ರಂಗಭೂಮಿ ಕಲಾವಿದ ಸುಂದರರ ಚಿಕಿತ್ಸೆಗೆ ಸವಾಕ್‌ನಿಂದ ಧನ ಸಹಾಯ ಹಸ್ತಾಂತರ

ಬೆಳ್ಳೂರು: ಹಾವು ಕಚ್ಚಿ ಚಿಕಿತ್ಸೆಯಲ್ಲಿರುವ ಕಾಯಿಮಲೆ ನಿವಾಸಿ, ರಂಗಭೂಮಿ ಕಲಾವಿದ ಸುಂದರ ಎಂಬವರ ಚಿಕಿತ್ಸೆಗಾಗಿ ಸವಾಕ್ ಸಂಘಟನೆಯ ಕಾಸರಗೋಡು ಜಿಲ್ಲಾ ಸಮಿತಿ, ಕಾರಡ್ಕ ಬ್ಲಾಕ್ ಸಮಿತಿ, ಅಭಿನಯ ಕಲಾ ತಂಡ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು. ಸುಂದರ ಈಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.ಸವಾಕ್ ಸಂಘಟನೆಯ ರಾಜ್ಯ ಕೋಶಾಧಿಕಾರಿ, ಜಿಲ್ಲಾ ಅಧ್ಯಕ್ಷ ಉಮೇಶ್ ಸಾಲಿಯಾನ್, ರಾಜ್ಯ ಸಮಿತಿ ಸದಸ್ಯೆ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹ ಬಲ್ಲಾಳ್ ಕಾಸರಗೋಡು, ಭಾರತಿ, …

ಸೇವಾ ಭಾರತಿಯಿಂದ ಸೀತಾಂಗೋಳಿ ಪೇಟೆ ಶುಚೀಕರಣ

ಸೀತಾಂಗೋಳಿ: ಸ್ವಚ್ಛತಾ ದಿನಾ ಚರಣೆಯಂಗವಾಗಿ ಸೇವಾ ಭಾರತಿ ಯ ಪುತ್ತಿಗೆ ಘಟಕದ ಆಶ್ರಯದಲ್ಲಿ ಸೀತಾಂಗೋಳಿ ಪೇಟೆಯನ್ನು ಮಾಲಿನ್ಯಮುಕ್ತಗೊಳಿಸಲಾಯಿತು. ಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ಕಸಗಳನ್ನು ತೆಗೆದÀÄ ಸ್ವಚ್ಛಗೊಳಿಸಿ ಸ್ವಚ್ಛತೆಯ ಕುರಿತಾಗಿ ಉತ್ತಮ ಸಂದೇಶವನ್ನು ನೀಡಲಾಯಿತು. ಪ್ರವೀಣ್ ಕುಮಾರ್, ಅಪ್ಪಣ್ಣ, ಉಮಲತಾ, ದಿನೇಶ್ ಬಬ್ಬರಿಯಕಲ್ಲು, ಉಷಾ, ಶಶಿಕಲಾ ಅನೋಡಿಪಳ್ಳ, ಪ್ರಸನ್ನ, ಅಜಿತ್ ಕುಮಾರ್, ಅರುಣ್ ಕುಮಾರ್, ಉದಯ ಮರಕ್ಕಾಡ್ ಮೊದಲಾ ದವರು ನೇತೃತ್ವ ವಹಿಸಿದ್ದರು. ಸುತ್ತು ಮುತ್ತಲಿನ ಸೇವಾ ಭಾರತಿಯ ಕಾರ್ಯಕರ್ತರು ಭಾಗವಹಿಸಿದರು. ಸ್ವಚ್ಛತೆಯ ಮೂಲಕ …

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಅದ್ದೂರಿ ಚಾಲನೆ: ಬಿಟ್ಟು ನಿಂತ ಬಿಜೆಪಿ, ಯುಡಿಎಫ್ , ಸಂಘಪರಿವಾರ ಸಂಘಟನೆಗಳು

ಪಂಪಾ: ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಪಂಪಾದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಇಂದು ಬೆಳಿಗ್ಗೆ ಮುಜರಾಯಿ ಸಚಿವ ವಿ.ಎನ್. ವಾಸನ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಗಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ದರು.  ಜರ್ಮನ್ ತಂತ್ರಜ್ಞಾನದಿಂದ ನಿರ್ಮಿಸಲಾದ ಹವಾನಿಯಂತ್ರಿತವಾದ ಮೂರು ವೇದಿಕೆಗಳಲ್ಲಾಗಿ  ಈ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ತಿರುವಿ ದಾಂಕೂರ್ ಮುಜರಾಯಿ ಮಂಡಳಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ದೇಶ ವಿದೇಶಗಳಿಂದಾಗಿ ಆಯ್ದ 3500 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇರಳದ ಹಲವು ಸಚಿವರುಗಳು ಮಾತ್ರವಲ್ಲದೆ, ತಮಿಳು ನಾಡಿನ ಸಚಿವರುಗಳಾದ …

ವಾಹನಗಳನ್ನು ಬಾಡಿಗೆಗೆ ತೆಗೆದು ಇತರರಿಗೆ ಹಸ್ತಾಂತರಿಸಿ ವಂಚನೆಗೈಯ್ಯುವ ತಂಡದ ರೂವಾರಿ ಸೆರೆ

ಮಂಜೇಶ್ವರ: ಮಲಕರಿಂದ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಬಳಿಕ ಅದನ್ನು ಇತರರಿಗೆ ಹಸ್ತಾಂತರಿಸುವ ತಂಡದ ರೂವಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಉಳಿಯತ್ತಡ್ಕ ಎಸ್.ಪಿ ನಗರದ ನಿವಾಸಿ ಅಬ್ದುಲ್ ಅಶ್ಫಾಕ್ (31) ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ  ಬಿ.ವಿ. ವಿಜಯ ರೆಡ್ಡಿಯವರ ನಿರ್ದೇಶ ಪ್ರಕಾರ ಅವರ ನೇತೃತ್ವದ ವಿಶೇಷ ಪೊಲೀಸರ ತಂಡದ ಸಹಾಯದೊಂದಿಗೆ ಎಎಸ್‌ಪಿ ಡಾ. ಎಂ. ನಂದ ಗೋಪಾಪನ್‌ರ ನೇತೃತ್ವದಲ್ಲಿ ಮಂಜೇಶ್ವರ, ವಿದ್ಯಾನಗರ, ಕುಂಬಳೆ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಕಾಸರಗೋಡು ಸಬ್ ಡಿವಿಷನ್‌ನ ಪೊಲೀಸ್ …

ಯುವತಿಯ ಕಣ್ಣಿಗೆ ಮೆಣಸಿನಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿದ ಆರೋಪ: ಕೇಸು ದಾಖಲು

ಮುಳ್ಳೇರಿಯ: ಯುವತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಬಳವಂತಡ್ಕದ ಅನುಂಜ ಕೆ. (18) ಎಂಬವರು ಈ ದೂರು ನೀಡಿದ್ದು, ಅದರಂತೆ ಬಳವಂತಡ್ಕದ ಶಂಕರನ್ ವಿ. ಎಂಬವರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ಬಳವಂತಡ್ಕ ಸೇತುವೆ ಬಳಿ ಆರೋಪಿ ತನ್ನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಕಲ್ಲೆಸೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.

ಮನೆಯಿಂದ ಮದ್ಯ ವಶ ಪರಾರಿಯಾದ ಆರೋಪಿ ಬಂಧನ

ಕುಂಬಳೆ: ಮನೆಯಿಂದ ಮದ್ಯ ಹಾಗೂ ಹಣ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಯಾದ ಮನೆ ಮಾಲಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾದ ಕುಂಬಳೆ ಕುಂಟಂಗೇರಡ್ಕ ಲಕ್ಷ್ಮಿ ನಿವಾಸ್‌ನ ಪ್ರಭಾಕರನ್ ಯಾನೆ ಅಣ್ಣಿ ಪ್ರಭಾಕರ (52) ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ. ಮನೆಯಲ್ಲಿ ಮದ್ಯ ದಾಸ್ತಾನಿರಿಸಲಾಗಿದೆ ಎಂಬ ಮಾಹಿತಿಯಂತೆ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನಿರ್ದೇಶ ಪ್ರಕಾರ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಗುರುವಾರ ಸಂಜೆ …

ಜೆರ್ಸಿಯ ಬಗೆಗಿನ ವಿವಾದ: ಕುಂಡಂಗುಳಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

ಕಾಸರಗೋಡು: ಕ್ರೀಡಾ ವಸ್ತ್ರದ ಬಗ್ಗೆ ಉಂಟಾದ ವಿವಾದದ ಮುಂದುವರಿಕೆಯಾಗಿ ಕುಂಡಂಗು ಳಿಯಲ್ಲಿ ಪ್ಲಸ್‌ವನ್, ಪ್ಲಸ್‌ಟು ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಸಂಭವಿಸಿದೆ. ಕೊನೆಗೆ ಸ್ಥಳೀಯರು ಮಧ್ಯೆ ಪ್ರವೇಶಿಸಿದಾಗ ಅವರತ್ತ ವಿದ್ಯಾರ್ಥಿಗಳು ತಿರುಗಿದ್ದಾರೆ. ನಿನ್ನೆ ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪೋರ್ಟ್ಸ್ ನಡೆದಿತ್ತು. ಇದಕ್ಕಾಗಿ ಕೆಲವು ವಿದ್ಯಾರ್ಥಿಗಳು ವಿಭಿನ್ನ ವಸ್ತ್ರ ಧರಿಸಿದ್ದರು. ಇದನ್ನು ಶಾಲಾ ಅಧಿಕಾರಿಗಳು ತಡೆದರು. ಇದರಿಂದಾಗಿ ಕುಂಡಂಗುಳಿ ಪೇಟೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಸಂಭವಿಸಿದೆ.  ಚಾಲಕರು, ಸ್ಥಳೀಯರು ಘರ್ಷಣೆ ತಡೆಯಲು ಯತ್ನಿಸಿದಾಗ  ಅವರ ವಿರುದ್ಧ ವಿದ್ಯಾರ್ಥಿಗಳು …

ಭೂ ಕಬಳಿಕೆ ವಿರುದ್ಧ ಧ್ವನಿ ಎತ್ತಿದ ಕುಂಬಳೆಯ ಆರ್‌ಟಿಐ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ

ಕುಂಬಳೆ: ಸ್ಥಳೀಯ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಿದ ತನಗೆ ಕೊಲೆ ಬೆದರಿಕೆ ಇದೆ ಎಂದು ಆರ್.ಟಿ.ಐ. ಕಾರ್ಯಕರ್ತ ಎನ್. ಕೇಶವ ನಾಯಕ್ ಕುಂಬಳೆ ಪ್ರೆಸ್ ಪೋರಂನಲ್ಲಿ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.ಬಾಯಾರು ಪಾದೆಕಲ್ಲಿನಿಂದ ತಮಿಳುನಾಡಿನ ಸಿಮೆಂಟ್ ಕಾರ್ಖಾನೆಗಳಿಗೆ ಅಕ್ರಮವಾಗಿ ಮಣ್ಣನ್ನು ಸಾಗಿಸಲಾಗುತ್ತಿದೆ. ಕುಂಬಳೆ ಅನಂತಪುರದಿAದ ಮಣ್ಣು ಮತ್ತು ಕೆಂಪು ಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಇದರ ವಿರುದ್ಧ ಕೇಶವ ನಾಯಕ್ ಕೇಂದ್ರ ಮತ್ತು ರಾಜ್ಯ ಸಚಿವರು, ಉನ್ನತ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ದೂರುಗಳನ್ನು ಸಲ್ಲಿಸಿದ್ದರು. ಈ …

ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಕಾರ್ಮಿಕ ಸಾವು

ಕಾಸರಗೋಡು: ಜ್ವರ ತಗಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದ ಕರ್ನಾಟಕ ನಿವಾಸಿಯಾದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ಕರ್ನಾಟಕ  ಬಳ್ಳಾರಿ ನಿವಾಸಿ ಹಾಗೂ ಈಗ ಕಾಸರಗೋಡು ಪಾರಕಟ್ಟೆ ಏರ್ ಕ್ಯಾಂಪ್ ರಸ್ತೆ ಬಳಿಯ ಕೃಷ್ಣಕೃಪಾದಲ್ಲಿ ವಾಸಿಸುತ್ತಿರುವ ಕರ್ನಾಟಕದ ವಲಸೆ ಕಾರ್ಮಿಕ ಬಸವರಾಜ್ (27) ಸಾವನ್ನಪ್ಪಿದ ವ್ಯಕ್ತಿ. ಅಸೌಖ್ಯ ನಿಮಿತ್ತ ಇವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾರೆ.

ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಸೌಕರ್ಯ ಕೊರತೆ: ರಸ್ತೆ ಬದಿ ಪಾರ್ಕಿಂಗ್

ಕಾಸರಗೋಡು: ವಾಹನಗಳು ತುಂಬಿ ತುಳುಕುತ್ತಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆ ಸಮಸ್ಯೆ ಉಂಟಾಗಿದೆ. ನಿಲ್ದಾಣದೊಳಗೆ ಮಾತ್ರವಲ್ಲ ರೈಲು ನಿಲ್ದಾಣ ರಸ್ತೆ ಬದಿಯೂ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದು ವಾಹನ ಸವಾರರಿಗೆ, ಕಾಲ್ನಡೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಸಾರಿಗೆ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿರುವಂತೆ ವಾಹನಗಳ ದಟ್ಟಣೆ ಸವಾಲು ಒಡ್ಡುತ್ತಿದೆ. ವಾಹನ ನಿಲುಗಡೆಗೆ ಸ್ಥಳ ನಿಗದಿ ಪಡಿಸಿದ್ದರೂ ವಾಹನಗಳ ದಟ್ಟಣೆಯಿಂದ ಆ ಸ್ಥಳ ಸಾಕಾಗದೆ ಇತರ ಕಡೆಗಳಲ್ಲೂ ಅಡ್ಡಾದಿಡ್ಡಿ ನಿಲುಗಡೆಗೊಳಿಸಲಾಗುತ್ತಿದ್ದು, ಇದು ಸಮಸ್ಯೆಗೆ ಕಾರಣವಾಗುತ್ತಿದೆ. ಅಧಿಕಾರಿಗಳ ನಿರ್ದೇಶಗಳನ್ನು ಅವಗಣಿಸಿ ನಿಲುಗಡೆಗೊಳಿಸುತ್ತಿರುವುದು, ಸ್ಥಳೀಯಾಡಳಿತ ಸಂಸ್ಥೆಗಳ  ಅನಾಸಕ್ತಿ …