ಇಂಡಿಯ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದ ಎಸ್‌ಎಫ್‌ಐ ನೇತಾರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿ ಗಿನ್ನೆಸ್ ರೆಕಾರ್ಡ್‌ಗೆ ಕಾಯುತ್ತಿದ್ದ ಎಸ್‌ಎಫ್‌ಐ ನೇತಾರ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಡನ್ನಕ್ಕಾಡ್ ಕರುವಳದ ಪವಿತ್ರನ್ ಎಂಬವರ ಪುತ್ರ ಶ್ರೀಹರಿ (21) ಮೃತ ಯುವಕ. ಪಡನ್ನಕ್ಕಾಡ್‌ನ ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿರುವ ಶ್ರೀಹರಿ ಎಸ್‌ಎಫ್‌ಐ ಕಾಲೇಜು ಘಟಕದ ಉಪಾಧ್ಯಕ್ಷನೂ ಆಗಿದ್ದರು. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ ೮ ಗಂಟೆ ಮಧ್ಯೆ ಮನೆಯಲ್ಲಿ ಬೇರ‍್ಯಾರೂ ಇಲ್ಲದ ಸಂದರ್ಭದಲ್ಲಿ ಶ್ರೀಹರಿ ನೇಣು …

ರಸ್ತೆ ಮಧ್ಯೆ ಯುವತಿಗೆ ಕಿರುಕುಳ: ಕೇಸು ದಾಖಲು

ಮಂಜೇಶ್ವರ: ಕೆಲಸ ಮುಗಿಸಿ ವಾಸ ಸ್ಥಳಕ್ಕೆ ನಡೆದು ಹೋಗುತ್ತಿದ್ದ ೨೬ರ ಹರೆಯದ ಯುವತಿಗೆ ಕಿರು ಕುಳ ನೀಡಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಕೇಸು ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ 8.30ಕ್ಕೆ ಘಟನೆ ನಡೆದಿದೆ. ಯುವತಿ ಹಾಗೂ ಸಹೋದ್ಯೋಗಿ ಗಳಾದ ಇಬ್ಬರು ಯುವತಿಯರು ವಾಸ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ಮಧ್ಯೆ ಸ್ಥಳಕ್ಕೆ ತಲುಪಿದ ಅಕ್ರಮಿ ೨೬ರ ಹರೆಯದ ಯುವತಿಯನ್ನು ಹಿಡಿದಿರುವುದಾಗಿಯೂ, ಯುವತಿ ಹಾಗೂ ಜೊತೆಗಿದ್ದವರು ಸೇರಿ ಅಕ್ರಮಿಯನ್ನು ಸೆರೆ ಹಿಡಿದು ಬೊಬ್ಬೆ ಹೊಡೆದಾಗ …

ಭಯೋತ್ಪಾದನಾ ದಾಳಿಗೆ ಸಂಚು: 5 ರಾಜ್ಯಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: ಭಯೋತ್ಪಾದಕ ದಾಳಿಗೆ ಸಂಚು ಹೂಡಿರುವುದಕ್ಕೆ ಸಂಬಂಧಿಸಿ ದೇಶದ 5 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಿಗ್ಗೆ ಏಕ ಕಾಲದಲ್ಲಿ ದಾಳಿ ಮತ್ತು ತಪಾಸಣೆ ಆರಂಭಿಸಿದೆ. ಹೀಗೆ ಈ ಐದು ರಾಜ್ಯಗಳ 28 ಕೇಂದ್ರಗಳಲ್ಲಾಗಿ ಈ ದಾಳಿ ಆರಂಭಿಸಲಾಗಿದೆ. ಇದರಂತೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಕುಲ್ಗಾಮ್ ಅನಂತ್‌ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲೂ ಈ ದಾಳಿ ನಡೆಸಲಾಗುತ್ತಿದೆ. ಭಯೋತ್ಪಾದನೆಗೆ ಸಂಚು ಮಾತ್ರವಲ್ಲ ಅದಕ್ಕೆ ಪಿತೂರಿ ನೀಡಿದ ಪ್ರಕರಣಗಳಿಗೂ ಸಂಬಂಧಿಸಿ ಈ ದಾಳಿ ನಡೆಸಲಾಗುತ್ತಿದೆ. ಭಾರತದಲ್ಲಿ …

ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತಲುಪಿಸಿ ಮರಳುವಾಗ ಮಾದಕ ವಸ್ತು ಸಾಗಾಟ: ಎಂಡಿಎಂಎ ಸಹಿತ ಆಂಬುಲೆನ್ಸ್ ಚಾಲಕ ಸೆರೆ

ಕಾಸರಗೋಡು: ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತಲುಪಿಸಿ ಅಲ್ಲಿಂದ ಮರಳುತ್ತಿದ್ದಾಗ ಆಂಬುಲೆನ್ಸ್‌ನಲ್ಲಿ ಮಾದಕವಸ್ತು ಗಳನ್ನು ಸಾಗಾಟ ನಡೆಸುತ್ತಿದ್ದ ಚಾಲಕ ಸೆರೆಗೀಡಾಗಿದ್ದಾನೆ. ತಳಿಪರಂಬ ಕಂಡಿವಾದುಕಲ್ ಎಂಬಲ್ಲಿ ವಾಸಿಸುವ ಆಂಬುಲೆನ್ಸ್ ಚಾಲಕ ಕಾಯಕ್ಕೂಲ್ ಪುದಿಯ ಪುರ ನಿವಾಸಿ ಕೆ.ಪಿ. ಮುಸ್ತಫ (37) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಓಣಂ ಸ್ಪೆಶಲ್ ಡ್ರೈವ್‌ನ ಅಂಗವಾಗಿ ತಳಿಪರಂಬ ರೇಂಜ್ ಅಬಕಾರಿ ತಂಡ ಕಂಡಿವಾದುಕಲ್ ಎಂಬಲ್ಲಿ ನಡೆಸಿದ ತಪಾಸಣೆ ವೇಳೆ 430 ಮಿಲ್ಲಿ ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತಲುಪಿಸಿ ಮರಳುತ್ತಿದ್ದಾಗ ಆರೋಪಿ …

ಐಲ ಪರಿಸರದಲ್ಲಿ ಮತ್ತೆ ವ್ಯಾಪಕಗೊಂಡ ಕಡಲ್ಕೊರೆತ ಒಂದು ಮನೆ ಸಮುದ್ರ ಪಾಲು; ಇನ್ನೆರಡು ಅಪಾಯದಂಚಿನಲ್ಲಿ

ಉಪ್ಪಳ: ಐಲ ಪರಿಸರ ಪ್ರದೇಶದಲ್ಲಿ ಮತ್ತೆ ಕಡಲ್ಗೊರೆತ ವ್ಯಾಪಕಗೊಂಡಿದ್ದು, ಒಂದು ಮನೆ ಸಮುದ್ರಪಾಲಾಗಿದೆ. ಇನ್ನೆರಡೂ ಮನೆಗಳು ಯಾವುದೇ ಕ್ಷಣದಲ್ಲಿ ಧರಾ ಶಾಯಿಯಾಗಲಿದೆ. ಐಲ ಕುದುಪುಳು ನಿವಾಸಿ ಮೀನು ಕಾರ್ಮಿಕೆ ವಸಂತಿ.ಕೆ ಎಂಬವರ ಮನೆಯ ಅಡುಗೆ ಕೋಣೆ ಭಾಗಗಳು ಸಮುದ್ರ ಪಾಲಾಗಿದೆ. ಇನ್ನು ಯಾವುದೇ ಕ್ಷಣದಲ್ಲಿ ಮನೆ ಪೂರ್ತಿ ನೀರು ಪಾಲಾಗಲಿದೆ. ಅದೇ ರೀತಿ ಐಲ ಬಂಗ್ಲ ಎಂಬಲ್ಲಿ ಮೀನು ಕಾರ್ಮಿಕರಾದ ಜಯಂತ ಮತ್ತು ಜನಾರ್ಧನ ಎಂಬವರ ಮನೆಗಳು ಅಪಾಯದಂಚಿನಲ್ಲಿದೆ. ಸಮುದ್ರದಿಂದ ಕೆಲವೇ ಮೀಟರ್ ಅಂತರದಲ್ಲಿ ಮನೆಗಳಿದ್ದು, ಸಮುದ್ರ …

ಧರ್ಮಸ್ಥಳ ಪ್ರಕರಣ: ಕೇರಳದ ಇಬ್ಬರು ಯೂ ಟ್ಯೂಬರ್ ಸೇರಿದಂತೆ ಹಲವರಿಗೆ ನೋಟೀಸ್ ಜ್ಯಾರಿ

ಮಂಗಳೂರು: ಧರ್ಮಸ್ಥಳ ಬಳಿಯ ಕಾಡಿನಲ್ಲಿ ಶವಗಳನ್ನು  ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್‌ಗಳಾದ ಸಮೀರ್ ಮತ್ತು ಮನಾಫ್ ಸೇರಿದಂತೆ ಹಲವರಿಗೆ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟೀಸ್ ಜ್ಯಾರಿಗೊಳಿಸಿದೆ. ಆ ಮೂಲಕ ಪ್ರಸ್ತುತ ಪ್ರಕರಣದ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಲಾಗಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್‌ಗಳು ಸುಮಾರು 500ರಷ್ಟು ಪೇಜರ್‌ಗಳು ಹಾಗೂ ೬೦ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳು ಶಾಮೀಲಾಗಿದ್ದಾರೆಂಬ ಮಾಹಿತಿ ಎಸ್‌ಐಟಿಗೆ ಲಭಿಸಿದೆ. …

ಕಾರುಣ್ಯ ಪ್ಲಸ್ ಲಾಟರಿಯ ದ್ವಿತೀಯ ಬಹುಮಾನ 30 ಲಕ್ಷ ರೂ. ಮಧು ಲಾಟರೀಸ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ

ಕಾಸರಗೋಡು: ಓಣಂ ಹಬ್ಬದ ಉತ್ರಾಡಂ ದಿನದಂದು ನಡೆಸಿದ ಕಾರುಣ್ಯ ಪ್ಲಸ್ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರೀಸ್ ಮೂಲಕ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಪಿವೈ 264876 ಎಂಬ ನಂಬ್ರಕ್ಕೆ ಬಹುಮಾನ ಲಭಿಸಿದೆ.  ಕಳೆದ ತಿಂಗಳ 16ರಂದು ನಡೆದ ಕಾರುಣ್ಯ ಲಾಟರಿಯ ಪ್ರಥಮವಾದ ಒಂದು ಕೋಟಿ ರೂ. ಮಧು ಲಾಟರಿ ಸ್ಟಾಲ್‌ನಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿತ್ತು. ರಾಜ್ಯ ಲಾಟರಿಯ ಓಣಂ ಬಂಪರ್ ಬಹುಮಾನ 25 …

ಭಾರತದಲ್ಲಿ ಅತೀ ಹೆಚ್ಚು ಪಂಚ ನಕ್ಷತ್ರ ಹೋಟೆಲ್‌ಗಳಿರುವ ರಾಜ್ಯ ಕೇರಳ

ತಿರುವನಂತಪುರ: ಭಾರತದಲ್ಲಿ ಅತೀ ಹೆಚ್ಚು ಪಂಚನಕ್ಷತ್ರ ಹೋಟೆಲ್‌ಗಳಿರುವ ರಾಜ್ಯ ಕೇರಳವಾಗಿದೆ.  ಅಪಾರ ಸಂಖ್ಯೆಯಲ್ಲಿ ಬೃಹತ್ ಉದ್ದಿಮೆಗಳು ಇರುವ ಮಹಾರಾಷ್ಟ್ರ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಇರುವುದಕ್ಕಿಂತಲೂ ಹೆಚ್ಚು ಫೈ  ಸ್ಟಾರ್ ಹೋಟೆಲ್‌ಗಳು  ಕೇರಳದಲ್ಲಿದೆ. ಮಾತ್ರವಲ್ಲ ಫೋರ್ ಮತ್ತು ತ್ರೀ ಸ್ಟಾರ್‌ಗಳು ಹೊಂದಿರುವ ಹೋಟೆಲ್‌ಗಳ ಸಾಲಿನಲ್ಲಿ ಕೇರಳ ಮುಂದಿದೆ. ಪ್ರವಾಸೋದ್ಯಮ ರಂಗದಲ್ಲಿ ಕೇರಳ ಮುಂದಿದ್ದು, ಅದಕ್ಕೆ ಹೊಂದಿಕೊಂಡು ಕೇರಳದಲ್ಲಿ ಪಂಚನಕ್ಷತ್ರ ಹೋಟೆಲ್‌ಗಳ ಸಂಖ್ಯೆ ಹೆಚ್ಚಾಗತೊಡಗಿದೆ.  ಭಾರತದಲ್ಲಿ 761 ಪಂಚನಕ್ಷತ್ರ ಹೋಟೆಲ್‌ಗಳಿದ್ದು, ಇದರಲ್ಲಿ 94 ಹೋಟೆಲ್‌ಗಳು (ಶೇ. 12) ಕೇರಳದಲ್ಲಿವೆ.  ಉಳಿದಂತೆ …

ಮಂಜೇಶ್ವರ ಉಪ್ಪಳ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ : ಸನ್ಮಾನ

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ಸದಸ್ಯರು ಶಿಕ್ಷಕರ ದಿನಾಚರಣೆ ನಿಮಿತ್ತ ಅಂಬಾರು ನಿವಾಸಿ, ಉಪಜಿಲ್ಲಾ ವಿದ್ಯಾಧಿಕಾರಿ ಅಚ್ಯುತ. ಕೆ ಮತ್ತು ಅವರ ಪತ್ನಿ ಶಿಕ್ಷಕಿ ವಾರಿಜಾ.ಕೆ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, .ಲ| ಚರಣ್ ಬಂದ್ಯೋಡ್ , ಲ| ಮಾಧವ. ಕೆ., ಲ| ಲಕ್ಷಣ್ ಕುಂಬಳೆ ಪಿ.ಎಂ.ಜೆ.ಎಫ್. , ಲ| ಅಶೋಕ್ ಎಂ.ಜೆ.ಎಫ್., ಲ| ವಿಜಯನ್ ನಾಯರ್, ಲ| ತಿಮ್ಮಪ್ಪ ಭಂಡಾರಿ ಜೊತೆಗಿದ್ದರು.

ಪ್ಲಾಸ್ಟಿಕ್ ಬಳಕೆ ಇಳಿಸಲು ಕ್ರಮ: ಬಿವರೇಜ್ ಮದ್ಯ ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲೂ ಲಭ್ಯ

ಕಾಸರಗೋಡು: ಗಾಜು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಹೊರತಾಗಿ ಬಿವರೇಜ್ ಕಾರ್ಪರೇಶನ್‌ನ ಮದ ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲೂ ಲಭಿಸಲಿದೆ. ಪ್ಲಾಸ್ಟಿಕ್ ಉಪಯೋಗವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಸುವ ಉದ್ದೇಶದಿಂದ ಬಿವರೇಜ್ ಕಾರ್ಪರೇಶನ್ ಈ ತೀರ್ಮಾನಕ್ಕೆ ಬಂದಿದೆ. ಇದರಂತೆ 375 ಮಿಲ್ಲಿ ಲೀಟರ್  ಮದ್ಯ ಇನ್ನು ಟೆಟ್ರಾ ಪ್ಯಾಕ್‌ನಲ್ಲಿ ನಮ್ಮದೇ ಆದ ಬ್ರಾಂಡ್‌ನಲ್ಲಿ ಮಾರುಕಟ್ಟೆಗಿಳಿಸಲಾಗು ವುದೆಂದು ಬಿವರೇಜ್ ಕಾರ್ಪರೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಟೆಟ್ರಾ ಪ್ಯಾಕೆಟ್ ನಿರ್ಮಿಸಲು 17 ಕೋಟಿ ರೂ. ವೆಚ್ಚದಲ್ಲಿ ಸ್ಥಾವರ ನಿರ್ಮಿಸಲಾಗುವುದು. ಆದರೆ ಈ ಯೋಜನೆಗೆ ಅಬಕಾರಿ …