ಕೂಡ್ಲು: ರಜತರಂಗ ಉದ್ಘಾಟನೆ 20ರಂದು
ಕೂಡ್ಲು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ 25 ನೇ ವರ್ಷಕ್ಕೆ ಕಾಲಿರಿಸಿದ್ದು, 25 ನೇ ವಾರ್ಷಿಕೋತ್ಸವವನ್ನು ವೈವಿಧ್ಯಮಯವಾಗಿ ವರ್ಷಪೂರ್ತಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಗಳು, ಕೊಂಡೆವೂರು ಶ್ರೀಗಳು ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಗೌರವಾಧ್ಯಕ್ಷರಾಗಿರುವ ರಜತ ಮಹೋತ್ಸವ ಸಮಿತಿ ರಚಿಸಲಾಗಿದೆ. ರಜತರಂಗದ ಉದ್ಘಾಟನಾ ಕಾರ್ಯಕ್ರಮ ಈ ತಿಂಗಳ 20 ರಂದು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಜರಗಲಿದೆ. ಮಧೂರು ಕ್ಷೇತ್ರದ ನಿವೃತ್ತ ಪ್ರಧಾನ ಅರ್ಚಕ ಶ್ರಿ ಕೃಷ್ಣ …