12 ದ್ವಿಚಕ್ರ ವಾಹನಗಳು, ಸಿಗ್ನಲ್ ಲೈಟ್‌ಗಳು ನಜ್ಜುಗುಜ್ಜು; ತಪ್ಪಿದ ಭಾರೀ ದುರಂತ

ಕಾಸರಗೋಡು: ಸರಕು ಲಾರಿ ಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ 12 ದ್ವಿಚಕ್ರವಾಹನಗಳು ಮತ್ತು ಸಿಗ್ನಲ್ ಲೈಟುಕಂಬಗಳಿಗೆ ಢಿಕ್ಕಿ ಹೊಡೆದು ಅವುಗಳನ್ನು ನಜ್ಜುಗುಜ್ಜುಗೊಳಿಸಿದ ಘಟನೆ ಮೊಗ್ರಾಲ್ ಪುತ್ತೂರಿಗೆ ಸಮೀಪದ ಎರಿಯಾಲ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಡರ್ ಪ್ಯಾಸೇಜ್ ಬಳಿ ನಿನ್ನೆ ಬೆಳಿಗ್ಗೆ ನಡೆದಿದೆ. ಈ ಅಪಘಾತದ ವೇಳೆ ಆ ರಸ್ತೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿ ಹೋಗಿದೆ. ಕರ್ನಾಟಕದ ಹುಬ್ಬಳ್ಳಿ ಯಿಂದ ಸರಕು ಹೇರಿಕೊಂಡು …

ಮನೆ ನಿರ್ಮಾಣ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಮೃತ್ಯು

ಕುಂಬಳೆ:  ಮನೆ ನಿರ್ಮಾಣ ಕಾಮಗಾರಿ ವೇಳೆ ಎರಡನೇ ಮಹಡಿಯಿಂದ ಬಿದ್ದು ಸೆಂಟ್ರಿಂಗ್ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಶೇಡಿಕಾವು ನಿವಾಸಿ ಶಂಕರ್ ಯಾನೆ ಗಂಗು (52) ಮೃತಪಟ್ಟ ದುರ್ದೈವಿ. ಶನಿವಾರ ಮಧ್ಯಾಹ್ನ ೨ ಗಂಟೆ ವೇಳೆ ನಾರಾಯಣಮಂಗಲದಲ್ಲಿ  ಎರಡಂತಸ್ತಿನ ಮನೆ ನಿರ್ಮಾಣ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಕೆಳಕ್ಕೆ ಬಿದ್ದ ಶಂಕರ್‌ರನ್ನು ಇತರ ಕಾರ್ಮಿಕರು ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ನಾರಾಯಣ ಶೆಟ್ಟಿ-ನಮ್ಮಕ್ಕ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ …

ವ್ಯಕ್ತಿ ಸಮುದ್ರ ಕಿನಾರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮುಟ್ಟಂ ಬೇರಿಕೆ ಕಡಪ್ಪುರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಂಡೆಕಾಪು ಕುಡಾಲುಮೇರ್ಕಳದ ದಿ| ಮದನ ಮೂಲ್ಯ-ಕಮಲ ದಂಪತಿಯ ಪುತ್ರ ಎನ್. ಗೋಪಾಲ ಯಾನೆ ದೇವು (47) ಮೃತಪಟ್ಟ ವ್ಯಕ್ತಿ. ಶನಿವಾರ ಮಧ್ಯಾಹ್ನ ಇವರ ಮೃತದೇಹ ಕಡಪ್ಪುರದಲ್ಲಿ ಕಂಡುಬಂದಿತ್ತು. ಕೂಲಿ ಕಾರ್ಮಿಕನಾದ ದೇವು ಕಳೆದ 15 ವರ್ಷಗಳಿಂದ ಬಂದ್ಯೋಡಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮೃತರು ಸಹೋದರ-ಸಹೋದರಿಯರಾದ ಸುಂದರ, ಸಂಜೀವ, ಗಿರಿಜ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜಿಗೆ ಹಾನಿ

ಉಪ್ಪಳ: ಮನೆ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಹಾನಿಗೊಳಿಸಿದ ಘಟನೆ ನಡೆದಿದೆ. ಮಂಜೇಶ್ವರ ಬಪ್ಪಾಯಿ ತೊಟ್ಟಿ ರಸ್ತೆಯ ಇ.ಎಂ. ಸೈನುದ್ದೀನ್‌ರ ಕಾರಿನ ಹಿಂಭಾಗದ ಗಾಜನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಇದರಿಂದ 15 ಸಾವಿರ ರೂ.ಗಳ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಶುಕ್ರವಾರ ರಾತ್ರಿ 11.30ರ ವೇಳೆ ಈ ಘಟನೆ ನಡೆದಿದ್ದು, ಈ ಬಗ್ಗೆ ಸೈನುದ್ದೀನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಬಿದ್ದ ಕುಬ್ಜ ತಳಿಯ ದನದ ರಕ್ಷಣೆ

ಪೆರ್ಲ: ಬಾವಿಗೆ ಬಿದ್ದ ಕುಬ್ಜ ತಳಿಗೆ ಸೇರಿದ ದನವನ್ನು ಅಗ್ನಿಶಾಮಕ ದಳದವರು ಮೇಲ ಕ್ಕೆತ್ತಿ ರಕ್ಷಿಸಿದ ಘಟನೆ ಕಾಟುಕುಕ್ಕೆ ಬಳಿ ನಿನ್ನೆ ನಡೆದಿದೆ. ಕಾಟುಕುಕ್ಕೆ ಕಾಂತಾರಿ ಎಂಬಲ್ಲಿನ 31 ಅಡಿ ಆಳದ ಹಾಗೂ ಸುಮಾರು 20 ಅಡಿ ನೀರು ತುಂಬಿದ ಕಟ್ಟೆಯಿಲ್ಲದ ಉಪಯೋ ಗಶೂನ್ಯ ಬಾವಿಗೆ ನಿನ್ನೆ ಬೆಳಿಗ್ಗೆ 10 ಗಂಟೆಗೆ ಈ ದನ ಬಿದ್ದಿದೆ. ತಕ್ಷಣ ಊರವರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂಂ ಆಫೀಸರ್ ವಿ.ಎನ್. ವೇಣುಗೋಪಾಲ್‌ರ ನೇತೃತ್ವದಲ್ಲಿ …

ಅಧಿವೇಶನದಲ್ಲಿ ಭಾಗವಹಿಸದೆ ಇರುವುದು ಮಂಜೇಶ್ವರ ಶಾಸಕರ ಬೇಜವಾಬ್ದಾರಿತನ- ಬಿಜೆಪಿ

ಮೀಂಜ: ಮಂಜೇಶ್ವರ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿ ತನದ ಪರ ಮಾವಧಿ. ಅಭಿವೃದ್ಧಿಯಲ್ಲಿ ಮೂಲ ಭೂತ ಸೌಕರ್ಯದಲ್ಲಿ, ಅತ್ಯಂತ ಹಿಂದುಳಿದ ಪ್ರದೇಶದ ಮಂಜೇಶ್ವರ ವಿಧಾನಸಭಾ ಕೇತ್ರದ ಅಭಿವೃದ್ಧಿಯ ರೂಪುರೇಷೆ ಸಿದ್ದಪಡಿಸಿ ಅಧಿವೇಶನ ದಲ್ಲಿ ಭಾಗವಹಿಸಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇರು ವುದು ಬೇಜವಾಬ್ದಾರಿ, ಮಂಜೇಶ್ವರ ದಲ್ಲಿ ಬಂದು ಕಪಟ ನಾಟಕದ ಹೋ ರಾಟ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾಯವಾದಿ ಸಜೀವನ್ ವಿ.ಕೆ ಅಗ್ರಹಿಸಿದ್ದಾರೆ.ಬಿಜೆಪಿ ಪೈವಳಿಕೆ, ಮೀಂಜ, ವರ್ಕಾಡಿ …

‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಹಲವು ಮಾದಕದ್ರವ್ಯ ಪ್ರಕರಣಗಳ  ಆರೋಪಿಯನ್ನು ಪಿಚ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಞಣಿಕಡವು ಮಯ್ಯತ್ತ್ ರಸ್ತೆ ಬಳಿ ನಿವಾಸಿ ಅರ್ಶಾದ್ ಕೆ. (33) ಬಂಧಿತ ಆರೋಪಿ. ಈತನನ್ನು ಬಳಿಕ ಜೈಲಿಗೆ ಸಾಗಿಸಲಾಗಿದೆ. ಹೊಸದುರ್ಗ ಬೇಕಲ, ಚಂದೇರ ಮತ್ತು ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಾಗಿ ದಾಖಲುಗೊಂಡ ಆರು ಮಾದಕದ್ರವ್ಯ ಪ್ರಕರಣಗಳು ಸೇರಿದಂತೆ ಹತ್ತರಷ್ಟು ಪ್ರಕರಣಗಳಲ್ಲಿ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿರಂತರವಾಗಿ ಮಾದಕದ್ರವ್ಯ ಮಾರಾಟದಂಧೆಯಲ್ಲಿ ನಿರತರಾಗಿರುವವರ ಮೇಲೆ ಹೇರಲಾಗುವ ಪ್ರಿವೆನ್ಶನ್ ಆಫ್ ಇಲ್ಲಾಸಿಟ್ ಟ್ರಾಫಿಕ್ …

ವಿವಿಧೆಡೆ ಶ್ರೀ ನಾರಾಯಣಗುರು ಸಮಾಧಿ ದಿನಾಚರಣೆ

ಕಾಸರಗೋಡು: ಬ್ರಹ್ಮಶ್ರೀ ನಾರಾ ಯಣಗುರುಗಳ ಸಮಾಧಿ ದಿನವನ್ನು ನಿನ್ನೆ ವಿವಿಧೆಡೆ  ಆಚರಿಸಲಾಯಿತು. ಶ್ರೀ ನಾರಾಯಣ ಗುರುಗಳ ಹೆಸರಲ್ಲಿರುವ ಸಂಸ್ಥೆಗಳು  ಸಹಿತ ವಿವಿಧ ಸಂಘಟನೆಗಳು ನಡೆಸಿದ ಕಾರ್ಯಕ್ರಮದಲ್ಲಿ ಭಜನೆ, ಸಾಮೂಹಿಕ ಉಪವಾಸ, ಗುರುಅರ್ಚನೆ, ಸಮಾಧಿಪೂಜೆ, ಸಂಸ್ಮರಣೆ ನಡೆಸಲಾಯಿತು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ವಹಿಸಿದರು. ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್ ನೇತೃತ್ವದಲ್ಲಿ ಗುರುಪೂಜೆ, ಪುಷ್ಪಾರ್ಚನೆ, ಸಂಸ್ಮರಣೆ ನಡೆಸಲಾಯಿತು. ಪಿ.ಕೆ. ರಾಜನ್ ಉದ್ಘಾಟಿಸಿದರು.ಯೂನಿಯನ್ ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ಮೋಹನ ಮೀಪುಗುರಿ, ರಾಜೇಶ್, …

ಬೆಳ್ಳೂರು ಪಂ. ಕಚೇರಿಗೆ ಸಿಪಿಎಂ ಮಾರ್ಚ್

ಬೆಳ್ಳೂರು: ಬೆಳ್ಳೂರು ಪಂಚಾಯತ್ ಲ್ಲಿ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿಯಲ್ಲಿ ವ್ಯಾಪಕ ವಂಚನೆ ನಡೆಸಿರುವುದಾಗಿ ಆರೋಪಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಪಕ್ಷದ ಏರಿಯಾ ಕಾರ್ಯದರ್ಶಿ ಎಂ. ಮಾಧವನ್, ಸದಸ್ಯ ರವೀಂದ್ರನ್ ಮಾತನಾಡಿದರು. ಲೋಕಲ್ ಸೆಕ್ರೆಟರಿ ಕೆ.ಎಚ್. ಸೂಫಿ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಮಿಟಿ ಸದಸ್ಯರಾದ ಎ.ಕೆ. ಕುಶಲ ಸ್ವಾಗತಿಸಿ, ಉಷಾ ವಂದಿಸಿದರು.

ಬಿಲ್ಲವ ಸಂಘದಿಂದ ದತ್ತಿನಿಧಿ ಯೋಜನೆ: ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ವಿತರಣೆ

ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ದತ್ತಿ ನಿಧಿ ಯೋಜನೆಯನ್ವಯ ಬಜಕೂಡ್ಲು  ನಡುಬೈಲು ದಿ| ಪುರುಷೋತ್ತಮ ಪೂಜಾರಿಯವರ ಪುತ್ರಿ ದಿಯಾಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ದಿ| ಪುರುಷೋತ್ತಮರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ದತ್ತಿ ನಿಧಿ ಪ್ರಾಯೋಜಕರಾದ ಪೆರ್ಲ ಅಮೆಕ್ಕಳದ ಬೇಕರಿ ಮಾಲಕ ದಿನೇಶ್ ಜಿ.ಕೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಪಿ. ಶೇಣಿ, ಕಾರ್ಯದರ್ಶಿ ಅಖಿಲೇಶ್ ಕಾನ, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾಸ್ತರ್ …