ಕೇರಳದಲ್ಲಿ ಆಡಳಿತ ಬದಲಾವಣೆ ಅನಿವಾರ್ಯ- ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಇದೀಗ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಅಭಿವೃದ್ಧಿ ಕುಂಠಿತಕ್ಕೆ ಪರಿಹಾರ ಕಾಣಲು  ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕೆ. ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, …

ಕುಂಬಳೆ ಟ್ರಾಫಿಕ್ ಪರಿಷ್ಕಾರದಿಂದ ಸಮಸ್ಯೆ : ಪಂ. ಕಾರ್ಯದರ್ಶಿಗೆ ಸಿಪಿಎಂ ಮನವಿ

ಕುಂಬಳೆ: ಪೇಟೆಯಲ್ಲಿ ನೂತನವಾಗಿ ಆರಂಭಿಸಿದ ಟ್ರಾಫಿಕ್ ಪರಿಷ್ಕಾರದಿಂದಾಗಿ ಜನರು ಸಂಕಷ್ಟದ ಲ್ಲಿದ್ದಾರೆಂದು ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಆರೋಪಿಸಿದೆ. ಬದಿಯಡ್ಕ ಭಾಗಕ್ಕೆ ತೆರಳುವ ಬಸ್‌ಗಳು ಜನರನ್ನು  ಇಳಿಸುವುದು, ಹತ್ತಿಸುವುದು ಕುಂಬಳೆ ಪೇಟೆಯಿಂದ ಸುಮಾರು 200 ಮೀಟರ್ ದೂರದಲ್ಲಾಗಿದೆ. ಇದರಿಂದಾಗಿ ಹಿರಿಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಆದುದರಿಂದ ಬಸ್ ಹತ್ತಿಸಲು, ಇಳಿಸಲು ಈ ಮೊದಲು ಇದ್ದಂತಹ ವ್ಯವಸ್ಥೆಯನ್ನು ಮುಂದುವರಿಸ ಬೇಕೆಂದು ಕುಂಬಳೆಯ ಟ್ರಾಫಿಕ್ ಪರಿಷ್ಕರಣೆಗೆ ತಜ್ಞರನ್ನು ಸೇರಿಸಿ ಸರ್ವಪಕ್ಷ ಸಭೆ ನಡೆಸಬೇಕೆಂದು  ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಪಂಚಾಯತ್ …

ಕಾಸರಗೋಡು ಬ್ಲೋಕ್ ಕೇರಳೋತ್ಸವ 19ರಂದು ಸಮಾಪ್ತಿ

ಕುಂಬಳೆ: ಕಾಸರಗೋಡು ಬ್ಲೋಕ್ ಪಂ.ಕೇರಳೋತ್ಸವ ಆದಿತ್ಯವಾರ ಸಮಾಪ್ತಿಯಾಗಿದೆ. ಕಳೆದ ೪ರಿಂದ ಆರಂಭಗೊಂಡ ಸ್ಪರ್ಧೆಗಳು ಈಗಲೂ ಮುಂದುವರಿಯುತ್ತಿದೆ. 19ರಂದು  ಜಿಬಿಎಸ್‌ಬಿಎಸ್ ಶಾಲೆಯಲ್ಲಿ ನಡೆಯುವ ಕಲಾ ಸ್ಪರ್ಧೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ. ಶೈಮ ಅಧ್ಯಕ್ಷತೆ ವಹಿಸುವರು. ಸಿನಿಮಾ ನಟ,ಕಾಸರಗೋಡು ಡಿವೈಎಸ್ಪಿ ಸಿಬಿ ಥೋಮಸ್,  ಅಧ್ಯಕ್ಷೆ ತಾಹಿರ ಯೂಸುಫ್, ಕರ್ನಾಟಕ ಕಾರ್ಮಿಕ ಇಲಾಖೆ ಅಧ್ಯಕ್ಷ   ಟಿ.ಎಂ ಶಾಹಿದ್ ತೆಕ್ಕಿಲ್, ಕಲ್ಲಟ್ರ ಮಾಹಿನ್ ಹಾಜಿ, ಟಿ.ಪಿ. ರಂಜಿತ್,ಜಮೀಲ ಸಿದ್ದಿಕ್, ಜಾಸ್ಮಿನ್ ಕಬೀರ್ ಅತಿಥಿಗಳಾಗಿ ಭಾಗವಹಿಸುವರು. ಪಂ. …

ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಆರಾಧನಾ ಕೇಂದ್ರಗಳಿಗೆ ಆರ್ಥಿಕ ಸಹಾಯ ಒದಗಿಸಲು ಸಚಿವರಿಗೆ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ ಮನವಿ

ತಿರುವನಂತಪುರA : ಕಾಸರಗೋ ಡು ಹಾಗೂ ಮಂಜೇಶ್ವರ ತಾಲೂಕುಗಳ ವಿವಿಧ ಭಾಗಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಮುಗೇರ, ನಲಿಕೆತ್ತಾಯ, ಚಕ್ಲಿಯ ಮುಂತಾದ ವಿಭಾಗಗಳ ಖಾಸಗಿ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಅರ್ಹವಾದ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸಬೇಕೆಂದು ಆಗ್ರಹಿಸಿ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ ಕೆ ಶಂಕರ ಆದೂರು ಅವರು ತಿರುವನಂತಪುರದಲ್ಲಿ ಸಚಿವ ವಿ. ಎನ್. ವಾಸವನ್‌ರನ್ನು ಭೇಟಿ ಮಾಡಿ ಮನವಿ ನೀಡಿದರು. ದೇವಸ್ವಂ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಕ್ಷೇತ್ರ …

ಶಬರಿಮಲೆ ಚಿನ್ನ ಕಳವು ಪ್ರಕರಣ: ಸೂತ್ರಧಾರ ದಿಢೀರ್ ಅಪ್ರತ್ಯಕ್ಷ

ತಿರುವಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಮುಖ್ಯ  ಸೂತ್ರಧಾರ ಉಣ್ಣಿಕೃಷ್ಣನ್ ಪೋತ್ತಿ ದಿಢೀರ್ ಅಪ್ರತ್ಯಕ್ಷಗೊಂಡಿ ದ್ದಾನೆ. ತಿರುವನಂತಪುರದಿಂದ ಪಾಲಕ್ಕಾಡಿಗೆ ಹೋಗುವುದಾಗಿ ತಿಳಿಸಿದ ಆತ ಬಳಿಕ ಅಪ್ರತ್ಯಕ್ಷನಾಗಿದ್ದಾನೆ. ಇದೇ ವೇಳೆ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ಆತನನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸುತ್ತಿರುವು ದಾಗಿಯೂ ಶಂಕಿಸಲಾಗುತ್ತಿದೆ.  ಚಿನ್ನ ಕಳವಿನ ಹೆಸರಲ್ಲಿ ಪೋತ್ತಿಗೆ  ಪ್ರಾಣ ಬೆದರಿಕೆಯುಂಟಾಗಿದೆಯೆಂಬ  ರೀತಿಯ ಪ್ರಚಾರಗಳು ಇನ್ನೊಂದೆಡೆ ನಡೆಯುತ್ತಿವೆ. ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣದಲ್ಲಿ ಪೋತ್ತಿ ಒಂದನೇ ಆರೋಪಿಯಾಗಿದ್ದಾನೆ. ಆದ್ದರಿಂದ ಆತನನ್ನು ವಶಕ್ಕೆ …

ಬಿರಿಯಾನಿಯೊಂದಿಗೆ ಕಚ್ಚಂಬರ್ ಲಭಿಸಿಲ್ಲ ಕ್ಯಾಟರಿಂಗ್ ನೌಕರರಿಗೆ ಹಲ್ಲೆ; ಇಬ್ಬರ ವಿರುದ್ಧ ಕೇಸು

ಕುಂಬಳೆ: ಬಿರಿಯಾನಿಯೊಂದಿಗೆ  ಕಚ್ಚಂಬರ್ ಲಭಿಸದ ದ್ವೇಷದಿಂದ ಕ್ಯಾಟರಿಂಗ್ ನೌಕರರಿಗೆ ಹಲ್ಲೆಗೈದಿರುವುದಾಗಿ ದೂರುಂಟಾಗಿದೆ. ಪೇರಾಲ್ ಕಣ್ಣೂರು ನಿವಾಸಿ ಹಾಗೂ ಜೊತೆಗೆ ಕೆಲಸಕ್ಕೆ ತಲುಪಿದ ಯುವಕನಿಗೆ ಹಲ್ಲೆಗೈಯ್ಯಲಾಗಿದೆ. 21ರ ಹರೆಯದ ಯುವಕನ ದೂರಿನಂತೆ ಅಬ್ಬಾಸ್, ಮಶೂದ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ಸಂಜೆ 3 ಗಂಟೆಗೆ ಸೀತಾಂಗೋಳಿಯ ಆಡಿಟೋರಿಯಂವೊಂದರಲ್ಲಿ ಘಟನೆ ನಡೆದಿದೆ. 21ರ ಹರೆಯದ ಯುವಕ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಣಕ್ಕೆ ಹಣ ಕಂಡುಕೊಳ್ಳುವ ಉದ್ದೇಶದಿಂದ ಈತ ಆದಿತ್ಯವಾರಗಳಂದು ಆಹಾರ ವಿತರಣೆ ಕೆಲಸಕ್ಕೆ ತೆರಳುತ್ತಿರುವುದಾಗಿ ಹೇಳಲಾಗುತ್ತಿದೆ. ಆದಿತ್ಯವಾರ ನಡೆದ …

ನೇಣು ಬಿಗಿದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಕಾರು ಅಪಘಾತ: ಯುವತಿ ಸಾವು; ಮೂವರಿಗೆ ಗಾಯ

ಕಾಸರಗೋಡು: ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವತಿ ಸಾವಿಗೀಡಾಗಿ  ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಬೇತೂರುಪಾರ ತಟ್ಟರಕುಂಡ್‌ನ ದಿ| ಬಾಬು ಎಂಬವರ ಪುತ್ರಿಯೂ ಕಾಸರ ಗೋಡಿನ ಖಾಸಗಿ ಆಸ್ಪತ್ರೆಯ ದ್ವಿತೀಯ ವರ್ಷ ನರ್ಸಿಂಗ್ ವಿದ್ಯಾರ್ಥಿನಿಯಾದ ಮಹಿಮಾ (20) ಎಂಬಾಕೆ ಸಾವನ್ನಪ್ಪಿದ ಯುವತಿ. ಈಕೆ ನಿನ್ನೆ ಬೆಳಿಗ್ಗೆ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.  ಈ ಬಗ್ಗೆ ಗಮನಕ್ಕೆ ಬಂದ …

ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂ. ವಶ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 75 ಲಕ್ಷ ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 7.45ರ ವೇಳೆ ಪೊಲೀಸರು ಹೈವೇ ಪಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.  ತುಕಾರಾಮ್ ಎಂಬ ವ್ಯಕ್ತಿ ಹಾಗೂ ಅವರ ಪತ್ನಿ ಕಾರಿನಲ್ಲಿದ್ದರು. ಕಾರು ಚಲಾಯಿಸಿರುವುದು ಅಕ್ಷಯ್ ಎಂಬಾತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಭಾಗದಿಂದ ಬಂದ ಕಾರನ್ನು ಸಂಶಯದ ಮೇರೆಗೆ ತಡೆದು ನಿಲ್ಲಿಸಿ ತಪಾಸಣೆಗೈದಾಗ ಅದರಲ್ಲಿ ಹಣ ಪತ್ತೆಯಾಗಿದೆ. ಕಾರು ಪ್ರಯಾಣಿಕರಿಗೆ ಹಣದ ಮೂಲವನ್ನು ತಿಳಿಸಲು ಸಾಧ್ಯ ವಾಗಿಲ್ಲವೆಂದು ಸೂಚನೆಯಿದೆ. …

ಜಿರಳೆನಾಶಕ ಚೋಕ್ ಸೇವಿಸಿ ಅಸ್ವಸ್ಥಗೊಂಡ ಬಾಲಕ

ಕಾಸರಗೋಡು: ಜಿರಳೆಗಳನ್ನು ಓಡಿಸಲು ಉಪಯೋಗಿಸುವ ಚೋಕ್ ಸೇವಿಸಿ ಅಸ್ವಸ್ಥಗೊಂಡ ೧೫ರ ಹರೆಯದ ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನಲ್ಲಿ ವಾಸಿಸುವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ಈತನನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಾಂಶವುಳ್ಳ  ಚೋಕ್  ಬಾಲಕನ ಹೊಟ್ಟೆಗೆ ಹೇಗೆ ತಲುಪಿದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಕ್ಕಳಿಲ್ಲದ ಮನೆಯಲ್ಲಿ 26 ದಿನದ ಮಗು ಪತ್ತೆ: ನಿಗೂಢತೆ ವ್ಯಕ್ತಪಡಿಸಿದ ನಾಗರಿಕರು; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಮಕ್ಕಳಿಲ್ಲದ ಮನೆಯಲ್ಲಿ ೨೬ ದಿನ ಪ್ರಾಯದ ಮಗು ಕಂಡುಬಂದಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಈ ವಿಷಯ ನಾಡಿನಾದ್ಯಂತ ಸುದ್ಧಿಯಾಗುವುದರೊಂದಿಗೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಮಗುವಿನ ಸ್ವಂತ ತಾಯಿ ಹಾಗೂ ಸಾಕುತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ ಬಳಿಕ ಮಗುವನ್ನು ಸ್ವಂತ ತಾಯಿಗೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಮಗುವನ್ನು ಮಾರಾಟಗೈಯ್ಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಮಾರಾಟಗೈದ ಹಾಗೂ ಖರೀದಿಸಿದ ಬಗ್ಗೆ ಯಾವುದೇ ದೂರುಗಳು ಲಭಿಸಿಲ್ಲ. ಅಲ್ಲದೆ ಈ ವಿಷಯದಲ್ಲಿ ದೂರು …