ದೇವಸ್ವಂ ಸಚಿವ, ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಬದಿಯಡ್ಕದಲ್ಲಿ ಕಾಂಗ್ರೆಸ್‌ನಿಂದ ಮೆರವಣಿಗೆ

ಬದಿಯಡ್ಕ: ಶಬರಿಮಲೆ ಕ್ಷೇತ್ರದ ಚಿನ್ನ ಕಳವು ವಿವಾದಕ್ಕೆ ಸಂಬಂಧಿಸಿ ದೇವಸ್ವಂ ಖಾತೆ ಸಚಿವ ಹಾಗೂ ದೇವಸ್ವಂ ಮಂಡಳಿ ಅಧ್ಯಕ್ಷ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಡಿ.ಕೆ.ಟಿ.ಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಉದ್ಘಾಟಿಸಿದರು. ನೇತಾರರಾದ ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಎಂ. ಅಬ್ಬಾಸ್, ಚಂದ್ರಹಾಸನ್ ಮಾಸ್ತರ್, ರಾಮ ಪಟ್ಟಾಜೆ, …

ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ 3ರ ಬಾಲಕ

ಮಲ್ಲ: ಇಲ್ಲಿನ ಮುಂಡಪ್ಪಳ್ಳದ ಮೂರರ ಹರೆಯದ ಶ್ರೀಯಾನ್ ಕೃಷ್ಣ ಎಂಬ ಬಾಲಕ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿ ನಾಡಿಗೆ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆಲ್ಫಾಬೆಟಿಕ್ ಅಕ್ಷರಗಳು, ಸಂಖ್ಯೆಗಳು, ತಿಂಗಳುಗಳು, ದಿವಸಗಳು, ಹಣ್ಣು ಹಂಪಲುಗಳು, ಹೂವುಗಳು, ದೇಹದ ವಿವಿಧ ಭಾಗಗಳು, ಪಕ್ಷಿಗಳು, ಬಣ್ಣಗಳನ್ನು ವ್ಯತ್ಯಸ್ಥ ಭಾಷೆಗಳಲ್ಲಿ ಉಚ್ಚರಿಸುವ ಸಾಮರ್ಥ್ಯ ಈತನಿಗಿದೆ. ಈತ ಮುಂಡಪ್ಪಳ್ಳದ ನವೀನ್ ಹಾಗೂ ಸಜಿನ ದಂಪತಿ ಪುತ್ರನಾಗಿದ್ದಾನೆ.

ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳಾಗಿ ವಿ. ರಾಜನ್, ಎಂ. ಅಸಿನಾರ್ ಆಯ್ಕೆ

ಕಾಸರಗೋಡು:ಸಿಪಿಐ ಜಿಲ್ಲಾ ಕೌನ್ಸಿಲ್ ಸಭೆಯಲ್ಲಿ ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳಾಗಿ ವಿ ರಾಜನ್ ಮತ್ತು ಎಂ. ಅಸಿನಾರ್ ಅವರನ್ನು ಆಯ್ಕೆ ಮಾಡಲಾಯಿತು. ಟಿ ಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಹಾಯಕ ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯರಾಗಿ ಸಿ.ಪಿ.ಬಾಬು, ವಿ.ರಾಜನ್, ಎಂ.ಅಸಿನಾರ್, ಕೆ.ವಿ.ಕೃಷ್ಣನ್, ಬಂಗಳA ಕುಂಞÂಕೃಷ್ಣನ್, ಕೆ.ಎಸ್. ಕುರಿಯಾಕೋಸ್, ಎಂ.ಕುಮಾರನ್, ಮಾಜಿ ಶಾಸಕ ವಿ.ಸುರೇಶ್ ಬಾಬು, ಪಿ.ಭಾರ್ಗವಿ, ಪಿ.ವಿಜಯಕುಮಾರ್, ಮುಖೇಶ್ ಬಾಲಕೃಷ್ಣನ್ ಆಯ್ಕೆಯಾದರು. ರಾಜ್ಯ ಸಹಾಯಕ ಕಾರ್ಯದರ್ಶಿ ಸತ್ಯನ್ ಮೊಕೇರಿ, …

ಅಡಿಕೆ ಕೃಷಿಕರ ಸಮಸ್ಯೆ: ಸಚಿವರಿಗೆ ಕಿಸಾನ್ ಸೇನೆ ಮನವಿ

ಕಾಸರಗೋಡು: ಅಡಿಕೆ ಕೃಷಿಕರು ಎದುರಿಸುತ್ತಿರುವ ಎಲೆಚುಕ್ಕೆ ರೋಗ ಸಹಿತ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಿಸಾನ್ ಸೇನೆ ಪ್ರತಿನಿಧಿ ಮಂಡಳಿ ಶಾಸಕ ಎನ್.ಎ. ನೆಲ್ಲಿಕುನ್ನು ರವರ ಮುಖಾಂತರ ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ನೀಡಲಾಯಿತು. ಅಡಿಕೆ ಕೃಷಿಕರ ಸಂಕಷ್ಟ, ಉಚಿತ ವಿದ್ಯುತ್ ಸರಬರಾಜು ಬಗ್ಗೆ ಸಚಿವರಿಗೆ ತಿಳಿಸಲಾಯಿತು. ತಂಡ ದಲ್ಲಿ ಕಿಸಾನ್ ಸೇನೆ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಕಾರ್ಯದರ್ಶಿ ಸಚಿನ್ ಕುಮಾರ್ ಎಂ.ಪಿ, ಕಲ್ಲಗ ಚಂದ್ರಶೇಖರ ರಾವ್,ಕೋಶಾಧಿಕಾರಿ  ರಾಜೇಂದ್ರ ಪ್ರಸಾದ್ ಬಿ, ನ್ಯಾಯವಾದಿ ಬಿಜು …

ಶಬರಿಮಲೆ ಚಿನ್ನ ಕಳವು ಪ್ರಕರಣ: ದೇವಸ್ವಂ ಸಚಿವರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

ಮಧೂರು: ಮಧೂರು ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಶಬರಿಮಲೆ ಚಿನ್ನ ಕಳ್ಳತನ ವಿಷಯಕ್ಕೆ ಸಂಬಂಧಿಸಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆಸಲಾಯಿತು. ವಿಶ್ವದಾದ್ಯಂತವಿರುವ ಅಯ್ಯಪ್ಪ ಭಕ್ತರನ್ನು ಹಾಗೂ ಶಬರಿಮಲೆ ಕ್ಷೇತ್ರವನ್ನು ಅವಹೇಳನಗೈಯ್ಯುವ ರೀತಿಯಲ್ಲೇ ಸರಕಾರ, ದೇವಸ್ವಂ ಇಲಾಖೆಯ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಈ ವಿಷಯದಲ್ಲಿ ಮುಜರಾಯಿ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನು ಮತ್ಸ್ಯ ಕಾರ್ಮಿಕ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಂಗಾಧರನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಮುಹಮ್ಮದ್ ವಟ್ಟಯಕ್ಕಾಡ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ …

ಸೀತಾಂಗೋಳಿಯಲ್ಲಿ ಯುವಕನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಕುಂಬಳೆ: ಅಕ್ಟೋಬರ್ 5ರಂದು ರಾತ್ರಿ ಸೀತಾಂಗೋಳಿ ಬಳಿ ಬದಿಯಡ್ಕ ನಿವಾಸಿ ಹಾಗೂ ಮೀನು ಮಾರಾಟಗಾರ ಅನಿಲ್ ಕುಮಾರ್ (40) ಎಂಬವರನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳು ನಿನ್ನೆ ಕುಂಬಳೆ ಪೊಲೀಸ್ ಠಾಣೆಯಲ್ಲಿ  ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಮತ್ತು ಹರಿಕೃಷ್ಣನ್‌ಎಂಬವರು ಬಂಧಿತರಾದ ಆರೋಪಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು …

ಅಧ್ಯಾಪಿಕೆ, ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ : ಸ್ಕೂಟರ್‌ನಲ್ಲಿ ತಲುಪಿ ಅಧ್ಯಾಪಿಕೆಗೆ ಹಲ್ಲೆಗೈದ ಮಹಿಳೆಯರಿಗಾಗಿ ಶೋಧ

ಮಂಜೇಶ್ವರ: ಕಡಂಬಾರ್‌ನಲ್ಲಿ ಯುವ ಅಧ್ಯಾಪಿಕೆ ಹಾಗೂ ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಗೆ ಹಲ್ಲೆಗೈಯ್ಯುವ ಸಿಸಿ ಟಿವಿ ಕ್ಯಾಮರಾ ದೃಶ್ಯಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ದಂಪತಿಯ ಸಾವಿನಲ್ಲಿ ನಿಗೂಢತೆ ತೀವ್ರಗೊಂಡಿದೆ. ಕಡಂಬಾರ್ ಚೆಂಬುಪದವು ನಿವಾಸಿ ಅಜಿತ್ (35), ಪತ್ನಿಯೂ ಖಾಸಗಿ ಶಾಲೆಯ ಅಧ್ಯಾಪಿಕೆಯಾದ ಶ್ವೇತ (28) ಎಂಬಿವರು ಈ ತಿಂಗಳ ೬ರಂದು ಮನೆಯಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರರ ಹರೆಯದ ಪುತ್ರನನ್ನು ಬಂದ್ಯೋಡ್‌ನಲ್ಲಿರುವ ಅಜಿತ್‌ರ ಸಹೋದರಿಯ …

ಗೃಹಿಣಿಯ ಕೊಲೆ ಶಂಕೆ: ಕುತ್ತಿಗೆ ಇರಿದ ಗಾಯ ಸಹಿತ ಮೃತದೇಹ ಪತ್ತೆ

ಕೋಟ್ಟಯಂ: ಮನೆಯೊಡತಿಯ ಮೃತದೇಹ ಕುತ್ತಿಗೆ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಕೋಟ್ಟಯಂ ತೆಲ್ಲಕಗತ್ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ಜೋಸ್ ಚಾಕೋ ಎಂಬವರ ಪತ್ನಿ ಲೀನಾ ಜೋಸ್ (55) ಮೃತಪಟ್ಟವರು. ಇಂದು ಮುಂಜಾನೆ ವೇಳೆ ಮನೆಯ  ಹಿಂದುಗಡೆ ಅಡುಗೆ ಕೋಣೆ ಸಮೀಪ ಮೃತದೇಹ ಪತ್ತೆಯಾಗಿದೆ. ಲೀನಾರ ಪುತ್ರ ಜೆರಿನ್ ತೋಮಸ್ ಇಂದು ಮುಂಜಾನೆ ಒಂದು ಗಂಟೆ ವೇಳೆ ಕೆಲಸ ಮುಗಿಸಿ ಮನೆಗೆ ತಲುಪಿದ್ದರು. ತಾಯಿ ಕಾಣದಿದ್ದಾಗ ಹುಡುಕಾಟ ನಡೆಸಿದ್ದು, ಈ ವೇಳೆ ಮೃತದೇಹ ಪತ್ತೆಯಾಗಿದೆ. ಈ ಸಂದರ್ಭದಲ್ಲಿ …

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅರ್ಬುದ ರೋಗಿಗಳಿಗೆ ಇನ್ನು ಉಚಿತ ಪ್ರಯಾಣ: ವಿಧಾನಸಭೆಯಲ್ಲಿ ಸಾರಿಗೆ ಸಚಿವ ಘೋಷಣೆ

ತಿರುವನಂತಪುರ: ಅರ್ಬುದ ರೋಗಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಏರ್ಪಡಿಸುವ ಭಾರೀ ದೊಡ್ಡ ಘೋಷಣೆಯನ್ನು ಸಾರಿಗೆ ಸಚಿವ   ಕೆ.ಬಿ. ಗಣೇಶ್ ಕುಮಾರ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮೊಳಗಿಸಿದ್ದಾರೆ. ಸೂಪರ್ ಫಾಸ್ಟ್ ಶ್ರೇಣಿಗಿಂತ ಕೆಳಗಿನ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಲಾಗುವುದೆಂದು ಸಚಿವರು ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ರೋಗಿಗಳಿಗೂ ಈ ಉಚಿತ ಪ್ರಯಾಣ ಸೌಕರ್ಯ ಲಭಿಸಲಿದೆ. ಈ ಘೋಷಣೆಯನ್ನು ಕೆಎಸ್‌ಆರ್‌ಟಿಸಿ ನಿರ್ದೇಶಕ ಮಂಡಳಿ ಇಂದು ವಿದ್ಯುಕ್ತವಾಗಿ ಹೊರಡಿಸಲಿದೆಯೆಂದು …

2018ರಲ್ಲಿ ನಡೆದ ಕಿರುಕುಳ ಪ್ರಕರಣ: ಯುವತಿ ಮಗುವಿಗೆ ಜನ್ಮ ನೀಡಿದ ಘಟನೆಯಲ್ಲಿ ಡಿಎನ್‌ಎ ತಪಾಸಣೆ ಫಲಿತಾಂಶ ನೆಗೆಟಿವ್ ; ಯುವತಿಯ ಹೇಳಿಕೆಯಂತೆ ಇನ್ನೋರ್ವ ಯುವಕನ ವಿರುದ್ಧ ಕೇಸು

ಕಾಸರಗೋಡು: 2018ರಲ್ಲಿ ಯುವತಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಲಾಯಿತೆಂಬ ಪ್ರಕರಣದಲ್ಲಿ ತನಿಖೆಯ ಅಂಗವಾಗಿ ನಡೆಸಿದ ಡಿಎನ್‌ಎ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಹೇಳಿಕೆ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ಇನ್ನೋರ್ವ ಯುವಕನ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ. 2018ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅವಿವಾಹಿತಳಾದ ಓರ್ವ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಅಂದು ಯುವತಿ ನೀಡಿದ ದೂರಿನ ಪ್ರಕಾರ ಓರ್ವ ಯುವಕನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಯುವತಿ ಗರ್ಭಿಣಿಯಾಗಿರುವುದು ಅದೇ ಯುವಕನಿಂದಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು …