ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ: ವಿಧಾನಸಭೆಯಲ್ಲಿ ಭುಗಿಲೆದ್ದ ಆಕ್ರೋಶ: ಮುಜರಾಯಿ ಸಚಿವರ ರಾಜೀನಾಮೆಗೆ ವಿಪಕ್ಷೀಯರ ಪಟ್ಟು

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರ ಪಾಲಕ ಮೂರ್ತಿಯ ಚಿನ್ನ ನಾಪತ್ತೆಯಾದ ಪ್ರಕರಣದ ಕಾವು ವಿಧಾನಸಭೆಯನ್ನು ಇಂದು ಅಲ್ಲೋಲ ಕಲ್ಲೋಲಗೊಳಿಸಿದೆ. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನಃ ಆರಂಭಗೊಂಡು ಪ್ರಶ್ನೋತ್ತರ ವೇಳೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್  ಮಾತನಾಡು ತ್ತಿರುವಂತೆಯೇ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಎದ್ದು ನಿಂತು   ಪ್ರಶ್ನೋತ್ತರ ವೇಳೆಯನ್ನು ಬದಿಗಿರಿಸಿ ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು  ಆಗ್ರಹಪಟ್ಟರು. ಆದರೆ ಅದಕ್ಕೆ ಕಿವಿಗೊಡದ ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ಪ್ರಶ್ನೋತ್ತರ ವೇಳೆಯನ್ನು  ಮುಂದುವರಿಸಿದರು. …

ಕುಂಬಳೆ ಶಾಲಾ ಕಲೋತ್ಸವ ಪೊಲೀಸ್ : ಬಿಗು ಕಾವಲಿನೊಂದಿಗೆ ಪುನರಾರಂಭ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ನಿಲುಗಡೆಗೊಳಿಸಿದ್ದ ಕಲೋತ್ಸವವನ್ನು ಇಂದು ಶಾಂತ ವಾತಾವರಣದಲ್ಲಿ ಪುನರಾರಂಭಿಸಲಾ ಯಿತು. ಶಾಲಾ ಪರಿಸರದಲ್ಲಿ ಬಿಗು ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಶಾಲೆಗಿರುವ   ಪ್ರವೇಶದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಮವಸ್ತ್ರ ಹಾಗೂ ಬ್ಯಾಡ್ಜ್ ಧರಿಸಿದ ಮಕ್ಕಳನ್ನು ತಪಾಸಣೆಯ ಬಳಿಕವೇ ಶಾಲಾ ಕಂಪೌಂಡ್‌ನೊಳಗೆ ಪ್ರವೇಶಿಸಲು ಬಿಡಲಾಗುತ್ತಿದೆ. ಕೆಲವು ಮಕ್ಕಳೊಂದಿಗೆ ರಕ್ಷಕರು ತಲುಪಿದ್ದು, ಅವರನ್ನು ತಪಾಸಣೆ ಬಳಿಕ ಕಂಪೌಂ ಡ್‌ನೊಳಗೆ ಕಳುಹಿಸಲಾಯಿತು. ಬಳಿಕ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟ ಕೂಡಲೇ ಮರಳುವಂತೆ ಪೊಲೀಸರು …

ತಲೆಗೆ ಹೊಡೆದು ವೃದ್ದನ ಕೊಲೆ: ನೆರೆಮನೆ ನಿವಾಸಿ ವಿರುದ್ಧ ಕೇಸು

ಕಾಸರಗೋಡು:  ವೃದ್ಧನೋರ್ವನನ್ನು ತಲೆಗೆ ಹೊಡೆದು ಬರ್ಭರವಾಗಿ ಕೊಲೆಗೈದ ಘಟನೆ ನಡೆದಿದೆ. ಹೊಸದುರ್ಗ ಸಮೀಪದ ಕರಿಂದಳಂ ಕುಂಬಳಪ್ಪಳ್ಳಿ ಚಿಟ್ಟೆಮೂಲೆಯ ಉನ್ನತ್ತೀಲೆ ಕೆ. ಕಣ್ಣನ್ (80) ಕೊಲೆಗೀಡಾದ ವ್ಯಕ್ತಿ. ಇದಕ್ಕೆ ಸಂಬಂಧಿಸಿ ಮೃತ ಕಣ್ಣನ್‌ರ ಸಂಬಂಧಿಕ ಹಾಗೂ ನೆರೆಮನೆ ನಿವಾಸಿಯೂ ಆಗಿರುವ ಕೆ. ಶ್ರೀಧರನ್ (45) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಸಂಜೆ  ಕಣ್ಣನ್‌ರನ್ನು ಅವರ ಮನೆಯಲ್ಲೇ ತಲೆಯ ಹಿಂಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿ ಲಾಗಿದೆ. ಅದನ್ನು ಕಂಡ ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು …

ಉಪ್ಪಳದಲ್ಲಿ ರೆಸ್ಟೋರೆಂಟ್ ಬೆಂಕಿಗಾಹುತಿ

ಉಪ್ಪಳ: ಉಪ್ಪಳ ಚೆಕ್‌ಪೋಸ್ಟ್ ಬಳಿಯಿರುವ ರೆಸ್ಟೋರೆಂಟ್‌ಗೆ ಬೆಂಕಿ ತಗಲಿದ ಘಟನೆ ನಡೆದಿದೆ. ಇಲ್ಲಿನ ಕುಳಿಮಂದಿ ಎಂಬ ರೆಸ್ಟೋರೆಂಟ್‌ಗೆ ನಿನ್ನೆ ಬೆಳಿಗ್ಗೆ 11.30ರ ವೇಳೆ ಬೆಂಕಿ ತಗಲಿದೆ. ಘಟನೆ ವೇಳೆ ಇಬ್ಬರು ನೌಕರರು ಮಾತ್ರವೇ ರೆಸ್ಟೋರೆಂಟ್‌ನೊಳಗಿದ್ದರು. ಇವರು  ಅಪಾಯದಿಂದ ಪಾರಾಗಿದ್ದಾರೆ. ರೆಸ್ಟೋರೆಂಟ್‌ನ ಎದುರು ಭಾಗದಿಂದ ಬೆಂಕಿ ಹತ್ತಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಫ್ಯಾನ್, ಫ್ರಿಡ್ಜ್ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡಿದ್ದು, ಇದರಿಂದ ಭಾರೀ ನಷ್ಟ ಸಂಭವಿಸಿದೆ ಎಂದು ರೆಸ್ಟೋರೆಂಟ್ ಮಾಲಕ ವರ್ಕಾಡಿಯ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಕೋವಿಡ್ ಕಾಲದಲ್ಲಿ ಗಲ್ಫ್ ಉದ್ಯೋಗ ಕಳೆದುಕೊಂಡು ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಟ್ಟಣಿಗೆ ಬಳಿಯ ಬೆಳೇರಿ ನಿವಾಸಿ ಬಿ. ವಿನೋದ್ ಕುಮಾರ್ (40) ಮೃತ ಯುವಕ. ಮೊನ್ನೆ ಸಂಜೆ ಮನೆ ಬಳಿಯಿರುವ ಹಳೆಯ ಮನೆಯೊಳಗೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುಧಾಮ ಮಣಿಯಾಣಿ- ದಿ| ರಾಜೀವಿ ದಂಪತಿ ಪುತ್ರನಾದ ಮೃತರು ಸಹೋದರರಾದ ವಸಂತ, ಬಾಲಕೃಷ್ಣ, …

ಧಾರ್ಮಿಕ ಮುಂದಾಳು, ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಶೇಡಿಕಾವು ನಿವಾಸಿ ಧಾರ್ಮಿಕ ಮುಂದಾಳು ಹಾಗೂ ಹಿರಿಯ ವ್ಯಾಪಾರಿ ಸುಬ್ಬ ಪೂಜಾರಿ [ 96] ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಕುಂಬಳೆ ಚಾವಡಿ ಶ್ರೀ ಧೂಮಾವತಿ ದೈವಸ್ಥಾನದ ಮುಖ್ಯಸ್ಥರಾಗಿದ್ದರು. ಅಲ್ಲದೆ ಕುಂಬಳೆ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಗುರು ಸ್ವಾಮಿಯಾಗಿದ್ದರು. ಕುಂಬಳೆ ಮೀನು ಮಾರುಕಟ್ಟೆ ಬಳಿಯಲ್ಲಿ ಹಿರಿಯ ವ್ಯಾಪಾರಿಯಾಗಿದ್ದರು. ಮೃತರು ಮಕ್ಕಳಾದ ಹರಿಶ್ಚಂದ್ರ, ಮಾಲತಿ, ಗಣೇಶ, ಕೋಟಿ, ಚೆನ್ನಯ್ಯ, ರೋಹಿಣಿ, ರೇವತಿ, ಶಶಿ, …

ಪ್ರೀತಿಯ ನಾಟಕವಾಡಿ 10ಪವನ್ ಚಿನ್ನ ವಂಚಿಸಿದ ಪ್ರಕರಣ: ಯೂತ್ ಕಾಂಗ್ರೆಸ್ ನೇತಾರ ಸೆರೆ

ಕಾಸರಗೋಡು: ಪ್ರೀತಿಯ ನಾಟಕವಾಡಿ ಮನೆಯೊಡತಿಯಿಂದ 10 ಪವನ್ ಚಿನ್ನದೊಡವೆ ಪಡೆದು ಬಳಿಕ ವಂಚಿಸಿದ ಪ್ರಕರಣದ ಆರೋಪಿಯಾಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಯೂತ್ ಕಾಂಗ್ರೆಸ್ ಕಾರ್ಯಕರ್ತ, ನೀಲೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಐಎನ್‌ಟಿಯುಸಿ ನೇತಾರನೂ ಆಗಿರುವ ನೀಲೇಶ್ವರ ಮಾರ್ಕೆಟ್ ಬಳಿಯಕಾಟಿ ಕುಳದ ಶನೀರ್ ಬಂಧಿತ ಆರೋಪಿ. ಈತನನ್ನು ಕಲ್ಲಿಕೋಟೆ ವೈದ್ಯಕೀಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಬೈಜು ನೇತೃತ್ವದ ಪೊಲೀಸರು ನೀಲೇಶ್ವರ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ …

ಸೊಸೆ ಮೃತಪಟ್ಟ 3ನೇ ದಿನ ಅತ್ತೆ ನಿಧನ

ಬದಿಯಡ್ಕ: ಸೊಸೆ ಹೃದಯಾಘಾತದಿಂದ ಸಾವಿಗೀಡಾದ ಬೆನ್ನಲ್ಲೇ ಅತ್ತೆಯೂ ಮೃತಪಟ್ಟ ಘಟನೆ ನಡೆದಿದೆ. ದಿ| ಕಣ್ಣನ್ ಬೆಳ್ಚಪ್ಪಾಡರ ಪತ್ನಿಯೂ, ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಭಂಡಾರ ಮನೆಯಲ್ಲಿ ವಾಸಿಸುವ ಕಲ್ಯಾಣಿ ಅಮ್ಮ (92) ನಿನ್ನೆ ವೃದ್ದಾಪ್ಯ ಸಹಜ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಇವರ ಪುತ್ರ ಕೃಷ್ಣರ ಪತ್ನಿ ಹರಿಣಾಕ್ಷಿ (47) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿ ದ್ದರು. ಮರಣಾನಂತರ ಕಾರ್ಯಗಳು ನಡೆಯುತ್ತಿರುವಂ ತೆಯೇ ಅತ್ತೆ ಕಲ್ಯಾಣಿ ಅಮ್ಮ ನಿಧನರಾಗಿದ್ದಾರೆ.  ಮೃತ ಕಲ್ಯಾಣಿ ಅಮ್ಮ  ಮಕ್ಕಳಾದ ಅಂಬಾಡಿ ಕಾರ್ನವರ್ …

ವರದಕ್ಷಿಣೆ ಕಿರುಕುಳ: ಪತಿ ಸಹಿತ ಸಂಬಂಧಿಕರ ವಿರುದ್ಧ ಕೇಸು

ಮಂಜೇಶ್ವರ:  ಹೆಚ್ಚುವರಿ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಹಿತ ೫ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಗಳೂರು ಜೆಪ್ಪು ನಿವಾಸಿ ತನಿಶಾ (25) ನೀಡಿದ ದೂರಿನಂತೆ ಪಚ್ಲಂಪಾರೆ ನಿವಾಸಿಗಳಾದ ಪತಿ ಅಬ್ದುಲ್ ಮಾಹಿನ್ (30), ಸಂಬಂಧಿಕರಾದ ಅಬ್ದುಲ್ ಮತ್ತೀನ್, ಹಸೀನಾಬಾನು, ಲತೀಫ್, ಉಪ್ಪಳ ಫಿರ್‌ದೋಸ್ ನಗರದ ಅಕ್ಬರ್ ಎಂಬ ವರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ಅಗೋಸ್ತ್ 4ರಂದು  ಇವರ ವಿವಾಹ ಧಾರ್ಮಿಕ ಪದ್ಧತಿಯ ಪ್ರಕಾರ ನಡೆದಿದೆ. ಮದುವೆಯ ಬಳಿಕ …

ಒಂದೂವರೆ ವರ್ಷ ಹಿಂದೆ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ನಿರ್ಮಿಸಿದ ಗೋಡೆ ನಾಶ: ವಾಹನ ಸಂಚಾರ ಆರಂಭ

ಕುಂಬಳೆ: ಅಪಾಯಭೀತಿಯೊ ಡ್ಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಚ್ಚುಗಡೆಗೊಳಿಸಿದ್ದ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ಸ್ಥಾಪಿಸಿದ್ದ ಕಾಂಕ್ರೀಟ್ ಗೋಡೆಯನ್ನು ಕೆಡವಲಾಗಿದೆ. ಒಂದೂವರೆ ವರ್ಷದಿಂದ ಸೇತುವೆಗೆ ಅಡ್ಡವಾಗಿ ನಿರ್ಮಿಸಿದ್ದ ಗೋಡೆಯನ್ನು ಕೆಡವುದರೊಂದಿಗೆ ಲಾರಿ ಸಹಿತ ವಿವಿಧ ವಾಹನಗಳು ಸೇತುವೆ ಮೂಲಕ ಸಂಚರಿ ಸತೊಡಗಿವೆ. ಸೇತುವೆ ಅಪಾಯಭೀತಿಯ ಲ್ಲಿದೆಯೆಂದು ನಾಗರಿಕರು ತಿಳಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ಹಿಂದೆ ಜಿಲ್ಲಾಧಿಕಾರಿ, ಮೈನರ್ ಇರಿಗೇಶನ್, ಲೋಕೋಪಯೋಗಿ ವಿಭಾಗಗಳ ಅಧಿಕಾರಿಗಳು, ಸೇತುವೆಯನ್ನು ಸಂದರ್ಶಿಸಿದರು. ಯಾವುದೇ ಕ್ಷಣದಲ್ಲಿ ಸೇತುವೆ ಕುಸಿಯಲು ಸಾಧ್ಯತೆ ಇದೆಯೆಂದೂ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. …