿವಿಧೆಡೆ ನೀರು ತುಂಬಿಕೊಂಡಿತು. ಕುಂಬಳೆ ಪೊಲೀಸ್ ಠಾಣೆ ಪರಿಸರದ ಮೂಲಕ ಹರಿದ ನೀರು ಶ್ರೀ ಗೋಪಾಲಕೃಷ್ಣ ಕ್ಷೇತ್ರವರೆಗೆ ತಲುಪಿದೆ. ಪರಿಸರದ ಮನೆಗಳಿಗೂ ನೀರು ನುಗ್ಗುವ ಸ್ಥಿತಿ ಕಂಡು ಬಂತೆಂದು ದೂರಲಾಗಿದೆ. ಈ ಬಗ್ಗೆ ವಾಟರ್ ಅಥೋರಿಟಿ ನೌಕರರೊಂದಿಗೆ ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ವಿಚಾರಿಸಿದಾಗ ಇದು ಅಕಸ್ಮಾತ್ ಸಂಭವಿಸಿದ ಘಟನೆಯಾ ಗಿದೆ. ಇನ್ನು ಮುಂದೆ ಇದುಂಟಾಗ …

ಅನಂತಪುರ ಉದ್ದಿಮೆ ಪಾರ್ಕ್‌ನಿಂದ ತ್ಯಾಜ್ಯ ನೀರು ಜನವಾಸ ಕೇಂದ್ರಕ್ಕೆ: ಮತ್ತೆ ಸಮಸ್ಯೆ ಸೃಷ್ಟಿ

ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ ಕೋಳಿ ಮಾಂಸ ಸಂಸ್ಕರಣಾ ಪ್ಲಾಂಟ್‌ನಿಂದ ತ್ಯಾಜ್ಯ ನೀರು ಹೊರಕ್ಕೆ ಹರಿದು ಹೋಗುತ್ತಿರುವುದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಂಟ್‌ನಿಂದ ಹರಿಯುವ ತ್ಯಾಜ್ಯ ನೀರು ಸಮೀಪದ ಬಾವಿಗಳ ಸಹಿತ ಕುಡಿಯುವ ನೀರಿನ ಮೂಲಗಳಲ್ಲಿ ಹರಡುತ್ತಿದೆ. ಕಾಮನಬೈಲು ಎಸ್‌ಟಿ ಕಾಲನಿ, ಅಂಗನವಾಡಿ ಪರಿಸರದ ಮೂಲಕ ತ್ಯಾಜ್ಯ ನೀರು ಹರಿಯುತ್ತಿದ್ದು, ಅದರಿಂದ ಅಸಹನೀಯ ದುರ್ನಾತವೂ ಬೀರುತ್ತಿದೆ. ಇದು ಮಾರಕ ರೋಗಗಳಿಗೆ ಕಾರಣವಾಗಬಹುದೆಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪರಿಸರ ಮಾಲಿನ್ಯದಿಂದಾಗಿ ನಾಡಿನಲ್ಲಿ ರೋಗಭೀತಿ ಸೃಷ್ಟಿಯಾಗುತ್ತಿರುವಾಗಲೇ …

ಕೃಷಿಕ ನಿಧನ

ಬದಿಯಡ್ಕ: ಪೆರಡಾಲ ಸೇತುವೆ ಸಮೀಪ ನಿವಾಸಿ, ಕೃಷಿಕ ಮಡಿಪ್ಪು ಗಣಪತಿ ಭಟ್ (88) ಎಡೆಕ್ಕಾನ ಹಳ್ಳಕೋಡ್ಲು ಪುತ್ರಿಯ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ ಗೌರಿ, ಮಕ್ಕಳಾದ ರಮಾದೇವಿ, ಪ್ರೇಮಲತಾ, ಕೃಷ್ಣವೇಣಿ, ಗೌರಿಪ್ರಭಾ ಹಾಗೂ ಅಳಿಯಂದಿರಾದ ಶ್ರೀನಿವಾಸ ಭಟ್ ಕಮ್ಮಜೆ, ಗೋವಿಂದ ಭಟ್ ಎಡೆಕ್ಕಾನ ಹಳ್ಳಕೋಡ್ಲು, ಭೀಮ ಉಪಾಧ್ಯಾಯ ಅಡಿಕೆಹಿತ್ತಿಲು, ಸುಬ್ರಹ್ಮಣ್ಯ ಭಟ್ ಮುಗುಳ್ತಿಮೂಲೆ ಹಾಗೂ ಸಹೋದರಿ ಸವಿತಾ ಸರ‍್ಯಂಬೈಲು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕುಂಬಳೆ ಪಂ. ಕಚೇರಿಯ ಕಟ್ಟಡ ಉದ್ಘಾಟನೆ : ಬಿಜೆಪಿ, ಸಿಪಿಎಂನ ಇಬ್ಬರು ಸದಸ್ಯರು ಗೈರು

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಸಂಬಂಧಪಟ್ಟ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸ್ಮಾರಕ ಕಟ್ಟಡದ ಉದ್ಘಾಟನೆ ನಿನ್ನೆ ನಡೆದಿದೆ. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ. ರಹ್ಮಾನ್, ಸಬೂರ, ನಸೀಮ, ಪಂಚಾಯತ್ ಸದಸ್ಯ ರಾದ ಯೂಸಫ್ ಉಳುವಾರು, ಅನ್ವರ್ ಆರಿಕ್ಕಾಡಿ, ರವಿರಾಜ್ ತುಮ್ಮ, ರಸಿಯ, ತಾಹಿರಾ ಜಿ. ಶಂಸೀರ್, ಸಿ.ಎಂ. ಮುಹಮ್ಮದ್, ಕೌಲತ್ ಬೀವಿ, ಮಂಜುನಾಥ …

ಮಹಿಳೆಯನ್ನು ಕುತ್ತಿಗೆ ಹಿಸುಕಿ ಕೊಲೆ: ಪತಿ ಬಂಧನ

ಕೋಟಯಂ: ರೋಗ ಬಾಧಿಸಿ ಹಾಸಿಗೆ ಹಿಡಿದಿದ್ದ ಮಹಿಳೆಯನ್ನು  ಪತಿ ಕುತ್ತಿಗೆ ಹಿಸುಕಿ ಕೊಲೆಗೈದ ಘಟನೆ ಕೋಟಯಂನ ಕಿಡಂಗೂರ್ ಎಂಬಲ್ಲಿ ನಡೆದಿದೆ. ಮಾಂದಾಡಿಕ್ಕ ವಲಯಿಲ್ ಏಲಕ್ಕೋಡತ್ ವೀಟಿಲ್ ರಮಣಿ (70) ಎಂಬವರು ಕೊಲೆಗೀಡಾದವರು. ಈ ಸಂಬಂಧ ಪತಿ ಸೋಮನ್(74)ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಇಂದು ಮುಂಜಾನೆ ಒಂದೂವರೆ ಗಂಟೆ ವೇಳೆ ಘಟನೆ ನಡೆದಿದೆ. ರಮಣಿಯನ್ನು ಕೊಲೆಗೈದ ಬಳಿಕ ಓರ್ವ ಪುತ್ರನನ್ನು ಕೊಲೆಗೈ ಯ್ಯಲು ಸೋಮನ್ ಯತ್ನಿಸಿದ್ದು, ಈ ವೇಳೆ ಬೊಬ್ಬೆ ಕೇಳಿ ಇನ್ನೋರ್ವ ಪುತ್ರ ತಲುಪಿ ತಡೆದಿದ್ದನೆನ್ನಲಾಗಿದೆ.

ಮಳೆ: ರಸ್ತೆಯಲ್ಲಿ ಕಟ್ಟಿನಿಂತ ನೀರಿನಿಂದ ಕುಂಬಳೆಯಲ್ಲಿ ಸಮಸ್ಯೆ

ಕುಂಬಳೆ: ನಿನ್ನೆ ರಾತ್ರಿ ಸುರಿದ ಮಳೆಯಿಂದ ಕುಂಬಳೆಯಲ್ಲಿ ರಸ್ತೆ ಬದಿ ನೀರು ಕಟ್ಟಿ ನಿಂತು ಪ್ರಯಾಣಿಕರು ಸಮಸ್ಯೆಗೀಡಾದರು. ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ  ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ ಭಾಗಕ್ಕೆ ತೆರಳುವ ಬಸ್‌ಗಳ ನಿಲುಗಡೆ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಬಸ್ ಪ್ರಯಾಣಿಕರು ಮಾತ್ರವಲ್ಲದೆ ಪಾದಚಾರಿಗಳು ಕೂಡಾ ನಡೆದಾಡಲು ಸಮಸ್ಯೆ ಎದುರಿಸಬೇಕಾಗಿ ಬಂತು. ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದರೂ ಅದಕ್ಕೆ ಪರಿಹಾರ ಕಾಣಲು ಸಂಬಂಧ ಪಟ್ಟವರು ಮುಂದಾಗಲಿಲ್ಲ. 

ಜಿಲ್ಲಾ ಶಾಲಾ ಕ್ರೀಡಾಕೂಟ: ಹೊಸದುರ್ಗ ಚಾಂಪಿಯನ್; ಕಾಸರಗೋಡಿಗೆ ದ್ವಿತೀಯ ಸ್ಥಾನ

ಕಾಸರಗೋಡು: ನೀಲೇಶ್ವರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟದಲ್ಲಿ ಹೊಸದುರ್ಗ ಶಿಕ್ಷಣ ಉಪಜಿಲ್ಲೆ 25 ಚಿನ್ನ, 18 ಬೆಳ್ಳಿ ಹಾಗೂ 14 ಕಂಚಿನ ಪದಕಗಳ ಸಹಿತ 211 ಅಂಕ ಗಳಿಸಿ ಚಾಂಪಿಯ ನ್ಶಿಪ್ ಪಟ್ಟ ಅಲಂಕರಿಸಿದೆ. ಕಾಸರಗೋಡು ಶಿಕ್ಷಣ ಉಪಜಿಲ್ಲೆ 16 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕ ಪಡೆದು 169 ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದಿದೆ.153 ಅಂಕಗಳೊAದಿಗೆ ಚೆರುವತ್ತೂರು ಶಿಕ್ಷಣ ಉಪಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ. ಉಳಿದಂತೆ ಮಂಜೇಶ್ವರ (96 ಅಂಕ), ಕುಂಬಳೆ …

ಕೆಳಗಿನ ಉಳುವಾರು ನಿವಾಸಿ ಕುವೈಟ್‌ನಲ್ಲಿ ನಿಧನ

ಕುಂಬಳೆ: ಕೆಳಗಿನ ಉಳುವಾರು ನಿವಾಸಿ ಅಬ್ದುಲ್ ರಹ್ಮಾನ್ ಕೆ.ವಿ. (60) ಕುವೈಟ್‌ನಲ್ಲಿ ನಿಧನರಾದರು. ಕಳೆದ 40 ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಇವರು ಮೂರು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಬಳಿಕ ಅಲ್ಲಿನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದು ವಿಶ್ರಾಂತಿಯಲ್ಲಿದ್ದರು. ಈ ವೇಳೆ ನಿಧನ ಸಂಭವಿಸಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.  ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಆಯಿಷಾ, ಪುತ್ರಿ ತಾಹಿರ, ಅಳಿಯ ಉಸ್ಮಾನ್, ಸಹೋದರ ಸಹೋದರಿಯರಾದ ಮುಹಮ್ಮದ್, ಇಬ್ರಾಹಿಂ, ಖದೀಜ, ಆಯಿಷ, …

ವಿಕಸಿತ ಕುಂಬ್ಡಾಜೆ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರ ಸಮಾವೇಶ ನಾಳೆ

ಬದಿಯಡ್ಕ: ಭಾರತೀಯ ಜನತಾ ಪಾರ್ಟಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ವಿಕಸಿತ ಭಾರತದೊಂದಿಗೆ ವಿಕಸಿತ ಕುಂಬ್ಡಾಜೆ ಎಂಬ ಸಂಕಲ್ಪವನ್ನಿಟ್ಟುಕೊAಡು ಮುಂಬರುವ ತ್ರಿಸ್ತರ ಪಂಚಾಯತ್ ಚುನಾವಣೆಯ ಮುನ್ನುಡಿಯಾಗಿ ಕಾರ್ಯಕರ್ತರ ಸಮಾವೇಶ ಹಾಗೂ ಜನಪ್ರತಿನಿದಿsಗಳಿಗೆ ಅಭಿನಂದನಾ ಕಾರ್ಯಕ್ರಮ ನಾಳೆ ಬೆಳಗ್ಗೆ ಅಗಲ್ಪಾಡಿ ಜಯನಗರ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಕೇರಳ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್, ಬಿಜೆಪಿ ಮಂಗಳೂರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., …

ತುಳುನಾಡ ಬಾಲೆ ಬಂಗಾರ್ ಸ್ಪರ್ಧೆ: ಮಕ್ಕಳ ಭಾವಚಿತ್ರ ಆಹ್ವಾನ

ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ದಶಮಾನೋತ್ಸವದಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆ ನಡೆಯಲಿದೆ. ನಾಲ್ಕು ವರ್ಷ ದೊಳಗಿನ ಮಕ್ಕಳ ಭಾವಚಿತ್ರಗಳನ್ನು ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿ ತೆಗೆದು ಕಳುಹಿಸಬೇ ಕಾಗಿದೆ. 6X9 ಅಳತೆಯ ಭಾವಚಿ ತ್ರವನ್ನು ಕಳುಹಿಸಿದರೆ ಸಾಕಾಗುವುದು. ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣಪತ್ರದ ಕರಡು ಪ್ರತಿ, ಪೋಷಕರ ವಿಳಾಸ …