ಹಿರಿಯ ಕಾಂಗ್ರೆಸ್ ನೇತಾರ ನಿಧನ

ಬದಿಯಡ್ಕ: ಹಿರಿಯ ಕಾಂಗ್ರೆಸ್ ನೇತಾರ, ಬದಿಯಡ್ಕ ಪಂಚಾಯತ್ ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚೆನ್ನೆಗುಳಿ ನಿವಾಸಿ ಐತ್ತಪ್ಪ (76) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ವಿವಿಧ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಸೇವೆಯಿಂದ ನಿವೃತ್ತಿಗೊಂಡ ಬಳಿಕ ರಾಜಕೀಯದಲ್ಲಿ …

ತಾಮರಶ್ಶೇರಿಯಲ್ಲಿ ಸರಕಾರಿ ವೈದ್ಯರ ಕೊಲೆಗೆ ಯತ್ನ: ವೈದ್ಯರುಗಳಿಂದ ಜನರಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ

ಕಾಸರಗೋಡು: ತಾಮರಶ್ಶೇರಿ ಸರಕಾರಿ ತಾಲೂಕು ಆಸ್ಪತ್ರೆಯ ವೈದ್ಯ ಪಿ.ಟಿ. ವಿಪಿನ್ (35)ರ  ತಲೆಗೆ ಕಡಿದು ಅವರನ್ನುಕೊಲೆಗೈಯ್ಯಲೆತ್ನಿಸಿ ದುದನ್ನು ಪ್ರತಿಭಟಿಸಿ ಕೇರಳ ಗವರ್ಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್ (ಕೆಜಿಎಂಒಎ) ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ನೇತೃತ್ವದಲ್ಲಿ  ವೈದ್ಯರುಗಳು ಇಂದು ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಶಮೀಮಾ ತನ್ವೀರ್, ಐಎಂಎ ಕಾಸರಗೋಡು ಶಾಖಾ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಡಾ| ಸಿ.ಎಚ್. ಜನಾರ್ದನ ನಾಯ್ಕ್, ಡಾ| ಜಮಾಲ್ ಅಹಮ್ಮದ್, …

ದಾಖಲೆಗಳನ್ನು ಮುರಿದು ಮುಂದೆ ಸಾಗಿದ ಚಿನ್ನದ ಬೆಲೆ

ಕಾಸರಗೋಡು: ಜಾಗತಿಕವಾಗಿ ಆರ್ಥಿಕ, ರಾಜಕೀಯ ಸಂದಿಗ್ಧತೆ ಮುಂದುವರಿಯುತ್ತಿರುವಾಗ ಚಿನ್ನದ ಬೆಲೆ ದಾಖಲೆಗಳನ್ನು ಮುರಿದು ಮುಂದುವರಿಯುತ್ತಿದೆ. ಇಂದು 1 ಪವನ್ ಚಿನ್ನದ ದರ 91.040 ರೂ.ಗಳಾಗಿದೆ. ನಿನ್ನೆಗಿಂತ 720 ರೂ.ಗಳ ಹೆಚ್ಚಳವಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 11,380 ರೂ. ಆಗಿದೆ. ಇದೇ ಸ್ಥಿತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ ಪವನ್‌ಗೆ 1 ಲಕ್ಷವನ್ನು ದಾಟಲಿದೆಯೇ ಎಂಬ ಆತಂಕ ಮೂಡಿಸಿದೆ. ಸುರಕ್ಷತೆಗಾಗಿ ಕೇಂದ್ರ ಬ್ಯಾಂಕ್‌ಗಳು ಹಾಗೂ ಜಾಗತಿಕ ಫಂಡ್‌ಗಳು ಭಾರೀ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿರುವುದರೊಂದಿಗೆ …

ಕುಂಬಳೆಯಲ್ಲಿ ನ್ಯಾಯವಾದಿಯ ಆತ್ಮಹತ್ಯೆ: ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿಯನ್ನು ಸಿಪಿಎಂ ವಕೀಲರ ಸಂಘಟನೆಯಿಂದ ಅಮಾನತು

ಕುಂಬಳೆ: ಕುಂಬಳೆಯಲ್ಲಿ ಯುವ ನ್ಯಾಯವಾದಿಯ ಆತ್ಮಹತ್ಯೆಗೈಯ್ಯಲು  ನ್ಯಾಯವಾದಿಗಳ ಮಧ್ಯೆಗಿನ ಉದ್ಯೋಗ ಸ್ಪರ್ಧೆಯೂ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ವೇಳೆ ಈ ಘಟನೆ ಸಿಪಿಎಂ- ಸಿಪಿಐ ಮಧ್ಯೆ ಸೌಹಾರ್ದ ತಿಕ್ಕಾಟ  ಕಾರಣವಾಗಿದೆ ಎಂಬ ಸೂಚನೆಯಿದೆ. ಸಾಮಾಜಿಕ, ರಾಜಕೀಯ, ನ್ಯಾಯವಾದಿ ರಂಗಗಳಲ್ಲಿ ರಂಜಿತ ಬಹಳ ಬೇಗನೆ ಗಮನ ಸೆಳೆಯಲ್ಪಟ್ಟಿ ದ್ದರು. ಸಿಪಿಎಂ ಹಾಗೂ ಪಕ್ಷದ ವಿವಿಧ ಪೋಷಕ ಸಂಘಟನೆಗಳಲ್ಲೂ ಪ್ರಧಾನ ಹೊಣೆಗಾರಿಕೆ ವಹಿಸುತ್ತಿದ್ದರು. ಸಿಪಿಎಂ ನ್ಯಾಯವಾದಿಗಳ ಸಂಘಟನೆಯ ಜಿಲ್ಲಾ ಕೋಶಾಧಿಕಾರಿಯಾಗಿದ್ದರು. ಸಿಪಿಐ ಬೆಂಬಲಿಗನೂ, ನ್ಯಾಯವಾದಿಯೂ ಆಗಿರುವ ಅನಿಲ್ …

ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

ಬದಿಯಡ್ಕ: ಬದಿಯಡ್ಕ ಪಂಚಾ ಯತ್ ಹಸಿರು ಕ್ರಿಯಾ ಸೇನೆಯ ಹೆಸರಲ್ಲಿ 40,000 ರೂಪಾಯಿ ಸಂಗ್ರಹಿಸಿದ ಹಸಿರು ಕ್ರಿಯಾಸೇನೆ ಸದಸ್ಯೆ 4,000 ರೂ.ವನ್ನು ಪಂಚಾಯತ್‌ನ ಹೆಸರಲ್ಲಿ ಬ್ಯಾಂಕ್‌ನಲ್ಲಿ ಪಾವತಿಸಿ  ಬಾಕಿ ಮೊತ್ತವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಇದೇ ವೇಳೆ ಬ್ಯಾಂಕ್ ನಲ್ಲಿ ಹಣ ಪಾವತಿಸಿದ ರಶೀದಿಯ ಕೌಂಟರ್ ಫೋಯಿಲ್‌ನಲ್ಲಿ ಪಾವತಿ ಸಿದ ಮೊತ್ತವಾಗಿ ಕಾಣಿಸಿದ 4000 ದೊಂದಿಗೆ ಒಂದು ಸೊನ್ನೆ ಸೇರಿಸಿ ಬರೆದು ಪಂ. ಅಧಿಕಾರಿಗಳಿಗೆ ನೀಡಲಾಗಿದೆ. ಇನ್ನೊಂದು ಘಟನೆಯಲ್ಲಿ 18,000 ರೂ. ಸಂಗ್ರಹಿಸಿದಾಗ ಬ್ಯಾಂಕ್‌ನಲ್ಲಿ ಪಾವತಿಸಿರುವುದು 8,500 ರೂ.ಗಳಾಗಿದೆ. …

ಬದಿಯಡ್ಕ ಪಂ.ನಲ್ಲಿ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರ ಹಣ ಲಪಟಾವಣೆ: ನಾಗರಿಕರಿಂದ ಪ್ರತಿಭಟನೆ

ನೀರ್ಚಾಲು: ಬದಿಯಡ್ಕ ಪಂಚಾ ಯತಿನ 17ನೇ ವಾರ್ಡ್ ನ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಸಂಗ್ರಹಿಸಿದ ಹಣ ಲಪಟಾಯಿಸಿ ಭಾರೀ ಭ್ರಷ್ಟಾಚಾರ ಮಾಡಿದ ಬಗ್ಗೆ ಪಂಚಾಯತ್ ಆಡಿಟ್‌ನಲ್ಲಿ ವ್ಯಕ್ತವಾಗಿದ್ದು ಈ ಭ್ರಷ್ಟಾಚಾರಿಗಳ ಹಗರಣದ ತನಿಖೆ ಆದಷ್ಟು ಬೇಗ ಕೈಗೆತ್ತಿಕೊಂಡು ಇವರನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಏಣಿಯರ್ಪು ಹನುಮಾನ್ ನಗರದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು. ಬ್ಲಾಕ್ ಪಂಚಾಯತು ಸದಸ್ಯೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಮಂಡಲ ಕಾರ್ಯದರ್ಶಿ ರಜನಿ ಸಂದೀಪ್, ವಾರ್ಡು ಪ್ರತಿನಿಧಿ ಸ್ವಪ್ನ, ಪುನೀತ್, …

ಕಳ್ಳತನದಲ್ಲಿ ಬಿಜೆಪಿಗೆ ಸಿಪಿಎಂ ಸಾಥ್-ಕಾಂಗ್ರೆಸ್ ಆರೋಪ

ಮಂಜೇಶ್ವರ: ಶಬರಿಮಲೆ ಕ್ಷೇತ್ರದಲ್ಲಿ ನಡೆಸಿದ ಚಿನ್ನ ಕಳ್ಳತನದ ಹೆಗ್ಗಣಗಳ ವಿರುದ್ಧ ಹಾಗೂ ಮತ ಕಳ್ಳತನ ವಿರುದ್ಧ ಕಲ್ಲಿಕೋಟೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಂಗಮ ನಡೆಸಲಿದೆಯೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ರಮೇಶನ್ ಕರುವಾಚ್ಚೇರಿ ತಿಳಿಸಿದ್ದಾರೆ. ಹೊಸಂಗಡಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನಾ ಸಂಗಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸು ವರೆಂದು ಅವರು ತಿಳಿಸಿದರು. ಕೇಂದ್ರದ ಬಿಜೆಪಿ ಸರಕಾರ ಮತಕಳ್ಳತನ ನಡೆಸಿದರೆ, ರಾಜ್ಯ ಸರಕಾರ ಚಿನ್ನ …

ಪಂಚಾಯತ್ ಕಚೇರಿ ಉದ್ಘಾಟನೆಗೆ ಲೀಗ್ ಮುಖಂಡನ ಆಹ್ವಾನ ರಾಜಕೀಯ ದಿವಾಳಿತನ-ಬಿಜೆಪಿ ಆರೋಪ

ಕಾಸರಗೋಡು: ಚೆಮ್ನಾಡು ಪಂಚಾಯತ್ ವತಿಯಿಂದ ಹೊಸತಾಗಿ ನಿರ್ಮಿಸಿದ ಕಚೇರಿಯ ಉದ್ಘಾಟನೆಯನ್ನು ಲೀಗ್ ನೇತಾರನಿಂದ ಮಾಡಿಸುತ್ತಿರುವುದು ರಾಜಕೀಯ ದಿವಾಳಿತನವೆಂದು ಬಿಜೆಪಿ ಚೆಮ್ನಾಡು ಪಂಚಾಯತ್ ಸಮಿತಿ ಆರೋಪಿಸಿದೆ. ಸರಕಾರಿ ಸಂಸ್ಥೆಗಳನ್ನು ಆಯಾ ಸಂಸ್ಥೆಗಳು ನೆಲೆಗೊಂಡಿರುವ ಪ್ರದೇಶದ ಜನಪ್ರತಿನಿಧಿಗಳು ಅಥವಾ ಸಚಿವರು ಸಾಮಾನ್ಯವಾಗಿ ಉದ್ಘಾಟಿಸಬೇಕಾಗಿದ್ದು, ಈ  ಶಿಷ್ಟಾಚಾರವನ್ನು ಉಲ್ಲಂಘಿಸಿ ಮುಸ್ಲಿಂ ಲೀಗ್ ಮುಖಂಡನನ್ನು ಉದ್ಘಾಟಕ ರನ್ನಾಗಿಸಿರುವುದು ರಾಜಕೀಯ ಉದ್ದೇಶದಿಂದವೆಂದು ಬಿಜೆಪಿ ದೂರಿದೆ. ಮುಂದೆ ಕೇರಳ ರಾಜ ಕೀಯದಲ್ಲಿ ಉಂಟಾಗಬಹುದಾದ ರಾಜಕೀಯ ಸಂಚಲನೆಯ ಸೂಚನೆ ಇದೆಂದು ಬಿಜೆಪಿ ತಿಳಿಸಿದೆ. ಐಕ್ಯರಂಗ ರಾಜ್ಯದಲ್ಲಿ ಆಡಳಿತಕ್ಕೇರಬೇ …

ಬಿಜೆಪಿ ಕಾರ್ಯಕರ್ತರಿಬ್ಬರ ಕೊಲೆ: ಆರೋಪಿಗಳಾದ 14 ಸಿಪಿಎಂ ಕಾರ್ಯಕರ್ತರ ಖುಲಾಸೆ

ತಲಶ್ಶೇರಿ: ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಬಿಜೆಪಿ ಕಾರ್ಯಕರ್ತರಿಬ್ಬರನ್ನು ಕೊಲೆಗೈದ ಪ್ರಕರಣದ ಆರೋಪಿಗಳಾಗಿರುವ ಕುಖ್ಯಾತ ಕೋಡಿ ಸುನಿ ಸಹಿತ ಸಿಪಿಎಂ ಕಾರ್ಯಕರ್ತರಾದ ೧೪ ಮಂದಿಯನ್ನು ತಲಶ್ಶೇರಿ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3) ಖುಲಾಸೆಗೊಳಿಸಿ ತೀರ್ಪು ನೀಡಿದೆ. ಬಿಜೆಪಿ ಕಾರ್ಯಕರ್ತರಾದ ನ್ಯೂಮಾಹಿ ಈಸ್ಟ್ ಪಳ್ಳೂರು ಪೂಶಾರಿ ಕೋವಿಲ್ ಸಮೀಪದ ಮೆಟೋಮ್ಮಲ್‌ಕಂಡಿ ವಿಜಿತ್ (25) ಮತ್ತು ಕರತ್ತೊಂಡತ್ತ್ ಹೌಸಿನ ಶಿನೋಜ್ (29) ಎಂಬವರು 2010 ಮೇ 28ರಂದು ಬೆಳಿಗ್ಗೆ 11 ಗಂಟೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ನ್ಯೂಮಾಹಿ …

ಬೋಬಿ ಚೆಮ್ಮನ್ನೂರು ಇಂಟರ್‌ನ್ಯಾಶನಲ್ ಜ್ಯುವೆಲರ್ಸ್‌ನ ಆವಡಿ ಶೋರೂಂ ಉದ್ಘಾಟನೆ

ಚೆನ್ನೈ: ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶನಲ್ ಜ್ಯುವೆಲರ್ಸ್ನ ಚೆನ್ನೈನಲ್ಲಿನ ತನ್ನ ಎರಡನೇ ಶೋ ರೂಮ್ ಆವಡಿಯಲ್ಲಿ ಉದ್ಘಾಟನೆ ಗೊಂಡಿತು. ಶೋರೂಮ್ ಅನ್ನು ತಮಿಳುನಾಡು ಸಚಿವ ಎಸ್.ಎಂ. ನಾಸರ್, ಗಿನ್ನೆಸ್ ದಾಖಲೆ ಹೊಂದಿದ ಬೋಚೆ , ಚಲನಚಿತ್ರ ತಾರೆ ಕಾಜಲ್ ಅಗರ್ವಾಲ್ ಜಂಟಿಯಾಗಿ ಉದ್ಘಾಟಿ ಸಿದರು. ಚಿನ್ನದ ಆಭರಣಗಳ ಮೊದಲ ಮಾರಾಟವನ್ನು ಆವಡಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಜಿ. ಉದಯಕುಮಾರ್ ನಿರ್ವಹಿಸಿದರು. ಮಾಜಿ ಸಚಿವ ಎಸ್. ಅಬ್ದುಲ್ ರಹೀಮ್ ಸನ್ ಪ್ರಕಾಶ್ (ಕಾರ್ಯದರ್ಶಿ, ಆವಡಿ ನಗರ, ಡಿಎಂಕೆ), ಜಿ. ರಾಜೇಂದ್ರನ್ …