ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದೇವೆ’ ಎಂಬ ಸಂದೇಶ ಕಳುಹಿಸಿದ ತಾಯಿ, ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ತಿರುವನಂತಪುರ: ಇಲ್ಲಿಗೆ ಸಮೀಪದ ಕಮಲೇಶ್ವರ ಆರ್ಯನ್ಕುಳಿಯಲ್ಲಿ ತಾಯಿ ಹಾಗೂ ಪುತ್ರಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆರ್ಯನ್ಕುಳಿ ಶಾಂತಿಗಾರ್ಡನ್ನ ಸಜಿತ (54), ಪುತ್ರಿ ಗ್ರೀಮ (30) ಎಂಬಿವರನ್ನು ನಿನ್ನೆ ಸಂಜೆ ಮನೆಯ ಚಾವಡಿಯ ಸೋಫಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆ ಗೈಯ್ಯುವ ಬಗ್ಗೆ ಸಂದೇಶವನ್ನು ಕುಟುಂಬದ ವಾಟ್ಸಪ್ ಗ್ರೂಪ್ನಲ್ಲಿ ರವಾನಿಸಿದ ಬಳಿಕ ಇವರಿಬ್ಬರೂ ಆತ್ಮಹತ್ಯೆ ಗೈದಿರಬೇಕೆನ್ನಲಾಗಿದೆ. ‘ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದೇವೆ’ ಎಂಬ ಸಂದೇಶ ಗ್ರೂಪ್ನಲ್ಲಿ ಹಂಚಿಕೊಂಡಿದ್ದು, ಕೂಡಲೇ ಸಂಬಂಧಿಕರು ಹಾಗೂ ನೆರೆಮನೆ ನಿವಾಸಿಗಳು ಮನೆಗೆ ತಲುಪಿದ್ದಾರೆ. …