ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಆನಂದ ಶೆಟ್ಟಿ ವಾನಂದೆ ನಿಧನ

ಉಪ್ಪಳ: ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಶಿರಿಯ ವಾನಂದೆ ನಿವಾಸಿ ಆನಂದ ಶೆಟ್ಟಿ (81) ನಿಧನಹೊಂದಿದರು. ವೃದ್ಧಾಪ್ಯ ಸಹಜ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ  ನಿಧನ ಸಂಭವಿಸಿದೆ. ಆರ್‌ಎಸ್‌ಎಸ್‌ನ ಶಿರಿಯ ಶಾಖೆ ಮುಖ್ಯ ಶಿಕ್ಷಕ್ ಆಗಿ ಇವರು ಕಾರ್ಯಾಚರಿಸಿದ್ದರು. ಸಿರಿಯ ಸೀರೆ ಶ್ರೀ ಶಂಕರನಾರಾಯಣ ಕ್ಷೇತ್ರ ಸೇವಾ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಉತ್ತಮ ಕೃಷಿಕರೂ ಆಗಿದ್ದ ಇವರಿಗೆ ಮಂಗಲ್ಪಾಡಿ ಪಂಚಾಯತ್ ಹಾಗೂ ಕೃಷಿ ಭವನ ಜಂಟಿಯಾಗಿ ಮಾದರಿ …

ಆಹಾರ ನೀಡಲು ತಡವಾಯಿತೆಂದು ಆರೋಪಿಸಿ  ನೌಕರನಿಗೆ ಹಲ್ಲೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಆಹಾರ ನೀಡಲು ತಡವಾಯಿತು ಹಾಗೂ ಆಹಾರ ಕಡಿಮೆಯಾಯಿತೆಂದು ಆರೋಪಿಸಿ ಹೋಟೆಲ್ ನೌಕರನಿಗೆ ಹಲ್ಲೆಗೈದು ಹೋಟೆಲ್‌ನ ಗಾಜು ಪುಡಿಗೈದ ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಾಯಮ್ಮಾರಮೂಲೆ ಪಡಿಂಞ್ಞಾರೆಮೂಲೆಯ ಪಿ. ಉಮ್ಮರ್ (42)ರ ದೂರಿನಂತೆ ಮುಹಮ್ಮದಲಿ, ಅಬ್ದುಲ್ ಫಿರೋಸ್, ನೌಶಾದ್ ಎಂಬಿವರ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಆದಿತ್ಯವಾರ ಮಧ್ಯಾಹ್ನ ೧ ಗಂಟೆ ವೇಳೆ  ಕಾಸರಗೋಡು ಕೆಪಿಆರ್‌ರಾವ್ ರೋಡ್‌ನ ಮಲಬಾರ್ ಫಿಶ್ ಪಾಯಿಂಟ್ ಎಂಬ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಆಹಾರ …

10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಯತ್ನ: ಆರೋಪಿ ಸೆರೆ

ಕಾಸರಗೋಡು: ಸೈಕಲ್‌ನಲ್ಲಿ ಹೋಗುತ್ತಿದ್ದ ಹತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ. ಅಜಿತ್ ಮತ್ತು ಜಿಲ್ಲಾ ಕ್ರೈಂ ಸ್ಕ್ವಾಡ್ ನೇತೃತ್ವದ ತಂಡ ಬಂಧಿಸಿದೆ. ಪಯ್ಯನ್ನೂರು ವೆಳ್ಳೂರು ಮೂಪನ್ನ ಡಗತ್ತ್ ವೀಟಿಲ್ ಫಿರ್ದೌಸ್ (36) ಬಂಧಿತ ಆರೋಪಿ. ಬಂಧಿತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾ ಗಿದೆ. ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ವ್ಯಕ್ತಿ ಯಾರೆಂಬುವು ದನ್ನು ಗುರುತುಹಚ್ಚಲು ಪೊಲೀಸರಿಗೆ ಮೊದಲು ಸಾಧ್ಯವಾಗಿರಲಿಲ್ಲ. ಬಳಿಕ ಘಟನೆ ನಡೆದ ಪರಿಸರದ ಸಿಸಿ ಟಿವಿ …

ವಿವಾಹಕ್ಕೆ ಮುಂಚೆ ಯಾರನ್ನೂ ನಂಬಬಾರದು; ದೈಹಿಕ ಸಂಬಂಧಗಳಲ್ಲಿ ಏರ್ಪಡುವಾಗ ಜಾಗ್ರತೆ ಪಾಲಿಸಲು ಸುಪ್ರೀಂ ಕೋರ್ಟ್ ಮುನ್ನೆಚ್ಚರಿಕೆ

ದೆಹಲಿ: ವಿವಾಹಕ್ಕೆ ಮುಂಚಿತ ಗಂಡು ಮಕ್ಕಳು, ಹೆಣ್ಮಕ್ಕಳು ಸಂಪೂರ್ಣ ಅಪರಿಚಿತರಾಗಿದ್ದಾರೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹದ ಮುಂಚಿತ ಇರುವ ದೈಹಿಕ ಸಂಬಂಧಗಳಲ್ಲಿ ಏರ್ಪಡುವವರು ಅತ್ಯಂತ ಜಾಗ್ರತೆ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಮುನ್ನೆಚ್ಚರಿಕೆ ನೀಡಿದೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ರೆಂಬ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿ ಪರಿಗಣಿಸುತ್ತಿದ್ದ ಮಧ್ಯೆ ನ್ಯಾಯಾಲಯ ಈ ಪರಾಮರ್ಶೆ ನಡೆಸಿದೆ. ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಉಜ್ಜಲ್ ಭೂಯಾನ್ ಎಂಬಿವರು ಸೇರಿದ ವಿಭಾಗೀಯ ಪೀಠ ಕೇಸು ಪರಿಗಣಿಸಿತ್ತು. ದುಬಾಯಿಯಲ್ಲಿ ಆರೋಪಿ ತನ್ನೊಂದಿಗೆ ದೈಹಿಕ ಸಂಬಂಧದಲ್ಲಿ ಏರ್ಪಟ್ಟಿರುವುದಾಗಿ …

ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಆರ್‌ಸಿ ಮಾಲಕರಿಗೆ ದಂಡ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆ

ಕಾಸರಗೋಡು: ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸುತ್ತಿರುವುದು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಸಂಬಂಧ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ತೀರ್ಮಾನಿಸಿದೆ. ಇದರಂಗವಾಗಿ 18 ವರ್ಷ ಪ್ರಾಯಪೂರ್ತಿಯಾಗದವರಿಗೆ ಇನ್ನು ವಾಹನಗಳನ್ನು ಚಲಾಯಿಸಲು ನೀಡಿದ ಆರ್‌ಸಿ ಮಾಲಕರು 25,೦೦೦ ರೂಪಾಯಿ ದಂಡ ಪಾವತಿ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆಯನ್ನು ಕೂಡಾ ಅನುಭವಿಸಬೇಕಾಗಿ ಬರಲಿದೆ. ಮಾತ್ರವಲ್ಲದೆ ಪ್ರಾಯಪೂರ್ತಿಯಾಗಿಲ್ಲವೆಂಬ ಹೆಸರಲ್ಲಿ ಇದುವರೆಗೆ ರಿಯಾಯಿತಿ ಲಭಿಸುತ್ತಿದ್ದ ಅಪ್ರಾಪ್ತ ವಾಹನ ಚಾಲಕರಿಗೆ ಇನ್ನುಮುಂದೆ ಜುವನೈಲ್ ಹೋಮ್‌ನಲ್ಲಿ 6 ತಿಂಗಳು ವಾಸಿಸಬೇಕಾಗಿ …

ಎಂ.ವಿ. ಗೋವಿಂದನ್‌ರ ಪ್ರಚಾರ ಜಾಥಾದಲ್ಲಿ ವೃದ್ದ ನೀಡಿದ ಕೊಡುಗೆಗೆ ಟ್ವಿಸ್ಟ್: ಹಣ ನೀಡಿದ್ದು ಮುಖಂಡರ ನಿರ್ದೇಶ ಪ್ರಕಾರವೆಂದು ಹೇಳಿಕೆ

ಕಲ್ಲಿಕೋಟೆ: ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮುನ್ನಡೆಸುವ ಪ್ರಚಾರ ಜಾಥಾದ ವೇದಿಕೆಯಲ್ಲಿ ವೃದ್ದರೋರ್ವರು ನಗದು ಕೊಡುಗೆಯಾಗಿ ನೀಡಿದ ಘಟನೆಯಲ್ಲಿ ಟ್ವಿಸ್ಟ್ ಉಂಟಾಗಿದೆ. ಹಣ ನೀಡಿರುವುದು ಮುಖಂಡರ ನಿರ್ದೇಶ ಪ್ರಕಾರವೆಂದು ವೃದ್ದ ಬಹಿರಂಗಪಡಿಸಿದ್ದಾರೆ. ಫೆಬ್ರವರಿ ೯ರಂದು ಬಾಲುಶ್ಶೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಯ್ದೀನ್ ಎಂಬ ವೃದ್ದರು ವೇದಿಕೆಗೆ ತಲುಪಿ ಇದು ಪಿಂಚಣಿ ಹಣ, ಇದನ್ನು ಪಕ್ಷಕ್ಕೆ ಕೊಡು ಗೆಯಾಗಿ ನೀಡುತ್ತೇನೆ ಎಂದಿದ್ದರು. ಹಣವನ್ನು ಪಡೆದು ಕೊಂಡ ರಾಜ್ಯ ಕಾರ್ಯದರ್ಶಿ ಕೊಡು ಗೆಯನ್ನು ಸ್ವೀಕರಿಸಿ ರುವುದಾಗಿ ಕಲ್ಪಿಸಿಕೊಳ್ಳಿ ಎಂದು …

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು; ಯಾವುದೇ ಸಂದಿಗ್ಧತೆಯಿಲ್ಲ- ಕಾಂತಾಪುರಂ

ದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ತನ್ನ ಇಷ್ಟ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂತಾಪುರಂ ಗಮನಾರ್ಹವಾದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಂದಿಗ್ಧತೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಸಂತೋಷವಿದೆ ಎಂದು ಕಾಂತಾಪುರಂ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಕ್ಫ್, ತೀವ್ರ ಮತದಾರರ ಯಾದಿ ಪರಿಷ್ಕರಣೆ ಎಂಬೀ ವಿಷಯಗಳಲ್ಲಿ ಪ್ರಧಾನಮಂತ್ರಿಗೆ ತನ್ನ ಆತಂಕವನ್ನು ತಿಳಿಸಿರುವುದಾಗಿಯೂ ಅವರು ನುಡಿದರು. ಪ್ರಧಾನಮಂತ್ರಿಯೊಂದಿಗಿನ ಮಾತುಕತೆಯ ಹೆಚ್ಚಿನ ಮಾಹಿತಿಗಳನ್ನು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ …

ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪುಳಿಕುತ್ತಿ ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಅಗರ್ತಿಮೂಲೆಯಲ್ಲಿ ಸ್ಥಳೀಯರಾದ ಇಕ್ಬಾಲ್ ಹಾಗೂ ರಾಧಾಕೃಷ್ಣರಿಗೆ ಬೀದಿನಾಯಿ ಕಚ್ಚಿದ್ದು, ಇವರು ಚಿಕಿತ್ಸೆ ಪಡೆದಿದ್ದಾರೆ. ಬಳಿಕ ನಾಯಿಯನ್ನು ಹಿಡಿದು ಸ್ಥಳೀಯರು ಕಟ್ಟಿಹಾಕಿದ್ದಾರೆ. ಪುಳಿಕುತ್ತಿ, ಪ್ರತಾಪ ನಗರ, ಅಗರ್ತಿ ಮೂಲೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ವ್ಯಾಪಕಗೊಂ ಡಿದ್ದು, ವಾಹನ ಸಂಚಾರದ ವೇಳೆಯೂ ಬೆನ್ನಟ್ಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀದಿನಾಯಿ ಗಳ ನಿಯಂತ್ರಣಕ್ಕೆ ಅಗತ್ಯ …

ವಿಷಾಹಾರ: ಇಬ್ಬರು ಮೃತ್ಯು; ಹೋಟೆಲ್‌ಗೆ ಬೀಗ

ತಿರುವನಂತಪುರ: ವಿಳಿಂಞದ ಹೋಟೆಲ್‌ನಿಂದ ಆಹಾರ ಸೇವಿಸಿದ ಇಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂ, ನಿಲಾಮೇಲ್ ನಿವಾಸಿಗಳಾದ ರಶೀದ ಬೀವಿ, ಅಳಿಯ ಶಾಜಿ ಎಂಬಿವರು ಮೃತಪಟ್ಟವರು. ವಿಷಾಹಾರ ಮರಣಕ್ಕೆ ಕಾರಣವೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ವಿಳಿಂಞದ ಹೋಟೆಲ್‌ನಿಂದ ರಶೀದ ಬೀವಿ ಹಾಗೂ ಶಾಜಿ ಸಹಿತದ ಆರು ಮಂದಿ ಆಹಾರ ಸೇವಿಸಿದ್ದರು. ಇವರಲ್ಲಿ ನಾಲ್ಕು ಮಂದಿಗೆ ದೈಹಿಕ ಅಸ್ವಸ್ಥತೆಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ರಶೀದ ಬೀವಿ ಹಾಗೂ ಶಾಜಿಯವರ ಜೀವ ಉಳಿಸ ಲು ಸಾಧ್ಯವಾಗಲಿಲ್ಲ. ಶಾಜಿಯ ವರ ಪತ್ನಿ ಸಜಿನ …

ಕಳತ್ತೂರಿನಲ್ಲಿ ವ್ಯಾಪಾರಿ ಮನೆಯಿಂದ ನಗ-ನಗದು ಕಳವು: ತನಿಖೆ ಆರಂಭ; 7 ಬೆರಳಚ್ಚುಗಳು ಪತ್ತೆ

ಕುಂಬಳೆ: ಕಳತ್ತೂರಿನಲ್ಲಿ ವ್ಯಾಪಾರಿಯ ಮನೆಯಿಂದ  ಚಿನ್ನಾಭರಣ ಹಾಗೂ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕಳತ್ತೂರು ಪಂಜಿಕಲ್ಲಿನ ಯು.ಕೆ.ಯೂಸಫ್‌ರ ಮನೆಯಿಂದ  ಕಳವು ನಡೆದಿದೆ. ಎರಡಂತಸ್ತಿನ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನ  ಕಪಾಟುಗಳನ್ನು ತೆರೆದು 9 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ.  ದೋಚಿದ್ದಾರೆ. ಶನಿವಾರ ರಾತ್ರಿ  7 ಗಂಟೆಯಿಂದ ನಿನ್ನೆ ಬೆಳಿಗ್ಗೆ 7 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ಸಂಶಯಿಸಲಾಗಿದೆ. ವಿಷಯ ತಿಳಿದು ಕುಂಬಳೆ ಪೊಲೀಸರು …